Showing posts with label ಉಸಿರಾಟ. Show all posts
Showing posts with label ಉಸಿರಾಟ. Show all posts

Friday, April 18, 2025

ಪ್ರಾಣ ವಿದ್ಯಾ ವೇದ ರಹಸ್ಯ - 14

 

ಅಧ್ಯಾಯ - 17      

ವೈಜ್ಞಾನಿಕ ವಿವರಣೆಗಳು

 

ನಮ್ಮ ದೇಹದ ಉಸಿರಾಟ ವಿಧಾನ

             ವಿಜ್ಞಾನಿಗಳು ಕಂಡುಕೊಂಡಂತೆ, ಗಾಳಿಯಲ್ಲಿನ ದೂಳಿನ ದೊಡ್ಡ ಕಣಗಳನ್ನು ಮೂಗಿನ ಕೂದಲುಗಳು ತಡೆದು ಸೋಸಿ ಒಳಬಿಡುತ್ತವೆ. ಗಂಟಲು ಕುಳಿಯ (ಫ್ಯಾರಿಂಕ್ಸ್‌) ಮೂಲಕ ಇದು ಸಾಗುವಾಗ ಬೆಚ್ಚಗಾಗಿ ತೇವಗೂಡಿ ಉಸಿರ್ನಾಳಕ್ಕೆ ಬರುವ ಹೊತ್ತಿಗೆ ಇದರಲ್ಲಿ ನೀರಿನ ಆವಿ ತುಂಬಿರುವುದು. ಎದೆಗೂಡಿನ ಪೊಳ್ಳಿನ ಘನಗಾತ್ರದ (ವಾಲ್ಯೂಂ) ವ್ಯತ್ಯಾಸಗಳಿಂದ ಪುಪ್ಪುಸದ ಒಳಕ್ಕೂ ಹೊರಕ್ಕೂ ಗಾಳಿ ಸಾಗುತ್ತದೆ. ಪುಪ್ಪುಸಗಳು ಮಾತ್ರ ತಾವಾಗಿಯೇ ಕುಗ್ಗುವುದೂ ಇಲ್ಲ, ಹಿಗ್ಗುವುದೂ ಇಲ್ಲ. ಹಾಗೆಯೇ ಬಿಟ್ಟರೆ ಅವು ಮುದುರುವ ಸ್ವಭಾವದವು. ಎದೆಗೂಡಿನ ಪೊಳ್ಳು ಹೇಗೆ ಆಡಿದರೆ ಇವೂ ಹಾಗೇ ಆಡುತ್ತವೆ.

            ಮಿದುಳಿನ ತಳಗಡೆಯ ಮಿದುಳುಕಾಂಡದಲ್ಲಿ (ಮೆಡುಲ ಆಬ್ಲಾಂಗೇಟ) ಒಂದು ಗಜ್ಜುಗ ಗಾತ್ರದ (ಸುಮಾರು 1 ಇಂಚು ಇರುವ ಗಜ್ಜುಗ ಆಯುರ್ವೇದಿಕ ಕಾಯಿ) ವಿಶಿಷ್ಟ ಕೇಂದ್ರವಿದೆ. ನರತಂತುಗಳು ಹೆಣೆದುಕೊಂಡು ಒಂದು ಜಾಲ ಇಲ್ಲಿ ರಚಿತವಾಗಿದೆ. ಇದೇ ಉಸಿರಾಟದ ಕೇಂದ್ರ. 19ನೆಯ ಶತಮಾನದಲ್ಲಿ  ಈ ಸಂಗತಿ ವಿಜ್ಞಾನಿಗಳಿಗೆ ವೇದ್ಯವಾಯಿತು. ಈ ಉಸಿರಾಟದ ಕೇಂದ್ರ ಉಸಿರಾಟವನ್ನು ನಿಯಂತ್ರಿಸುತ್ತದೆ, ಅರ್ಥಾತ್ ಜೀವನವನ್ನೇ ನಿಯಂತ್ರಿಸುತ್ತದೆ; ಉಸಿರಾಟಕ್ಕೆ ಸಂಬಂಧಿಸಿದ ಸಕಲ ಸ್ನಾಯುಗಳ ಕ್ರಿಯೆಯನ್ನೂ ನಿಯಂತ್ರಿಸಿ ನಿರ್ವಹಿಸುವ ಕೇಂದ್ರವಿದು. ಒಂದು ಜೀವಿಯ ದೇಹದಲ್ಲಿರುವ ಬಲು ಸಂಕೀರ್ಣ ಅವಯವಗಳ ಉಳಿವಿಗೆ ಅತ್ಯಾವಶ್ಯಕವಾದ ಆಂತರಿಕ ಪರಿಸರದ ಸ್ಥಿತಿಯನ್ನು ಕಾಯ್ದಿಡುವುದರಲ್ಲಿ ಉಸಿರಾಟ ವ್ಯವಸ್ಥೆಯ ಪಾತ್ರ ಬಲು ಪ್ರಮುಖವಾದದ್ದು. ಇದೊಂದು ವಿಧದ ರಾಸಾಯನಿಕ ಕ್ರಿಯೆ. ಆದ್ದರಿಂದ ಇದನ್ನು ಉಸಿರಾಟದ ರಾಸಾಯನಿಕ ನಿಯಂತ್ರಣ ಎಂದೇ ಕರೆಯುವುದುಂಟು. ಒಂದು ಕೋಣೆಯೊಳಗಿನ ಉಷ್ಣತೆಯನ್ನು ಒಂದೇ ಮಟ್ಟದಲ್ಲಿ ಇರಿಸುವಂಥ ಒಂದು ಕಾರ್ಯ ಉಸಿರಾಟದ ರಾಸಾಯನಿಕ ನಿಯಂತ್ರಣ.

            ಮೂಗಿಗೆ ಸೇರಿದ ಮೂಳೆಗಳು ಒಟ್ಟು 11. ಇವನ್ನು ಬೆಚ್ಚಗಿರುವ ಕೆಂಪು ಲೋಳೆಪೊರೆ ಮುಚ್ಚಿದೆ. ಕೆಳಸುರುಳಿ ಮೂಳೆಗಳ ಮೇಲಿರುವ ಪೊರೆ ಹೆಚ್ಚು ರಕ್ತನಾಳಗಳಿಂದ ದಪ್ಪವಾಗಿದೆ. ಮೂಗಿನಲ್ಲಿ ಹೆಚ್ಚು ರಕ್ತನಾಳಗಳಿವೆ. ಇವುಗಳಲ್ಲಿ ಚಲಿಸುವ ಬಿಸಿರಕ್ತದಿಂದ ಉಚ್ಛಾಸದ ಗಾಳಿ ಬಿಸಿಯಾಗುತ್ತದೆ. ಅದಕ್ಕೆ ಹಬೆಯ ಅಂಶವೂ ಸೇರುತ್ತದೆ. ಲೋಳೆಪೊರೆಯ ಅಂಚಿನಲ್ಲಿ ಮತ್ತು ಹೊಳ್ಳೆಗಳಲ್ಲಿರುವ ಕೂದಲಲ್ಲಿ ದೂಳು ಮತ್ತು ಕ್ರಿಮಿಗಳು ಅಂಟಿಕೊಂಡು ಗಾಳಿ ಬಿಸಿಯಾಗುತ್ತದೆ. ಅದಕ್ಕೆ ಹಬೆಯ ಅಂಶವೂ ಸೇರುತ್ತದೆ. ಲೋಳೆಪೊರೆಯ ಅಂಚಿನಲ್ಲಿ ಮತ್ತು ಹೊಳ್ಳಗಳಲ್ಲಿರುವ ಕೂದಲಲ್ಲಿ ದೂಳು ಮತ್ತು ಕ್ರಿಮಿಗಳು ಅಂಟಿಕೊಂಡು ಗಾಳಿ ಶೋಧನೆಗೊಳ್ಳುತ್ತದೆ. ಮೂಗಿನ ಪಕ್ಕ ಮೂಳೆಗಳಲ್ಲಿ ಗಾಳಿಗೂಡುಗಳು (ಪ್ಯಾರನೇಸಲ್‌ ಏರ್‌ ಸೈನಸಸ್‌) ಧ್ವನಿವರ್ಧಕವಾಗಿ ಮೂಳೆಗಳನ್ನು ಹಗುರವಾಗಿಸಿ ಉಸಿರಿನ ಕಾವು ಹೆಚ್ಚಲು ಸಹಾಯಕವಾಗಿವೆ. ನೆಗಡಿಯಾದಾಗ ಈ ಗೂಡುಗಳಲ್ಲಿ ಕಫ ತುಂಬಿಕೊಂಡರೆ ದ್ವನಿ ಕುಗ್ಗುವುದು. ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡಿನ ಅಂಶ ಹೆಚ್ಚಿದರೆ (ಉದಾಹರಣೆಗೆ, ದೇಹಶ್ರಮದಲ್ಲಿ) ಇದು ಉಸಿರಾಟದ ವೇಗವನ್ನೂ ಆಳವನ್ನೂ ಹೆಚ್ಚಿಸುತ್ತದೆ. ಆಕ್ಸಿಜನ್‌ ಅಂಶ ಕಡಿಮೆಯಾದರೆ (ಉದಾಹರಣೆಗೆ, ನಿದ್ರೆಯಲ್ಲಿ) ವೇಗವನ್ನು ತಗ್ಗಿಸುತ್ತದೆ. ಮಾತಾಡುವುದು, ಕೆಮ್ಮುವುದು, ಸೀನುವುದು, ಮುಕ್ಕುವುದು, ವಾಂತಿ ಮಾಡುವುದು ಮುಂತಾದ ಕಾರ್ಯಗಳಲ್ಲಿ ಹೊಟ್ಟೆ ಎದೆಗಳಲ್ಲಿ ಒತ್ತಡ ಹೆಚ್ಚುವಂತೆಯೂ, ಬಿರುಸಿನಿಂದ ಉಸಿರನ್ನು ತೆಗೆದುಕೊಳ್ಳುವಾಗ ಎದೆ ಹೊಟ್ಟೆಗಳ ಒತ್ತಡ ಬಹಳ ಕಡಿಮೆಯಾಗುವಂತೆಯೂ ಮಾಡುತ್ತವೆ. ಒತ್ತಡವನ್ನು ಹೆಚ್ಚಿಸುವುದರಲ್ಲಿ ಉದರ ಸ್ನಾಯುಗಳ ಪಾತ್ರ ಹೆಚ್ಚು ಒತ್ತಡವನ್ನು ತಗ್ಗಿಸುವುದರಲ್ಲಿ ವಪೆಯ ಪಾತ್ರ ಹೆಚ್ಚು. ವಪೆಯು ಸ್ತನಿಗಳಲ್ಲಿ ಎದೆಗೂಡನ್ನು (ತೊರ್ಯಾಕ್ಸ್) ಉದರಭಾಗದಿಂದ ಬೇರ್ಪಡಿಸುವ ಅಂಗ (ಡಯಾಫ್ರಮ್). ಮೆದು ಮೂಳೆ ಸ್ನಾಯುಗಳಿಂದಾಗಿರುವ ರಚನೆ. ದೇಹದಲ್ಲಿ ಹೃದಯವನ್ನು ಹೊರತು ಪಡಿಸಿದರೆ ವಪೆಯೇ ಅತಿ ಮುಖ್ಯ ಸ್ನಾಯು. ಮುಂಭಾಗದಲ್ಲಿ ಇದು ಎದೆ ಎಲುಬಿಗೂ ಪಕ್ಕೆಲುಬಿಗೂ ಹಿಂಭಾಗದಲ್ಲಿ ಬೆನ್ನುಹುರಿಗೂ ಅಂಟಿಕೊಂಡಿರುವುದು. ಉಸಿರಾಟ ಪ್ರಕ್ರಿಯೆಯಲ್ಲಿ ಇದರದು ಮಹತ್ತ್ವದ ಪಾತ್ರ. ಉಚ್ಛ್ವಾಸದ ವೇಳೆ ವಪೆ ಕುಗ್ಗಿ ಕೆಳಗಿಳಿದು ಎದೆಗೂಡಿನೊಳಗೆ ಅಧಿಕ ಸ್ಥಳಾವಕಾಶ ಒದಗಿಸುತ್ತದೆ. ವಾಯುಪೂರಿತ ಫುಪ್ಫುಸಗಳು ವ್ಯಾಕೋಚಿಸಲು ಇದರಿಂದ ಅನುಕೂಲ. ಅದೇ ರೀತಿ ನಿಶ್ವಾಸದ ವೇಳೆ ವಪೆ ಸಡಿಲವಾಗಿ ಹೊಟ್ಟೆಯ ಒತ್ತಡದಿಂದ ಮೇಲಕ್ಕೆ ನೂಕಲ್ಪಟ್ಟು ಎದೆಗೂಡನ್ನು ಕಿರಿದಾಗಿಸುತ್ತದೆ. ಆಗ ಫುಪ್ಫುಸಗಳಿಂದ ವಾಯು ಸಲೀಸಾಗಿ ನಿರ್ಗಮಿಸುವುದು. ವಪೆಗೆ ಅಪಾಯ ಬಡಿದರೆ ಉಸಿರಾಟ ಏರುಪೇರಾಗುತ್ತದೆ.

            ಉಸಿರಾಟ ಗ್ಲೂಕೋಸ್‌ನಿಂದ ಚೈತನ್ಯಪಡೆಯುವ ಕ್ರಿಯೆ ಎಲ್ಲ ಪ್ರಾಣಿಗಳಲ್ಲೂ ಸಸ್ಯಗಳಲ್ಲೂ ಸಾಮಾನ್ಯ. ಉತ್ಕರ್ಷಣೆಗೆ ಬೇಕಾದ ಆಮ್ಲಜನಕವನ್ನು ಈ ಕ್ರಿಯೆಯ ಮೂಲಕ ಜೀವಿ ಪಡೆಯಬೇಕು. ಅನಗತ್ಯವಾದ ಇಂಗಾಲಡಯಾಕ್ಸೈಡನ್ನು ಬಿಟ್ಟುಬಿಡಬೇಕು. ಕೋಶಿಕೆಗಳ ತೇವಪೂರಿತ ಪರೆಯ ಮೂಲಕ ಆಮ್ಲಜನಕ, ಇಂಗಾಲಡಯಾಕ್ಸೈಡ್‌ಗಳು ಸಾಗಬಲ್ಲುವು. ಆಮ್ಲಜನಕ ಸಾಗಣೆಗೆ ರಕ್ತ ಪರಿಚಲನೆ ಅಗತ್ಯ. ಮನುಷ್ಯನ ಒಂದು ಲೀಟರ್ ರಕ್ತ 250 ಎಂ.ಎಲ್  ಆಮ್ಲಜನಕವನ್ನು ಸಾಗಿಸಬಲ್ಲುದು. ಇದು ಬರಿಯ ನೀರಿನಲ್ಲಿ ಕರಗುವ ಆಮ್ಲಜನಕದ ಅಂಶಕ್ಕಿಂತ ಐವತ್ತು ಪಾಲು ಹೆಚ್ಚು.  ಶ್ವಾಸಕೋಶದ ಸುತ್ತೂ ಇರುವ ರಕ್ತದ ಲೋಮನಾಳಗಳು ರಕ್ತವನ್ನು ಆಮ್ಲಜನಕ ಪೂರಿತ ಗಾಳಿಯ ಸಮೀಪಕ್ಕೆ ತರುತ್ತವೆ. ಇಷ್ಟಿದ್ದರೂ ಆಮ್ಲಜನಕ ಸೇವಿಸಿ ಇಂಗಾಲಡೈಯಾಕ್ಸೈಡ್ ಬಿಡುವ ಕೆಲಸ ಸಮರ್ಥವಾಗಿ ನಡೆಯುವುದಿಲ್ಲ. ದೇಹದಲ್ಲಿ ಹೆಚ್ಚಿರುವ ಇಂಗಾಲಡೈಯಾಕ್ಸೈಡ್ ಹಿಮೋಗ್ಲೋಬಿನ್ ಸೇರಿ ಸಾಗಬಹುದು. ನೀರಿನೊಂದಿಗೆ ಸೇರಿ ಕಾರ್ಬೋನಿಕ್ ಆಮ್ಲ ಆಗಬಹುದು.

            ರಕ್ತದಲ್ಲಿರುವ ಆಮ್ಲಜನಕದ ಅಂಶ ಒಂದಷ್ಟು ಕಡಮೆಯಾದರೆ. ಪ್ರಜ್ಞೆ ತಪ್ಪೀತು. ರಕ್ತದ್ರವದಲ್ಲಿ 10,000ಕ್ಕೆ ಒಂದರಷ್ಟು ಇರುವ ಕ್ಯಾಲ್ಸಿಯಂ ಅಯಾನುಗಳ ಸಾಂದ್ರತೆ, ಅರ್ಧದಷ್ಟು ಕಡಮೆಯಾದರೆ ಸಾಕು ನಡುಕವುಂಟಾಗಿ ಜೀವಿ ಉಳಿಯುವುದೇ ಅಸಾಧ್ಯ. ಕೋಶಿಕೆಗಳಿಗೆ ಗ್ಲೂ ಕೋಸನ್ನು ಒದಗಿಸುವುದೂ ರಕ್ತವೇ. ಇದರಲ್ಲಿ ಸಾಮಾನ್ಯವಾಗಿ 0.0007 ಅಂಶದಷ್ಟಿರುವ ಗ್ಲೂಕೋಸ್‌ 0.0003 ರಷ್ಟಕ್ಕೆ ಇಳಿದರೂ ಬದುಕಲು ಕಷ್ಟ: 0.0012ರಷ್ಟಕ್ಕೆ ಏರಿದರೆ ಸಿಹಿಮೂತ್ರದಿಂದ ಬಳಲಿಕೆ. ಇಂಥ ಆಪಾಯಕರ ಸ್ಥಿತಿ ಬಾರದಂತೆ ವಿವಿಧ ಅಂಗಗಳ ಪರಿಣತ ಕೋಶಿಕೆಗಳು ನೋಡಿಕೊಳ್ಳುತ್ತವೆ. ಇದು ತನ್ನ ಉಳಿವಿಗಾಗಿ ಜೀವಿ ಹೋರಾಡುವ ಒಂದು ಕ್ರಮ. ಜೀವಿಯು ತನ್ನ ಚಟುವಟಕೆಗಳಿಗೆ ಬೇಕಾದ ಚೈತನ್ಯವನ್ನು ಪಡೆಯುವುದು ಉಸಿರಾಟದಿಂದ. ಪ್ರಾಣಿಗಳು ಬದುಕಲು ಚೈತನ್ಯ ಬೇಕು. ಆಹಾರಾಂಶವನ್ನು ಉತ್ಕರ್ಷಿಸಿ ಅವು ಚೈತನ್ಯ ಪಡೆಯಬಲ್ಲುವು. ಈ ಚೈತನ್ಯದಿಂದ ಅದರ ಚಲನೆ, ಚಟುವಟಿಕೆಗಳು ನಡೆಯುತ್ತವೆ. ಆಹಾರವು ಚೈತನ್ಯ ನೀಡುತ್ತದೆ; ಪ್ರಾಣಿಯ ಕೋಶಿಕೆಗಳಲ್ಲಿ ಜೀವದ್ರವ್ಯವಾಗಿಯೂ ಮಾರ್ಪಡುತ್ತದೆ. ಹೀಗೆ ಉಸಿರಾಟ ಮತ್ತು ಜೀವದ್ರವ್ಯ ಉತ್ಪತ್ತಿಗಳನ್ನು ಒಳಗೊಂಡ ಚಯಾ ಪಚಯ ಕ್ರಿಯೆ ಎಲ್ಲ ಪ್ರಾಣಿ, ಸಸ್ಯಗಳಲ್ಲಿ ನಡೆಯುತ್ತದೆ.” ಇದಿಷ್ಟೂ ವೈಜ್ಞಾನಿಕ ಅಂಶ. ಇದನ್ನು ಮೊದಲು ಸಂಶೋಧ್ನೆ ಮಾಡಿ ವೇದಗಳಲ್ಲೇ ಬರೆದಿದ್ದಾರೆ ನಮ್ಮ ಹಿಂದು ಸನಾತನ ಪೂರ್ವಿಕರು.

 

 

ಉಸಿರಾಟಕ್ಕೂ ಡಿ.ಎನ್.ಎ ಜೀನ್ಸ್ ಕಾರ್ಯಕ್ಕೂ ಸಂಬಂಧವಿದೆ

            ಜೀನ್ ಎಂದರೆ ಡಿ. ಎನ್. ಎ ಯ ಒಂದು ಸಣ್ಣ ಭಾಗ. ಇವು ಜೀವಿಯ ದೇಹದ ಒಳಗಿನ ಎಲ್ಲಾ ಜೀವಕೋಶಗಳಲ್ಲಿದ್ದು ಆ ಜೀವಕೋಶಗಳು ಯಾವ ಸಮಯದಲ್ಲಿ ಏನು ಮಾಡಬೇಕು ಎಂದು ನಿರ್ಧರಿಸುವ ಅಂಶ. ಜೀವಕೋಶದ ಆಗುಹೋಗುಗಳ ಒಂದು ಹಂತದ ವ್ಯವಸ್ಥಾಪಕ. ವಿಶೇಷವೆಂದರೆ ಒಂದೇ ಜೀವಕೋಶದಲ್ಲಿ ಬೇರೆ ಬೇರೆ ಕೆಲಸಗಳಿಗೆ ಬೇರೆ ಜೀನ್ ಗಳಿದ್ದು ಅವುಗಳನ್ನು ಸ್ವಿಚ್ ನ ಮೂಲಕ ಆನ್ ಅಥವಾ ಆಫ್ ಮಾಡಬಹುದಾಗಿದೆ. ರಸಾಯನ ಶಾಸ್ತ್ರದಲ್ಲಿ ಈ ಸ್ವಿಚ್ ಗಳಿಗೆ  ಮೀಥೈಲ್ ಗ್ರೂಪ್ ಎನ್ನುತ್ತಾರೆ. ಸಾಮಾನ್ಯವಾಗಿ ಈ ಮೀಥೈಲ್ ಗ್ರೂಪ್ ನ ಅಣುವನ್ನು ಹಾಕಿದರೆ ಕೆಲವು ಜೀನ್ ಗಳು ಆಫ್ ಆಗುತ್ತವೆಯಂತೆ. ಹಾಗೆಯೇ ಮೀಥೈಲ್ ಗ್ರೂಪ್ ನ ಅಣುವನ್ನು ತೆಗೆದರೆ ಕೆಲವು ಆನ್ ಆಗುತ್ತವೆಯಂತೆ. ಇವುಗಳ ಪರಿಣಾಮ ಜೀವಕೋಶದಲ್ಲಿ ವಿವಿಧ ಕ್ರಿಯೆಗಳು ಕ್ರಮಬದ್ಧವಾಗಿ ನಡೆಯುತ್ತವೆ. ಈ ಮೀಥೈಲ್ ಗ್ರೂಪ್ ನ ಅಣುವು ಸ್ವಾಭಾವಿಕವಾಗಿ ನಮ್ಮ ದೇಹದಲ್ಲೇ ಬೇಕಾದ ಸಮಯದಲ್ಲಿ ಉತ್ಪಾದನೆಯಾಗುತ್ತದೆ. ಕೆಲಸ ಮುಗಿದ ಮೇಲೆ ತೆಗೆಯಲ್ಪಡುತ್ತದೆ. ಆದರೆ ನಮ್ಮ ದೇಹದ ಹೊರಗಿನ ಕೆಲವು ಮಾಲಿನ್ಯಕಾರಕ ಅಂಶಗಳಿಂದ ಇಲ್ಲಿಯವರೆಗೆ ದೇಹದಲ್ಲಿ ಸ್ವಾಭಾವಿಕವಾಗಿ ನಡೆಯುತ್ತಿದ್ದ ಮೀಥೈಲ್ ಗ್ರೂಪ್ ನ ಅಣುಗಳ ಹಾಕುವಿಕೆ ಅಥವಾ ತೆಗೆಯುವಿಕೆಯಲ್ಲಿ ವ್ಯತ್ಯಾಸ ಉಂಟುಮಾಡುತ್ತವೆ. ಇದರ ಪರಿಣಾಮ ಜೀನ್ ಗಳು ಅವಶ್ಯವಿಲ್ಲದ ಸಮಯದಲ್ಲಿ ಆನ್ ಅಥವಾ ಆಫ್ ಆಗುತ್ತವೆ. ನಮ್ಮ ಜೀನ್ ಗಳನ್ನು ನಾವು ಉಸಿರಾಡುವ ಗಾಳಿಯಲ್ಲಿ ನುಸುಳಿ ಬರುವ ಈ ಮಾಲಿನ್ಯಕಾರಕಗಳು ಅಪಹರಿಸಿ ಜೀವಕೋಶದಲ್ಲಿನ ಕೆಲಸಗಳನ್ನು ಏರು ಪೇರು ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.  ಮೀಥೈಲ್ ಗುಂಪು ಮೂರು ಹೈಡ್ರೋಜನ್ ಪರಮಾಣುಗಳಿಗೆ ಬಂಧಿತವಾದ ಒಂದು ಕಾರ್ಬನ್ ಪರಮಾಣು ಹೊಂದಿರುವ ಮೀಥೇನ್‌ನಿಂದ ಪಡೆದ ಕ್ರಿಯಾತ್ಮಕ ಗುಂಪಾಗಿದೆ , -CH 3.

            ಜೆನೆಟಿಕ್ಸ್‌ನಲ್ಲಿನ ವಿಜ್ಞಾನಿಗಳ ಆರಂಭಿಕ ಕೆಲಸದಲ್ಲಿ, ನಮ್ಮ ಎಲ್ಲಾ ದೈಹಿಕ ಮತ್ತು ಭಾವನಾತ್ಮಕ ಗುಣಲಕ್ಷಣಗಳನ್ನು ವ್ಯಾಖ್ಯಾನಿಸುವ ವಿಶಿಷ್ಟವಾದ ಜೀನ್‌ಗಳನ್ನು ಹೊಂದಿದ್ದೇವೆ ಎಂದು ಸೂಚಿಸಿದೆ: ಕೂದಲಿನ ಬಣ್ಣ, ಅಸ್ಥಿಪಂಜರದ ಸಾಂದ್ರತೆ ಮತ್ತು ವರ್ಣದ್ರವ್ಯ, ಹಾಗೆಯೇ ಗಣಿತದ ಅಥವಾ ಭಾಷೆ ಅಥವಾ ಕೆಲವು ರೋಗಗಳನ್ನು ಪಡೆಯುವ ಪ್ರವೃತ್ತಿ ಬಗ್ಗೆ ತಿಳಿಸಿದೆ.  ಎಪಿಜೆನೆಟಿಕ್ಸ್ - ಆನುವಂಶಿಕ ಸೂಚನೆಗಳ ಎರಡನೇ ಪದರ - ಕೆಲವು ಜೀನ್‌ಗಳನ್ನು ಯಾವಾಗ ಮತ್ತು ಯಾವಾಗ ಆನ್ ಅಥವಾ ಆಫ್ ಮಾಡಲಾಗಿದೆ ಎಂಬುದನ್ನು ನಿರ್ದೇಶಿಸಬಹುದು ಎಂದು ನಮಗೆ ಈಗ ತಿಳಿಸಿದೆ.

            ಮೀಥೈಲ್ ಗುಂಪುಗಳು (ಕ್ರಿಯಾತ್ಮಕ ಏಕ-ಕಾರ್ಬನ್ ಪರಮಾಣುಗಳು) ಮಾನವ ದೇಹದಲ್ಲಿನ ಹಲವಾರು ಜೀವರಾಸಾಯನಿಕ ಕ್ರಿಯೆಗಳಲ್ಲಿ ತೊಡಗಿಕೊಂಡಿವೆ. ಅವು ಡಿಎನ್‌ಎ ಓದುವಿಕೆಗೆ ನಿರ್ಣಾಯಕವಾಗಿವೆ ಮತ್ತು ಎಂಡೊಮೆಟ್ರಿಯೊಸಿಸ್‌ನಲ್ಲಿ ಪೆಲ್ವಿಕ್ ಪೆರಿಟೋನಿಯಲ್ ಮತ್ತು ಪ್ರತಿರಕ್ಷಣಾ ಕೋಶಗಳ ಸಕ್ರಿಯಗೊಳಿಸುವಿಕೆಗೆ ಸಂಬಂಧಿಸಿದೆ ಎಂದು ಪರಿಗಣಿಸಬೇಕು.

 

ಉಸಿರಾಟ ಮತ್ತು ಬಾಹ್ಯ ನೀರು

            ಮಾನವನಲ್ಲೂ ಇತರ ಸ್ತನಿಗಳಲ್ಲೂ ಚರ್ಮದ ಮೂಲಕ ನಡೆಯುವ ಒಟ್ಟು ಉಸಿರಾಟದ 1% ಮಾತ್ರವಿರಬಹುದೆಂದು ಅಂದಾಜು. ವಿಜ್ಞಾನಿಗಳು ಕಂಡುಕೊಂಡಂತೆ, ಈಜುವಿಕೆಯಿಂದ ಜೀರ್ಣಕ್ರಮ, ಉಸಿರಾಟ, ರಕ್ತಪರಿಚಲನೆ, ಎಲ್ಲ ಮಾಂಸಖಂಡಗಳ ಸಹಕಾರಯುತ ವರ್ತನೆ, ದೇಹದ ಮಿತಪ್ರಮಾಣ ಬೆಳೆವಣಿಗೆ, ಒಂದು ಗಂಭೀರ ನಿಲವು ಮತ್ತು ಶಕ್ತಿಯ ಗಳಿಕೆ, ಉತ್ತಮ ವ್ಯಕ್ತಿತ್ವ ಹೆಚ್ಚಿದ ಸಹಿಷ್ಣುತೆ, ಉತ್ತಮ ಆರೋಗ್ಯ-ಇವಿಷ್ಟನ್ನೂ ಸಾಧಿಸಬಹುದು. ವೈದ್ಯರಾಗಿದ್ದ ಹೃಷೀಕೇಶದ ಸ್ವಾಮಿ ಶಿವಾನಂದರು ಈಜುವುದು ಅತ್ಯುತ್ತಮ ವ್ಯಾಯಾಮ ಎಂದು ಹೇಳುತ್ತಾರೆ. ಅದು ದೇಹದ ಎಲ್ಲ ಮಾಂಸ ಖಂಡಗಳನ್ನೂ ಎಳೆಯುತ್ತದೆ. ಸೊಂಟದ ವಾತ ರೋಗವನ್ನು ಶಮನಗೊಳಿಸುತ್ತದೆ. ತೇಲುತ್ತಲೇ ಪ್ರಾಣಾಯಾಮ ವನ್ನೂ ಆಚರಿಸಬಹುದು ಎಂದು ಅವರ ಅಭಿಪ್ರಾಯ.

            ನಮ್ಮ ದೇಹದಲ್ಲಿ ನೂರಕ್ಕೆ 70ರಷ್ಟು ನೀರಿದೆ. ನಮ್ಮ ರಕ್ತದಲ್ಲಿ

ಶೇಕಡಾ 90, ಸ್ನಾಯುಗಳಲ್ಲಿ ಶೇಕಡಾ 85 ನೀರಿದೆ. ಈ ಪ್ರಮಾಣ ಸ್ಥಿರವಾಗಿರಬೇಕು. ಇದರಲ್ಲಿ ಶೇಕಡಾ ಇಪ್ಪತ್ತು ನೀರು ನಷ್ಟವಾಗಿ ಹೋದರೂ ಸಾವು ಬಂದೀತು. ಸಾಮಾನ್ಯವಾಗಿ ನೀರನ್ನು ನಾವು ಆಹಾರವೆಂದು ಪರಿಗಣಿಸದಿದ್ದರೂ ಇದರ ಪೂರೈಕೆ ನಿರಂತರವಾಗಿ ಆಗುತ್ತಲೇ ಇರಬೇಕು. ನಮ್ಮ ದೇಹದ ಅಸಂಖ್ಯ ಕೋಶಿಕೆಗಳಿಗೆ ನೀರಿನ ತೇವ ಲಭಿಸಿದರೆ ಮಾತ್ರ ದೇಹದ ಎಲ್ಲ ರಾಸುಯನಿಕ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ನಮ್ಮ ದೇಹದಲ್ಲಿ ಸುಮಾರು 45 ಲೀಟರಿನಷ್ಟು ನೀರಿದೆ. ಉಸಿರಾಟ, ಬೆವರು ಮತ್ತು ಮೂತ್ರಗಳ ರೂಪದಲ್ಲಿ ನಾವು ಪ್ರತಿಕ್ಷಣವೂ ನೀರನ್ನು ಕಳೆದು ಕೊಳ್ಳುತ್ತಲೇ ಇರುತ್ತೇವೆ. ಆರೋಗ್ಯಶಾಲಿ ಮನುಷ್ಯನೊಬ್ಬ ನೀರಿಲ್ಲದೆ ಏಳರಿಂದ ಹತ್ತು ದಿನಗಳ ತನಕ ಬದುಕಬಲ್ಲ. ನಾವಿಕನೊಬ್ಬ ಸಾಗರದಲ್ಲಿ ನೀರಿಲ್ಲದೆ ಹನ್ನೊಂದು ದಿನಗಳವರೆಗೆ ಜೀವ ಓಡಿದುಕೊಂಡಿದ್ದದ್ದು ಜಾಗತಿಕ ದಾಖಲೆ. ಉಪವಾಸ ವ್ರತ ಕೈಗೊಂಡವರು ಇತರ ಆಹಾರ ಪಾನೀಯಗಳನ್ನು ತ್ಯಜಿಸಿದರೂ ನೀರು ಕುಡಿಯುವುದನ್ನು ನಿಲ್ಲಿಸುವುದಿಲ್ಲ.

 

ವಾಯುವಿನಲ್ಲಿ ಇರುವ ಅಂಶಗಳು ಏನು

            ನಮ್ಮ ಪರಿಸರದಲ್ಲಿ ವಾಯುವಿನಲ್ಲಿ, ನೈಟ್ರೊಜನ್‌, ಆಕ್ಸಿಜನ್‌ ಮತ್ತು ಆರ್ಗಾನ್‌ - ಇವು ಪ್ರಧಾನ ಘಟಕಗಳು (ಸ್ಥೂಲವಾಗಿ 79:20:1 ಅನುಪಾತದಲ್ಲಿ). ಇಡೀ ಭೂಮಿಯನ್ನು ಕುರಿತಂತೆ ಈ ಅನುಪಾತ ಸುದೀರ್ಘ ಕಾಲದಲ್ಲಿ ಸ್ಥಿರವಾಗಿಯೇ ಇರುವುದು. ತೇವಾಂಶದ ಮೊತ್ತ ಹೆಚ್ಚು ಕಡಿಮೆ ಆಗುತ್ತಿರುವುದು. ವಾಯುಮಂಡಲದ ಘಟಕಗಳಾಗಿ ಇತರ ಕೆಲವು ಅನಿಲಗಳೂ ಇವೆ: ಕಾರ್ಬನ್‌ ಡೈಆಕ್ಸೈಡ್‌ (ಶುಷ್ಠವಾಯುವಿನಲ್ಲಿ 340: 1,000,000 ಅನುಪಾತದಲ್ಲಿ); ನಿಯಾನ್‌ (18: 1,000,000) ಮತ್ತು ಹೀಲಿಯಮ್‌ (5: 1,000,000); ಓದೋನ್‌ (2: 1.000,000) ಇತ್ಯಾದಿ.

 

ದೇಹದಲ್ಲಿ ಅಮೃತ ಉತ್ಪಾದನೆಯ ಬಗ್ಗೆ ವೈಜ್ಞಾನಿಕ ವಿವರಣೆ [1] 

            ವಾಯುವಿನಲ್ಲಿ ಹೂವಿನ, ಸಸ್ಯಗಳ, ನೀರಿನ, ಅನೇಕ ಉಪಯುಕ್ತ ಜೀವಕೋಶಗಳ  ಕಣಗಳು ಇರುತ್ತವೆ. ಅಂತಹ ವಾಯು ನಮ್ಮ ದೇಹ ಸೇರಿದಾಗ ಅದರಲ್ಲಿನ ಅಮೃತಸಾರದ ಜೀವ ಕೋಶಗಳು ದೇಹದಲ್ಲಿನ ಇತರೆ ಎಲ್ಲಾ ರೀತಿಯ ರಸಾಯನಕ ಕ್ರಿಯೆ ಮತ್ತು ಗ್ರಂಥಿಗಳ ರಸ ಮತ್ತು ಆಹಾರದಿಂದ ಮತ್ತು ಪಂಚ ವಾಯುಗಳಿಂದ ಉತ್ಪತ್ತಿಯಾಗುವ ಅಮೃತದ ಬಗ್ಗೆ ವೈಜ್ಞಾನಿಕ ವಿವರಣೆ ಹೀಗಿದೆ,  “ಪರಾಗಸ್ಪರ್ಶದ ಹನಿಗಳು ಮತ್ತು ಮಕರಂದಗಳು (ಹೂವಿನ ಮಕರಂದ/ ಅಮೃತ) ಸಸ್ಯಗಳ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸ್ರವಿಸುವಿಕೆಗಳಾಗಿವೆ. .... ಮಕರಂದ ಮತ್ತು ಪರಾಗಸ್ಪರ್ಶದ ಹನಿಗಳು ಸಕ್ಕರೆಗಳನ್ನು ಮುಖ್ಯ ಘಟಕಗಳಾಗಿ ಹೊಂದಿರುತ್ತವೆ, ಆದರೆ ಒಟ್ಟು ಸಾಂದ್ರತೆ ಮತ್ತು ಸಂಬಂಧಿತ ಪ್ರಮಾಣಗಳು ವಿಭಿನ್ನವಾಗಿವೆ. ಅವು ಅಮೈನೋ ಆಮ್ಲಗಳನ್ನು  (ಅಮೈನೋ ಆಸಿಡ್) ಸಹ ಒಳಗೊಂಡಿರುತ್ತವೆ, ಅದರಲ್ಲಿ ಪ್ರೋಲಿನ್ (ಇದು ಅಮೈನೋ ಆಮ್ಲದ ಹೆಚ್ಚಿನ ಪ್ರೋಟೀನ್‌ಗಳ ಒಂದು ಅಂಶವಾಗಿದೆ, ವಿಶೇಷವಾಗಿ ಕೊಲ್ಲಾಜನ್ ಹೆಚ್ಚಾಗಿ ಹೇರಳವಾಗಿರುತ್ತದೆ).  ಪ್ರೋಟಿಯೊಮಿಕ್ (ಪ್ರೋಟೀನ್ ಅಧ್ಯನಗಳು) ಅಧ್ಯಯನಗಳು ಮಕರಂದ (ಹೂವಿನ ಮತ್ತು ಹೆಚ್ಚುವರಿ ಹೂವಿನ) ಮತ್ತು ಪರಾಗಸ್ಪರ್ಶದ ಹನಿಗಳಲ್ಲಿ ಇನ್‌ವರ್ಟೇಸ್‌ಗಳು (ಯೀಸ್ಟ್‌ನಿಂದ ಉತ್ಪತ್ತಿಯಾಗುವ ಎನ್ಸೈಮ್  ಸುಕ್ರೋಸ್‌ನ ಜಲವಿಚ್ಛೇದನವನ್ನು ವೇಗವರ್ಧಿಸುತ್ತದೆ, ತಲೆಕೆಳಗಾದ ಸಕ್ಕರೆಯನ್ನು ರೂಪಿಸುತ್ತದೆ) ಮತ್ತು ರಕ್ಷಣಾ ಸಂಬಂಧಿತ ಪ್ರೋಟೀನ್‌ಗಳಂತಹವು ಅಮೃತದಲ್ಲಿ  ಸಾಮಾನ್ಯ ಕ್ರಿಯಾತ್ಮಕ ವರ್ಗಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿವೆ. ...... ರಕ್ಷಣಾ ಸಂಬಂಧಿತ ಪ್ರೋಟೀನ್ಗಳು ಶಿಲೀಂಧ್ರಗಳು (ಫಂಗಸ್) ಮತ್ತು ಬ್ಯಾಕ್ಟೀರಿಯಾಗಳ ಆಕ್ರಮಣದಿಂದ ರಕ್ಷಣೆ ನೀಡುತ್ತವೆ. ..... ಹೆಚ್ಚಿನ ವೈವಿಧ್ಯಮಯ ಪ್ರಾಣಿಗಳು ತಮ್ಮ ಪೋಷಣೆಗಾಗಿ ಸಕ್ಕರೆಯ ಸ್ರವಿಸುವಿಕೆಯನ್ನು ಅವಲಂಬಿಸಿವೆ. ಅದಕ್ಕಾಗಿಯೇ ಸಕ್ಕರೆಯ ಸ್ರವಿಸುವಿಕೆಯು ಪರಸ್ಪರ ಕ್ರಿಯೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ. ಪ್ರಾಣಿಗಳು, ಶಿಲೀಂಧ್ರಗಳು ಮತ್ತು ಸಸ್ಯಗಳಿಂದ ಸಕ್ಕರೆ ಸ್ರವಿಸುವಿಕೆಯನ್ನು ಉತ್ಪಾದಿಸಬಹುದು”.

            ವೇದಗಳಿಂದ ಅಮೃತದ ಬಗ್ಗೆ ಸಮಗ್ರವಾಗಿ ತಿಳಿದು ಬರುವ ಅಂಶವೇನೆಂದರೆ, ವೈದಿಕ ಕಾಲ ದಲ್ಲಿ, ಸೋಮವು (ಅಮೃತವು) ದೇವರಿಗೆ ನೈವೇದ್ಯವಾಗಿ ನೀಡಿದ ಸಸ್ಯವಾಗಿದೆ. ಸಸ್ಯದ ಸುತ್ತಲೂ ದೊಡ್ಡ ಅತೀಂದ್ರಿಯತೆ ಮತ್ತು ಆಧ್ಯಾತ್ಮಿಕ ಶಕ್ತಿ ಇತ್ತು ಎನ್ನುತ್ತಾರೆ. ಋಗ್ವೇದದಲ್ಲಿ, ಸೋಮವು ಎಲ್ಲಾ ಸಸ್ಯಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಉಲ್ಲೇಖಿಸಲಾಗಿದೆ ಮತ್ತು ಹಲವಾರು ವಿಧದ ಸೋಮಗಳನ್ನು ಸೂಚಿಸಲಾಗುತ್ತದೆ. ನೀರು ಸ್ವತಃ, ವಿಶೇಷವಾಗಿ ಹಿಮಾಲಯದ ನದಿಗಳು, ಒಂದು ರೀತಿಯ ಸೋಮವಾಗಿದೆ ಎಂದೂ ಸಹ ಹೇಳಲಾಗಿದೆ. ವೈದಿಕ ಚಿಂತನೆಯಲ್ಲಿ, ಅಗ್ನಿ ಅಥವಾ ಅಗ್ನಿಯ ಪ್ರತಿಯೊಂದು ರೂಪಕ್ಕೂ ಸೋಮನ ರೂಪವಿದೆ. ಈ ನಿಟ್ಟಿನಲ್ಲಿ, ಬ್ರಹ್ಮಾಂಡದಾದ್ಯಂತ ಸೋಮಗಳಿವೆ.

            ವೇದಗಳಲ್ಲಿ, ಸೋಮನ ರಸವನ್ನು ಕಲ್ಲಿನ ಪುಡಿಯಿಂದ ಹೊರತೆಗೆಯಲಾಗುತ್ತದೆ ಅಥವಾ ಬಾರ್ಲಿ (ಯವ), ಹಾಲು (ಗೋ) ಅಥವಾ ಮೊಸರು (ದಧಿ) ನಂತಹ ಧಾನ್ಯಗಳೊಂದಿಗೆ ಬೇಯಿಸಲಾಗುತ್ತದೆ. ಸೋಮವನ್ನು ಹೆಚ್ಚಾಗಿ ತುಪ್ಪ (ಘೃತ) ಮತ್ತು ಜೇನುತುಪ್ಪ (ಮಧು) ನೊಂದಿಗೆ ಬಳಸಲಾಗುತ್ತಿತ್ತು ಮತ್ತು ಸೋಮವನ್ನು ಹೆಚ್ಚಾಗಿ ಮಧು (ಜೇನು ಅಥವಾ ಮೇಡ್) ಎಂದು ಕರೆಯಲಾಗುತ್ತಿತ್ತು. ವಿಶೇಷ ಗಿಡಮೂಲಿಕೆ ಜೇನುತುಪ್ಪದ ಸಿದ್ಧತೆಗಳು ಮತ್ತು ಗಿಡಮೂಲಿಕೆಗಳ ತುಪ್ಪದ ಸಿದ್ಧತೆಗಳು ಸೋಮಾಗಳ ಹೆಚ್ಚುವರಿ ವಿಧಗಳಾಗಿವೆ. ಸೋಮವು ಕಮಲಗಳು ಮತ್ತು ಇತರ ಹೂಬಿಡುವ ಜಲಸಸ್ಯಗಳೊಂದಿಗೆ ಸಂಪರ್ಕ ಹೊಂದಿದೆ ಎಂದಿದ್ದಾರೆ.

            ಮಹಾನ್ ಆಯುರ್ವೇದ ವೈದ್ಯ, ಸುಶ್ರುತ್, ಮುಖ್ಯವಾಗಿ ಹಿಮಾಲಯದ ಸರೋವರಗಳಲ್ಲಿ ಬೆಳೆಯುವ 24 ಸೋಮ ಸಸ್ಯಗಳನ್ನು ಉಲ್ಲೇಖಿಸುತ್ತಾರೆ. ಅವು ಮುಖ್ಯವಾಗಿ ನರ ಮೂಲಿಕೆಗಳಾಗಿವೆ. ಆದ್ದರಿಂದ, ಸೋಮವು ಪವಿತ್ರ ಸಸ್ಯ ತಯಾರಿಕೆಯ ಸಂಪೂರ್ಣ ವಿಜ್ಞಾನದ ಭಾಗವಾಗಿತ್ತು ಮತ್ತು ನಿರ್ದಿಷ್ಟವಾಗಿ ಕೇವಲ ಒಂದು ಸಸ್ಯವಲ್ಲ.

            ಇಲ್ಲಿವರೆಗೆ ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ, ತಜ್ಞರು ತಿಳಿದಿರುವ ಅಂಶವೇನೆಂದರೆ, ಸೋಮವು ಧ್ಯಾನದ ಆಳವಾದ ಸ್ಥಿತಿಗಳಲ್ಲಿ ಪೀನಲ್ ಗ್ರಂಥಿಯಿಂದ ಸ್ರವಿಸುವ ಮಕರಂದವಾಗಿದೆ. ಈ ಅಮೃತವು ಹೃದಯ ಚಕ್ರದೊಂದಿಗೆ ಬೆರೆಯುತ್ತದೆ ಮತ್ತು ಹೃದಯ ಮತ್ತು ಮನಸ್ಸನ್ನು ಜೋಡಿಸುತ್ತದೆ ಎಂದು ಭಾವಿಸಲಾಗಿದೆ. ಯೋಗದ ಮಟ್ಟದಲ್ಲಿ ಸೋಮವು ಕಿರೀಟ ಚಕ್ರವನ್ನು ಸೂಚಿಸುತ್ತದೆ, ಇದು ಇಂದ್ರನಿಂದ ತೆರೆಯಲ್ಪಟ್ಟಿದೆ (ಯೋಗದ ಒಳನೋಟ) ಮತ್ತು ದೇಹದಾದ್ಯಂತ ಆನಂದದ ಪ್ರವಾಹವನ್ನು ಬಿಡುಗಡೆ ಮಾಡುತ್ತದೆ. ಈ ಆಂತರಿಕ ಸೋಮವು ವೈದಿಕ ಸ್ತೋತ್ರಗಳ ಮುಖ್ಯ ವಿಷಯವಾಗಿದೆ, ಆದರೂ ಹೊರಗಿನ ಸೋಮಗಳು ಸಹ ಪ್ರಮುಖವಾಗಿವೆ ಎನ್ನುತ್ತಾರೆ.

           

ಧ್ಯಾನ ನಮ್ಮಲ್ಲಿನ ಶಕ್ತಿಯುತ ಅಂಶಗಳ ಸಂವಹನ ನಡೆಸುವುದು[2]

 

            ಇತ್ತೀಚೆಗೆ ಪಾಶ್ಚಿಮಾತ್ಯರು ಕಂಡುಕೊಳ್ಳುತ್ತಿರುವಂತೆ, ಕೆಲವು ಟಾವೊಯಿಸ್ಟ್  ಮತ್ತು ತಾಂತ್ರಿಕ ವ್ಯಾಯಾಮಗಳು ಮತ್ತು ಧ್ಯಾನಗಳೊಂದಿಗೆ ಕೆಲಸ ಮಾಡುವಾಗ, ನಿಮ್ಮ ಲೈಂಗಿಕ ಶಕ್ತಿಯನ್ನು ಪ್ರವೇಶಿಸಲು ಮತ್ತು ಅದನ್ನು ಗುಣಪಡಿಸುವ ಸಾಧನವಾಗಿ ಬಳಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ. ...... ಆರಂಭಿಕ ಅಭ್ಯಾಸಗಳು ಮತ್ತು ಧ್ಯಾನಗಳು ನಮ್ಮ ಸ್ವಂತ ಲೈಂಗಿಕ ಶಕ್ತಿಗಳನ್ನು ಪ್ರವೇಶಿಸುವುದು ಮತ್ತು ನಮ್ಮ ಸ್ವಂತ ದೇಹಗಳೊಂದಿಗೆ ಸಂವಹನ ನಡೆಸುವುದು. ನಾವು ಇದರೊಂದಿಗೆ ಕೆಲಸ ಮಾಡುತ್ತೇವೆ:

• ಅಂಡಾಶಯಗಳು ಮತ್ತು ವೃಷಣಗಳಲ್ಲಿ ವಾಸಿಸುವ ಲೈಂಗಿಕ ಶಕ್ತಿಯನ್ನು (ಜೀವ ಶಕ್ತಿ) ಪ್ರವೇಶಿಸುವುದು

ದೇಹದಾದ್ಯಂತ ಲೈಂಗಿಕ ಶಕ್ತಿಯನ್ನು ಸಾಗಿಸಲು ಉಸಿರನ್ನು ಬಳಸುವುದು

• ಬಹು, ವಿಸ್ತೃತ, ಪೂರ್ಣ ದೇಹದ ಪರಾಕಾಷ್ಠೆಗಳನ್ನು ರಚಿಸಲು ಮತ್ತು ಅನುಭವಿಸಲು ಈ ಹೊಸ ಶಕ್ತಿಯನ್ನು ಬಳಸಿಕೊಳ್ಳುವುದು

ಈ ಶಕ್ತಿಯಿಂದ ನಮ್ಮ ದೇಹವನ್ನು ಗುಣಪಡಿಸುವುದು - ಅದನ್ನು ನಮ್ಮ ಅಂಗಗಳು, ರಕ್ತ, ಗ್ರಂಥಿಗಳು, ಹಾರ್ಮೋನುಗಳು, ಮೂಳೆಗಳಿಗೆ ಕಳುಹಿಸುವುದು

• ನಮ್ಮ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಪಡೆಯುವುದು ಮತ್ತು ಲೈಂಗಿಕ ಪ್ರಜ್ಞೆಯ ಉನ್ನತ ಪ್ರಜ್ಞೆಯತ್ತ ಸಾಗುವುದು.

 

ದೇಹದಲ್ಲಿನ ಕಾರ್ಬನ್ (ಇಂಗಾಲ) ಡಯಾಕ್ಸೈಡ್ ವೈಜ್ಞಾನಿಕ ಮಹತ್ವ [3]

 

ಲ್ಯಾಮ್ ಥಾಮಸ್ ಕೃಸ್ಟೋಫರ್  ರವರ ಅಧ್ಯಯನದಂತೆ

            “ಯಾವುದೇ ಜೀವರಸಾಯನ ಶಾಸ್ತ್ರಜ್ಞರು ನಿಮಗೆ ಹೇಳುವಂತೆ, ನೀವು ಹೊರಹಾಕುವ CO2/ಸಿಓ2 (ಕಾರ್ಬನ್ ಡಯಾಕ್ಸೈಡ್)  ಕೇವಲ "ತ್ಯಾಜ್ಯ ಅನಿಲ" ಅಲ್ಲ. ಇದು ನಿಮ್ಮ ಆರೋಗ್ಯಕ್ಕೆ ಆಮ್ಲಜನಕದಷ್ಟೇ ಅವಶ್ಯಕ. ನಿಮ್ಮ ದೇಹವು CO2/ಸಿಓ2 ಅನ್ನು ಉತ್ಪಾದಿಸುವುದು ಮಾತ್ರವಲ್ಲದೆ ಭೂಮಿಯ ವಾತಾವರಣದಲ್ಲಿ ಕಂಡುಬರುವುದಕ್ಕಿಂತ 180 ಪಟ್ಟು ಹೆಚ್ಚಿನ ಸಾಂದ್ರತೆಯಲ್ಲಿ ಅದನ್ನು ನಿರ್ವಹಿಸುತ್ತದೆ. ಮತ್ತು ಇದು ಒಂದು ಕಾರಣಕ್ಕಾಗಿ ಇದನ್ನು ಮಾಡುತ್ತದೆ. ಆ ಸಾಂದ್ರತೆಯು ಸ್ವಲ್ಪ ಕಡಿಮೆಯಾದರೆ (ಸೌಮ್ಯ ಉಸಿರಾಟದ ಆಲ್ಕಲೋಸಿಸ್-[4] ಎಂದು ಕರೆಯಲ್ಪಡುವ ಸ್ಥಿತಿ), ಗಂಭೀರ ಆರೋಗ್ಯ ಪರಿಣಾಮಗಳು ಕಾಲಾನಂತರದಲ್ಲಿ ಕಾರಣವಾಗಬಹುದು - ಉದಾಹರಣೆಗೆ ಆಸ್ತಮಾ, ಸ್ಲೀಪ್ ಅಪ್ನಿಯ (ನಿದ್ರಾವಸ್ಥೆಯಲ್ಲಿ ಉಸಿರಾಟದ ತಾತ್ಕಾಲಿಕ ನಿಲುಗಡೆ), ಸ್ಟ್ರೋಕ್, ಹೃದಯಾಘಾತ, ನೆತ್ತರಕೊಳವೆಯಲ್ಲಿನ ಗಡಸಾಗುವಿಕೆ,  ದೀರ್ಘಕಾಲದ ಯಕೃತ್ತಿನ (ಲಿವರ್) ಕಾಯಿಲೆ, ಮತ್ತು ಕ್ಯಾನ್ಸರ್. ........ ಕಡಿಮೆ CO2/ಸಿಓ2 ಹೊಂದಿರುವ ದೇಹವು ಆಮ್ಲಜನಕದಿಂದ ಪ್ರಯೋಜನ ಪಡೆಯುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಅವರು ಹೆಚ್ಚು ಆತಂಕಕ್ಕೊಳಗಾಗುತ್ತಾರೆ ಮತ್ತು ಇನ್ನೂ ಹೆಚ್ಚು ಉಸಿರಾಡಲು ಪ್ರಾರಂಭಿಸುತ್ತಾರೆ ಏಕೆಂದರೆ ಅವರು "ಸಾಕಷ್ಟು ಗಾಳಿಯನ್ನು ಪಡೆಯಲು ಸಾಧ್ಯವಿಲ್ಲ!" - ಇದು ಪ್ರತಿಯಾಗಿ, ಅವರು ಇನ್ನಷ್ಟು ನಿರ್ಣಾಯಕ CO2/ಸಿಓ2 ಅನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ನಂತರ ಇನ್ನಷ್ಟು ಉಸಿರಾಡಲು ಕಾರಣವಾಗುತ್ತದೆ. ಆ ಹೊತ್ತಿಗೆ, ಅವರು ತಮ್ಮ ಕೋಶಗಳಲ್ಲಿ ಆಮ್ಲಜನಕದ ಕೊರತೆಯಿಂದ ತಲೆತಿರುಗುವಿಕೆ ಮತ್ತು ಸೆಳೆತವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತಾರೆ ಮತ್ತು ಅವರು ಸಾಯಬಹುದು. ಅಷ್ಟೇ ಅಲ್ಲ, ಅವರ ದೇಹದಲ್ಲಿನ ಎಲ್ಲಾ ವಿವಿಧ ಟ್ಯೂಬ್‌ಗಳು ಸಂಕುಚಿತಗೊಳ್ಳುತ್ತವೆ - ಕೇವಲ ಅವರ ಶ್ವಾಸನಾಳದ ಕೊಳವೆಗಳು ಮಾತ್ರವಲ್ಲ, ಆದರೆ ಅವರ ಕರುಳುಗಳು ಮತ್ತು ಅವರ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ......... ಹೈಪರ್ವೆನ್ಟಿಲೇಷನ್ (ಅತಿರೇಕದ ವಾಯುಸಂಚಾರ) ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದ ನಂತರ, ಕಾಗದದ ಚೀಲದಲ್ಲಿ ಉಸಿರಾಟವು ಆಸ್ತಮಾ ಪೀಡಿತರಿಗೆ ಶ್ವಾಸನಾಳದ ಸಂಕೋಚನದ ಉಲ್ಬಣದಿಂದ ಚೇತರಿಸಿಕೊಳ್ಳಲು ಏಕೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ನೋಡಬಹುದು. ಅವರು ಕಳೆದುಕೊಳ್ಳುತ್ತಿರುವ ಅಮೂಲ್ಯವಾದ ಕಾರ್ಬನ್ ಡೈಆಕ್ಸೈಡ್ ಅನ್ನು ಸೆರೆಹಿಡಿಯಲು ಮತ್ತು ಉಸಿರಾಡಲು ಇದು ಅವರಿಗೆ ಸಹಾಯ ಮಾಡುತ್ತದೆ. ........ CO2/ಸಿಓ2 ದೇಹದಾದ್ಯಂತ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಪರಿಣಾಮವಾಗಿ, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆಳವಾದ ವಿಶ್ರಾಂತಿ ಸ್ಥಿತಿಯನ್ನು ಪ್ರೇರೇಪಿಸುತ್ತದೆ”. ಇದು ವೈಜ್ಞಾನಿಕ ವಿವರಣೆ, ಆದರೆ ನಮ್ಮ ವೈದಿಕ ಪಂಡಿತರು ಸಹಸ್ರಾರು ವರ್ಷದ ಹಿಂದೆಯೇ ಒಳಗೆ ಎಳೆದ ಉಸಿರನ್ನು ಮೂಲಾಧಾರದವರೆಗೆ ಸೆಳೆದು ಅಲ್ಲಿಂದ ಸಹಸ್ರಾರದ ವರೆಗೆ ಚಾಲನೆ ನೀಡುವ ಕ್ರಿಯೆ ಇಂತಹ ಅದ್ಭುತ ವಾಯುವನ್ನು ದೇಹದಲ್ಲಿ ಸದ್ಬಳಕೆ ಮಾಡುವುದಕ್ಕಾಗಿಯೇ ನೀಡಿದ್ದರು ಎಂಬುದು ಕಾಣಬಹುದಾಗಿದೆ.

 

ಕಾರ್ಬನ್ ಡೈಆಕ್ಸೈಡ್ ಕಾರಣದಿ ದೇಹದಲ್ಲಿ ಪ್ರತಿಕ್ರಿಯೆಗಳು

1. ಮಿದುಳಿನ ಕೋಶ ರಕ್ಷಣೆ: ಇದು ಹೇಗೆ ಎಂದು ವಿಜ್ಞಾನಿಗಳಿಗೂ ನಿಖರವಾಗಿ ತಿಳಿದಿಲ್ಲ, ಆದರೆ ಆಮ್ಲಜನಕದ ಕೊರತೆಯಿರುವಾಗ ಕಾರ್ಬನ್ ಡೈಆಕ್ಸೈಡ್ ಮಿದುಳನ್ನು ರಕ್ಷಿಸುತ್ತದೆ ಎಂದು ವೈಜ್ಞಾನಿಕವಾಗಿ ತೋರಿಸಲಾಗಿದೆ.[5]

2. ಡಿಕಂಜೆಸ್ಟೆಂಟ್: ಕಾರ್ಬನ್ ಡೈಆಕ್ಸೈಡ್ ಮೂಗು ಮತ್ತು ಸೈನಸ್ ದಟ್ಟಣೆಯನ್ನು ನಿವಾರಿಸುತ್ತದೆ.

3. ನರಗಳಿಗೆ ಮುಲಾಮು: ಕಾರ್ಬನ್ ಡೈಆಕ್ಸೈಡ್ ನರಮಂಡಲವನ್ನು ಶಾಂತಗೊಳಿಸುತ್ತದೆ, ಖಿನ್ನತೆ, ಆತಂಕ ಮತ್ತು ಅಪಸ್ಮಾರದ (ಎಪಿಲೆಪ್ಸಿ) ಲಕ್ಷಣಗಳನ್ನು ಸಹ ಕಡಿಮೆ ಮಾಡುತ್ತದೆ.[6]

4. ಉರಿಯೂತದ ಪರಿಣಾಮಗಳು: ಕಾರ್ಬನ್ ಡೈಆಕ್ಸೈಡ್ ಇಡೀ ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.

5. ಮೂಳೆ ಖನಿಜೀಕರಣ: ಪುರಾತನ ಯೋಗಿಗಳು ನಂಬಲಾಗದಷ್ಟು ಬಲವಾದ, "ಮುರಿಯಲಾಗದ" ಮೂಳೆಗಳನ್ನು ಹೊಂದಿರುವ ಖ್ಯಾತಿಯನ್ನು ಅನುಭವಿಸಿದರು.

6. ಸುಧಾರಿತ ಜೀರ್ಣಕ್ರಿಯೆ: CO2/ಸಿಓ2 ಹೊಟ್ಟೆಯಲ್ಲಿ ಹೈಡ್ರೋ-ಕ್ಲೋರಿಕ್ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ನಿಧಾನವಾಗಿ ಚಲಿಸುವ ಕರುಳು ಅಥವಾ ಮಲಬದ್ಧತೆಯಿಂದ ಬಳಲುತ್ತಿರುವ ಜನರಲ್ಲಿ ಆರೋಗ್ಯಕರ ಪೆರಿಸ್ಟಲ್ಸಿಸ್ ಅನ್ನು (ಆಹಾರದ ಉದ್ದಕ್ಕೂ ಚಲಿಸುವ ಜೀರ್ಣಾಂಗವ್ಯೂಹದ ಅಲೆಯಂತೆ ಸ್ನಾಯುವಿನ ಸಂಕೋಚನದ ಪ್ರಕ್ರಿಯೆ) ಉತ್ತೇಜಿಸುತ್ತದೆ.

7. ಕ್ಯಾನ್ಸರ್ ತಡೆಗಟ್ಟುವಿಕೆ: ಹೇಳಿದಂತೆ, ಕಾರ್ಬನ್ ಡೈಆಕ್ಸೈಡ್ ಆಮ್ಲಜನಕವನ್ನು (ಆಕ್ಸಿಜನ್) ಜೀವಕೋಶಗಳಿಗೆ ಹಾದುಹೋಗಲು ಸಹಾಯ ಮಾಡುತ್ತದೆ. ಜೀವಕೋಶಗಳು ಸರಿಯಾಗಿ ಆಮ್ಲಜನಕವನ್ನು ಪಡೆದಾಗ, ಅವು ಶಕ್ತಿಯನ್ನು ಪರಿಣಾಮಕಾರಿಯಾಗಿ ಸುಡುವ ಸಾಧ್ಯತೆ ಹೆಚ್ಚು. ಇದು ಸಾಕಷ್ಟು ಶಕ್ತಿಯನ್ನು ಉತ್ಪಾದಿಸಲು ಜೀವಕೋಶದ ಅಸಮರ್ಥತೆಯು ಅದು ಪೂರ್ವ ಕ್ಯಾನ್ಸರ್ಗಳಿಗೆ ಕಾರಣವಾಗಬಹುದು.

8. ಶಕ್ತಿ! ಕಾಲಾನಂತರದಲ್ಲಿ, ಹೆಚ್ಚಿದ CO2 ನಮ್ಮ ಜೀವಕೋಶಗಳಲ್ಲಿನ ಮೈಟೊಕಾಂಡ್ರಿಯಾವನ್ನು ಹೆಚ್ಚಿಸಲು ಉತ್ತೇಜಿಸುತ್ತದೆ. ನಾವು ಹೆಚ್ಚು ಮೈಟೊಕಾಂಡ್ರಿಯಾವನ್ನು ಹೊಂದಿದ್ದರೆ, ನಾವು ಹೆಚ್ಚು ಶಕ್ತಿಯನ್ನು ಹೊಂದಿರುತ್ತೇವೆ - ದೈಹಿಕ ಮತ್ತು ಮಾನಸಿಕ ಎರಡೂ - ನಾವು ಮಾಡುವ ಪ್ರತಿಯೊಂದರಲ್ಲೂ ನಮ್ಮ ಕಾರ್ಯಕ್ಷಮತೆಯ ಮಟ್ಟವನ್ನು ಹೆಚ್ಚಿಸುತ್ತದೆ. (ಮೈಟೊಕಾಂಡ್ರಿಯವು ಪೊರೆಯ ಬಂಧಿತ ಜೀವಕೋಶದ ಅಂಗಕಗಳಾಗಿವೆ, ಇದು ಜೀವಕೋಶದ ಜೀವರಾಸಾಯನಿಕ ಕ್ರಿಯೆಗಳಿಗೆ ಶಕ್ತಿ ತುಂಬಲು ಅಗತ್ಯವಾದ ಹೆಚ್ಚಿನ ರಾಸಾಯನಿಕ ಶಕ್ತಿಯನ್ನು ಉತ್ಪಾದಿಸುತ್ತದೆ.)

9. ಆರೋಗ್ಯಕರ ಚರ್ಮ: ಇಂಗಾಲದ ಡೈಆಕ್ಸೈಡ್ ಚರ್ಮವು ತನ್ನನ್ನು ತಾನೇ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಒತ್ತಡದಿಂದ ಬಳಲುತ್ತಿರುವ ಆಸ್ತಮಾ  ಪೀಡಿತರ ಮುಳುಗಿದ, ಒಣ ವಿವರ್ಣತೆ ವಿರುದ್ಧವಾಗಿ ನಮಗೆ ಮೃದುವಾದ, ತೇಲುವ ಹೊಳಪನ್ನು ನೀಡುತ್ತದೆ.

10. ಕಾರ್ಬನ್ ಡೈಆಕ್ಸೈಡ್ ನೀರನ್ನು ರಚಿಸುತ್ತದೆ: ಆಮ್ಲಜನಕ, ಇಂಗಾಲದ ಡೈಆಕ್ಸೈಡ್ (CO2) ಮತ್ತು ಖನಿಜಗಳು ನೀರಿನಲ್ಲಿ ಕರಗುತ್ತವೆ, ಇದು ಬೆಳಕಿಗೆ ಅಥವಾ ತಾಪಮಾನ ಬದಲಾವಣೆಗಳಿಗೆ ಒಳಪಟ್ಟಾಗ ಅದ್ಭುತ ರೂಪಾಂತರಕ್ಕೆ ಒಳಗಾಗುತ್ತದೆ.

11. ನಮ್ಮ ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಮಟ್ಟವನ್ನು ನಮ್ಮ ಮಿದುಳಿನ ಕಾಂಡದಲ್ಲಿರುವ ಉಸಿರಾಟದ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಕುತೂಹಲಕಾರಿಯಾಗಿ ಇದಕ್ಕೆ ಸಾಕಷ್ಟು, ಆಮ್ಲಜನಕದ ಅಗತ್ಯತೆಯಿಲ್ಲ, ಅದು ನಮಗೆ ಉಸಿರಾಡುವ ಅಗತ್ಯವನ್ನು ಉಂಟುಮಾಡುತ್ತದೆ. ಆ ಸಂವೇದನೆಯು ವಾಸ್ತವವಾಗಿ ಇಂಗಾಲದ ಡೈಆಕ್ಸೈಡ್ನ ರಚನೆಯಿಂದ ಉತ್ಪತ್ತಿಯಾಗುತ್ತದೆ. ನಾವು ನಮ್ಮ ಉಸಿರನ್ನು ಹಿಡಿದಿಟ್ಟುಕೊಂಡಾಗ, CO2 ಕ್ರಮೇಣ ನಮ್ಮ ರಕ್ತದ ಮೇಲೆ ನಿರ್ಮಿಸುತ್ತದೆ ಮತ್ತು ಅದು ನಮ್ಮ ಸಹಿಷ್ಣುತೆಯ ಮಟ್ಟವನ್ನು ನಿರ್ಮಿಸಿದಾಗ, ನಮ್ಮ ಉಸಿರಾಟದ ಕೇಂದ್ರವು ನಮಗೆ ಉಸಿರಾಡಲು ಪ್ರಚೋದನೆಯನ್ನು ನೀಡುತ್ತದೆ.

12. ಇಂಗಾಲದ ಡೈಆಕ್ಸೈಡ್ CO2 ಗೆ ಹೆಚ್ಚಿನ ಸಹಿಷ್ಣುತೆ ಹೊಂದಿರುವ ಜನರು ತುಂಬಾ ಆರೋಗ್ಯಕರವಾಗಿರುತ್ತಾರೆ. ..... ಅವರ ದೇಹವು CO2 ಅನ್ನು ನಿರ್ಮಿಸಲು ಮತ್ತು ನಿರ್ಮಾಣ ಮಾಡಲು ಅನುವು ಮಾಡಿಕೊಡುತ್ತದೆ, ಮತ್ತು ಆದ್ದರಿಂದ ಅವರು ಎಲ್ಲಾ ಸುಂದರವಾದ ಪ್ರಯೋಜನಗಳನ್ನು ಅನುಭವಿಸುತ್ತಾರೆ: ವರ್ಧಿತ ಜೀವಕೋಶದ ಉಸಿರಾಟ, ವಿಶ್ರಾಂತಿ, ಮಿತಿಯಿಲ್ಲದ ಶಕ್ತಿ, ಪ್ರಜ್ಞೆಯ ಸ್ಪಷ್ಟತೆ, ಧೈರ್ಯ ಮತ್ತು ನಿರಂತರವಾಗಿ ಸಕ್ರಿಯವಾಗಿರುವ ಹೆಚ್ಚಿನ ಮಿದುಳಿನ ಕಾರ್ಯವು ಅಜ್ಞಾನದಿಂದ ಮುಕ್ತವಾಗಿದೆ ನಿಂತುಹೋಗದ  ನಿರಂತರ ಹೋರಾಟ ಅಥವಾ ಹಾರಾಟದ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ.

13. ನಮ್ಮ ದೇಹದಲ್ಲಿನ ಹೆಚ್ಚಿನ ಮಟ್ಟದ CO2 ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಉಂಟುಮಾಡುತ್ತದೆ, CO2 ಸ್ವಾಭಾವಿಕವಾಗಿ ನಿಮ್ಮ ಪ್ಯಾರಾಸಿಂಪಥೆಟಿಕ್ (ಹೋಲುವ ಅನುಕಂಪದ) ನರಮಂಡಲದ ಪ್ರಾಬಲ್ಯವನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು ಉಲ್ಲೇಖಿಸಬಾರದೇಕೆ, ಇದು ಜ್ಞಾನೋದಯದ ಒಂದು ನೋಟವನ್ನು ತರುತ್ತದೆ.

 

ನಮ್ಮ ದೇಹದಲ್ಲಿನ ನೀರಿನ ಬಗ್ಗೆ

            ನಮ್ಮ ದೇಹದಲ್ಲಿನ ನೀರು ವಾಸ್ತವವಾಗಿ ಎರಡು ವಿಭಿನ್ನ ರಾಸಾಯನಿಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ: ಸಾಮಾನ್ಯ ಬೃಹತ್ ನೀರು ಮತ್ತು ರಚನಾತ್ಮಕ ನೀರು. ಬೃಹತ್ ನೀರು H2O ಆಣ್ವಿಕ (ಮಾಲಿಕುಲಾರ್) ಸಂರಚನೆಯನ್ನು ಹೊಂದಿದೆ. ರಚನಾತ್ಮಕ ನೀರು ವಾಸ್ತವವಾಗಿ H3O2 ಆಗಿದೆ, ಮತ್ತು ಇದು ಜೆಲ್ ತರಹದ ಗುಣಮಟ್ಟವನ್ನು ಹೊಂದಿದೆ.

            ರಚನಾತ್ಮಕ ನೀರು ಕೆಲವು ಬೆರಗುಗೊಳಿಸುವ ಗುಣಗಳನ್ನು ಹೊಂದಿದೆ. ಒಂದು ವಿಷಯಕ್ಕಾಗಿ, ಇದು ಪ್ರತಿದೀಪಿಸುತ್ತದೆ: ಇದು ಬೆಳಕನ್ನು ಹೀರಿಕೊಳ್ಳುತ್ತದೆ ಮತ್ತು ತನ್ನದೇ ಆದ ನೀಲಿ ಅಥವಾ ಹಸಿರು ಹೊಳಪನ್ನು ಹೊರಸೂಸುತ್ತದೆ - ಆದ್ದರಿಂದ ಆಳವಾದ ನೈಸರ್ಗಿಕ ಬುಗ್ಗೆಗಳ ನಿಗೂಢ ಬಣ್ಣ. ರಚನಾತ್ಮಕ ನೀರು ಸಹ ದ್ರವ ಸ್ಫಟಿಕದಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಸೂಪರ್ ಕಂಡಕ್ಟರ್‌ನಂತೆ ವಿದ್ಯುಚ್ಛಕ್ತಿಯನ್ನು ನಡೆಸುತ್ತದೆ.

            ರಚನಾತ್ಮಕ ನೀರು ನಮ್ಮ ಗ್ರಹದಲ್ಲಿ ಜೀವನವನ್ನು ಸಾಧ್ಯವಾಗಿಸುವ ರಹಸ್ಯ ಘಟಕಾಂಶವಾಗಿದೆ ಮತ್ತು ಅದರ ವಿದ್ಯುತ್ ಅಥವಾ ಬ್ಯಾಟರಿಯಂತಹ ಗುಣಮಟ್ಟವು ಯೋಗಿಗಳು, ಸಂತರು ಮತ್ತು ಜಾದೂಗಾರರು ಒಳಗೆ ದ್ರವ ಇಳಿಸುವಿಕೆಯನ್ನು ಮಾಡುವ ಪೌರಾಣಿಕ ಜೈವಿಕ ವಿದ್ಯುತ್ ಶಕ್ತಿಗೆ (ಕುಂಡಲಿನಿ) ಆಧಾರವಾಗಿದೆ.

 

ನಮ್ಮ ಉಸಿರಾಟದ ವೇಗ ಹೆಚ್ಚಿರುವ ಬಗ್ಗೆ  

            ಮನುಜ 1929 ರಲ್ಲಿ, ಸರಾಸರಿ ವ್ಯಕ್ತಿ ಪ್ರತಿ ನಿಮಿಷಕ್ಕೆ 4.9 ಲೀಟರ್ ಗಾಳಿಯನ್ನು ಉಸಿರಾಡುತ್ತಾನೆ. 1950 ರಲ್ಲಿ, ಅವನು ಅಥವಾ ಅವಳು 6.9 ಲೀಟರ್ ಉಸಿರಾಡಿದರು. 1980 ರ ದಶಕದಲ್ಲಿ, 7.8 ಲೀಟರ್. ಮತ್ತು ಇಂದು, ಸರಾಸರಿ ವ್ಯಕ್ತಿ ಪ್ರತಿ ನಿಮಿಷಕ್ಕೆ 12 ಲೀಟರ್ ಗಾಳಿಯನ್ನು ಉಸಿರಾಡುತ್ತಾನೆ. [7] ಸರಾಸರಿ ಹೃದಯ ಬಡಿತಗಳು ಕಾಲಾನಂತರದಲ್ಲಿ ಏರಿದೆ. ಅತೀಂದ್ರಿಯ ತಂತ್ರಗಳು ಏಕೆ ಮೊದಲ ಸ್ಥಾನದಲ್ಲಿವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಅಸ್ವಾಭಾವಿಕ ಆಹಾರ ಮೂಲಗಳು ಮತ್ತು ಭೂಮಿಗೆ ಅಸ್ವಾಭಾವಿಕ ಸಂಬಂಧದಿಂದ ಮಾಡಿದ ಹಾನಿಯನ್ನು ಬದಲಿಸಲು, ನಾಗರಿಕತೆಯ ಅಸ್ವಾಭಾವಿಕ ಉಸಿರಾಟ ಉಂಟಾಗಿದೆ.

            ನಾವು ಅಪಾಯ ಅಥವಾ ಅಗತ್ಯವನ್ನು ಅನುಭವಿಸಿದಾಗ ಈ ವ್ಯವಸ್ಥೆಯ ನರಗಳು ಜೀವಕ್ಕೆ ಬೆಂಕಿ ಹಚ್ಚುತ್ತವೆ. ...... ಸಹಾನುಭೂತಿಯ ನರಮಂಡಲವು ಜೀವಕ್ಕೆ ಚಿಮ್ಮುತ್ತದೆ. ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ನಮ್ಮ ರಕ್ತನಾಳಗಳ ಮೂಲಕ ಹಾದುಹೋಗುತ್ತವೆ. ನಮ್ಮ ಜೀರ್ಣಕ್ರಿಯೆಯು ಸ್ಥಗಿತಗೊಳ್ಳುತ್ತದೆ, ಪ್ರತಿರಕ್ಷಣಾ ಕಾರ್ಯವು ಕಡಿಮೆಯಾಗುತ್ತದೆ ಮತ್ತು ನಮ್ಮ ಹೆಚ್ಚಿನ ಮೆದುಳಿನ ಕಾರ್ಯಗಳು ಸಹ ಆಫ್ ಆಗುತ್ತವೆ. ..... ನಮ್ಮ ಸಹಾನುಭೂತಿಯ ನರಮಂಡಲವು ತನ್ನ ಕುಖ್ಯಾತ "ಹೋರಾಟ-ಅಥವಾ-ಹಾರಾಟ" ಪ್ರತಿಕ್ರಿಯೆಯನ್ನು ಪ್ರಾರಂಭಿಸುತ್ತದೆ. ...... ಲಘುವಾದ ದೈಹಿಕ ಅಸ್ವಸ್ಥತೆ ಅಥವಾ ಅಗತ್ಯತೆಯ ಅತ್ಯಲ್ಪ ಪ್ರಜ್ಞೆಯು ಎತ್ತರದ ಹೃದಯ ಬಡಿತ ಮತ್ತು ಹೆಚ್ಚಿದ ಉಸಿರಾಟವನ್ನು ಪ್ರಚೋದಿಸುತ್ತದೆ, ನಮ್ಮನ್ನು ಹೆಚ್ಚು ಹೆಚ್ಚು ಹೋರಾಟ ಅಥವಾ ಹಾರಾಟ ಸ್ಥಿತಿಗೆ ತಳ್ಳುತ್ತದೆ. ..... ನಮ್ಮ ನರವ್ಯೂಹವು ನಿಜವಾಗಿಯೂ ಅಪಾಯವು ಸತ್ಯವೇ ಅಥವಾ ಇಲ್ಲವೇ ಎಂಬುದನ್ನು ಚಿಂತಿಸುವುದಿಲ್ಲ. ..... ಸಹಾನುಭೂತಿಯ ನರಮಂಡಲವು ಅದೇ ರೀತಿಯಲ್ಲಿ ಜೀವಕ್ಕೆ ಭಗ್ಗನೆ ಉರಿಯುವಂತಿರುತ್ತದೆ. ...... ನಿಮಗೆ ಮತ್ತು ನನಗೆ ಇದರ ಬಗ್ಗೆ ಅತ್ಯಂತ ತ್ರಾಸದಾಯಕ ವಿಷಯವೆಂದರೆ ಆಧುನಿಕ ಮಾನವರು ಭಯಂಕರವಾದ ಅತಿಯಾದ ಸಹಾನುಭೂತಿಯ ನರಮಂಡಲವನ್ನು ಹೊಂದಿದ್ದಾರೆ. ನಮ್ಮ ಹೋರಾಟ ಅಥವಾ ಹಾರಾಟದ ಪ್ರತಿಕ್ರಿಯೆಯು ಸುಲಭವಾಗಿ ಪ್ರಚೋದಿಸಲ್ಪಡುತ್ತದೆ, ಆದರೆ ಅದರ ಪ್ರಚೋದನೆಯು ವ್ಯಾಪಕ ಅವಧಿಯವರೆಗೆ ಇರುತ್ತದೆ.

 

ಮಾನವ ದೇಹದಲ್ಲಿನ ಕಾರ್ಬೊನಿಕ್ ಆಮ್ಲದ ರಾಸಾಯನಿಕ ಕ್ರಿಯೆ

            ಕಾರ್ಬೊನಿಕ್ ಆಮ್ಲವು (ಆಸಿಡ್)  ಮಾನವ ದೇಹದಲ್ಲಿ ರಕ್ತದಲ್ಲಿದೆ. ಕಾರ್ಬನ್ ಡೈಆಕ್ಸೈಡ್ನೊಂದಿಗೆ ನೀರು ಕರಗಿದಾಗ ಇದು ಮಾನವ ದೇಹದಲ್ಲಿ ರೂಪುಗೊಳ್ಳುತ್ತದೆ. ಇದು ಮಳೆನೀರು, ಕ್ಯಾಲ್ಸೈಟ್ (ಪಾರದರ್ಶಕ ಹರಳಿನ ರೂಪದ ಕ್ಯಾಲ್ಸಿಯಂ ಕಾರ್ಬೋನೇಟ್ ಖನಿಜ), ಹುಳಿಸುವಿಕೆ (ಫರ್ಮೇಂಟೇಷನ್), ಕಲ್ಲಿದ್ದಲು, ಅಂತರ್ಜಲ, ಉಲ್ಕೆಗಳು (ಮೇಟಿಯೋರ್ಸ), ಜ್ವಾಲಾಮುಖಿಗಳು (ವಾಲ್ಕೆನೋ), ಅಮೈನೋ ಆಸಿಡ್ಗಳು, ಪ್ರೋಟೀನ್ಗಳು, ಸಾಗರಗಳು, ಸಸ್ಯಗಳು, ಎರಿಥ್ರೋಸೈಟ್ಗಳು (ಎರಿಥ್ರೋಸೈಟ್ಗಳು ಪಿಗ್ಮೆಂಟ್ ಹಿಮೋಗ್ಲೋಬಿನ್ ಅನ್ನು ಹೊಂದಿರುತ್ತವೆ, ಇದು ರಕ್ತಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ ಮತ್ತು ಅಂಗಾಂಶಗಳಿಗೆ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ಸಾಗಿಸುತ್ತದೆ.), ಸಲ್ಫರ್ ನಿಕ್ಷೇಪಗಳು, ಲವಣಗಳು ಮತ್ತು ಗುಹೆಗಳಲ್ಲಿಯೂ ಇರುತ್ತದೆ. ...... ಕಾರ್ಬೊನಿಕ್ ಆಮ್ಲದ ಸಾಮಾನ್ಯ ಬಳಕೆಯು ಲವಣಗಳ ರೂಪದಲ್ಲಿರುತ್ತದೆ. ರಕ್ತದಲ್ಲಿ: ಬೈಕಾರ್ಬನೇಟ್ ಕಾರ್ಬೊನಿಕ್ ಆಮ್ಲದ ಉಪ್ಪಿನ ರೂಪವು CO2 ಅನ್ನು ಉಸಿರಾಟದ ಅನಿಲ ವಿನಿಮಯದ ಮೂಲಕ ದೇಹದಿಂದ ಹೊರಕ್ಕೆ ಸಾಗಿಸಲು ಮಧ್ಯಂತರವಾಗಿ ಕಾರ್ಯನಿರ್ವಹಿಸುತ್ತದೆ. ರಕ್ತದ ಸೀರಮ್‌ನಲ್ಲಿ ಬಹಳಷ್ಟು ಸಾರಜನಕ (ನೈಟ್ರೋಜನ್) ಬೇಸ್‌ಗಳನ್ನು ಪ್ರೋಟೋನೇಟ್ (ರಸಾಯನಶಾಸ್ತ್ರದಲ್ಲಿ, ಪ್ರೋಟೋನೇಶನ್ (ಅಥವಾ ಹೈಡ್ರೋನೇಶನ್) ಪ್ರೋಟಾನ್ (ಅಥವಾ ಹೈಡ್ರಾನ್, ಅಥವಾ ಹೈಡ್ರೋಜನ್ ಕ್ಯಾಷನ್), (H+) ಅನ್ನು ಪರಮಾಣು, ಅಣು ಅಥವಾ ಅಯಾನುಗಳಿಗೆ ಸೇರಿಸುವುದು, ಇದು ಸಂಯೋಜಿತ ಆಮ್ಲವನ್ನು ರೂಪಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾರ್ಬೊನಿಕ್ ಆಮ್ಲವು ಮಾನವ ದೇಹದಲ್ಲಿನ ಮುಖ್ಯ ಬಫರಿಂಗ್ (ತಾತ್ಕಾಲಿಕ ಸ್ಮೃತಿ ಸಂಗ್ರಾಹಕ) ಅಂಶವಾಗಿದೆ ಮತ್ತು ಕಾರ್ಬೊನಿಕ್ ಅನ್ಹೈಡ್ರೇಸ್ ಎಂಬ ಎನ್ಸೈಮ್ ನಿಂದ ಕಾರ್ಬನ್ ಡೈಆಕ್ಸೈಡ್ ಆಗಿ ವಿಭಜನೆಯಾಗುತ್ತದೆ. ಡರ್ಮಟೈಟೈಡ್‌ಗಳ (ಚರ್ಮದ ಏರಿಳಿತಗಳ) ಚಿಕಿತ್ಸೆಗಾಗಿ: ರಿಂಗ್‌ವರ್ಮ್‌ನಂತಹ ಡರ್ಮಟೈಟಿಸ್‌ಗಳಿಗೆ ಚಿಕಿತ್ಸೆ ನೀಡಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.[8]

 

ಮಾನವ ಸುತ್ತಲಿನ ಪ್ರಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮುಖ ಪಾತ್ರ

            ಜೋಸೆಫ್ ಬ್ಲ್ಯಾಕ್, ಸ್ಕಾಟಿಷ್ ರಸಾಯನಶಾಸ್ತ್ರಜ್ಞ ಮತ್ತು ವೈದ್ಯ, 1750 ರ ದಶಕದಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಮೊದಲು ಗುರುತಿಸಿದನು. ಕೋಣೆಯ ಉಷ್ಣಾಂಶದಲ್ಲಿ (20-25 ಡಿಗ್ರಿ ಸೆ), ಇಂಗಾಲದ (ಕಾರ್ಬನ್) ಡೈಆಕ್ಸೈಡ್ ವಾಸನೆಯಿಲ್ಲದ, ಬಣ್ಣರಹಿತ ಅನಿಲವಾಗಿದೆ, ಇದು ಮಸುಕಾದ ಆಮ್ಲೀಯವು ಮತ್ತು ದಹಿಸುವುದಿಲ್ಲ. .... ಇಂಗಾಲದ ಡೈಆಕ್ಸೈಡ್ ವಾತಾವರಣದಲ್ಲಿ ಹೇರಳವಾಗಿರುವ ಅನಿಲಗಳಲ್ಲಿ ಒಂದಾಗಿದೆ. ದ್ಯುತಿಸಂಶ್ಲೇಷಣೆ (ಫೋಟೋಸಿಂತೆಸಿಸ್) ಮತ್ತು ಉಸಿರಾಟದಂತಹ ಪ್ರಮುಖ ಸಸ್ಯ ಮತ್ತು ಪ್ರಾಣಿ ಪ್ರಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದೆ. ಹಸಿರು ಸಸ್ಯಗಳು ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಗ್ಲೂಕೋಸ್ ಮತ್ತು ಆಮ್ಲಜನಕದಂತಹ ಆಹಾರ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ (ಫೋಟೋಸಿಂತೆಸಿಸ್) ಎಂದು ಕರೆಯಲಾಗುತ್ತದೆ. ..... ಸಸ್ಯಗಳು ಮತ್ತು ಪ್ರಾಣಿಗಳು ಪ್ರತಿಯಾಗಿ, ಬೆಳವಣಿಗೆ ಮತ್ತು ಇತರ ಜೀವನ ಚಟುವಟಿಕೆಗಳಿಗೆ ಶಕ್ತಿಯನ್ನು ಬಿಡುಗಡೆ ಮಾಡಲು ಆಮ್ಲಜನಕದೊಂದಿಗೆ ಸಂಯೋಜಿಸುವ ಮೂಲಕ ಆಹಾರ ಸಂಯುಕ್ತಗಳನ್ನು ಪರಿವರ್ತಿಸುತ್ತವೆ. ಇದು ಉಸಿರಾಟದ ಪ್ರಕ್ರಿಯೆ, ದ್ಯುತಿಸಂಶ್ಲೇಷಣೆಯ ಹಿಮ್ಮುಖವಾಗಿದೆ. .... ವರ್ಷದ ಬೆಚ್ಚಗಿನ ಭಾಗದಲ್ಲಿ ದ್ಯುತಿಸಂಶ್ಲೇಷಣೆ ಮೇಲುಗೈ ಸಾಧಿಸುತ್ತದೆ ಮತ್ತು ವರ್ಷದ ಶೀತ ಭಾಗದಲ್ಲಿ ಉಸಿರಾಟವು ಮೇಲುಗೈ ಸಾಧಿಸುತ್ತದೆ. ....... ಸೂರ್ಯನ ಬೆಳಕು ಭೂಮಿಯನ್ನು ತಲುಪಿದಾಗ ಅದರಲ್ಲಿ ಕೆಲವು ಶಾಖವಾಗಿ ಪರಿವರ್ತನೆಯಾಗುತ್ತದೆ. ಹಸಿರುಮನೆ ಅನಿಲಗಳು ಕೆಲವು ಶಾಖವನ್ನು ಹೀರಿಕೊಳ್ಳುತ್ತವೆ ಮತ್ತು ಭೂಮಿಯ ಮೇಲ್ಮೈ ಬಳಿ ಅದನ್ನು ಹಿಡಿದಿಟ್ಟುಕೊಳ್ಳುತ್ತವೆ, ಇದರಿಂದಾಗಿ ಭೂಮಿಯು ಬೆಚ್ಚಗಾಗುತ್ತದೆ. ಸಾಮಾನ್ಯವಾಗಿ ಹಸಿರುಮನೆ ಪರಿಣಾಮ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯನ್ನು ಹಲವು ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು ಮತ್ತು ನಂತರ ಪ್ರಯೋಗಾಲಯ ಪ್ರಯೋಗಗಳು ಮತ್ತು ವಾತಾವರಣದ ಮಾಪನಗಳ ಮೂಲಕ ದೃಢೀಕರಿಸಲಾಯಿತು. .... ನಮಗೆ ತಿಳಿದಿರುವಂತೆ ಜೀವನವು ಈ ನೈಸರ್ಗಿಕ ಹಸಿರುಮನೆ ಪರಿಣಾಮದಿಂದಾಗಿ ಮಾತ್ರ ಅಸ್ತಿತ್ವದಲ್ಲಿದೆ, ಏಕೆಂದರೆ ಈ ಪ್ರಕ್ರಿಯೆಯು ಭೂಮಿಯ ತಾಪಮಾನವನ್ನು ನಿಯಂತ್ರಿಸುತ್ತದೆ. ಹಸಿರುಮನೆ ಪರಿಣಾಮವು ಅಸ್ತಿತ್ವದಲ್ಲಿಲ್ಲದಿದ್ದಾಗ, ಇಡೀ ಭೂಮಿಯು ಮಂಜುಗಡ್ಡೆಯಿಂದ ಮುಚ್ಚಲ್ಪಡುತ್ತದೆ. .... ಅತ್ಯಂತ ಪ್ರಮುಖವಾದ ಹಸಿರುಮನೆ ಅನಿಲಗಳೆಂದರೆ ಕಾರ್ಬನ್ ಡೈಆಕ್ಸೈಡ್, CFC (ಕ್ಲೋರ್-ಫ್ಲೋರೋ-ಕಾರ್ಬನ್ಸ್), ನೈಟ್ರೋಜನ್ ಆಕ್ಸೈಡ್ ಮತ್ತು ಮೀಥೇನ್. ..... ಮಾನವ ದೇಹದಲ್ಲಿನ ಆಂತರಿಕ ಉಸಿರಾಟಕ್ಕೆ ಕಾರ್ಬನ್ ಡೈಆಕ್ಸೈಡ್ ಅತ್ಯಗತ್ಯ. ಆಂತರಿಕ ಉಸಿರಾಟವು ಒಂದು ಪ್ರಕ್ರಿಯೆಯಾಗಿದ್ದು, ಆಮ್ಲಜನಕವನ್ನು ದೇಹದ ಅಂಗಾಂಶಗಳಿಗೆ ಸಾಗಿಸಲಾಗುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಅವುಗಳಿಂದ ಸಾಗಿಸಲಾಗುತ್ತದೆ. ..... ಕಾರ್ಬನ್ ಡೈಆಕ್ಸೈಡ್ ರಕ್ತದ pH[9] ನ ರಕ್ಷಕವಾಗಿದೆ, ಇದು ಬದುಕಲು ಅವಶ್ಯಕವಾಗಿದೆ. ........ ಕಾರ್ಬನ್ ಡೈಆಕ್ಸೈಡ್ ಪ್ರಮುಖ ಪಾತ್ರ ವಹಿಸುವ ಬಫರ್ ವ್ಯವಸ್ಥೆಯನ್ನು ಕಾರ್ಬೋನೇಟ್ ಬಫರ್ ಎಂದು ಕರೆಯಲಾಗುತ್ತದೆ. ಇದು ಕಾರ್ಬೊನಿಕ್ ಆಮ್ಲದೊಂದಿಗೆ ಬೈಕಾರ್ಬನೇಟ್ ಅಯಾನುಗಳು ಮತ್ತು ಕರಗಿದ ಕಾರ್ಬನ್ ಡೈಆಕ್ಸೈಡ್ನಿಂದ ಮಾಡಲ್ಪಟ್ಟಿದೆ. ಕಾರ್ಬೊನಿಕ್ ಆಮ್ಲವು ಹೈಡ್ರಾಕ್ಸೈಡ್ ಅಯಾನುಗಳನ್ನು ತಟಸ್ಥಗೊಳಿಸುತ್ತದೆ, ಇದು ಸೇರಿಸಿದಾಗ ರಕ್ತದ pH ಅನ್ನು ಹೆಚ್ಚಿಸುತ್ತದೆ. ಬೈಕಾರ್ಬನೇಟ್ ಅಯಾನು ಹೈಡ್ರೋಜನ್ ಅಯಾನುಗಳನ್ನು ತಟಸ್ಥಗೊಳಿಸುತ್ತದೆ, ಇದು ಸೇರಿಸಿದಾಗ ರಕ್ತದ pH ನಲ್ಲಿ ಇಳಿಕೆಗೆ ಕಾರಣವಾಗುತ್ತದೆ. pH ಅನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಎರಡೂ ಜೀವಕ್ಕೆ ಅಪಾಯಕಾರಿ. ........... ಮಾನವನ ವ್ಯವಸ್ಥೆಯಲ್ಲಿ ಅತ್ಯಗತ್ಯವಾದ ಬಫರ್ ಮಾತ್ರವಲ್ಲದೆ, ಇಂಗಾಲದ ಡೈಆಕ್ಸೈಡ್ ಸಾಂದ್ರತೆಯು ಒಂದು ನಿರ್ದಿಷ್ಟ ಮಿತಿಯನ್ನು ಮೀರಿದಾಗ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡುತ್ತದೆ.[10]

1. ಉಸಿರುಕಟ್ಟುವಿಕೆ ನಂತರ ಉಸಿರಾಟವನ್ನು ಉತ್ತೇಜಿಸಲು ಮತ್ತು ರಕ್ತದಲ್ಲಿ O2/CO2 ಸಮತೋಲನವನ್ನು ಸ್ಥಿರಗೊಳಿಸಲು ಔಷಧದಲ್ಲಿ 5% (130 ಬಾರಿ ವಾಯುಮಂಡಲದ ಸಾಂದ್ರತೆ) ಕಾರ್ಬನ್ ಡೈಆಕ್ಸೈಡ್ ಆಮ್ಲಜನಕಕ್ಕೆ ಸೇರಿಸಲಾಗುತ್ತದೆ.

2. ಇಂಗಾಲದ (ಕಾರ್ಬನ್)  ಡೈಆಕ್ಸೈಡ್ ಅನ್ನು 50% ಆಮ್ಲಜನಕದೊಂದಿಗೆ ಬೆರೆಸಬಹುದು, ಇದು ಉಸಿರಾಡಬಲ್ಲ ಅನಿಲವನ್ನು ರೂಪಿಸುತ್ತದೆ; ಇದನ್ನು ಕಾರ್ಬೋಜೆನ್ ಎಂದು ಕರೆಯಲಾಗುತ್ತದೆ ಮತ್ತು ವಿವಿಧ ವೈದ್ಯಕೀಯ ಮತ್ತು ಸಂಶೋಧನಾ ಉಪಯೋಗಗಳನ್ನು ಹೊಂದಿದೆ.

3. ಕಾರ್ಬನ್ ಡೈಆಕ್ಸೈಡ್ ಜೀವಿಗಳಲ್ಲಿನ ಸೆಲ್ಯುಲಾರ್ ಉಸಿರಾಟದ ಅಂತಿಮ ಉತ್ಪನ್ನವಾಗಿದ್ದು, ಅವುಗಳ ಚಯಾಪಚಯ ಕ್ರಿಯೆಯ ಭಾಗವಾಗಿ ಆಮ್ಲಜನಕದೊಂದಿಗೆ ಸಕ್ಕರೆಗಳು, ಕೊಬ್ಬುಗಳು ಮತ್ತು ಅಮೈನೋ ಆಮ್ಲಗಳನ್ನು ವಿಭಜಿಸುವ ಮೂಲಕ ಶಕ್ತಿಯನ್ನು ಪಡೆಯುತ್ತದೆ. ಇದು ಎಲ್ಲಾ ಸಸ್ಯಗಳು, ಪಾಚಿಗಳು ಮತ್ತು ಪ್ರಾಣಿಗಳು ಮತ್ತು ಏರೋಬಿಕ್ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿದೆ.

4. ಕಾರ್ಬನ್ ಸ್ಥಿರೀಕರಣವು ಜೀವರಾಸಾಯನಿಕ ಪ್ರಕ್ರಿಯೆಯಾಗಿದ್ದು, ವಾತಾವರಣದ ಕಾರ್ಬನ್ ಡೈಆಕ್ಸೈಡ್ ಅನ್ನು ಸಸ್ಯಗಳು, ಪಾಚಿಗಳು ಮತ್ತು (ಸೈನೋಬ್ಯಾಕ್ಟೀರಿಯಾ) ಗ್ಲೂಕೋಸ್‌ನಂತಹ ಶಕ್ತಿ-ಸಮೃದ್ಧ ಸಾವಯವ ಅಣುಗಳಾಗಿ ಸಂಯೋಜಿಸಲಾಗುತ್ತದೆ, ಹೀಗಾಗಿ ದ್ಯುತಿಸಂಶ್ಲೇಷಣೆಯ (ಫೋಟೋ ಸಿಂತಸಿಸ್) ಮೂಲಕ ತಮ್ಮದೇ ಆದ ಆಹಾರವನ್ನು ರಚಿಸುತ್ತದೆ. ದ್ಯುತಿಸಂಶ್ಲೇಷಣೆಯು ಸಕ್ಕರೆಗಳನ್ನು ಉತ್ಪಾದಿಸಲು ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಬಳಸುತ್ತದೆ, ಇದರಿಂದ ಇತರ ಸಾವಯವ ಸಂಯುಕ್ತಗಳನ್ನು (ಆರ್ಗ್ಯಾನಿಕ್ ಕಾಂಪೌಂಡ್) ನಿರ್ಮಿಸಬಹುದು ಮತ್ತು ಆಮ್ಲಜನಕವನ್ನು ಉಪ-ಉತ್ಪನ್ನವಾಗಿ ಉತ್ಪಾದಿಸಲಾಗುತ್ತದೆ.

5. ದೇಹವು ಪ್ರತಿ ವ್ಯಕ್ತಿಗೆ ದಿನಕ್ಕೆ ಸರಿಸುಮಾರು 2.3 ಪೌಂಡ್ (1.0 ಕೆಜಿ) ಕಾರ್ಬನ್ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ, ಇದರಲ್ಲಿ 0.63 ಪೌಂಡ್ (290 ಗ್ರಾಂ) ಕಾರ್ಬನ್ ಇದೆ. ಮಾನವರಲ್ಲಿ, ಈ ಕಾರ್ಬನ್ ಡೈಆಕ್ಸೈಡ್ ಅನ್ನು ಸಿರೆಯ (ವೇನ್ಸ್/ನಾಡಿ) ವ್ಯವಸ್ಥೆಯ ಮೂಲಕ ಸಾಗಿಸಲಾಗುತ್ತದೆ ಮತ್ತು ಶ್ವಾಸಕೋಶದ ಮೂಲಕ ಉಸಿರಾಡಲಾಗುತ್ತದೆ, ಇದು ಅಪಧಮನಿಗಳಲ್ಲಿ (ಆರ್ಟರೀಸ್) ಕಡಿಮೆ ಸಾಂದ್ರತೆಗೆ ಕಾರಣವಾಗುತ್ತದೆ.

6. ಕಾರ್ಬನ್ ಡೈಆಕ್ಸೈಡ್ ರಕ್ತ ಪೂರೈಕೆಯ ಸ್ಥಳೀಯ ಸ್ವಯಂ ನಿಯಂತ್ರಣದ ಮಧ್ಯವರ್ತಿಗಳಲ್ಲಿ ಒಂದಾಗಿದೆ. ಅದರ ಸಾಂದ್ರತೆಯು ಅಧಿಕವಾಗಿದ್ದರೆ, ಆ ಅಂಗಾಂಶಕ್ಕೆ ಹೆಚ್ಚಿನ ರಕ್ತದ ಹರಿವನ್ನು ಅನುಮತಿಸಲು ಕ್ಯಪಿಲರಿಗಳು ವಿಸ್ತರಿಸುತ್ತವೆ.

7. ದೇಹಕ್ಕೆ ಚಯಾಪಚಯ (ಮೆಟಾಬಾಲಿಸಮ್) ಕ್ರಿಯೆಗೆ ಆಮ್ಲಜನಕದ ಅಗತ್ಯವಿದ್ದರೂ, ಕಡಿಮೆ ಆಮ್ಲಜನಕದ ಮಟ್ಟವು ಸಾಮಾನ್ಯವಾಗಿ ಉಸಿರಾಟವನ್ನು ಉತ್ತೇಜಿಸುವುದಿಲ್ಲ. ಬದಲಿಗೆ, ಹೆಚ್ಚಿನ ಕಾರ್ಬನ್ ಡೈಆಕ್ಸೈಡ್ ಮಟ್ಟಗಳಿಂದ ಉಸಿರಾಟವನ್ನು ಉತ್ತೇಜಿಸಲಾಗುತ್ತದೆ. ಪರಿಣಾಮವಾಗಿ, ಕಡಿಮೆ-ಒತ್ತಡದ ಗಾಳಿಯನ್ನು ಉಸಿರಾಡುವುದು ಅಥವಾ ಆಮ್ಲಜನಕವಿಲ್ಲದ ಅನಿಲ ಮಿಶ್ರಣವನ್ನು (ಶುದ್ಧ ಸಾರಜನಕದಂತಹ(ನೈಟ್ರೋಜನ್)) ಗಾಳಿಯ ಹಸಿವನ್ನು ಅನುಭವಿಸದೆ ಪ್ರಜ್ಞೆ ಕಳೆದುಕೊಳ್ಳಲು ಕಾರಣವಾಗಬಹುದು. ಎತ್ತರದ ಯುದ್ಧವಿಮಾನ ಪೈಲಟ್‌ಗಳಿಗೆ ಇದು ವಿಶೇಷವಾಗಿ ಅಪಾಯಕಾರಿಯಾಗಿದೆ. ಫ್ಲೈಟ್ ಅಟೆಂಡೆಂಟ್‌ಗಳು ಕ್ಯಾಬಿನ್ ಒತ್ತಡವನ್ನು ಕಳೆದುಕೊಂಡರೆ, ಇತರರಿಗೆ ಸಹಾಯ ಮಾಡುವ ಮೊದಲು ಆಕ್ಸಿಜನ್ ಮಾಸ್ಕ್ ಅನ್ನು ಮೊದಲು ತಾವು ದರಿಸಿ ಪ್ರಯಾಣಿಕರಿಗೆ ಸೂಚನೆ ನೀಡುತ್ತಾರೆ; ಇಲ್ಲದಿದ್ದರೆ, ಒಬ್ಬರು ಪ್ರಜ್ಞೆಯನ್ನು ಕಳೆದುಕೊಳ್ಳುವ ಅಪಾಯವಿದೆ.

8. ದ್ಯುತಿಸಂಶ್ಲೇಷಕ (ಫೋಟೋ ಸಿಂತಸಿಸ್) ಜೀವಿಗಳು CO2 ಮತ್ತು ನೀರನ್ನು (H2O) ಸಂಯೋಜಿಸಿ ಕಾರ್ಬೋಹೈಡ್ರೇಟ್‌ಗಳನ್ನು (ಸಕ್ಕರೆಗಳಂತಹವು) ಉತ್ಪಾದಿಸುತ್ತವೆ ಮತ್ತು ಉಪ-ಉತ್ಪನ್ನವಾಗಿ ಆಮ್ಲಜನಕವನ್ನು ಹೊರಸೂಸುತ್ತವೆ.[11]

 

CO2 ಜೊತೆಗೆ ಶಕ್ತಿಯು ಇಂಗಾಲ ಮತ್ತು ಆಮ್ಲಜನಕವನ್ನು ನೀಡುತ್ತದೆ.

 

ಇತ್ತೀಚಿನ ವರ್ಷಗಳಲ್ಲಿ, ಸಂಶೋಧಕರು ಬೆರಳೆಣಿಕೆಯಷ್ಟು ಘನ ಲೋಹದ ವೇಗವರ್ಧಕಗಳನ್ನು ಕಂಡುಹಿಡಿದಿದ್ದಾರೆ - ರಾಸಾಯನಿಕ ಪ್ರತಿಕ್ರಿಯೆಗಳನ್ನು ವೇಗಗೊಳಿಸುವ ಸಂಯುಕ್ತಗಳು (ಕಾಂಪೌಂಡ್ಗಳು) - CO2 ಅನ್ನು ಘನ ಕಾರ್ಬನ್ ಆಗಿ ಪರಿವರ್ತಿಸಬಹುದು. ಆದರೆ ಇವುಗಳು 600°C ಗಿಂತ ಹೆಚ್ಚು ತಾಪದಲ್ಲಿ ಕೆಲಸ ಮಾಡುತ್ತವೆ ಮತ್ತು ಆ ಶಾಖವನ್ನು ಒದಗಿಸಲು ಸಾಕಷ್ಟು ಶಕ್ತಿ ಮತ್ತು ಹಣದ ಅಗತ್ಯವಿರುತ್ತದೆ.[12]

 

ಸಕ್ರಿಯ ಇದ್ದಿಲು (ಆಕ್ಟಿವೇಟೆಡ್ ಚಾರ್ಕೋಲ್)

            1. ಸಕ್ರಿಯ ಇದ್ದಿಲನ್ನು ಹೆಚ್ಚಿನ ತಾಪಮಾನದಲ್ಲಿ ಸುಡುವ ಕಾರ್ಬನ್-ಸಮೃದ್ಧ ವಸ್ತುಗಳಿಂದ ರಚಿಸಲಾಗಿದೆ, .......... ಇದ್ದಿಲು ಪುಡಿಯನ್ನು ಸಾಮಾನ್ಯವಾಗಿ ಕೆಲವು ಹೆಚ್ಚುವರಿ ವಸ್ತುಗಳೊಂದಿಗೆ ಸುಡಲಾಗುತ್ತದೆ, ಉದಾಹರಣೆಗೆ ಕ್ಲೋರೈಡ್ ಲವಣಗಳು, ರಂಧ್ರದ ರಚನೆಯನ್ನು ರಚಿಸಲು ಸಹಾಯ ಮಾಡುತ್ತದೆ, .. ....... ಹೆಚ್ಚುವರಿ ವಸ್ತುವನ್ನು ನಂತರ ಶುದ್ಧವಾದ ಇಂಗಾಲವನ್ನು (ಕಾರ್ಬನ್) ಬಿಡಲು ದುರ್ಬಲವಾದ ಆಮ್ಲ ದ್ರಾವಣದಿಂದ ತೊಳೆಯಲಾಗುತ್ತದೆ. ಉಗಿ (ಸ್ಟೀಮ್) ಅಥವಾ ಇಂಗಾಲದ (ಕಾರ್ಬನ್) ಡೈಆಕ್ಸೈಡ್‌ನಂತಹ ಉತ್ಕರ್ಷಣಕಾರಿ ಅನಿಲಕ್ಕೆ ಒಡ್ಡಿಕೊಳ್ಳುವ ಮೂಲಕ ರಂಧ್ರಗಳ ಸೂಕ್ಷ್ಮ ಜಾಲವನ್ನು ರಚಿಸಲು ಇದ್ದಿಲು ಮತ್ತು ಹೆಚ್ಚುವರಿ ಮೇಲ್ಮೈ ವಿಸ್ತೀರ್ಣವನ್ನು ಮತ್ತಷ್ಟು ಸಂಸ್ಕರಿಸಬಹುದು. ....... ಸಕ್ರಿಯ ಇದ್ದಿಲು ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ: ಟಾಕ್ಸಿನ್ (ವಿಷ) ಕಣಗಳು ಸಕ್ರಿಯ ಇಂಗಾಲದ (ಕಾರ್ಬನ್) ಮೇಲ್ಮೈಗೆ ಬಂಧಿಸುತ್ತವೆ, ಇದರಿಂದಾಗಿ ವಿಷವು ದೇಹಕ್ಕೆ ಹೀರಿಕೊಳ್ಳುವ ಸಾಧ್ಯತೆ ಕಡಿಮೆ. ಇದು ಸಾವಯವ ಕಣಗಳನ್ನು ಒಳಗೊಂಡಿರುವ ಜೀವಾಣುಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ (ಇವುಗಳು ಇಂಗಾಲವನ್ನು ಹೊಂದಿರುವ ಸಂಯುಕ್ತಗಳಾಗಿವೆ ಮತ್ತು ಸಾಮಾನ್ಯವಾಗಿ ಆಮ್ಲಜನಕ, ಹೈಡ್ರೋಜನ್ ಅಥವಾ ಸಾರಜನಕದೊಂದಿಗೆ (ನೈಟ್ರೋಜನ್) ಬಂಧಿತವಾಗಿವೆ). ............ ಸಕ್ರಿಯ ಇದ್ದಿಲು ಸಾಮಾನ್ಯವಾಗಿ ನೀರಿನ ಶೋಧಕ ವ್ಯವಸ್ಥೆಗಳಲ್ಲಿ, ಉಸಿರಾಟದ ಮುಖವಾಡಗಳಲ್ಲಿ ಮತ್ತು ಏರ್ ಫಿಲ್ಟರ್‌ಗಳಲ್ಲಿ ಕಂಡುಬರುತ್ತದೆ. ಇದು ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುವಂತೆಯೇ, ಸಕ್ರಿಯ ಇದ್ದಿಲು ರೇಡಾನ್ (ಪರಮಾಣು ಸಂಖ್ಯೆ 86 ಉಳ್ಳ ವಿಕಿರಣಶೀಲ ಅನಿಲ ಧಾತು), ಇಂಧನಗಳು, ದ್ರಾವಕಗಳು ಮತ್ತು ಅನೇಕ ಕೈಗಾರಿಕಾ ಮತ್ತು ವಿಕಿರಣಶೀಲ ರಾಸಾಯನಿಕಗಳು ಸೇರಿದಂತೆ ನೀರು ಮತ್ತು ಗಾಳಿಯಲ್ಲಿನ ಮಾಲಿನ್ಯಕಾರಕಗಳನ್ನು ಆಕರ್ಷಿಸುತ್ತದೆ ಮತ್ತು ಬಂಧಿಸುತ್ತದೆ ಮತ್ತು ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (EPA), ಪ್ರಕಾರ ಅವುಗಳನ್ನು ಉಸಿರಾಡುವ ಅಥವಾ ಸೇವಿಸುವುದರಿಂದ ನಮ್ಮನ್ನು ರಕ್ಷಿಸುತ್ತದೆ.[13]

            2. ಸಂಶೋಧನೆಯು ಇನ್ನೂ ಸೀಮಿತವಾಗಿದೆ, ಆದರೆ ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ (EFSA)ನ ವಿಶ್ವಾಸಾರ್ಹ ಮೂಲಗಳ ಸಮಿತಿಯು ಅತಿಯಾದ ಅನಿಲ ಸಂಗ್ರಹಣೆಯನ್ನು ಕಡಿಮೆ ಮಾಡಲು ಸಕ್ರಿಯ ಇದ್ದಿಲಿನ ಬಳಕೆಯನ್ನು ಬೆಂಬಲಿಸಲು ಸಾಕಷ್ಟು ಪುರಾವೆಗಳಿವೆ ಎಂದು ವರದಿ ಮಾಡಿದೆ. ........... ಜನರು ಸಕ್ರಿಯ ಇದ್ದಿಲನ್ನು ನೈಸರ್ಗಿಕ ನೀರಿನ ಫಿಲ್ಟರ್ ಆಗಿ ದೀರ್ಘಕಾಲ ಬಳಸಿದ್ದಾರೆ. ಕರುಳು ಮತ್ತು ಹೊಟ್ಟೆಯಲ್ಲಿ ಮಾಡುವಂತೆ, ಸಕ್ರಿಯ ಇದ್ದಿಲು ನೀರಿನಲ್ಲಿ ಕಂಡುಬರುವ ವಿಷಗಳು, ಔಷಧಗಳು, ವೈರಸ್‌ಗಳು, ಬ್ಯಾಕ್ಟೀರಿಯಾ, ಶಿಲೀಂಧ್ರ (ಫಂಗಸ್) ಮತ್ತು ರಾಸಾಯನಿಕಗಳ ವ್ಯಾಪ್ತಿಯೊಂದಿಗೆ ಸಂವಹನ ನಡೆಸುತ್ತದೆ ಮತ್ತು ಹೀರಿಕೊಳ್ಳುತ್ತದೆ. ......... ಇದ್ದಿಲು ವಾಸನೆ ಮತ್ತು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳಬಹುದು ..... ಚರ್ಮದ ಸೋಂಕಿನಂತಹ ಮೃದು ಅಂಗಾಂಶದ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು. ......... ಸಕ್ರಿಯ ಇದ್ದಿಲು ಗಾಯಗಳಿಂದ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಹೀರಿಕೊಳ್ಳುವ ಮೂಲಕ ಬ್ಯಾಕ್ಟೀರಿಯಾ ವಿರೋಧಿ ಪರಿಣಾಮವನ್ನು ಹೊಂದಿರಬಹುದು. .............. ಸೀಸ, ನಿಕಲ್ ಮತ್ತು ಕ್ರೋಮಿಯಂನಂತಹ ಭಾರವಾದ ಲೋಹಗಳು ಮನುಷ್ಯರಿಗೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದರೂ ಹಾನಿಕಾರಕವಾಗಬಹುದು. 2014 ರ ಅಧ್ಯಯನವು ಸಕ್ರಿಯ ಇಂಗಾಲವು ಕುಡಿಯುವ ನೀರಿನಿಂದ ಭಾರವಾದ ಲೋಹಗಳನ್ನು ತೆಗೆದುಹಾಕಬಹುದೇ ಎಂದು ಪರೀಕ್ಷಿಸಿದೆ.[14]

            3. ಒಬ್ಬ ವ್ಯಕ್ತಿಯು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯನ್ನು ಹೊಂದಿರುವಾಗ, ಅವರ ಮೂತ್ರಪಿಂಡಗಳು ಅವರ ರಕ್ತದಿಂದ ಹೆಚ್ಚುವರಿ ರಂಜಕವನ್ನು (ಫಾಸ್ಪರಸ್) ತೆಗೆದುಹಾಕಲು ಕಡಿಮೆ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ವಿವಿಧ ತೊಡಕುಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಹೃದಯರಕ್ತನಾಳದ ಕಾಯಿಲೆಗಳು. ..... 2019 ರ ವಿಶ್ವಾಸಾರ್ಹ ಮೂಲದಲ್ಲಿ, ಮೂತ್ರಪಿಂಡದ ಕಾಯಿಲೆ ಇರುವ ಜನರ ರಕ್ತದಿಂದ ಮೌಖಿಕವಾಗಿ ಪಡೆದ ಸಕ್ರಿಯ ಇದ್ದಿಲು ರಂಜಕವನ್ನು ತೆಗೆದುಹಾಕಬಹುದೇ ಎಂದು ಸಂಶೋಧಕರು ತನಿಖೆ ಮಾಡಿದ್ದಾರೆ. .......... ಸಕ್ರಿಯ ಇದ್ದಿಲು ತೆಗೆದುಕೊಂಡ ಭಾಗವಹಿಸುವವರು ರಂಜಕದ ಮಟ್ಟದಲ್ಲಿ ಗಣನೀಯವಾಗಿ ವಿಳಂಬವಾದ ಹೆಚ್ಚಳವನ್ನು ತೋರಿಸಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಇದು ಮೂತ್ರಪಿಂಡದ ಕಾಯಿಲೆ ಇರುವ ಜನರಲ್ಲಿ ಆರೋಗ್ಯವನ್ನು ಸುಧಾರಿಸುತ್ತದೆ. ........ ಕೆಲವು ಜನರು ಸಕ್ರಿಯ ಇದ್ದಿಲನ್ನು ಸೇವಿಸಿದ ನಂತರ ತಮ್ಮ ವಾಂತಿಯನ್ನು ಒಳ ಎಳೆದುಕೊಂಡಿದ್ದಾರೆ ಎಂದು ತಜ್ಞರು ವರದಿ ಮಾಡುತ್ತಾರೆ. ಒಳ ಎಳೆದುಕೊಳ್ಳುವುದು (ಆಸ್ಪಿರೇಟ್/ ಅಸ್ಪಿರೇಷನ್) ಎಂದರೆ ಈ ಸಂದರ್ಭದಲ್ಲಿ, ಶ್ವಾಸಕೋಶಕ್ಕೆ ವಾಂತಿಯನ್ನು ಉಸಿರಾಡುವುದನ್ನು ಒಳಗೊಂಡಿರುತ್ತದೆ. ಇದು ಆಸ್ಪಿರೇಷನ್ ನ್ಯುಮೋನಿಯಾ ಎಂಬ ಸೋಂಕಿಗೆ ಕಾರಣವಾಗಬಹುದು. ಅಲ್ಲದೆ, ಸಕ್ರಿಯ ಇದ್ದಿಲಿನ ದೊಡ್ಡ ಅಥವಾ ಪುನರಾವರ್ತಿತ ಪ್ರಮಾಣಗಳು ವ್ಯಕ್ತಿಯ ಜೀರ್ಣಾಂಗದಲ್ಲಿ ಅಡಚಣೆಯನ್ನು ಉಂಟುಮಾಡಬಹುದು.

            4. ಕಾರ್ಬೋಹೈಡ್ರೇಟ್  ಇದು ಕಾರ್ಬನ್ (C), ಹೈಡ್ರೋಜನ್ (H) ಮತ್ತು ಆಮ್ಲಜನಕ (O) ಪರಮಾಣುಗಳನ್ನು ಒಳಗೊಂಡಿರುವ ಒಂದು ಜೈವಿಕ ಅಣುವಾಗಿದೆ, ....... ಕಾರ್ಬೋಹೈಡ್ರೇಟ್‌ಗಳು ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರಗಳ ವ್ಯಾಪಕ ಶ್ರೇಣಿಯಲ್ಲಿ ಕಂಡುಬರುತ್ತವೆ - ಬ್ರೆಡ್, ಬೀನ್ಸ್, ಹಾಲು, ಪಾಪ್‌ಕಾರ್ನ್, ಆಲೂಗಡ್ಡೆ, ಕುಕೀಸ್, ಸ್ಪಾಗೆಟ್ಟಿ (ಪಾಸ್ತ), ತಂಪು ಪಾನೀಯಗಳು, ಕಾರ್ನ್ ಮತ್ತು ಚೆರ್ರಿ ಪೈ. ಅವು ವಿವಿಧ ರೂಪಗಳಲ್ಲಿಯೂ ಬರುತ್ತವೆ. ಅತ್ಯಂತ ಸಾಮಾನ್ಯ ಮತ್ತು ಹೇರಳವಾಗಿರುವ ರೂಪಗಳು ಸಕ್ಕರೆಗಳು, ಫೈಬರ್ಗಳು ಮತ್ತು ಗಂಜಿ ಹಿಟ್ಟುಗಳು. ...[15]

            5. ..... ವಾತಾವರಣದ ಇಂಗಾಲದ (ಕಾರ್ಬನ್) ಡೈಆಕ್ಸೈಡ್, ನೀರು ಮತ್ತು ನವೀಕರಿಸಬಹುದಾದ ಶಕ್ತಿಯಿಂದ ಕಾರ್ಬೋಹೈಡ್ರೇಟ್‌ಗಳ ಕೃತಕ ಸಂಶ್ಲೇಷಣೆಯು ಆ ಬಾಹ್ಯ ಅಂಶಗಳಿಲ್ಲದೆ ಹೆಚ್ಚು ವಿಶ್ವಾಸಾರ್ಹ ಉತ್ಪಾದನೆಗೆ ಅವಕಾಶ ನೀಡುತ್ತದೆ, ಆದರೆ ನಮ್ಮ ಗ್ರಹದ ಕೃಷಿ ಸಾಮರ್ಥ್ಯಗಳನ್ನು ಹಲವಾರು ಆದೇಶಗಳಿಂದ ಪ್ರಮಾಣದಲ್ಲಿ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.   ಅಗತ್ಯವಿರುವ ಎಲ್ಲಾ ತಂತ್ರಜ್ಞಾನವು ವಾಣಿಜ್ಯಿಕವಾಗಿ ಲಭ್ಯವಿದೆ ಅಥವಾ ಕನಿಷ್ಠ ಲ್ಯಾಬ್-ಸ್ಕೇಲ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ (ಕನಿಷ್ಠ ಸಕ್ಕರೆಗಾಗಿ). ಜೈವಿಕ ಕಾರ್ಬೋಹೈಡ್ರೇಟ್ ಉತ್ಪಾದನೆಯು ಆರ್ಥಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿರುವುದರಿಂದ ಉದ್ಯಮ-ಪ್ರಮಾಣದ ಕಾರ್ಬೋಹೈಡ್ರೇಟ್ ಸಂಶ್ಲೇಷಣೆಯ ಕಡೆಗೆ ಯಾವುದೇ ನಿರ್ದೇಶನದ ಸಂಶೋಧನೆಯನ್ನು ಇನ್ನೂ ನಡೆಸಲಾಗಿಲ್ಲ.

            ಕಲ್ಲಿದ್ದಲಿನ ಮೂಲ ಧಾತುಗಳು ತುಂಬ ಸರಳ ಕಾರ್ಬನ್‌, ಹೈಡ್ರೊಜನ್‌ ಮತ್ತು ಆಕ್ಸಿಜನ್‌ ಇವು ಪಧಾನ ಘಟಕಗಳು. ನೈಟ್ರೊಜನ್‌ ಹಾಗೂ ಸಲ್ಪರ್‌ ಅಂಶಗಳೂ ಇವೆ. ಕಲ್ಲಿದ್ದಲಿನ ಪರಿವರ್ತನ ಪ್ರಕ್ರಿಯೆ ಮುಂದುವರಿದಂತೆಲ್ಲ ಇಂಗಾಲದ ಪ್ರಮಾಣ ಸಮತೂಕವಾಗಿ ಹೆಚ್ಚುತ್ತದೆ. ಆದರೆ ಆಕ್ಸಿಜನ್‌ ಮತ್ತು ಹೈಡ್ರೊಜನ್ನುಗಳ ಪ್ರಮಾಣಗಳು ಸಮತೂಕವಾಗಿ ಕಡಿಮೆಯಾಗುತ್ತ ಹೋಗುತ್ತವೆ.

 

ಕಾರ್ಬನ್ ಡೈ ಆಕ್ಸೈಡ್ ನಿಂದ  ವಾಯುಮಂಡಲಕ್ಕೆ ಕೊಡುಗೆ

            ವಾಯುಮಂಡಲದ ಪ್ರಮುಖ ಘಟಕವಾದ ಕಾರ್ಬನ್‌ ಡೈ ಆಕ್ಸೈಡ್‌ ವಾಯುಗುಣದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಜೀವಿಯ ಉಳಿವು ಅಳಿವು ಇದರ ಮೊತ್ತವನ್ನು ಅವಲಂಬಿಸಿದೆ. ಸೂರ್ಯನಿಂದ ಭೂಮಿಗೆ ಪಾತವಾಗುವ ಆತಪನ (ಇನ್ನೊಲೇಶನ್‌) ಭೂಮಿಯಿಂದ ಅತಿರಕ್ತ ವಿಕಿರಣ ವಲಯದಲ್ಲಿ ಪ್ರತಿಫಲಿಸಲ್ಪಟ್ಟು ಆಕಾಶಕ್ಕೆ ಪ್ರವಹಿಸುತ್ತದೆ. ಆದರೆ ವಾಯುಮಂಡಲದ ಕಾರ್ಬನ್‌ ಡೈ ಆಕ್ಸೈಡ್‌ ಭೂಮಿಯ ಸುತ್ತ ತೊಡಿಸಿರುವ ಕವಚದಂತೆ ವರ್ತಿಸಿ ಈ ವಿಕಿರಣಪ್ರವಾಹವನ್ನು ಹೀರಿಕೊಂಡು ಹೊರಹರಿಯದಂತೆ ತಡೆ ಹಿಡಿಯುತ್ತವೆ. ಇದರಿಂದ ವಾಯುಮಂಡಲದ ಉಷ್ಣತೆ ಏರುತ್ತದೆ. ಮಾನವ ತನ್ನ ಚಟುವಟಿಕೆಗಳಿಂದ ವಾಯುಮಂಡಲಕ್ಕೆ ಸಾಕಷ್ಟು ಕಾರ್ಬನ್‌ ಡೈಆಕ್ಸೈಡನ್ನು ಊದುತ್ತಲೇ ಬಂದಿದ್ದಾನೆ. ಆದರೆ ಈ ದಿಶೆಯಲ್ಲಿ ಸ್ವತಂತ್ರವಾಗಿ ಸಾಗರದ ಪಾತ್ರ ಇನ್ನೂ ಅಧಿಕ ಮಟ್ಟದಲ್ಲಿದೆ ಎಂಬುದು ಈಚಿನ ಅಧ್ಯಯನಗಳಿಂದ ತಿಳಿದು ಬಂದಿದೆ.

            ಸದ್ಯದಲ್ಲಿ ಸಾಗರಜಲದಲ್ಲಿ ವಿಲೀನವಾಗಿರುವ ಕಾರ್ಬನ್‌ಡೈಆಕ್ಸೈಡಿನ ಮೊತ್ತ ವಾಯುಮಂಡಲದಲ್ಲಿರುವ ಅದರ ಮೊತ್ತದ 60 ಪಾಲು ಇದೆ. ಕೆಲವೊಂದು ಸಾಗರ ಜೀವಿಗಳ ಆಹಾರದ ಉಗ್ರಾಣ ಈ ವಿಲೀನಿತ ಅನಿಲ. ಅವು ನಿಶ್ಚಸಿಸುವ ಅನಿಲವೇ ನೆಲಪ್ರಾಣಿಗಳ ಉಸಿರಾದ ಆಕ್ಸಿಜನ್‌. ಹೀಗೆ ನೆಲ-ಜಲ ಎಂಬ ಬೇಧವಿಲ್ಲದೆ ಜೀವಿಗಳ ನಿಯಂತ್ರಣದಲ್ಲಿ ಸಾಗರ ನಿರ್ವಹಿಸುವ ಪಾತ್ರ ಅತಿ ಮುಖ್ಯವಾದದ್ದು.

            ಸೌರವಿಕಿರಣದ ದೆಸೆಯಿಂದ ನೀರು ಕಾದು ಆವಿಯಾಗಿ ಮೇಲೇರಿ ಮೋಡವಾಗಿ ದೂರ ಸಂಚರಿಸಿ ಮಳೆಯಾಗಿ ಸುರಿದು ಆ ನೀರು ನೆಲದ ಲವಣಾಂಶ ಮೊದಲಾದವನ್ನು ತೊಳೆದುಕೊಂಡು ಬಂದು ಸಾಗರಕ್ಕೆ ಸುರಿಯುತ್ತದೆ. ಇತ್ತ ಅದೇ ವಿಕಿರಣದ ಇರವಿನಲ್ಲಿ ಅತಿ ಸೂಕ್ಷ್ಮಕಡಲ ಸಸ್ಯಗಳು ಜಲವಿಲೀನಿತ ಕಾರ್ಬನ್‌ ಡೈಆಕ್ಸೈಡನ್ನು ದೃುತಿಸಂಶ್ಲೇಷಣಾ ಪ್ರಕ್ರಿಯೆಯ ಮೂಲಕ ತಮ್ಮ ಆಹಾರವಾಗಿ ಮಾರ್ಪಡಿಸಿಕೊಂಡು ಮುಕ್ತ ಆಕ್ಸಿಜನ್ನನ್ನು ವಾಯುಮಂಡಲಕ್ಕೆ ಬಿಟ್ಟುಕೊಡುತ್ತವೆ.

            ತಣ್ಣನೆಯ ಹಾಗೂ ಅಧಿಕ ಸಾಂದ್ರತೆಯ ನೀರು ಮೇಲಕ್ಕೆ ಏರುವ ಸಂಭಾವ್ಯತೆಯೇ ಇಲ್ಲ. ಆದರೆ ಸಾಗರಾಂತರ್ಗತ ಜ್ವಾಲಾಮುಖಿಗಳ ಕಾರ್ಯ, ತೊಗಟೆ ಫಲಕಗಳ ನಿರಂತರ ಚಲನೆ, ಭೂಮ್ಯಾ ವರ್ತನೆ, ಸಾಗರದ ಮೇಲೆ ಸೂರ್ಯ ಚಂದ್ರರ ಗುರುತ್ವಾಕರ್ಷಣೆ ಮುಂತಾದವು ಕಡಲನ್ನು ನಿಂತ ನೀರಿನ ಮಡುವಾಗಿ ಹಳಸಲು ಬಿಡದೆ ಅದನ್ನು ಸತತಮಂಥನ ಸ್ಥಿತಿಯಲ್ಲಿಡುವ ಬಾಹ್ಯ ಬಲಗಳಾಗಿ ವರ್ತಿಸುತ್ತವೆ. ಹೀಗಾಗಿ ಸಾಗರದ ರಸಾಯನ ವೃತ್ತಾಂತ ನಿರಂತರ ಕ್ಷೋಭೆಯಲ್ಲಿರುವುದು.

            ಪೆಟ್ರೋಲಿಯಂ ವಸ್ತುಗಳನ್ನು ಹಾಗೂ ಅಂತರ್ಜಲವನ್ನು ಹೊರತೆಗೆಯಲು ಕೊರೆಯುವ ಬಾವಿಗಳ ಆಳ 600 ಮೀ ಗಳನ್ನೂ ಮೀರಿರಬಹುದು. ಆದರೂ ಅದು ಭೂಕೇಂದ್ರದ ಆಳ 6,370 ಕಿಮೀಗಳಿಗೆ ಹೋಲಿಸಿದರೆ ಗೌಣವಾದುದಾಗಿದೆ.

 

ಸಿಡಿಲು ಮಿಂಚು ವಾತಾವರಣಕ್ಕೆ ಉಪಕಾರಿ

            ವರ್ಷಕ್ಕೆ ೧ ಕೋಟಿ ೬೦ ಲಕ್ಷ ಸಿಡಿಲುಗಳು ಬಡಿಯುತ್ತವೆಂದು ತಜ್ಞರು ಅಂದಾಜು ಮಾಡಿದ್ದರೂ ಅವುಭೂಮಿಯ ಎಲ್ಲ ಪ್ರದೇಶಗಳಲ್ಲಿ ಒಂದೇ ಪ್ರಮಾಣದಲ್ಲಿ ಬಡಿಯುವುದಿಲ್ಲ, ಜಾವಾ ದ್ವೀಪವನ್ನು ಮಿಂಚು ಸಿಡಿಲುಗಳ ತವರೂರೆನ್ನಬಹುದು. ಅಲ್ಲಿ ವರ್ಷಕ್ಕೆ ೨೨೩ ದಿನ ಗುಡುಗುಗಳ ಗರ್ಜನೆ ಇರುತ್ತದೆ. ಮಧ್ಯ ಆಫ್ರಿಕ, ಮಧ್ಯ ಅಮೆರಿಕ, ಬ್ರೆಜಿಲ್, ಮಡಗಾಸ್ಕರ ದ್ವೀಪ ಮೊದಲಾದ ಕಡೆಗಳಲ್ಲಿಯೂ ಮಿಂಚು- ಸಿಡಿಲುಗಳ ಅಬ್ಬರ ಬಹಳ ಸಿಡಿಲು- ಮಿಂಚುಗಳು ಅನಾದಿಯಿಂದಲೂ ಮನುಷ್ಯನನ್ನು ಚಮಕಿತನನ್ನಾಗಿ ಮಾಡಿವೆ; ಸಂಗಡಲೇ ಭಯವಿಹ್ವಲನನ್ನಾಗಿಯೂ ಮಾಡಿವೆ. ಸಿಡಿಲು ಇಂದ್ರನ ಆಯುಧ; ಅದು ಬರುವಾಗ ಅವನ ಮಗನಾದ ಅರ್ಜುನನನ್ನು ನೆನೆದರೆ ಅದು ನಮ್ಮ ಮೇಲೆರಗಲಾರದೆಂಬ ನಂಬಿಕೆ ಭಾರತದಲ್ಲಿದೆ.

            ಸಿಡಿಲು ನಮಗಿಷ್ಟು ಅಪಾಯಕರವಾಗಿದ್ದರೂ ಅದು ನಮಗರಿಯದಂತೆ ಅಪಾರ ಉಪಕಾರವನ್ನೂ ಮಾಡುತ್ತದೆಂದು ತಿಳಿದುಬಂದಿರುವುದು ಈಚೀಚೆಗೆ ಮಾತ್ರ. ಮಳೆಯನ್ನು ಉಂಟುಮಾಡುವುದಂತಿರಲಿ, ನಮ್ಮ ಆಹಾರವನ್ನು ಉತ್ಪಾದಿಸುವ ಮತ್ತು ನಾವು ಉಸಿರಾಡುವ ಗಾಳಿಯನ್ನು ಪರಿಶುದ್ಧವಾಗಿಡುವ ಕಾರ್ಯದಲ್ಲಿ ಸಿಡಿಲು ಮಿಂಚುಗಳು ನಂಬಲಾರದಷ್ಟು ಸಹಾಯ ಮಾಡುತ್ತವೆ.

            ಪ್ರತಿಯೊಂದು ಮಿಂಚು ಗಾಳಿಯನ್ನು ಭೇದಿಸಿ ಹೋಗುತ್ತಿರುವಾಗ ಕಲ್ಪನಾತೀತವೆನಿಸುವಷ್ಟು ಉಷ್ಣತೆಯನ್ನು ಉಂಟುಮಾಡುತ್ತದೆ. ಇದರಿಂದ ಪ್ರಾಣವಾಯು (ಆಕ್ಸಿಜನ್) ಮತ್ತು ಸಾರಜನಕ (ನೈಟ್ರೋಜನ್) ಪರಮಾಣುಗಳು ಸಂಯೋಗವಾಗಿ ಸಾರಜನಕ ಭಸ್ಯ (ನೈಟ್ರೋಜನ್ ಆಕ್ಸೈಡ್) ಉಂಟಾಗುತ್ತದೆ. ಇದು ಇನ್ನಷ್ಟು ಪ್ರಾಣವಾಯುವಿನೊಡನೆ ಕೂಡಿಕೊಂಡು ನೀರಿನಲ್ಲಿ ಸೇರಿ ಸಾರಜನಕಾಮ್ಲ ಮತ್ತು ಇತರ ಸಾರಜನಕ ಸಂಯುಕ್ತಗಳಾಗಿ ಮಳೆಯೊಡನೆ ನೆಲಕ್ಕೆ ಬೀಳುತ್ತದೆ. ಸಸ್ಯ ಜೀವನಕ್ಕೆ ಅತ್ಯಗತ್ಯವಾದ ಈ ಸಂಯುಕ್ತಗಳನ್ನು ವರ್ಷಕ್ಕೆ ೧೦ ಕೋಟಿ ಟನ್ನುಗಳಷ್ಟು ಸಿಡಿಲು - ಮಿಂಚುಗಳ ಉತ್ಪಾದಿಸುತ್ತವೆ. ಇವಲ್ಲದಿದ್ದರೆ ಭೂಮಿಯ ಮೇಲೆ ಸಸ್ಯ ಜೀವನವೂ ಸಂಗಡಲೇ ಪ್ರಾಣಿ ಜೀವನವೂ ಸಾವಕಾಶವಾಗಿ ಇಲ್ಲವಾಗಬೇಕಾದೀತು.

 

ಉಸಿರಾಟದ ಬಗ್ಗೆ ವೈಜ್ಞಾನಿಕ ವಿವರಣೆ

            ಬೆಂಕಿಯ ಉಸಿರು ಪ್ರಾಣಾಯಾಮದ ಒಂದು ರೂಪ, ಅಥವಾ ಉಸಿರಾಟದ ನಿಯಂತ್ರಣ. ಪ್ರಾಣಾಯಾಮದ ಅಭ್ಯಾಸವು ವಿವಿಧ ರೀತಿಯ ಉಸಿರಾಟದ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ನೀವು ಉಸಿರಾಡುವ, ಬಿಡುವ ಮತ್ತು ನಿಮ್ಮ ಉಸಿರನ್ನು ನಿರ್ದಿಷ್ಟ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುವುದು, ನೀವು ಮಾಡುತ್ತಿರುವ ಉಸಿರಾಟದ ತಂತ್ರವನ್ನು ಅವಲಂಬಿಸಿರುತ್ತದೆ. ಪ್ರಾಣಾಯಾಮ ಯೋಗದ ಪ್ರಾಥಮಿಕ ಅಂಶವಾಗಿದೆ. ...... ಬೆಂಕಿಯ ಉಸಿರನ್ನು "ತಲೆಬುರುಡೆ ಹೊಳೆಯುವ ಉಸಿರು" ಅಥವಾ ಕಪಾಲಭತಿ ಎಂದೂ ಕರೆಯಲಾಗುತ್ತದೆ. ಸಂಸ್ಕೃತದಲ್ಲಿ, "ಕಪಾಲ್" ಎಂದರೆ "ತಲೆಬುರುಡೆ" ಅಥವಾ "ಹಣೆ" ಮತ್ತು "ಭಾತಿ" ಎಂದರೆ "ಪ್ರಕಾಶಿಸುವ" ಎಂದರ್ಥ.[16]

            ಬೆಂಕಿಯ ಉಸಿರನ್ನು ಸಾಮಾನ್ಯವಾಗಿ ಕುಂಡಲಿನಿ ಯೋಗದ ಭಾಗವಾಗಿ ಮಾಡಲಾಗುತ್ತದೆ, ಇದು ಒಳಗೊಂಡಿರುತ್ತದೆ:

1. ಉಸಿರಾಟದ ತಂತ್ರಗಳು

2. ಪಠಣ

3. ಹಾಡುವುದು

4. ಪುನರಾವರ್ತಿತ ಭಂಗಿಗಳು

ಹೆಚ್ಚುವರಿ ವೈಜ್ಞಾನಿಕ ವಿವರಣೆ

1. 2013 ರ ಅಧ್ಯಯನದ ವಿಶ್ವಾಸಾರ್ಹ ಮೂಲವು ಬ್ರೀತ್ ಆಫ್ ಫೈರ್ ಸೇರಿದಂತೆ ವೇಗದ ಪ್ರಾಣಾಯಾಮವು ವಿದ್ಯಾರ್ಥಿಗಳಲ್ಲಿ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.

2. ಸಂಶೋಧಕರ ಪ್ರಕಾರ, ವೇಗದ ಪ್ರಾಣಾಯಾಮವು ಸಹಾನುಭೂತಿಯ ನರಮಂಡಲದ (SNS) (ಸಿಂಪಥೆಟಿಕ್ ನರ್ವಸ್ ಸಿಸ್ಟಮ್) ಚಟುವಟಿಕೆಯನ್ನು ಕಡಿಮೆ ಮಾಡುವ ಮೂಲಕ ಶಾಂತವಾಗಿರಲು ಸಹಾಯ ಮಾಡುತ್ತದೆ. ನಿಮ್ಮ "ಹೋರಾಟ ಅಥವಾ ಹಾರಾಟ" ಒತ್ತಡದ ಪ್ರತಿಕ್ರಿಯೆಗೆ SNS ಕಾರಣವಾಗಿದೆ.

3. ವೇಗದ ಪ್ರಾಣಾಯಾಮವು ನಿಮ್ಮ "ವಿಶ್ರಾಂತಿ ಮತ್ತು ಜೀರ್ಣಕ್ರಿಯೆ" ಪ್ರತಿಕ್ರಿಯೆಯನ್ನು ನಿಯಂತ್ರಿಸುವ ಪ್ಯಾರಾಸಿಂಪಥೆಟಿಕ್ ನರಮಂಡಲದ (PNS) ಚಟುವಟಿಕೆಯನ್ನು ಹೆಚ್ಚಿಸಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ.

4. 2014 ರ ಅಧ್ಯಯನದ ವಿಶ್ವಾಸಾರ್ಹ ಮೂಲ ಪ್ರಕಾರ, ಈ ಉಸಿರಾಟದ ತಂತ್ರವು ನಿಮ್ಮ ಉಸಿರಾಟದ ಸ್ನಾಯುಗಳನ್ನು ವ್ಯಾಯಾಮ ಮಾಡುತ್ತದೆ. ಇದು ನಿಮ್ಮ ಡಯಾಫ್ರಾಮ್ (ಕಿಬ್ಬೊಟ್ಟೆಯ ಮತ್ತು ಎದೆಗೂಡಿನ ಕುಳಿಗಳನ್ನು ಬೇರ್ಪಡಿಸುವ ಸ್ನಾಯುವಿನ ವಿಭಜನೆ; ಉಸಿರಾಟದಲ್ಲಿ ಕಾರ್ಯ ನಿರ್ವಹಿಸುತ್ತದೆ) ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ಶ್ವಾಸಕೋಶವನ್ನು ಗಾಳಿಯಿಂದ ತುಂಬುವ ಸ್ನಾಯು.

5. ಸಣ್ಣ ಉಸಿರಾಟ ಹೊರಹಾಕುವಿಕೆ ನಿಮ್ಮ ಶ್ವಾಸನಾಳದ ಹಾದಿಗಳಿಂದ ಸ್ರವಿಸುವಿಕೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಶ್ವಾಸಕೋಶಗಳು ಹೆಚ್ಚು ಗಾಳಿಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅಧ್ಯಯನವು ಗಮನಿಸುತ್ತದೆ.

6. 2017 ರ ಅಧ್ಯಯನದ ವಿಶ್ವಾಸಾರ್ಹ ಮೂಲದಲ್ಲಿ, ಯೋಗ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದ ಸಾವಧಾನತೆಯನ್ನು ಅನುಭವಿಸಿದರು. ಪ್ರಾಣಾಯಾಮ ಮಧ್ಯಸ್ಥಿಕೆಯು ಬೆಂಕಿಯ ಉಸಿರು ಸೇರಿದಂತೆ ವಿವಿಧ ತಂತ್ರಗಳನ್ನು ಒಳಗೊಂಡಿತ್ತು.

7. ಬೆಂಕಿಯ ಉಸಿರು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ತೊಡಗಿಸುತ್ತದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ....... ಉದಾಹರಣೆಗೆ, 2013 ರ ಪ್ರಕರಣದ ವರದಿಯ ವಿಶ್ವಾಸಾರ್ಹ ಮೂಲದಲ್ಲಿ, 62 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ರೋಗವನ್ನು ನಿರ್ವಹಿಸಲು ತಂತ್ರವು ಸಹಾಯ ಮಾಡಿತು. ವರದಿಯ ಪ್ರಕಾರ ಒತ್ತಡದ ಮೇಲೆ ಅದರ ಪರಿಣಾಮದಿಂದಾಗಿರಬಹುದು.

8. 2015 ರ ಅಧ್ಯಯನವು ಕೆರಳಿಸುವ ಕರುಳಿನ ಸಹಲಕ್ಷಣದ ಲಕ್ಷಣಗಳನ್ನು ನಿರ್ವಹಿಸಲು ಯೋಗಾಭ್ಯಾಸದಲ್ಲಿ ಬೆಂಕಿಯ ಉಸಿರುನ್ನು ಸಹ ಸೂಚಿಸುತ್ತದೆ. ಆದಾಗ್ಯೂ, ಇದನ್ನು ಬೆಂಬಲಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.

 

ನೈಟ್ರೋ ಗ್ಲಿಸರಿನ್ ಹೃದಯಕ್ಕೆ ಒಳ್ಳೆಯದು

            ನೈಟ್ರೊಗ್ಲಿಸರಿನ್ ಸ್ಫೋಟಕ ಎಂಬ ಪ್ರಖ್ಯಾತಿ ಪಡೆದಿರುವ ಈ ರಾಸಾಯನಿಕಕ್ಕೆ ಇನ್ನೊಂದು ಮುಖವೂ ಇದೆ. ಬಿರುಸು ವ್ಯಾಯಾಮ ಮಾಡಿದಾಗ ಅಥವಾ ಹೃದಯಾಪಧಮನಿಗಳು ಕುಗ್ಗಿದಾಗ ಎದೆಯಲ್ಲಿ ಒಮ್ಮೊಮ್ಮೆ ಹಠಾತ್ತನೆ ಛಳುಕು ಮೂಡುತ್ತದಲ್ಲ - ಎದೆ ಸೆರೆ ಸೆಳೆತ   (ಅಂಜಿನಾ ಪೆಕ್ಟೋರಿಸ್) ಈ ಛಳುಕನ್ನು ಉಪಶಮನಗೊಳಿಸಲು ನೈಟ್ರೊಗ್ಲಿಸರಿನ್ ಮಾತ್ರೆ ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಹೃದಯ ಹೆಚ್ಚು ಬಲವಾಗಿ ಆಗ ಮಿಡಿಯುತ್ತದೆ. ಛಳುಕು ಮಾಯವಾಗುತ್ತದೆ. ಉಸಿರಾಟ ಸಲೀಸಾಗುತ್ತದೆ.

 

ಹಡ್ರೋಜನ್ ನೈಟ್ರೋಜನ್ ಬಗ್ಗೆ ವಿಜ್ಞಾನಿ ಹೇಳಿದ್ದೇನು

             ಸಾರಜನಕವು ಎಲ್ಲಾ ಜೀವಿಗಳಲ್ಲಿ ಕಂಡುಬರುತ್ತದೆ, ಪ್ರಾಥಮಿಕವಾಗಿ ಅಮೈನೋ ಆಮ್ಲಗಳಲ್ಲಿ (ಮತ್ತು ಪ್ರೋಟೀನ್ಗಳು), ನ್ಯೂಕ್ಲಿಯಿಕ್ ಆಮ್ಲಗಳಲ್ಲಿ (ಡಿಎನ್ಎ ಮತ್ತು ಆರ್ಎನ್ಎ) ಮತ್ತು ಶಕ್ತಿ ವರ್ಗಾವಣೆ ಅಣು ಅಡೆನೊಸಿನ್ ಟ್ರೈಫಾಸ್ಫೇಟ್ನಲ್ಲಿ. ಮಾನವ ದೇಹವು ದ್ರವ್ಯರಾಶಿಯಿಂದ ಸುಮಾರು 3% ಸಾರಜನಕವನ್ನು ಹೊಂದಿರುತ್ತದೆ, ಆಮ್ಲಜನಕ, ಕಾರ್ಬನ್ ಮತ್ತು ಹೈಡ್ರೋಜನ್ ನಂತರ ದೇಹದಲ್ಲಿ ನಾಲ್ಕನೇ ಅತ್ಯಂತ ಹೇರಳವಾಗಿರುವ ಅಂಶವಾಗಿದೆ. ಸಾರಜನಕ ಚಕ್ರವು ಗಾಳಿಯಿಂದ ಅಂಶದ ಚಲನೆಯನ್ನು ವಿವರಿಸುತ್ತದೆ, ಜೀವಗೋಳ ಮತ್ತು ಸಾವಯವ ಸಂಯುಕ್ತಗಳಿಗೆ, ನಂತರ ಮತ್ತೆ ವಾತಾವರಣಕ್ಕೆ. ಸಾರಜನಕವು ಪ್ರತಿಜೀವಕಗಳನ್ನು ಒಳಗೊಂಡಂತೆ ಪ್ರತಿಯೊಂದು ಪ್ರಮುಖ ಔಷಧೀಯ ಔಷಧ ವರ್ಗದ ಒಂದು ಅಂಶವಾಗಿದೆ. ಅನೇಕ ಔಷಧಿಗಳು ನೈಸರ್ಗಿಕ ಸಾರಜನಕ-ಒಳಗೊಂಡಿರುವ ಸಿಗ್ನಲ್ ಅಣುಗಳ ಅನುಕರಣೆಗಳು ಅಥವಾ ಪ್ರೋಡ್ರಗ್‌ಗಳಾಗಿವೆ: ಉದಾಹರಣೆಗೆ, ಸಾವಯವ ನೈಟ್ರೇಟ್‌ಗಳು ನೈಟ್ರೊಗ್ಲಿಸರಿನ್ ಮತ್ತು ನೈಟ್ರೋಪ್ರಸ್ಸೈಡ್ ನೈಟ್ರಿಕ್ ಆಕ್ಸೈಡ್ ಆಗಿ ಚಯಾಪಚಯಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನೈಸರ್ಗಿಕ ಕೆಫೀನ್ ಮತ್ತು ಮಾರ್ಫಿನ್ ಅಥವಾ ಸಿಂಥೆಟಿಕ್ ಆಂಫೆಟಮೈನ್‌ಗಳಂತಹ ಅನೇಕ ಗಮನಾರ್ಹ ಸಾರಜನಕ-ಒಳಗೊಂಡಿರುವ ಔಷಧಗಳು ಪ್ರಾಣಿಗಳ ನರಪ್ರೇಕ್ಷಕಗಳ ಗ್ರಾಹಕಗಳ ಮೇಲೆ ಕಾರ್ಯನಿರ್ವಹಿಸುತ್ತವೆ.

            ಬ್ರಹ್ಮಾಂಡದಲ್ಲಿ ಅತ್ಯಂತ ಹೇರಳವಾಗಿ ಕಂಡುಬರುವ ರಾಸಾಯನಿಕ ಅಂಶವಾದ ಹೈಡ್ರೋಜನ್ ಎಲ್ಲಾ ದೈಹಿಕ ದ್ರವಗಳಲ್ಲಿ ಇರುತ್ತದೆ, ಇದು ವಿಷ ಮತ್ತು ತ್ಯಾಜ್ಯವನ್ನು ಸಾಗಿಸಲು ಮತ್ತು ಹೊರಹಾಕಲು ಅನುವು ಮಾಡಿಕೊಡುತ್ತದೆ. ಹೈಡ್ರೋಜನ್ ಸಹಾಯದಿಂದ, ನಮ್ಮ ದೇಹದಲ್ಲಿನ ಕೀಲುಗಳು ನಯವಾಗಿ ಉಳಿಯುತ್ತವೆ ಮತ್ತು ಅವುಗಳ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಸಾರಜನಕ ಮತ್ತು ಹೈಡ್ರೋಜನ್ ಒಟ್ಟಿಗೆ ಸೇರಿ ಅಮೋನಿಯಾವನ್ನು ರೂಪಿಸುತ್ತವೆ. ಅಮೋನಿಯಾವು ಮಾನವ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಸಾಮಾನ್ಯವಾಗಿ ಪ್ರಕೃತಿಯಲ್ಲಿ ಕಂಡುಬರುತ್ತದೆ. ಪ್ರೋಟೀನ್ಗಳು ಮತ್ತು ಇತರ ಸಂಕೀರ್ಣ ಅಣುಗಳನ್ನು ತಯಾರಿಸಲು ಇದು ಒಂದು ಬಿಲ್ಡಿಂಗ್ ಬ್ಲಾಕ್ ಆಗಿ ದೇಹದಲ್ಲಿ ಅವಶ್ಯಕವಾಗಿದೆ.

            ಉಸಿರಾಟ, ನುಂಗುವಿಕೆ ಅಥವಾ ಚರ್ಮದ ಸಂಪರ್ಕದ ಪರಿಣಾಮವಾಗಿ ಅಮೋನಿಯಾ ದೇಹವನ್ನು ಪ್ರವೇಶಿಸಿದಾಗ, ಅದು ಅಮೋನಿಯಂ ಹೈಡ್ರಾಕ್ಸೈಡ್ ಅನ್ನು ಉತ್ಪಾದಿಸಲು ನೀರಿನೊಂದಿಗೆ ಪ್ರತಿಕ್ರಿಯಿಸುತ್ತದೆ. ಈ ರಾಸಾಯನಿಕವು ತುಂಬಾ ನಾಶಕಾರಿಯಾಗಿದೆ ಮತ್ತು ಸಂಪರ್ಕದಲ್ಲಿ ದೇಹದಲ್ಲಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ.

            ನಮ್ಮ ದೇಹವು ಅಮೋನಿಯಾವನ್ನು ತ್ಯಾಜ್ಯ ಉತ್ಪನ್ನವಾಗಿ ಪರಿಗಣಿಸುತ್ತದೆ ಮತ್ತು ಯಕೃತ್ತಿನ ಮೂಲಕ ಅದನ್ನು ತೊಡೆದುಹಾಕುತ್ತದೆ. ಗ್ಲುಟಾಮಿನ್ ಎಂಬ ಅಮೈನೋ ಆಮ್ಲವನ್ನು ರೂಪಿಸಲು ಇದನ್ನು ಇತರ ರಾಸಾಯನಿಕಗಳಿಗೆ ಸೇರಿಸಬಹುದು. ಯೂರಿಯಾ ಎಂಬ ರಾಸಾಯನಿಕ ಸಂಯುಕ್ತವನ್ನು ರೂಪಿಸಲು ಇದನ್ನು ಬಳಸಬಹುದು. ನಮ್ಮ ರಕ್ತಪ್ರವಾಹವು ಯೂರಿಯಾವನ್ನು ನಮ್ಮ ಮೂತ್ರಪಿಂಡಗಳಿಗೆ ಚಲಿಸುತ್ತದೆ, ಅಲ್ಲಿ ಅದು ನಮ್ಮ ಮೂತ್ರದಲ್ಲಿ ಹೊರಹಾಕಲ್ಪಡುತ್ತದೆ.

 

ಆರೋರಾ ಬೆಳಕಿನ ಬಗ್ಗೆ

ಅರೋರಾ ಒಂದು ವರ್ಣಮಯ ಪ್ರಜೆ, ಸೂರ್ಯನಿಂದ ಪ್ರವಹಿಸಿ ಬರುವ ವಿದ್ಯುದಾವಿಷ್ಟ ಕಣಗಳ ಧರೆಗೆ ಸೌರಮಾರುತವೆಂದು ಹೆಸರು. ಅರೋರಾ ಪ್ರಭೆಯಲ್ಲಿರುವ ಹಸುರು ಬಣ್ಣಕ್ಕೆ ಕಾರಣ  ಆಕ್ಸಿಜನ್‌ ಪರಮಾಣುಗಳು. ನೈಟ್ರೋಜನ್‌ ಮತ್ತು ಆಕ್ಷಿಜನ್‌ಗಳರಡೂ ಕೆಂಪು ಬೆಳಕನ್ನು  ಉತ್ಪರ್ಜಿಸುತ್ತವೆ.

 

ನಟ್ರೋಜನ್, ಆಕ್ಸಿಜನ್, ಫಾಸ್ಪರಸ್, ಸಲ್ಫರ್  ಸೈಕಲ್ ಬಗ್ಗೆ

 

ಸಾರಜನಕ ಆವರ್ತ (ನೈಟ್ರೋಜನ್‌ ಸೈಕಲ್‌):

            ಸಾರಜನಕ ವಾಯುಮಂಡಲದ ಶುಷ್ಕ ವಾಯುವಿನಲ್ಲಿ ಶೇ.78.03 ರಷ್ಟಿರುತ್ತದೆ. ಈ ಅನಿಲವನ್ನು ಜೈವಿಕ ಮಂಡಲದಲ್ಲಿರುವ ಜೀವಿಗಳು ನೇರವಾಗಿ ಪಡೆದುಕೊಳ್ಳದೆ, ಸಸ್ಯಗಳು ಮಣ್ಣಿನಲ್ಲಿರುವ ನೈಟ್ರೆಟ್ಟ್‌ ಮೂಲಕ ಪಡೆದುಕೊಳ್ಳುತ್ತವೆ. ವಾಯುಮಂಡಲದಲ್ಲಿರುವ ಸಾರಜನಕ ಅನಿಲವನ್ನು ಜೀವಿಗಳು ಎರಡು ವಿಧಾನಗಳಿಂದ ಪಡೆದುಕೊಳ್ಳುತ್ತವೆ. ಮೊದಲನೆಯದಾಗಿ, ಸೌರಶಕ್ತಿಯಿಂದ ವಾಯುಮಂಡಲದಲ್ಲಿರುವ ಸಾರಜನಕ ದಹನವಾಗಿ ನೈಟ್ರೆಟ್‌ ಆಗಿ ಪರಿವರ್ತನೆಯಾಗುತ್ತದೆ. ಎರಡನೆಯದಾಗಿ ಮಣ್ಣಿನಲ್ಲಿರುವ ಸಾರಜನಕದ ಸ್ಥಿರೀಕರಣವನ್ನು ಬ್ಯಾಕ್ಟೀರಿಯ ಪಡೆದುಕೊಳ್ಳುತ್ತವೆ. ಈ ಬ್ಯಾಕ್ಟೀರಿಯಗಳಲ್ಲಿ ಮೂರು ಪ್ರಕಾರ. ಕೆಲವು ಬ್ಯಾಕ್ಟೀರಿಯಗಳು ಮಣ್ಣಿನಲ್ಲಿ ಸ್ವತಂತ್ರವಾಗಿ ಜೀವಿಸುತ್ತವೆ. ಇನ್ನೂ ಕೆಲವು ದ್ವಿದಳ ಧಾನ್ಯ ಬೆಳೆಗಳ ಬೇರುಗಳಲ್ಲಿ ಸಿಂಬಯಾಟಿಕ್‌ ಮತ್ತು ಪರಸ್ಪರ ಸಂಯೋಜನೆಯಿಂದ ಸಾರಜನಕ ಸ್ಥಿರೀಕರಣ ಮಾಡುತ್ತವೆ. ಮೂರನೆಯವು ಫೋಟೋಸಿಂಥೆಟಿಕ್‌ ಸಾಯನೋ ಬ್ಯಾಕ್ಟೀರಿಯ ನೀಲಿ, ಹಸುರು ಪಾಚಿಗಳಿಂದ ಸಾರಜನಕದ ಸ್ಥಿರೀಕರಣವನ್ನುಂಟುಮಾಡುತ್ತವೆ. ಈ ಎಲ್ಲ ಬ್ಯಾಕ್ಟೀರಿಯಗಳು ಸಾರಜನಕವನ್ನು ಅಮೋನಿಯ ಇಲ್ಲವೆ ನೈಟ್ರೇಟ್‌ ರೂಪದಲ್ಲಿ ಸಾರಜನಕ ಸ್ಥಿರೀಕರಣ ಮಾಡುತ್ತವೆ. ಹಲವು ಸಸ್ಯಗಳು ನೈಟ್ರೇಟ್‌ನ್ನು ತೆಗೆದುಕೊಂಡು ಅದನ್ನು ಅಮಿನೋ ಆಮ್ಲ ಸಸ್ಯಗಳಿಂದ ಪಡೆದುಕೊಳ್ಳುತ್ತವೆ. ಪ್ರಾಣಿಗಳು ತಮಗೆ ಅಗತ್ಯವಿರುವ ಅಮಿನೋ ಆಮ್ಲಗಳನ್ನು ಸಸ್ಯಗಳಿಂದ ಪಡೆದುಕೊಳ್ಳುತ್ತವೆ. ಪ್ರಾಣಿಗಳು ಮತ್ತು ಸಸ್ಯ ವಾಯುಮಂಡಲಕ್ಕೆ ಬಿಡುಗಡೆ ಮಾಡುತ್ತವೆ. ಸಸ್ಯ ಮತ್ತು ಪ್ರಾಣಿಗಳು ಸತ್ತ ಅಥವಾ ನಶಿಸಿದ ಅನಂತರ ಅವುಗಳು ಮಣ್ಣಿನಲ್ಲಿ ಸಂಯೋಜನೆಯಾಗಿ ಸಾರಜನಕ ಅಮೋನಿಯ ರೂಪದಲ್ಲಿ ಹೊರಹೊಮ್ಮುತ್ತದೆ. ಅಮೋನಿಯ ವಿಷಕಾರಿ ಅನಿಲ, ಆದರೆ ಸುದೈವದಿಂದ ಮಣ್ಣಿನಲ್ಲಿ ಮತ್ತು ನೀರಿನಲ್ಲಿರುವ ನೈಟ್ರೀಕರಣಗೊಳಿಸುವ ಬ್ಯಾಕ್ಟೀರಿಯಗಳು ಅಮೋನಿಯ ಲವಣಗಳನ್ನು ಉತ್ಕರ್ಷಿಸಿ ನೈಟ್ರೇಟ್‌ಗಳಾಗಿ ಪರಿವರ್ತಿಸುತ್ತವೆ. ನೈಟ್ರೇಟ್‌ ಕೂಡಲ್ಪಟು ವಿಷಕಾರಿಯಾಗಿರುತ್ತವೆ.  ಆದರೆ, ಇನ್ನುಳಿದ ನೈಟ್ರೋಬ್ಯಾಕ್ಟರ್‌ ಮುಂತಾದ ಬ್ಯಾಕ್ಟೀರಿಯಗಳು ಇವನ್ನು  ನೈಟ್ರೇಟುಗಳಾಗಿ ಪರಿವರ್ತಿಸುತ್ತವೆ. ನೈಟ್ರೇಟ್‌ಗಳನ್ನು ಸಸ್ಯಗಳು ಉಪಯೋಗಿಸುವುದರಿಂದ ಸಾರಜನಕ ಆವರ್ತ ನಿರಂತರವಾಗಿ ನಡೆಯುತ್ತದೆ.  

 

ಆಮ್ಲಜನಕ ಆವರ್ತ (ಆಕ್ಸಿಜನ್‌ ಸೈಕಲ್‌):

            ಜೈವಿಕ ಮಂಡಲದಲ್ಲಿರುವ ಎಲ್ಲ ಜೀವಿಗಳ ಉಸಿರಾಟಕ್ಕೆ ಆಮ್ಲಜನಕ ಅತ್ಯಾವಶ್ಯಕ ಆಮ್ಲಜನಕ ಇಂಗಾಲದ ಡೈಆಕ್ಸೈಡ್‌ ಕಾರ್ಬೊ ಹೈಡ್ರೇಟ್‌ ಮತ್ತು ನೀರಿನಲ್ಲಿ ಎರಡು ಅಂಶಗಳ ರೂಪದಲ್ಲಿ ದೊರೆಯುತ್ತದೆ. ಆಮ್ಲಜನಕ ನೀರಿನಲ್ಲಿಯೂ ಕರಗಿದ ಸ್ಥಿತಿಯಲ್ಲಿರುತ್ತದೆ. ಆದ್ದರಿಂದ ಅನೇಕ ಜಲಜೀವಿಗಳು ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ಹೀಗೆ ಆಮ್ಲಜನಕ ಆವರ್ತ ಏರ್ಪಡುತ್ತದೆ. ಸಸ್ಯಗಳು ದ್ಯುತಿಸಂಶ್ಲೇಷಣೆಯ ಕಾರ್ಯದಲ್ಲಿ ಇಂಗಾಲದ ಡೈಆಕ್ಸೈಡ್‌ ಉಪಯೋಗಿಸಿಕೊಂಡು ಆಮ್ಲಜನಕ ಬಿಡುಗಡೆಯಾಗುತ್ತದೆ. ಇದಕ್ಕೆ ಬದಲಾಗಿ ಎಲ್ಲ ಪ್ರಾಣಿಗಳು ಉಸಿರಾಟದ ಕ್ರಿಯೆಯಲ್ಲಿ ಆಮ್ಲಜನಕವನ್ನು ಬಳಸಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಬಿಡುಗಡೆ ಮಾಡುತ್ತವೆ.

 

ರಂಜಕ ಆವರ್ತ (ಫಾಸ್ಪರಸ್‌ ಸೈಕಲ್‌):

            ರಂಜಕ ಸಂಚಯನ ಆವರ್ತವಾಗಿದ್ದು, ಇದು ಉಳಿದೆಲ್ಲ ಪೋಷಕಾಂಶ ಆವರ್ತಗಿಂತ ಸರಳವಾಗಿರುತ್ತದೆ. ರಂಜಕ ಸಸ್ಯಗಳಿಗೆ ಅವಶ್ಯಕವಿರುವ ಪೋಷಕಾಂಶ. ಫಾಸ್ಪೇಟ್‌ ರೂಪದಲ್ಲಿ ದೊರೆಯುತ್ತದೆ. ಭಾರವಾದ ಅಣು ಬೇರೆ ಖನಿಜ ಪೋಷಕಾಂಶಗಳ ಹಾಗೆ ವಾಯುಮಂಡಲದಲ್ಲಿ ಸಂಯೋಜನೆಯಾಗದೆ, ಸೂಕ್ಷ್ಮಜೀವಿಗಳ ದೇಹದಲ್ಲಿ ಸಂಗ್ರಹವಾಗುತ್ತದೆ. ರಂಜಕ ಮುಖ್ಯವಾಗಿ ಶಿಲೆಗಳು ಮತ್ತು ಪ್ರಾಚೀನ ಕಾಲದಲ್ಲಿ ಸಂಚಯನವಾದ ನಿಕ್ಷೇಪಗಳಲ್ಲಿ ದೊರೆಯುವುದಲ್ಲದೆ, ನೀರಿನಲ್ಲಿ ಕೂಡ ಕರಗಿರುತ್ತದೆ. ರಂಜಕ ಸಂಯೋಜಿತ ಶಿಲೆಗಳು ನೀರಿನಿಂದ ಶಿಥಿಲೀಕರಣ ಹೊಂದಿದಾಗ ರಂಜಕ ನೀರಿನಲ್ಲಿ ಕರಗಿ ಹರಿದು ಹೋಗಿ ಜಲರಾಶಿಗಳ ತಳದಲ್ಲಿ ಸಂಚಯನವಾಗಿ ಶಿಲೆಗಳು ನಿರ್ಮಾಣಹೊಂದುತ್ತವೆ. ಇಂತಹ ರಂಜಕವನ್ನು ಉತ್ಪಾದಕಗಳು (ಆಟೋ ಟ್ರಾಪ್ಸ್‌) ವಿವಿಧ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತವೆ. ರಂಜಕ ಜೀವಕೋಶಗಳಲ್ಲಿ ಡಿ.ಎನ್‌.ಎ ಹಾಗೂ ಆರ್‌.ಎನ್‌.ಎ ಯಲ್ಲಿ ಎಟಿಪಿ (ಅಡೆನೊಸಿನ್‌ ಟ್ರಿಫೋಸ್ಟೈಟ್‌) ರೂಪದಲ್ಲಿ ದೊರೆಯುತ್ತವೆ. ಪ್ರಾಣಿಗಳು ಸಸ್ಯಗಳ ಸೇವನೆಯಿಂದ ರಂಜಕ ಪಡೆದುಕೊಂಡು ತಮ್ಮ ಮೂಳೆ ಮತ್ತು ಹಲ್ಲುಗಳಿಗೆ ಉಪಯೋಗಿಸಿಕೊಳ್ಳುತ್ತವೆ. ಸಸ್ಯಗಳು ಮತ್ತು ಪ್ರಾಣಿಗಳು ನಶಿಸಿದ ಅಥವಾ ಸತ್ತ ಬಳಿಕ ಅವುಗಳ ಅವಶೇಷಗಳು ಕೊಳೆತು ಬಳಿಕ ರಂಜಕ ಪುನಃ ಮಣ್ಣು ಮತ್ತು ನೀರಿನಲ್ಲಿ ಸೇರುತ್ತವೆ.

 

ಗಂಧಕ ಆವರ್ತ (ಸಲ್ಫರ್‌ ಸೈಕಲ್‌):

            ಗಂಧಕದ ಆವರ್ತ ನೀರು, ವಾಯು ಮತ್ತು ಮಣ್ಣಿಗೆ ಜೋಡಣೆಯಾಗಿರುತ್ತದೆ. ಗಂಧಕ ಬ್ಯಾಕ್ಟೀರಿಯ ಚಟುವಟಿಕೆಗಳಿಂದ ಸಲ್ಫೈಟ್  ಬಿಡುಗಡೆಯಾಗಿ ಮಣ್ಣಿನಲ್ಲಿರುವ ಗಂಧಕ ಸಸ್ಯಗಳಿಗೆ ದೊರೆಯುತ್ತದೆ. ಪಳೆಯುಳಿಕೆ ಇಂಧನಗಳ (ಫಾಸಿಲ್‌ ಫ್ಯುಯಲ್‌) ದಹನದಿಂದ  ಸ್ವಲ್ಪ ಪ್ರಮಾಣದ ಗಂಧಕ ವಾಯುಮಂಡಲ ಸೇರುತ್ತದೆ. ಅನಂತರ ಗಂಧಕದ ಡೈ ಆಕ್ಸೈಡ್‌ ಮತ್ತು ಜಲಜನಕದ ಸಲ್ಫೈಡ್‌ ಮಳೆಯ ನೀರಿನೊಂದಿಗೆ ಸಲ್ಫೈಟ್‌ ಅಥವಾ ಸಲ್‌ಫ್ಯೂರಿಕ್‌ ಆಮ್ಲದ ರೂಪದಲ್ಲಿ ಪುನಃ ಮಣ್ಣಿಗೆ ಸೇರ್ಪಡೆಯಾಗುತ್ತದೆ.  ಸಲ್ಫರ್ ಮೂಗಿನಿಂದ ಶ್ವಾಸಕೋಶದ ಅಂಗಾಂಶಗಳಿಗೆ ಇಡೀ ಉಸಿರಾಟದ ಪ್ರದೇಶದ ಮೇಲೆ ಕಾರ್ಯನಿರ್ವಹಿಸುತ್ತದೆ. ಸುಡುವಿಕೆ, ಸೆಳೆತ, ಗಾಯಗಳು, ಉಬ್ಬಿರುವ ರಕ್ತನಾಳಗಳು, ವಿಸ್ತರಿಸಿದ ಗ್ರಂಥಿ ಬಗ್ಗೆ ಚಿಕಿತ್ಸೆ ನೀಡುವುದಾಗಿದೆ. ಇದು ಪ್ರಕೃತಿಯಲ್ಲಿ ಎಸ್ಟು ಬೇಕೋ ಅಸ್ಟು ಅಂಶವನ್ನು ದೇಹಕ್ಕೆ ನೀಡುತ್ತದೆ. ಮನುಜ ತಯಾರಿಸಿರುವ ಸಲ್ಪರ್ ಹೆಚ್ಚು ಸಾಂದ್ರತೆಯಿಂದ ಕೂಡಿರುವುದು ಅಪಾಯಕಾರಿ.

 

ಮಹರ್ಷಿ ಯೋಗಿ ರಾಮಾಚರಕ ವೈಜ್ಞಾನಿಕ ವಿವರಣೆ  

ಮಹರ್ಷಿ ಯೋಗಿ ರಾಮಾಚರಕ 1905 ರಲ್ಲಿ ಸೈನ್ಸ್ ಆಫ್ ಬ್ರೆತ್ ಎಂಬ ಪುಸ್ತಕ ಬರೆಯುತ್ತಾರೆ, ಗಾಳಿಯಲ್ಲಿರುವ ಆಮ್ಲಜನಕವನ್ನು ರಕ್ತದಿಂದ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯಿಂದ ಬಳಸಲ್ಪಡುತ್ತದೆ. ಗಾಳಿಯಲ್ಲಿರುವ ಪ್ರಾಣವು ನರಮಂಡಲದಿಂದ ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಅದರ ಕೆಲಸದಲ್ಲಿ ಬಳಸಲಾಗುತ್ತದೆ. ಮತ್ತು ಆಮ್ಲಜನಕಯುಕ್ತ ರಕ್ತವು ವ್ಯವಸ್ಥೆಯ ಎಲ್ಲಾ ಭಾಗಗಳಿಗೆ ಸಾಗಿಸಲ್ಪಡುತ್ತದೆ, ನಿರ್ಮಿಸುತ್ತದೆ ಮತ್ತು ಮರುಪೂರಣಗೊಳ್ಳುತ್ತದೆ, ಹಾಗೆಯೇ ಪ್ರಾಣವು ನರಮಂಡಲದ ಎಲ್ಲಾ ಭಾಗಗಳಿಗೆ ಸಾಗಿಸಲ್ಪಡುತ್ತದೆ, ಶಕ್ತಿ ಮತ್ತು ಚೈತನ್ಯವನ್ನು ಸೇರಿಸುತ್ತದೆ. ಪ್ರಾಣವನ್ನು ನಾವು "ಚೈತನ್ಯ" ಎಂದು ಕರೆಯುವ ಸಕ್ರಿಯ ತತ್ವ ಎಂದು ನಾವು ಭಾವಿಸಿದರೆ, ಅದು ನಮ್ಮ ಜೀವನದಲ್ಲಿ ಯಾವ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟವಾದ ಕಲ್ಪನೆಯನ್ನು ರೂಪಿಸಲು ಸಾಧ್ಯವಾಗುತ್ತದೆ. ವ್ಯವಸ್ಥೆಯ ಅಪೇಕ್ಷೆಯಿಂದ ಬಳಸಲ್ಪಡುತ್ತದೆ, ಆದ್ದರಿಂದ ನರವ್ಯೂಹದಿಂದ ತೆಗೆದುಕೊಳ್ಳಲ್ಪಟ್ಟ ಪ್ರಾಣದ ಪೂರೈಕೆಯು ನಮ್ಮ ಆಲೋಚನೆ, ಇಚ್ಛೆ, ಕಾರ್ಯಪ್ರವೃತ್ತಿ ಇತ್ಯಾದಿಗಳಿಂದ ದಣಿದಿದೆ ಮತ್ತು ಪರಿಣಾಮವಾಗಿ ನಿರಂತರ ಮರುಪೂರಣ ಅಗತ್ಯ. ಪ್ರತಿ ಆಲೋಚನೆ, ಪ್ರತಿ ಕ್ರಿಯೆ, ಪ್ರತಿಇಚ್ಛೆಯ ಪ್ರಯತ್ನ, ಸ್ನಾಯುವಿನ ಪ್ರತಿಯೊಂದು ಚಲನೆಯು ನಾವು ನರ ಬಲ ಎಂದು ಕರೆಯುವ ನಿರ್ದಿಷ್ಟ ಪ್ರಮಾಣವನ್ನು ಬಳಸುತ್ತದೆ, ಇದು ನಿಜವಾಗಿಯೂ ಒಂದು ಪ್ರಾಣದ ರೂಪವಾಗಿದೆ. ಸ್ನಾಯುವನ್ನು ಚಲಿಸಲು ಮೆದುಳು ನರಗಳ ಮೇಲೆ ಪ್ರಚೋದನೆಯನ್ನು ಕಳುಹಿಸುತ್ತದೆ ಮತ್ತು ಸ್ನಾಯು ಸಂಕುಚಿತಗೊಳ್ಳುತ್ತದೆ ಮತ್ತು ತುಂಬಾ ಪ್ರಾಣವನ್ನು ವ್ಯಯಿಸಲಾಗುತ್ತದೆ. ಮನುಷ್ಯನು ಸ್ವಾಧೀನಪಡಿಸಿಕೊಂಡ ಪ್ರಾಣದ ಹೆಚ್ಚಿನ ಭಾಗವು ಉಸಿರಾಡುವ ಗಾಳಿಯಿಂದ ಅವನಿಗೆ ಬರುತ್ತದೆ ಎಂದು ನೆನಪಿಸಿಕೊಂಡಾಗ, ಸರಿಯಾದ ಉಸಿರಾಟದ ಮಹತ್ವವು ಸುಲಭವಾಗಿ ಅರ್ಥವಾಗುತ್ತದೆ”. …… “ನರಗಳ ಮೂಲಕ ಮೆದುಳಿನಿಂದ ದೇಹದ ಎಲ್ಲಾ ಭಾಗಗಳಿಗೆ ಹರಡುವ ಶಕ್ತಿ ಅಥವಾ ಬಲವನ್ನು ಪಾಶ್ಚಾತ್ಯ ವಿಜ್ಞಾನವು "ನರ ಶಕ್ತಿ" ಎಂದು ಕರೆಯುತ್ತದೆ, ಆದರೂ ಯೋಗಿಗಳಿಗೆ ತಿಳಿದಿದೆ, ಅದು ಪ್ರಾಣದ ಆವಿಷ್ಕಾರ ಎಂದು. ಪಾತ್ರ ಮತ್ತು ವೇಗದಲ್ಲಿ ಇದು ವಿದ್ಯುತ್ ಪ್ರವಾಹವನ್ನು ಹೋಲುತ್ತದೆ ಎಂದು ನೋಡಲಾಗುವುದು. ಈ "ನರ ಬಲ" ಇಲ್ಲದೆ ಹೃದಯ ಬಡಿತವಿಲ್ಲ, ರಕ್ತ ಪರಿಚಲನೆ ಸಾಧ್ಯವಿಲ್ಲ; ಶ್ವಾಸಕೋಶಗಳು ಉಸಿರಾಡಲು ಸಾಧ್ಯವಿಲ್ಲ; ವಿವಿಧ ಅಂಗಗಳು ಕಾರ್ಯ ನಿರ್ವಹಿಸುವುದಿಲ್ಲ; ವಾಸ್ತವವಾಗಿ ದೇಹದ ಯಂತ್ರಗಳು ಅದಿಲ್ಲದೆ ನಿಲ್ಲುತ್ತವೆ. ಪ್ರಾಣವಿಲ್ಲದೆ ಮೆದುಳು ಆಲೋಚನೆಯನ್ನು ನಿಲ್ಲಿಸುತ್ತದೆ. ಯಾವಾಗ ಈ ಸತ್ಯಗಳು ಪರಿಗಣಿಸಲಾಗುತ್ತದೆ, ಪ್ರಾಣದ ಹೀರಿಕೊಳ್ಳುವಿಕೆಯ ಪ್ರಾಮುಖ್ಯತೆಯು ಎಲ್ಲರಿಗೂ ಸ್ಪಷ್ಟವಾಗುತ್ತದೆ ಮತ್ತು ಉಸಿರಾಟದ ವಿಜ್ಞಾನವು ಪಾಶ್ಚಿಮಾತ್ಯ ವಿಜ್ಞಾನವು ಅದಕ್ಕೆ ನೀಡಿದ ಪ್ರಾಮುಖ್ಯತೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ”.

 

ವಿಜ್ಞಾನ ಮತ್ತು ವೇದ

            ಈ ಎಲ್ಲಾ ವೈಜ್ಞಾನಿಕ ಆವಿಷ್ಕರಣೆ ಎಲ್ಲಾ ರೀತಿಯ ರಾಸಾಯನಿಕ ಕ್ರಿಯೆ ಮನುಜನ ದೇಹಕ್ಕೆ ಮತ್ತು ನರಮಂಡಲಕ್ಕೆ ಎಸ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ತೋರಿಸುತ್ತದೆ ಇದು 17ನೇ ಶತಮಾನದ ನಂತರದ ಆವಿಷ್ಕರಣೆಯಾಗಿದೆ ಆದರೆ ವೇದದಲ್ಲಿ ಇಂತಹ ರಾಸಾಯನಿಕ ಕ್ರಿಯೆ ದೇಹದಲ್ಲಿ ಜರಗುತ್ತದೆ ಅದರಿಂದ ಮನುಜನಿಗೆ ಅಮೈನೋ ಆಸಿಡ್ಸ್, ನೈಟ್ರಿಕ್ ಆಕ್ಸೈಡ್, ಅಕ್ಟಿವೇಟೆಡ್ ಕಾರ್ಬನ್, ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್, ಮುಂತಾದ ರಾಸಾಯನಿಕ ಅಂಶಗಳು ಉಸಿರಾಟದಲ್ಲಿ ಹೇಗೆ ಉತ್ಪತ್ತಿಯಾಗಿ ನಮ್ಮ ನರನಾಡಿಗಳಲ್ಲಿ ಹರಿಯುವುದು ಎಂಬ ವೈಜ್ಞಾನಿಕ ಅಂಶವನ್ನು ವೇದಗಳಲ್ಲಿ ತಿಳಿಸಿದ್ದಾರೆ ಎಂದರೆ, ವಿಜ್ಞಾನ ಇನ್ನೂ ಬಾಲ್ಯಾವಸ್ಥೆಯಲ್ಲಿಯೇ ಇದೆ ಎಂದು ನಾವು ಬಾವಿಸಬೇಕಿರುತ್ತದೆ. ನಮ್ಮ ಪುರಾತನ ದೈನಂದಿನ ಸನಾತನ ಸಂಸ್ಕಾರವನ್ನೇ  ಗಮನಿಸಿ, ಇಜ್ಜಲು ಪುಡಿಯಲ್ಲಿ ಬೆಳಗ್ಗೆಯೇ ಹಲ್ಲು ಉಜ್ಜಲು ತಿಳಿಸಿದ್ದರು ಇದರಲ್ಲಿ ಸ್ವಲ್ಪ ಭಾಗ ಹೊಟ್ಟೆಯೂ ಸೇರುತ್ತಿತ್ತು, ಅದು ನಮಗೆ ಎಸ್ಟು ಉಪಕಾರಿ ಎಂದು ಸನಾತನ ಧರ್ಮದ ಆಚಾರವನ್ನು ಜಾರಿಗೆ ತಂದವರಿಗೆ ಗೊತ್ತಿತ್ತು, ಅದನ್ನು ತಪ್ಪಿಸಿದರು ಈಗ ಆಕ್ಟಿವೇಟೆಡ್ ಚಾರ್ಕೋಲ್ ಎಂದು ಮಾತ್ರೆ ಕೊಡುತ್ತಿದ್ದಾರೆ. ಕಾರ್ಬನ್ ಡೈಯಾಕ್ಸೈಡ್, ನೈಟ್ರಿಕ್ ಆಕ್ಸೈಡ್ ಮತ್ತು ಇತರೆ ವಾಯುವನ್ನು ಸುಷುಮ್ನಾ ನಾಡಿಗೆ ಕಳಿಸುವ ಕ್ರಿಯೆ ಅಂದೇ ಹೇಳಿದ್ದರು, ಈಗ ವಿಜ್ಞಾನಿಗಳು ಅದರ ಮಹತ್ವ ಸಾರುತ್ತಿದ್ದಾರೆ. ಇನ್ನೂ ವೇದಗಳಲ್ಲಿ ಸಾರಿರುವ ಗೋಪ್ಯತೆಗಳು ಹೊರಹಾಕುತ್ತಾ ಹೋದರೆ ಇಂದಿನ ವೈಜ್ಞಾನಿಕ ಜಗತ್ತು ಸನಾತನ ಗ್ರಂಥಗಳಿಗೆ ಶರಣಾಗುವುದರಲ್ಲಿ ಸಂದೇಹವೇ ಇಲ್ಲ.

 

 

 

 

 

 

 

 

 

 

 

 

 

 

 

 

 

 

 

 

 

 

 

ಅಧ್ಯಾಯ - 18

ಕೆಲವು ತಪ್ಪು ಕಲ್ಪನೆಗಳನ್ನು ಪರಿಹರಿಸುವತ್ತ ಜ್ಞಾನ

 

ಅತಿಯಾಸೆ ಮತ್ತು ಕ್ರೋಧಗಳನ್ನು ತ್ಯಜಿಸಬೇಕು

 

ಸರ್ವೋಪಾಯ್ಯೆಸ್ತು ಲೋಭಸ್ಯ ಕ್ರೋಧಸ್ಯ ಚ ವಿನಿಗ್ರಹಃ ॥

ಏತತ್ಪವಿತ್ರಂ ಜ್ಞಾನಿನಾಂ ತಥಾ ಚೈವಾತ್ಮಸಂಯಮಃ ।

ವರ್ಜ್ಯಾ ಸರ್ವಾತ್ಮನಾ ತೌ ಹಿ ಶ್ರೇಯೋಘಾತಾರ್ಥಮುದ್ಯ ತೌ ||

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 43 ಶ್ಲೋಕ 71 ಮತ್ತು 72

ಭಾವಾರ್ಥ:- ಎಲ್ಲಾ ಉಪಾಯಗಳಿಂದಲೂ ಲೋಭ (ಅತಿಯಾಸೆ, ದುರಾಸೆ, ಜಿಪುಣತನ, ಅತೀ ಆಕರೆಯಿಂದ ಕೂಡಿದ,), ಕ್ರೋಧಗಳನ್ನು (ಕೋಪಾಧಿಕವು, ಕೋಪವು, ಸಿಡುಕಿನ ಮಾತು, ವಿವೇಕತಪ್ಪುವುದು, ರೇಗುವ ಸ್ವಭಾವ, ಮನೋವಿಕಾರ, ಭಾವೋದ್ರೇಕ, ಕಾಮವಿಕಾರ,) ವಿಶೇಷವಾಗಿ ನಿಗ್ರಹಿಸುವುದು, ಅದರಂತೆಯೇ ಇಂದ್ರಿಯ ನಿಯಮವೂ ಸಹ ಜ್ಞಾನಿಗಳಿಗೆ ಪವಿತ್ರವಾದುದ್ದು. ಈ ಲೋಭ ಕ್ರೋಧಗಳು ಯಾವಾಗಲೂ ಶ್ರೇಯಸ್ಸನ್ನು ನಾಶಮಾಡಲು ಮುಂದಾಗುವವವು. ಆದಕಾರಣ ಅವುಗಳನ್ನು ಸರ್ವಪ್ರಕಾರದಿಂದಲೂ ತ್ಯಜಿಸಬೇಕು.

            ಹೆಚ್ಚುವರಿ ವಿವರಣೆ:- ಯಾವಾಗಲೂ ಸಂಪತ್ತನ್ನು (ದೇಹದಲ್ಲಿ ಉಂಟಾಗುವ ಉತ್ಕೃಷ್ಟ ಅಮೃತ) ಕ್ರೋಧದ ದೆಸೆಯಿಂದ ರಕ್ಷಿಸಬೇಕು ಎಂದರೆ ಕ್ರೋಧವು ಸಂಪತ್ತನ್ನು ಹಾಳುಮಾಡುವುದು. ಮಾತ್ಸರ್ಯದಿಂದ ತಪಸ್ಸನ್ನು ಕಾಪಾಡಬೇಕು. ಮಾನಾಪಮಾನಗಳಿಂದ ವಿದ್ಯೆಯನ್ನೂ, ಆಲಸ್ಯದಿಂದ ಆತ್ಮನನ್ನೂ ರಕ್ಷಿಸಬೇಕು. ಯಾವನು ಮಾಡುವ ಸಮಸ್ತ ಕರ್ಮಗಳು ಕಾಮನೆ (ಫಲಾಪೇಕ್ಷೆ) ಮತ್ತು ಸಂಕಲ್ಪ ಇವುಗಳನ್ನು ಬಿಟ್ಟಿರುತ್ತವೆಯೋ, ಯಾವುದನ್ನು ತ್ಯಜಿಸಿದರೆ ಸಕಲ ಹೋಮಗಳನ್ನೂ ಮಾಡಿದಂತಾಗುವುದೋ ಅಂತಹವನೇ ತ್ಯಾಗಿ ಮತ್ತು ಬುದ್ಧಿವಂತನು.  ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಅತಿಯಾಸೆ, ದುರಾಸೆ, ಜಿಪುಣತನ, ಅತೀ ಅಕ್ಕರೆಯಿಂದ ಕೂಡಿದ, ಕೋಪಾಧಿಕವು, ಕೋಪವು, ಸಿಡುಕಿನ ಮಾತು, ವಿವೇಕತಪ್ಪುವುದು, ರೇಗುವ ಸ್ವಭಾವ, ಮನೋವಿಕಾರ, ಭಾವೋದ್ರೇಕ, ಕಾಮವಿಕಾರ, ಆಲಸ್ಯ, ಪಲಾಪೇಕ್ಷೆ, ಸಂಕಲ್ಪ,  ಇವು ಜೀವನದ ಶತ್ರುಗಳು.

 

ಹಿಂಸೆಯನ್ನು, ಪರಿಗ್ರಹವನ್ನು ತೊರೆಯಬೇಕು

 

ಅಹಿಂಸ್ರಃ ಸರ್ವಭೂತಾನಾಂ ಮೈತ್ರಾಯಣಗತಶ್ಚರೇತ್‌ |

ಪರಿಗ್ರಹಾತ್ಪರಿತ್ಯಜ್ಯ ಭವೇದ್ಬುಧ್ಯಾ ಜಿತೇಂದ್ರಿಯಃ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 43 ಶ್ಲೋಕ 75

ಭಾವಾರ್ಥ:- ಸಕಲ ಪ್ರಾಣಿಗಳಿಗೂ ಹಿಂಸಕನಾಗದೆ ಮಿತ್ರಭಾವದಿಂದಲೇ ನಡೆಯಬೇಕು. ಪರಿಗ್ರಹವನ್ನು ಬಿಟ್ಟು ಬುದ್ಧಿ ಪೂರ್ವಕವಾಗಿ ಜಿತೇಂದ್ರಿಯನಾಗಬೇಕು.

            ವಿವರಣೆ:- ಸಂಸ್ಕೃತದಲ್ಲಿ ಪರಿಗ್ರಹ ಎಂದರೆ ಹಿಡಿಯುವುದು, ಗ್ರಹಿಸುವುದು, ತೆಗೆದುಕೊಳ್ಳುವುದು, ಸ್ವೀಕರಿಸುವುದು, ಪಡೆಯುವುದು, ಹೊಂದುವುದು, ಆಸ್ತಿ, ಸಂಪತ್ತು, ಐಶ್ವರ್ಯ, ಸಂಬಂಧ, ಭಾಂಧವ್ಯ, ಪರಿವಾರ, ಆಶ್ರಯ ಕೊಡುವುದು, ದಯೆ, ಅನುಗ್ರಹ, ರಕ್ಷಣೆಯನ್ನು ಪಡೆಯುವ ಜನ, ಪೋಷಣೆಯನ್ನು ಪಡೆಯುವ ಜನ, ಆಶ್ರಿತ ಜನ, ಗೌರವ, ಮನ್ನಣೆ, ರಾಜ್ಯಭಾರ, ಆಡಳಿತ, ಜಯಿಸುವುದು, ಗೆಲ್ಲುವುದು, ಮಮಕಾರ  ಇತ್ಯಾದಿ.  ಇಲ್ಲಿ ಪರಿಗ್ರಹ ಎಂದರೆ ಸಂಸಾರ, ಕುಟುಂಬ, ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗುವುದಲ್ಲ. ಎಲ್ಲವುದರ ಜೊತೆಗೆ ಇದ್ದೂ ಅದರ ಮೇಲಿನ ಅತೀವ ಮೋಹವನ್ನು ಬಿಟ್ಟುಬಿಡುವುದು. ಎಲ್ಲಾ ಬಾಹ್ಯ ಪರಿಕರಗಳನ್ನು ಬಿಟ್ಟು ಮಾನಸ ಪರಿಗ್ರಹದಿಂದ ಮಾಡತಕ್ಕ ಜ್ಞಾನಪ್ರಧಾನವಾದ ಯಜ್ಞವಿದು. ಆತ್ಮಸಂಯಮಯುಕ್ತನಾದ ಮುನಿಯಿಂದ ಯಾವಾಗಲೂ ಇಂದ್ರಿಯ ನಿಗ್ರಹ ಪೂರ್ವಕವಾಗಿ ಆಚರಿಸಲ್ಪಟ್ಟ ತಪಸ್ಸು ಈ ಲೋಕ ಪರಲೋಕಗಳಲ್ಲಿ ಭಯದುಃಖಗಳಿಲ್ಲದ ಸ್ಥಾನವನ್ನು ಸಂಪಾದಿಸಿ ಕೊಡುವುದು. ವಿಷಯ ಸಂಗವುಳ್ಳವರಲ್ಲಿ ಸಂಗಮಾಡದಿರುವ, ಸ್ವಾಧೀನವಾಗದೇ ಇರುವುದನ್ನು ಅಧೀನ ಮಾಡಿಕೊಳ್ಳಬೇಕೆಂಬ ಇಚ್ಛೆಯುಳ್ಳವನು ಇಂದ್ರಿಯಗಳಿಂದ ಗ್ರಹಿಸುವ ವಿಷಯವೆಲ್ಲವೂ ಅಸ್ವಷ್ಟವಾದ ಮಿತಿಯಿಲ್ಲದಿರುವಿಕೆಯ  ಸ್ಥಿತಿಯಾಗಿರುತ್ತದೆ. ಅಸ್ವಷ್ಟವಾದ, ಅಡಚಣೆಯಿಂದ ಕೂಡಿದ, ಅನುಮಾನದಿಂದ ಗ್ರಹಿಸುವುದು ಅತೀಂದ್ರಿಯವಾಗಿರುವುದು ಎಂದು ತಿಳಿಯಬೇಕು. ಪ್ರಾಣದಿಂದ ಮನಸ್ಸನ್ನು ಗ್ರಹಿಸಬೇಕು. ಪ್ರಾಣವನ್ನು ಬ್ರಹ್ಮನಲ್ಲಿಡಬೇಕು. ವೈರಾಗ್ಯದಿಂದಲೇ ಮೋಕ್ಷವು ಲಭಿಸುತ್ತದೆ. ಬೇರಾವುದನ್ನೂ ಚಿಂತಿಸಬಾರದು. ಪ್ರಾಣಿಗಳ ವಿಷಯದಲ್ಲಿ ಅತ್ಯಂತ ದಯೆಯು,  ಸತ್ಯ, ವ್ರತ, ತಪಸ್ಸು, ಶೌಚ ಇವುಗಳು ಜ್ಞಾನಿಗಳ ಲಕ್ಷಣವು.

 

ಸತ್ಯದಿಂದ ಕೂಡಿರಬೇಕು

ಸತ್ಯೇನ ಧಾರ್ಯತೇ ಲೋಕಃ ಸ್ವಃ ಸತ್ಯೇನೈವ ಗಚ್ಛತಿ |

ಅನೃತಂ ತಮಸೋ ರೂಪಂ ತಮಸಾ ನೀಯತೇ ಹ್ಯಧಃ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 43 ಶ್ಲೋಕ 82

ಭಾವಾರ್ಥ:- ಸತ್ಯದಿಂದಲೇ ಲೋಕವು ರಕ್ಷಿತವಾಗುತ್ತದೆ. ಸತ್ಯದಿಂದಲೇ ಜನರು ಸ್ವರ್ಗವನ್ನು ಪಡೆಯುತ್ತಾರೆ. ಅನೃತವು (ಸುಳ್ಳು, ವಂಚಿಸುವುದು, ಅಸತ್ಯವು, ಸತ್ಯಾಂಶವಿಲ್ಲದ್ದು,)  ತಮಸ್ಸಿನ ರೂಪವು. ತಮಸ್ಸಿನಿಂದ ಅಧಃ ಪತನವಾಗುವುದು (ಸಂಯಮ ನಾಶವಾಗುವುದು). 

            ವಿವರಣೆ :- ಅಜ್ಞಾನ ಮತ್ತು ಅಂಧಕಾರಗಳಿಂದ ಅನರಿಸಲ್ಪಟ್ಟಿರುವವರು ಪ್ರಕಾಶವನ್ನು ನೋಡಿ ತಿಳಿಯಲಾರರು. ಅಜ್ಞಾನ ಮತ್ತು ಕಗ್ಗತ್ತಲುಗಳಿಂದ ಆವರಿಸಲ್ಪಟ್ಟಿರುವ ನರಕವನ್ನು ತಮಸ್ಸೆನ್ನುವರು. ಲೋಕದಲ್ಲಿರುವ ಪ್ರಾಣಿಗಳು ಬ್ರಹ್ಮಜಗತ್ತುಗಳೆರಡನ್ನೂ ಹೊಂದುವರು. ಲೋಕದಲ್ಲಿನ ಪ್ರವೃತ್ತಿಯೂ ಸಹ ಇದೇ ರೀತಿಯಾಗಿ ಬ್ರಹ್ಮ ಜಗತ್ತುಗಳನ್ನು ಹೊಂದಲು ಅನುಕೂಲವಾಗುವಂತೆ ಎರಡು ವಿಧವಾಗುವುದು. ಧರ್ಮವು ಪ್ರಕಾಶ ಮತ್ತು ಸುಖಕರವು. ಅಧರ್ಮವು ತಮಸ್ಸು ಮತ್ತು ದುಃಖಕರವು. ಶಾರೀರಕ, ಮಾನಸಿಕ ದುಃಖಗಳು ಮತ್ತು ಕ್ಲೇಶಕರವಾದ ಸುಖ ಇವುಗಳಿಂದ ಮಿಶ್ರವಾದ ಲೋಕದಲ್ಲಿರುವ ವಸ್ತುವನ್ನು ನೋಡಿ ವಿವೇಚನ ಶೀಲರು ಮೋಹಿಸುವುದಿಲ್ಲ. ಅದರಲ್ಲಿಯೂ ವಿವೇಕಿಯಾದವನು ದುಃಖವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವನು.

 

ಕರ್ಮ ಎಂದರೆ ಏನು ? 

            ಕರ್ಮ ಎಂದರೆ ಕೆಲಸ, ಕಸುಬು, ಉದ್ಯೋಗ, ವೇದದಲ್ಲಿ ಕರ್ಮಕಾಂಡ ಜ್ಞಾನಕಾಂಡ ಎಂದು ಎರಡು ಭಾಗವುಳ್ಳದ್ದು, ಕರ್ಮಜ ಎಂದರೆ ಪುಣ್ಯ ಪ್ರಭಾವದಿಂದ ದೇವತ್ವವನ್ನು ಪಡೆದವನು, ಕರ್ಮಜೀವಿ ಎಂದರೆ ಜ್ಞಾನಹೀನವಾದ ಕರ್ಮಾಚರಣೆಯಿಂದ ಜೀವಿಸುವವನು. ಕರ್ಮಠ ಎಂದರೆ ಕೆಲಸದಲ್ಲಿ ನಿಪುಣನಾದವನು, ಕರ್ಮಠತನ ಎಂದರೆ ಧರ್ಮಾಚರಣೆಯಲ್ಲಿ ಕಟ್ಟುನಿಟ್ಟಾಗಿರುವವನು, ಕರ್ಮಾನುಷ್ಠಾನಕ್ಕೆ ಅವಕಾಶವಿರುವ ಸ್ಥಳವನ್ನು ಕರ್ಮ ಭೂಮಿ ಎನ್ನುವರು, ಪರಲೋಕ ಸಾಧನೆಯ ಮೂರು ಮಾರ್ಗದಲ್ಲಿ ಜ್ಞಾನಮಾರ್ಗ, ಭಕ್ತಿಮಾರ್ಗ, ಕರ್ಮಮಾರ್ಗ, ಫಲಾಪೇಕ್ಷೆಯಿಲ್ಲದೆ ಕರ್ಮವನ್ನು ಮಾಡುವುದಕ್ಕೆ ಕರ್ಮಯೋಗವೆನ್ನುವರು. ಕರ್ಮೇಂದ್ರಿಯ ಎಂದರೆ ಕೆಲಸ ಮಾಡುವ ಅಥವಾ ಕರ್ಮಕ್ಕೆ ಕಾರಣವಾಗುವ ಇಂದ್ರಿಯ - ಕೈ, ಕಾಲು, ನಾಲಿಗೆ, ಜನನೇಂದ್ರಿಯ ಹಾಗೂ ಆಸನದ್ವಾರ. ಅಕ್ಷರ ಅರ್ಥದಲ್ಲಿ ಕರ್ಮ ಎಂದರೆ ದೇಹವು ಮಾಂತ್ರಿಕ ಸೂತ್ರವನ್ನು ಪಡೆಯುತ್ತದೆ ಎಂದು ಇದೆ. ನಮ್ಮ ಕೆಲಸ ಕಾರ್ಯದಿಂದ ದೇಹಕ್ಕೆ ಮಾಂತ್ರಿಕ ಸೂತ್ರವನ್ನು ನೀಡುವುದೇ ಕರ್ಮ. ಈ ಮಾಂತ್ರಿಕ ಸೂತ್ರ ಒಳ್ಳೆಯದು ಉಂಟು ಮಾಡುವಂತದ್ದು ಇರಬಹುದು ಬೇನೆಯನ್ನು ನೀಡುವಂತದ್ದು ಇರಬಹುದು.

 

ಜ್ಞಾನ ಎಂದರೆ ಏನು ?

            ಜ್ಞಾನ ಎಂದರೆ ತಿಳುವಳಿಕೆ, ಅರಿವು, ಬುದ್ದಿಯ ಆಕಾರಕ್ಕೆ ಪರಿಣಾಮಕ್ಕೆ ಜ್ಞಾನ ಎನ್ನುವರು, ಮನದಲ್ಲಿ ಪ್ರತಿಫಲಿಸಿದ ಜೀವ ಚೈತನ್ಯವೇ ಜ್ಞಾನವೆನಿಸುವುದು, ಆತ್ಮವಿದ್ಯೆ, ಜ್ಞಾನಕಾಂಡ ಎಂದರೆ ವೇದಗಳಲ್ಲಿ ಬ್ರಹ್ಮ ಸ್ವರೂಪವನ್ನು ತಿಳಿಸತಕ್ಕ ಭಾಗ, ಮೆದುಳಿನಿಂದ ಶರೀರದ ಬೇರೆ ಬೇರೆ ಭಾಗಗಳಿಗೆ ಅಭಿಪ್ರಾಯಗಳನ್ನು ಒಯ್ಯುವ ಮತ್ತು ಶರೀರದ ಬೇರೆ ಬೇರೆ ಭಾಗಗಳಿಂದ ಮೆದುಳಿಗೆ ಸಂಪರ್ಕ ಕಲ್ಪಿಸುವ ನರಗಳಿಗೆ ಜ್ಞಾನತಂತು ಎನ್ನುವರು, ಇತಿಹಾಸದಲ್ಲಿ ಕರ್ಮಪಂಥ, ಜ್ಞಾನಪಂಥ, ಶಕ್ತಿಪಂಥ, ಭಕ್ತಿಪಂಥ ಎಂಬ ನಾಲ್ಕು ಪಂಥಗಳ ವಿಕಾಸವನ್ನು ಕಾಣಬಹುದು, ಮೋಕ್ಷ ಮಾರ್ಗಕ್ಕೆ ನಾಲ್ಕು ಭೂಮಿಕೆಗಳು ಎನ್ನುತ್ತಾರೆ, ವಾಗ್ಭೂಮಿಕೆ, ಮನೋಭೂಮಿಕೆ, ಜ್ಞಾನಭೂಮಿಕೆ, ಶಾಂತಾತ್ಮಭೂಮಿಕೆ, ಪಂಚಕೋಶಗಳಲ್ಲಿ ಜ್ಞಾನಮಯ ಕೋಶವನ್ನು ಆತ್ಮ ಎನ್ನುವರು, ಜ್ಞಾನಾರ್ಜನೆಗಾಗಿ ಮಾಡುವ ಪವಿತ್ರವಾದ ಅಭ್ಯಾಸವೇ ಜ್ಞಾನಯಜ್ಞ ಎನ್ನುವರು, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ (ವಾಸನೆ) ಜ್ಞಾನವನ್ನುಂಟು ಮಾಡಿ ಕೊಡುವ ಇಂದ್ರಿಯವನ್ನು ಜ್ಞಾನೇಂದ್ರಿಯ ಎನ್ನುವರು. ಗ್ರಹಣ ಶಕ್ತಿಯುಳ್ಳ ಇಂದ್ರಿಯಗಳು, (ತಿಳಿದುಕೊಳ್ಳುವ ಶಕ್ತಿಯುಳ್ಳ ಇಂದ್ರಿಯಗಳು) ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು - ಇವು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಾ ಅಂಗಗಳು. ಅಕ್ಷರ ಅರ್ಥದಲ್ಲಿ ಜ್ಞಾನ ಎಂದರೆ, “ಅವಿಶ್ರಾಂತವಾಗಿ ಕಂಡುಹಿಡಿಯುವುದು/ ಅವಿಶ್ರಾಂತವಾಗಿ ಕಲಿಯುವುದು”.

 

ಪ್ರಾಣಿಗಳಲ್ಲಿ ಯಾವಾಗಲೂ ಸತ್ವ, ರಜಸ್ಸು ಮತ್ತು ತಮಸ್ಸುಗಳು ಗುಣಗಳು ಆಶ್ರಯಿಸಿರುತ್ತವೆ

 

ಸತ್ವಂ ರಜಸ್ತಮುಶ್ಚೈವ ಪ್ರಾಣಿನಾಂ ಸಂಶ್ರಿತಾಃ ಸದಾ ।

ತ್ರಿವಿಧಾ ವೇದನಾಶ್ಚೈವ ಸರ್ವಸತ್ವೇಷು ದೃಶ್ಯತೇ ||    ೪೯

ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ಮಾನದ |

ಸುಖಸ್ಪರ್ಶಃ ಸತ್ವಗುಣೋ ದುಃಖಸ್ಪರ್ಶೊ ರಜೋಗುಣಃ ||  ೫೦

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 44 ಶ್ಲೋಕ 49 - 50

ಭಾವಾರ್ಥ:- ಪ್ರಾಣಿಗಳಲ್ಲಿ ಯಾವಾಗಲೂ ಸತ್ವ, ರಜಸ್ಸು ಮತ್ತು ತಮಸ್ಸುಗಳು ಆಶ್ರಯಿಸಿರುತ್ತವೆ. ಸಕಲ ಪ್ರಾಣಿಗಳಲ್ಲಿಯೂ ಸಾತ್ವಿಕ, ರಾಜಸ, ತಾಮಸ ಎಂದು ಮೂರು ವಿಧವಾದ ಅನುಭವಗಳೂ ಕಂಡು ಬರುತ್ತವೆ. ಸತ್ವ ಗುಣದಿಂದ ಸುಖ ಸಂಬಂಧವೂ, ರಜೋಗುಣದಿಂದ ದುಃಖ ಸಂಬಂಧವೂ ಆಗುವುದು.

            ಮುಂದುವರಿದ ವಿವರಣೆ:- ಜ್ಞಾನೇಂದ್ರಿಯಗಳು ಐದು. (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ.), ಕರ್ಮೇಂದ್ರಿಗಳು ಐದು, (ಕೈ, ಕಾಲು, ಮಾತು, ಪಾಯು, ಉಪಸ್ಥಾ)  ಇಂದ್ರಿಯಗಳು ಜೀವಿಗಳಿಗೆ ಹೊರಗಿನ ಪ್ರಪಂಚದ ಬಗ್ಗೆ ಮಾಹಿತಿಯನ್ನು ನೀಡುವ ಅಂಗಗಳು. ನಾವು ಯಾವುದನ್ನು ನಮ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತೇವೋ ಅದು  ಶಬ್ದ, ಸ್ಪರ್ಶ, ರೂಪ, ರಸ, ಗಂಧ (ವಾಸನೆ). ಇಂದ್ರಿಯಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ತ್ರೈಗುಣ್ಯಗಳಿಂದ ಕರ್ಮ ನಡೆಯುತ್ತಿರುತ್ತದೆ. ಸತ್ವರಜೋಗುಣಗಳು ತಮೋಗುಣ ಮಿಶ್ರಿತವಾಗಿ ಪ್ರವೃತ್ತಿಯನ್ನು ಹುಟ್ಟಿಸುವುವು- ಆತ್ಮನಿಗೆ ಶಾರೀರಕ ಅಥವಾ ಮಾನಸಿಕವಾಗಿ ಹರ್ಷವುಂಟಾದರೆ ಅದು ಸಾತ್ವಿಕ ಭಾವದಿಂದ ಉಂಟಾಯಿತೆಂದೂ,  ಅಪ್ರೀತಿಕರವಾಗಿ ದುಃಖವುಂಟಾದಾಗ ಅದು ರಜೋಗುಣ ಸಂಬಂಧದಿಂದ ಬಂದುದೆಂದೂ ತಿಳಿ.  ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ರಾಗ-ದ್ವೇಷ; ಕಾಮ-ಕ್ರೋಧ ತುಂಬಿರುತ್ತದೆ. ಆದರೆ ನಾವು ಎಂದೂ ಈ ಬೇಕು ಬೇಡಗಳಿಗೆ, ರಾಗ ದ್ವೇಷಗಳಿಗೆ ವಶವಾಗಬಾರದು. ಪೃಥಿವೀ, ವಾಯು, ಆಕಾಶ, ಜಲ, ಐದನೆಯದಾದ ತೇಜಸ್ಸು ಇವುಗಳು ಮಹಾಭೂತಗಳು. ಇವುಗಳಿಗೆಲ್ಲಾ ಉತ್ಪತ್ತಿನಾಶಗಳಿವೆ. ಇವು ಯಾವುದರಿಂದ ಉತ್ಸನ್ನವಾಗುವುವೋ ಅಲ್ಲಿಯೇ ಲಯವನ್ನು ಹೊಂದುತ್ತವೆ. ಸಮುದ್ರದಲ್ಲಿ ಹುಟ್ಟಿದ ಅಲೆಗಳು ಹೇಗೆ ಅಲ್ಲಿಯೇ ಲೀನವಾಗುತ್ತವೆಯೋ, ಕೂರ್ಮವು (ಆಮೆ) ತನ್ನ ಅವಯವಗಳನ್ನು ವಿಸ್ತರಿಸಿ ತಾನೇ ಹೇಗೆ ಸೆಳೆದು ಕೊಳ್ಳುತ್ತದೆಯೋ, ಅದರಂತೆ ಭೂತಸೃಷ್ಠಿಕರ್ತನಾದ ಆತ್ಮನು ಭೂತಗಳಿಂದ ಭೂತಗಳನ್ನು ಸೃಷ್ಟಿಸಿ ಉತ್ಪನ್ನವಾದ ಭೂತಗಳನ್ನು ಪುನಃ ಅಲ್ಲಿಯೇ ಲೀನವಾಗುವಂತೆ ಮಾಡುವನು. ಭೂತಕರ್ತನು ಸಕಲ ಪ್ರಾಣಿಗಳಲ್ಲಿಯೂ ಪಂಚಮಹಾಭೂತಗಳನ್ನೇ ಸಂಯೋಜನೆ ಮಾಡಿದನು. ಅವನನ್ನು ಜೀವನು ನೋಡುವುದಿಲ್ಲ. ಶಬ್ದ, ಶ್ರೋತ್ರ (ಕಿವಿ) ಮತ್ತು ಇಂದ್ರಿಯ ಈ ಮೂರು ಆಕಾಶದಿಂದ ಹುಟ್ಟಿ ಆಕಾಶ ಸಂಬಂಧಿಗಳಾಗಿವೆ. ಸ್ಪರ್ಶ, ಚೇಷ್ಟೆ, ತ್ವಕ್ಕು ಈ ಮೂರು ವಾಯುಸಂಬಂಧಿಗಳೆಂದೂ, ರೂಪ, ಚಕ್ಷುರಿಂದ್ರಿಯ್ಯ ಪಾಕಗಳೆಂಬ ಮೂರು ತೇಜಸ್ಸಂಬಂಧಿಗಳೆಂದೂ ಉಕ್ತವಾಗಿದೆ. ರಸ, ಕ್ಲೇದ, (ಒದ್ದೆಯಾಗಿಸುವಿಕೆ, ತೇವವಾಗಿಸುವಿಕೆ) ನಾಲಗೆ ಈ ಮೂರು ಜಲಸಂಬಂಧಿಗಳು. ಗಂಧ, ಫ್ರಾಣೇಂದ್ರಿಯ, ಶರೀರ ಇವುಗಳು ಪಾರ್ಥಿವಗಳು. ಮಹಾಭೂತಗಳು ಐದು, ಆರನೆಯದು ಮನಸ್ಸು ಎಂದು ಉಕ್ತವಾಗಿದೆ. ಆತ್ಮನಿಗೆ ಫ್ರಾಣಾದಿ ಪಂಚಬಾಹ್ಯೇಂದ್ರಿ ಯಗಳು ಮತ್ತು ಮನಸ್ಸು ಜ್ಞಾನಸಾಧನಗಳು. ಏಳನೆಯದು ಬುದ್ಧಿಯು, ಕ್ಷೇತ್ರಜ್ಞನು (ಅಂತರಾತ್ಮನು) ಎಂಟನೆಯವನು ಎಂದು ಹೇಳುತ್ತಾರೆ. ಶಬ್ದವನ್ನು ಕೇಳುವುದಕ್ಕಾಗಿ ಶ್ರೋತ್ರೇಂದ್ರಿಯವೂ, ಸ್ಪರ್ಶವನ್ನು ತಿಳಿಯುವುದಕ್ಕೋಸ್ಟರ ತ್ವಗಿಂದ್ರಿಯವೂ ರಸವನ್ನು ಗ್ರಹಿಸಲು ರಸನೇಂದ್ರಿಯವೂ, ಗಂಧಗ್ರಹಣಾರ್ಥವಾಗಿ ಘ್ರಾಣೇಂದ್ರಿಯವೂ ನೋಡುವುದಕ್ಕೋಸ್ಕರ ಚಕ್ಷುರಿಂದ್ರಿಯವೂ ನಿರ್ಮಿತವಾಗಿವೆ. ಮನಸ್ಸು ವಿಚಾರ ಮಾಡಲು ಸಾಧನವು.[17]

            ಗುಣಗಳು:-  ಗುಣಗಳಲ್ಲಿ ಮೂರು ವಿಧ, ಒಂದು ಸಾತ್ವಿಕ ಗುಣ, ರಜಸ್ವ ಗುಣ, ಮೂರನೆಯದು ತಮಸ್ಸು ಗುಣ. ಸಾತ್ವಿಕ ಅಥವಾ ಸತ್ವ ಗುಣ ಎಂದರೆ ನಿಜವಾದ ಸಾರ, ಸ್ವಭಾವ, ಮನಸ್ಸಿನ ಸ್ವಭಾವ, ಪಾತ್ರ, ಆಧ್ಯಾತ್ಮಿಕ ಸಾರ, ಆತ್ಮ, ಚೇತನ, ಮನಸ್ಸು, ಪ್ರಾಣ, ಉಸಿರು, ಸ್ಪೂರ್ತಿ, ಜೀವನ, ಪ್ರಜ್ಞೆ, ನಡತೆಯ ಶಕ್ತಿ, ಶಕ್ತಿ, ದೃಡತೆ, ನಿರ್ಣಯ, ಧೈರ್ಯ, ಸ್ವಯಂ ಆಜ್ಞೆ, ಉತ್ತಮ ಪ್ರಜ್ಞೆ, ಬುದ್ಧಿವಂತಿಕೆ, ಘನತೆ, ಶುದ್ಧತೆ ಅಥವಾ ಒಳ್ಳೆಯತನದ ಗುಣ, ಒಬ್ಬ ವ್ಯಕ್ತಿ ನಿಜವಾದ-ಪ್ರಾಮಾಣಿಕ-ಬುದ್ಧಿವಂತ ಇತ್ಯಾದಿ. ಸಂತೋಷ, ಸ್ನೇಹ, ಅನಂದ, ಸುಖ, ಮನಃಶಾಂತಿ ಇವುಗಳು ಹೇಗಿದ್ದರೂ ಅವು ಸಾತ್ವಿಕಗುಣಗಳಾಗುವುವು.

            ರಾಜಸ್ವ, ರಜಸ್ಸು ಗುಣ ಎಂದರೆ, ಆವಿ, ಮಂಜು, ಮೋಡಗಳು, ಅಂಧಕಾರ, ಮಂಕು, ಕತ್ತಲೆ, ಅಶುದ್ಧತೆ, ಕೊಳಕು, ಧೂಳು, ಯಾವುದೇ ಸಣ್ಣ ಕಣ, ಮನೋವಿಕಾರ, ಭಾವೋದ್ರೇಕ, ಕಾಮವಿಕಾರ, ಮನಸ್ಸಿನ ದುಗುಡ, ಮನಸ್ಸಿನ ಉದ್ವೇಗ, ವಾತ್ಸಲ್ಯ, ಅಸಹನೆ, ಉಗ್ರತೆ, ಶಕ್ತಿಯುತ ವಿರೋಧ ಇತ್ಯಾದಿ. ಅಸಂತೋಷ, ಪಶ್ಚಾತಾಪ, ದುಃಖ, ಲೋಭ, ಮತ್ತು ಕ್ಷಮೆ ಇವುಗಳು ರಜೋಗುಣದ ಚಿಹ್ನೆಗಳು. ಅವು ಮುನುಷ್ಯರಿಂದ ದುಷ್ಟವಾಗುವುವು.

            ತಮಸ್ಸು, ತಾಮಸ ಗುಣ ಎಂದರೆ ಮಾನಸಿಕ ಕತ್ತಲೆ, ಅಜ್ಞಾನ, ಭ್ರಮೆ, ದೋಷ, ಭಾರ,  ಭ್ರಮೆ, ಕಾಮ, ಕೋಪ, ಅಹಂಕಾರ, ದುಃಖ, ಮಂದತೆ,  ಪಾಪ, ಭಾವನಾತ್ಮಕ ಪ್ರತಿಕ್ರಿಯೆಗಳ ಅನುಪಸ್ಥಿತಿ. ಭಾವನಾತ್ಮಕತೆ, ನಿರ್ಭಯತೆ, ಕಫ, ಉದಾಸೀನತೆ. ನಿರಾಸಕ್ತಿ, ಭಾವನೆ ಅಥವಾ ಉತ್ಸಾಹದ ಕೊರತೆ. ಅವ್ಯಕ್ತ ವಿಷಯಕವಾಗಿ ಮೋಹಪಡಿಸುವ, ಊಹಿಸಲು ಅಥವಾ ತಿಳಿಯಲು ಅಶಕ್ಯವಾದುದನ್ನು ತಮೋಗುಣ ಕಾರ್ಯವೆಂದು ನಿಶ್ಚಯಿಸಚೇಕು. ಅವಮಾನ, ಮೋಹ, ಚಿತ್ತವಿಭ್ರಮೆ,  ಸ್ವಪ್ನ, ಆಲಸ್ಯ ಎಂಬುದಾಗಿ ತಾಮಸ ಗುಣಗಳು ನಾನಾ ವಿಧವಾಗಿದೆ.

            ಬುದ್ಧಿಯು ಮನಸ್ಸನ್ನು ಸಂಬಂಧಿಸುತ್ತದೆ. ಯಾವಾಗಲೂ ಗುಣಗಳನ್ನು ಸಂಬಂಧಿಸುವುದಿಲ್ಲ. ಪುರುಷನು ಆ ಗುಣಗಳ ರಶ್ಮಿಯನ್ನು ಮನಸಿನೊಡನೆ ಸಂಯೋಜನೆಮಾಡಿದಾಗ ಉರಿಯುತ್ತಿರುವ ದೀಪವು ಘಟವನ್ನು ಪ್ರಕಾಶಿಸುವಂತೆ ಇವನಿಗೆ ಆತ್ಮನು ತಿಳಿಯುವನು. 

 

ಧರ್ಮವನ್ನು ಬೋಧಿಸುತ್ತಾ ಮನಸ್ಸಿನಲ್ಲಿ ಪಾಪವು ಮಾಡಬಾರದು

ವಾಚಾ ಧರ್ಮಾನ್ಪ್ರವದತಿ ಮನಸಾ ಪಾಪಮಿಚ್ಛತಿ |

ಜಾನೀಯಾತ್ತಂ ಮುನಿಶ್ರೇಷ್ಠ ಮಹಾಪಾತಕಿನಾಂ ವರಂ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 107

ಭಾವಾರ್ಥ:- ಮಾತಿನಲ್ಲಿ ಧರ್ಮವನ್ನು ಹೇಳುತ್ತಾ ಒಳಗೆ ಮನಸ್ಸಿನಲ್ಲಿ ಪಾಪಕೃತ್ಯವನ್ನು ಮಾಡಲು ಬಯಸುವವನು ಮಹಾಪಾಪಿಗಳಲ್ಲಿ ಅಗ್ರಗಣ್ಯನೆಂದು ತಿಳಿಯಬೇಕು.

 

ಅಪಾತ್ರರಿಗೆ ದಾನ ನೀಡಬಾರದು

ಸದ್ಭ್ಯೋ ಯದ್ದೀಯತೇ ಕಿಂಚಿತ್ತತ್ಪರತ್ರೋಪತಿಷ್ಠತೇ ।

ಅಸದ್ಭ್ಯೋ ದೀಯತೇ ಯತ್ತು ತದ್ದಾನಮಿಹಭುಜ್ಯತೇ ।

ಯಾದೃಶಂ ದೀಯತೇ ದಾನಂ ತಾದೃಶಂ ಫಲಮಶ್ನುತೇ ||

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 42 ಶ್ಲೋಕ ೧೦೧

ಭಾವಾರ್ಥ:- ಸತ್ಪಾತ್ರದಲ್ಲಿ ಕೊಟ್ಟ ಅಲ್ಪದಾನವೂ ಅಪಾರ ಲೌಕಿಕ ಫಲವನ್ನು ಕೊಡುತ್ತದೆ. ಅಪಾತ್ರರಿಗೆ ಕೊಟ್ಟ ದಾನವು ಈ ಲೋಕದಲ್ಲಿಯೇ ಉಪ ಬೋಗಸಾಧನವು. ಎಂತಹ ದಾನಮಾಡುವನೋ ಅಂತಹ ಫಲವನ್ನೇ ಅನುಭವಿಸುವನು.

ಶೌಚಹೀನೇ ವ್ರತಭ್ರಷ್ಟೇ ವಿಪ್ರೇ ವೇದವಿನರ್ಜಿತೇ ।

ದೀಯಮಾನಂ ರುದತ್ಯನ್ನಂ ಕಿಂ ಮಯಾ ದುಷ್ಕೃತಂ ಕೃತಂ ॥  -

ಜಪೋಪಜೀವಿನೇ ದತ್ತಂ ಯದಾತ್ಮಾನಂ ಪ್ರಪಶ್ಯತಿ ।

ನೃತ್ಯತಿಸ್ಮ ತದಾ ರಾಜನ್‌ ಕರಾವುದ್ಧೃತ್ಯ ಭಾರತ ॥

ಭವಿಷ್ಯಮಹಾಪುರಾಣ , ಬ್ರಾಹ್ಮಪರ್ವ ಭಾಗ-1 - ಅಧ್ಯಾಯ - 4 ರಲ್ಲಿನ 112, 113 ನೇ ಶ್ಲೋಕ

ಭಾವಾರ್ಥ:- ಮಡಿ, ಮೈಲಿಗೆ ಇಲ್ಲದವನು, ವ್ರತ ಭ್ರಷ್ಟನಾದವನು, ವೇದಾಭ್ಯಾಸ ವಿಲ್ಲದವನು, ಇಂತಹ ಬ್ರಾಹ್ಮಣನಿಗೆ (ವಿದ್ಯೆ ಇಲ್ಲದ ಬ್ರಾಹ್ಮಣನು ಎಂದರೆ ವಿದ್ಯಾವಂತನ ಸೋಗಿನಲ್ಲಿರುವ ಅವಿಧ್ಯಾವಂತನು)    ಕೊಟ್ಟ ಅನ್ನವು “ನಾನು ಏನು ಪಾಪಮಾಡಿದ್ದೆನೋ ಎಂದು ವ್ಯಸನಪಡುತ್ತದೆ. ಜಪ ಮಾಡುವವನಿಗೆ ಕೊಟ್ಟ ಅನ್ನವು ತನ್ನನ್ನು ನೋಡಿಕೊಂಡಾಗ ಸಂತೋಷದಿಂದ ಕೈಗಳನ್ನು ಎತ್ತಿಕೊಂಡು ಕುಣಿಯುವುದು.

            ವಿವರಣೆ:- ದಾನದಲ್ಲಿ ಅಜ್ಜನಿಗೆ ಮಾಡಿದ ದಾನ ನಿಷ್ಪಲವು. ವಿದ್ಯಾಸಂಪನ್ನನೂ, ತಪಸ್ ಸಂಪನ್ನನೂ ಆದ ಜ್ಞಾನಿಯ ಮನೆಗೆ ಬರಲು ಔಷಧಿಗಳೆಲ್ಲವೂ ತಮಗೆ ಉತ್ತಮ ಗತಿ ಪ್ರಾಪ್ತಿಯಾಗುವುದೆಂದು ವಿನೋದದಿಂದ ಕುಣಿದಾಡಿಕೊಳ್ಳುತ್ತವೆ. ವ್ರತ ಶೂನ್ಯರೂ, ಮಂತ್ರ ಶೂನ್ಯರೂ, ಜಪಶೂನ್ಯರೂ ಆದವರಿಗೆ ದಾನವನ್ನು ಕೊಡಬಾರದು. ಒಂದು ಹಗುರವಾದ ಬೆಂಡು ಭಾರವಾದ ಕಲ್ಲನ್ನು ಧರಿಸುವುದು. ಆದರೆ ಒಂದುಕಲ್ಲು ಮತ್ತೊಂದು "ಕಲ್ಲನ್ನು ದಾಟಿಸಲಾರದು ಹಾಗೆಯೇ ತಾವೇ ಉದ್ದಾರವಾಗದ ಅವರು ದಾನವನ್ನು ಪ್ರತಿಗ್ರಹಿಸಿದರೂ ಫಲ ಕೊಡಲಾರದು. ಅನ್ನದಾನ ಮಾಡುವವನಿಗೆ ಸಕಲ ದಾನಗಳ ಫಲವೂ ಬರುವುದರಿಂದ ಅನ್ನದಾನ ಮಾಡುವವನು ಪ್ರಾಣದಾನಿಯು, ಮುಖ್ಯವಾದ ಪ್ರಾಣವನ್ನೇ ದಾನಮಾಡಿದವನು ಸಕಲವನ್ನೂ ದಾನಮಾಡಿದವನೆಂದು ಉಕ್ತವಾಗಿದೆ. ಸಕಲ ದಾನಗಳಲ್ಲಿಯೂ ವಿದ್ಯಾದಾನವು ಶ್ರೇಷ್ಠ. ಸತ್ಯ, ದಾನ, ಅದ್ರೋಹ, ಮೃದುತ್ವ, ದಯೆ, ವಿಷಯ ಜುಗುಪ್ಸೆ ಮತ್ತು ತಪಸ್ಸು ಇವುಗಳು ಯಾರಲ್ಲಿ ಉಪಲಬ್ಧವಾಗುವುವೋ ಅವನು ಜ್ಞಾನಿ ಎಂದು ವಿಹಿತವಾಗಿದೆ. ಸತ್ಪಾತ್ರದಲ್ಲಿ ದಾನ ಕೊಡದೆ ಲೋಭದಿಂದ ಕೂಡಿಟ್ಟ ಹಣವು ನಿಷ್ಫಲ. ಕೃತಯುಗದಲ್ಲಿ ತಪಸ್ಸು, ತ್ರೇತಾಯುಗದಲ್ಲಿ ಧ್ಯಾನವು, ದ್ವಾಪರಯುಗದಲ್ಲಿ ಯುಜ್ಞವು, ಕಲಿಯುಗದಲ್ಲಿ ದಾನವು ಪ್ರಶಸ್ತವೆಂದು ಹೇಳಿರುತ್ತಾರೆ. [18]

 

ಜ್ಞಾನಿಗಳು ಒಳ್ಳೆಯದನ್ನು ಉಪದೇಶ ಮಾಡಬೇಕು

ರವಿರ್ಹಿ ರಶ್ಮಿಜಾಲೇನ ದಿವಾ ಹಂತಿ ಬಹಿಸ್ತಮಃ ।

ಸಂತಃ ಸೂಕ್ತಿಮರೀಚ್ಯೋಘೈಶ್ಚಾಂತರ್ಧ್ವಾಂತಂ ಹಿ ಸರ್ವದಾ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 4 ಶ್ಲೋಕ 37

ಭಾವಾರ್ಥ:- ಸೂರ್ಯನು ತನ್ನ ಕಿರಣಸಮೂಹದಿಂದ ಹಗಲುಹೊತ್ತಿನಲ್ಲಿ ಬಾಹ್ಯಾಂಧಕಾರವನ್ನು ನಾಶಪಡಿಸುತ್ತಾನೆ. ಸಜ್ಜನರಾದರೋ ಹರಿಕಥಾ ರೂಪವಾದ ಸೂಕ್ತಿಗಳೆಂಬ ಕಿರಣಗಳ ಸಮೂಹಗಳಿಂದ ಯಾವಾಗಲೂ ಮಾನಸಿಕವಾದ ಅಜ್ಞಾನವೆಂಬ ಅಂಧಕಾರವನ್ನು ಪರಿಹರಿಸುತ್ತಾರೆ ಎಂದರೆ ಸದುಪದೇಶದಿಂದ ಭಗವನ್ಮಾಹಾತ್ಮ್ಯೆಯನ್ನು ತಿಳಿಸಿ ಅಜ್ಞಾನವನ್ನು ಹೋಗಲಾಡಿಸಿ ಮುಕ್ತಿಸೋಪಾನವಾದ ಜ್ಞಾನವನ್ನು ದಾನ ಮಾಡುತ್ತಾರೆಂದು ತಾತ್ಪರ್ಯ.

 

ಪವಿತ್ರೋತ್ತಮರಾಗಿ ಬದುಕು ಸಾಗಿಸಬೇಕು

ಕರ್ಮಣಾ ಮನಸಾ ವಾಚಾ ಪರಪೀಡಾಂ ನ ಕುರ್ವತೇ ।

ಅಪರಿಗ್ರಹಶೀಲಾಶ್ಚ ತೇ ವೈ ಭಾಗವತೋತ್ತಮಾಃ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 5 ಶ್ಲೋಕ 50

ಭಾವಾರ್ಥ:- ತಾವು ಮಾಡುವ ಕೆಲಸದಿಂದ, ಆಡುವಮಾತಿನಿಂದ, ಮನಸ್ಸಿನ ಸಂಕಲ್ಪದಿಂದಲಾದರೂ ಇತರರಿಗೆ ಬಾಧಕವನ್ನು ಮಾಡದಿರುವವರು ಮತ್ತು ಅಯೋಗ್ಯರಿಂದ ದಾನವನ್ನು ತೆಗೆದುಕೊಳ್ಳದಿರುವವರು ಭಾಗವತ ಶ್ರೇಷ್ಠರು (ಪವಿತ್ರೋತ್ತಮರು).

            ಹೆಚ್ಚುವರಿ ವಿವರಣೆ :- ಯಾರಿಗೆ ಸಜ್ಜನರ ಕಥೆಯನ್ನು ಶ್ರವಣ ಮಾಡುವುದರಲ್ಲಿ ಸಾತ್ವಿಕವಾದ ಬುದ್ಧಿಯಿರುತ್ತದೆಯೋ, ಯಾವ ಉತ್ತಮ ಪುರುಷರು ತಾಯಿಯನ್ನು ಗಂಗೆಗೆ ಸಮಾನಳೆಂದೂ ತಂದೆಯನ್ನು ವಿಶ್ವೇಶ್ವರನಿಗೆ ಸಮನೆಂದೂ, ತಿಳಿದು ಅವರ ಸೇವೆಯನ್ನು ಮಾಡುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ಯಾರು ದೇವರಪೂಜೆಯಲ್ಲಿನಿರತರೋ, ಯಾರು ದೇವರಪೂಜೆಗೆ ಅನುಕೂಲವನ್ನು ಮಾಡುತ್ತಾರೆಯೋ, ಮತ್ತು ಪೂಜೆಯನ್ನು ನೋಡಿ ಸಂತೋಷಿಸುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ಯಾರು ಇತರರನ್ನು ದೂಷಿಸದೇ ವ್ರತಾನುಷ್ಠಾನಪರರ ಮತ್ತು ಸನ್ಯಾಸಿಗಳ ಸೇವೆಯಲ್ಲಿ ನಿರತರಾಗಿರುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ಯಾವ ಉತ್ತಮಪುರುಷರು ಎಲ್ಲರಿಗೂ ಹಿತವಚನವನ್ನೇ ನುಡಿಯುತ್ತಾರೆಯೋ, ಯಾರು ಪರಕೀಯರಲ್ಲಿ ಗುಣಾಂಶವನ್ನೇ ಗ್ರಹಿಸುತ್ತಾರೆಯೋ ಅಂತಹವರು ಭಾಗವತ ಶ್ರೇಷ್ಠರು. ಯಾವ ಉತ್ತಮ ಪುರುಷರು ಸಕಲ ಪ್ರಾಣಿಗಳನ್ನೂ ತನ್ನಂತೆಯೇ ನೋಡುತ್ತಾರೆಯೋ, ಶತ್ರುಮಿತ್ರರೆಂಬ ಭೇದವಿಲ್ಲದೆ ಎಲ್ಲರನ್ನೂ ಸಮವಾಗಿ ಭಾವಿಸುತ್ತಾರೆಯೋ ಅಂತಹವರು ಭಾಗವತ ಶ್ರೇಷ್ಠರು. ಯಾರು ಧರ್ಮಶಾಸ್ತ್ರವನ್ನು ಪಾಠಹೇಳುವವರೋ ನಿಜವನ್ನು ಹೇಳುವುದರಲ್ಲಿ ಆಸಕ್ತರೋ, ಮತ್ತು ಸಾಧುಗಳ ಸೇವೆಯನ್ನು ಮಾಡುವರೋ ಅಂತಹವರು ಭಾಗವತ ಶ್ರೇಷ್ಠರು. ಪುರಾಣಗಳನ್ನು ಹೇಳುವವರು, ಕೇಳುವವರು ಮತ್ತು ಪುರಾಣ ಹೇಳುವವರಲ್ಲಿ ಭಕ್ತರೂ ಸಹ ಭಾಗವತ ಶ್ರೇಷ್ಠರು. ಯಾವ ಮನುಷ್ಯರು ಗೋವು ಮತ್ತು ಬ್ರಾಹ್ಮಣರ ಸೇವೆಯನ್ನು ಮಾಡುತ್ತಾರೆಯೋ, ಯಾವಾಗಲೂ ತೀರ್ಥ ಯಾತ್ರೆಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆಯೋ ಅಂತಹವರು ಭಾಗವತ ಶ್ರೇಷ್ಠರು. ಯಾವ ಮನುಷ್ಯರು ಪರರ ಶ್ರೇಯಸ್ಸನ್ನು ನೋಡಿ ಸಂತೋಷ ಪಡುತ್ತಾರೆಯೋ, ಯಾರು ಭಗವನ್ನಾಮಸ್ಮರಣೆಯಲ್ಲಿ ನಿರತರೋ ಅವರು ಭಾಗವತ ಶ್ರೇಷ್ಠರು. ಗಿಡಗಳನ್ನು ಹಾಕಿಸಿ ತೋಟಗಳನ್ನು ನಿರ್ಮಾಣ ಮಾಡುವುದರಲ್ಲಿ ಆಸಕ್ತರು, ಕೆರೆಗಳನ್ನು ಕಾಪಾಡುವವರು ಮತ್ತು ಸರೋವರ, ಬಾವಿಗಳನ್ನು ನಿರ್ಮಿಸುವವರೂ ಸಹ ಭಾಗವತ ಶ್ರೇಷ್ಠರು. ಯಾರು ಕೆರೆಗಳನ್ನು ಕಟ್ಟಿಸುತ್ತಾರೆಯೋ, ದೇವಾಲಯಗಳನ್ನು ನಿರ್ಮಾಣ ಮಾಡುತ್ತಾರೆಯೋ, ಗಾಯತ್ರೀ ಮಂತ್ರ ಜಪಾದಿಗಳಲ್ಲಿ ನಿರತರೋ ಅವರು ಭಾಗವತ ಶ್ರೇಷ್ಠರು. ಯಾರು ಹರಿನಾಮಗಳನ್ನು ಕೇಳಿ ಅತ್ಯಂತವಾಗಿ ಸಂತೋಷವುಳ್ಳವರಾಗಿ ಅಭಿನಂದನೆ ಮಾಡುತ್ತಾರೆಯೋ ಮತ್ತು ಶರೀರದಲ್ಲಿ ರೋಮಾಂಚವನ್ನು ಹೊಂದುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ತುಲಸಿಯ ತೋಟವನ್ನು ನೋಡಿ ಯಾವ ಮನುಜರು ನಮಸ್ಕಾರ ಮಾಡುತ್ತಾರೆಯೋ, ಮತ್ತು ಅದರ ಕಾಷವನ್ನು ಕಿವಿಯಲ್ಲಿ ಧರಿಸುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ತುಲಸಿಯ ವಾಸನೆಯನ್ನು ನೋಡಿ ಯಾರು ಸಂತೋಷಪಡುತ್ತಾರೆಯೋ, ಅದರ ಮೂಲ ಮೃತ್ತಿಕೆಯನ್ನು ಯಾರು ಧರಿಸುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ಯಾರು ಆಶ್ರಮವಿಹಿತವಾದ ಧರ್ಮಾನುಷ್ಠಾನದಲ್ಲಿ ಆಸಕ್ತರಾಗಿ ಅತಿಥಿಸತ್ಕಾರವನ್ನು ಮಾಡುವರೋ ಮತ್ತು ವೇದಾರ್ಥಗಳನ್ನು ಹೇಳುತ್ತಾರೆಯೋ ಅವರು ಭಾಗವತೋತ್ತಮರು. ಯಾರು ಈಶ್ವರಾನುಗ್ರಹಕ್ಕೆ ಪಾತ್ರರೋ ಈಶ್ವರಭಕ್ತರೋ ಈಶ್ವರಪೂಜೆಯಲ್ಲಿ ಆಸಕ್ತರೋ, ಮೂರುನಾಮಗಳನ್ನು ಧರಿಸಿರುವರೋ ಅಂತಹವರು ಭಾಗವತ ಶ್ರೇಷ್ಠರು. ಮಹಾತ್ಮನಾದ ಈಶ್ವರನ ನಾಮಗಳನ್ನು ಯಾರು ವ್ಯವಹರಿಸುತ್ತಾರೆಯೋ, ಯಾರು ರುದ್ರಾಕ್ಷವನ್ನು ಧರಿಸುತ್ತಾರೆಯೋ, ಅಂತಹವರು ಭಾಗವತ ಶ್ರೇಷ್ಠರು. ಹೇರಳವಾಗಿ ದಕ್ಷಿಣೆಗಳನ್ನು ಕೊಟ್ಟು ಯಜ್ಞಗಳನ್ನು ಮಾಡಿ ಯಾರು ಮಹಾದೇವರನ್ನು ಪೂಜಿಸುತ್ತಾರೆಯೋ, ಯಾರು ಉತ್ಕೃಷ್ಟ ಭಕ್ತಿಯಿಂದ ಶ್ರೀಹರಿಯನ್ನು ಪೂಜಿಸುತ್ತಾರೆಯೋ ಅವರು ಭಾಗವತ ಶ್ರೇಷ್ಠರು. ಯಾರು ತಮಗೆ ತಿಳಿದ ಶಾಸ್ತ್ರಗಳನ್ನು ಇತರರಿಗೆ ಉಪದೇಶಿಸುತ್ತಾರೆಯೋ, ಯಾರು ಎಲ್ಲರಲ್ಲಿಯೂ ಗುಣಾಂಶ ಮಾತ್ರವನ್ನೇ ಸ್ವೀಕರಿಸುತ್ತಾರೆಯೋ ಅಂತಹವರು ಭಾಗವತರೆಂದು ಹೇಳಲ್ಪಟ್ಟಿದೆ. ಮುಖ್ಯಸ್ವಾಮಿಯಾದ ರುದ್ರನಲ್ಲಿಯೂ, ಪರಮಾತ್ಮನಾದ ವಿಷ್ಣುವಿನಲ್ಲಿಯೂ ಯಾರು ಅನುಗುಣವಾದ ಭಕ್ತಿಯಿಂದ ನಡೆದುಕೊಳ್ಳುತ್ತಾರೆಯೋ ಅವರು ಭಾಗವತರೆಂದು ಸ್ಮೃತಿಯಲ್ಲಿ ಹೇಳಿದೆ. ಆದರದಿಂದ ಸಂಧ್ಯಾವಂದನೆ ಮತ್ತು ಅಗ್ನಿಕಾರ್ಯಗಳನ್ನು ಅನುಷ್ಠಾನ ಮಾಡುವವರು, ಶಿವಪಂಚಾಕ್ಷರೀಮಂತ್ರವನ್ನು ಜಪಿಸುವುದರಲ್ಲಿ ಆಸಕ್ತರು ಮತ್ತು ಶಿವಧ್ಯಾನಪರರು ಭಾಗವತರೆಂದು ಸ್ಮೃತ್ಯುಕ್ತವಾಗಿದೆ. ಯಾರು ವಿಶ್ವಾಸದಿಂದ ಅನ್ನೋದಕಗಳನ್ನು ದಾನಮಾಡುತ್ತಾರೆಯೋ ಮತ್ತು ಏಕಾದಶೀ ವ್ರತಾನುಷ್ಠಾನದಲ್ಲಿ ಆಸಕ್ತರೋ ಅಂತಹವರು ಭಾಗವತಶ್ರೇಷ್ಠರು. ಯಾರು ಗೋದಾನ ಮತ್ತು ಕನ್ಯಾದಾನಗಳ್ನು ಆಸಕ್ತಿಯಿಂದ ಮಾಡುವರೋ, ಯಾರು ಕಾಮ್ಯಫಲವನ್ನಾಶಿಸದೆ ನನ್ನ ಪ್ರೀತ್ಯರ್ಥವಾಗಿಯೇ ಕರ್ಮಾನುಷ್ಠಾನವನ್ನು ಮಾಡುವರೋ ಅಂತಹವರು ಭಾಗವತಶ್ರೇಷ್ಠರು.[19]

 

ಗುರುದ್ರೋಹಿಯಾಗಬಾರದು

ಗುರ್ವವಜ್ಞಾ ಮನುಷ್ಯಾಣಾಂ ರಾಕ್ಷಸತ್ವಪ್ರದಾಯಿನೀ 1 83

ಗುರವಃ ಸಂತಿ ಬಹವಃ ಪೂಜ್ಯಾ ವಂದ್ಯಾಶ್ಚ ಸಾದರಂ ॥ 85

ಅಧ್ಯಾಪಕಶ್ಚ ವೇದಾನಾಂ ವೇದಾರ್ಥಾನಾಂ ಚ ಚಜೋಧಕಃ ॥ 86

ಶಾಸ್ತ್ರವಕ್ತಾ ಧರ್ಮವಕ್ತಾ ನೀತಿಶಾಸ್ತ್ರೋಪದೇಶಕಃ |

ಮಂತ್ರೋಪದೇಶವ್ಯಾಖ್ಯಾಕೃದ್ವೇದಸಂದೇಹಹೃತ್ತಥಾ 87

ಪ್ರತೋಪದೇಶಕಶ್ಚೈವ ಭಯತ್ರಾತಾನ್ನದೋ ಹಿ ಚ |

ಶ್ವಶುರೋ ಮಾತುಲಶ್ಚೈವ ಜ್ಯೇಷ್ಠಭ್ರಾತಾ ಪಿತಾ ತಥಾ ||  88

ಉಪನೇತಾ ನಿಷೇಕ್ತಾ ಚ ಸಂಸ್ಕರ್ತಾ ಮಿತ್ರಸತ್ತಮ ।

ಏತೇ ಹಿ ಗುರವಃ ಪ್ರೋಕ್ತಾ ಪೂಜ್ಯಾ ವಂದ್ಯಾಶ್ಚ ಸಾದರಂ ||  89

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 9 ಶ್ಲೋಕ 83, 85, 86 ರಿಂದ 89

ಭಾವಾರ್ಥ:- ಗುರುಗಳ ವಿಷಯದಲ್ಲಿ ಮಾಡುವ ತಿರಸ್ಕಾರವು ಮನುಜರಿಗೆ ರಾಕ್ಷಸ ಜನ್ಮವನ್ನು ಕೊಡುತ್ತದೆ. ..... ಪೂಜನೀಯರು ಮತ್ತು ವಂದನೀಯರೂ ಆದ ಗುರುಗಳು ಬಹಳವಾಗಿದ್ದಾರೆ. ..... ವೇದಾಧ್ಯಾಪಕನು, ವೇದಗಳಿಗೆ ಅರ್ಥವನ್ನು ಬೋಧಿಸುವವನು, ಶಾಸ್ತ್ರಪಾಠ ಹೇಳುವವನು, ಧರ್ಮ ಭೋಧಕನು, ನೀತಿಶಾಸ್ತ್ರವನ್ನು ಉಪದೇಶಿಸುವವನು, ಮಂತ್ರಗಳನ್ನು ಉಪದೇಶಿಸುವವನು, ವ್ಯಾಖ್ಯಾನಗಳನ್ನು ರಚಿಸುವವನು, ವೇದಪಾಠ, ಅರ್ಥ ಮುಂತಾದುವುಗಳಲ್ಲಿ ಪ್ರಾಪ್ತವಾದ ಸಂಶಯಗಳನ್ನು ಪರಿಹರಿಸುವವನು, ಸಾದ್ ವ್ರತಗಳನ್ನು ಬೋಧಿಸುವವನು, ಭಯದಿಂದ ರಕ್ಷಿಸಿದವನು, ಅನ್ನದಾನ ಮಾಡಿದವನು, ಹೆಣ್ಣು ಕೊಟ್ಟ ಮಾವ, ಸೋದರಮಾವ, ಅಣ್ಣ, ತಂದೆ, ಉಪನಯನ ಮಾಡಿದವನು, ನಿಷೇಕಮಾಡಿಸಿದವನು, ಜಾತಕರ್ಮಾದಿ ಸಂಸ್ಕಾರ ಮಾಡಿಸಿದವನು, ಇವರೆಲ್ಲರೂ ಗುರುಗಳೆಂದು ಹೇಳಲ್ಪಟ್ಟಿದೆ. ಇವರೆಲ್ಲರೂ ಭಕ್ತಿಯಿಂದ ಪೂಜೆ ಮತ್ತು ನಮಸ್ಕಾರಗಳನ್ನು ಮಾಡಿಸಿಕೊಳ್ಳಲು ಅರ್ಹರು.

            ಹೆಚ್ಚುವರಿ ವಿವರಣೆ :- ವೇದಗಳ ಅಧ್ಯಾಪಕರು, ಮಂತ್ರಗಳಿಗೆ ವ್ಯಾಖ್ಯಾನ ಮಾಡಿರುವವರು, ತಂದೆ, ಮತ್ತು ಧರ್ಮೋಪದೇಶಕರು ಇವರುಗಳು ವಿಶೇಷಗುರುಗಳೆಂದು ಹೇಳಲ್ಪಟ್ಟಿದೆ. 

 

ವಿಶೇಷ ಗುರುಗಳಲ್ಲಿಯೂ ಅತ್ಯಂತ ಶ್ರೇಷ್ಠನಾದ ಗುರು ಯಾರು ? 

ಸಂಸಾರಪಾಶವಿಚ್ಛೇದಕಾರಣಾನಿ ಸ ಉತ್ತಮಃ ।

ದೇವಪೂಜಾರ್ಹಕರ್ಮಾಣಿ ದೇವತಾಪೂಜನೇ ಫಲಂ ॥

ಜಾಯತೇ ಚ ಪುರಾಣೇಭ್ಯಸ್ತಸ್ಮಾತ್ತಾನೀಹ ದೇವತಾಃ ।

ಸರ್ವವೇದಾರ್ಥಸಾರಾಣಿ ಪುರಾಣಾನೀತಿ ಭೂಪತೇ ||

ವದಂತಿ ಮುನಯಶ್ಚೈವ ತದ್ವಕ್ತಾ ಪರಮೋ ಗುರುಃ |

ಯಶ್ಚ ಸಂಸಾರಾರ್ಣವಂ ತರ್ತುಮುದ್ಯೋಗಂ ಕುರುತೇ ನರಃ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 9 ಶ್ಲೋಕ 96 ರಿಂದ 98

ಭಾವಾರ್ಥ:- ಸಂಸಾರವೆಂಬ ಬಂಧನವನ್ನು ನಾಶಪಡಿಸಲು ಕಾರಣಗಳು, ಧರ್ಮವನ್ನು ಬೋದಿಸುವುವೂ ಆಗಿರುವ ಪುರಾಣಗಳನ್ನು ಹೇಳುವ ವಿದ್ವಾಂಸನು ಶ್ರೇಷ್ಠಗುರುವು. ದೇವರ ಪೂಜೆಗೆ ಅಂಗವಾದ ಕರ್ಮಗಳು ದೇವತಾ ಪೂಜೆಯ ವಿಧಾನ, ಅದರ ಫಲ, ಇವುಗಳೆಲ್ಲವೂ ಪುರಾಣಗಳಿಂದಲೇ ತಿಳಿಯಬರುತ್ತವೆಯಾದಕಾರಣ, ಈ ಲೋಕದಲ್ಲಿ ಈ ಪುರಾಣಗಳೇ ದೇವತೆಗಳು. ರಾಜನೇ! ಪುರಾಣಗಳು ಸಕಲ ವೇದಾರ್ಥಗಳಲ್ಲಿಯೂ ಸಾರ ಭೂತವಾದುದನ್ನು ನಿರೂಪಿಸುತ್ತವೆಂದು ಮುನಿಗಳು ಹೇಳುತ್ತಾರೆ. ಆದಕಾರಣ ಪುರಾಣ ಹೇಳುವವರು ಶ್ರೇಷ್ಠ ಗುರುಗಳು.

            ಹೆಚ್ಚುವರಿ ವಿವರಣೆ:- ಸಂಸಾರವೆಂಬ ಸಮುದ್ರವನ್ನು ದಾಟಲು ಪ್ರಯತ್ನಮಾಡುವ ಮನುಷ್ಯನು ಪುರಾಣಗಳನ್ನು ಶ್ರವಣ ಮಾಡಬೇಕೆಂಬುದಾಗಿ ವೇದ ವಿಭಾಗ ಮಾಡಿದ ವೇದವ್ಯಾಸರು ಪುರಾಣಗಳಲ್ಲಿ ಸಕಲ ಧರ್ಮಗಳನ್ನೂ ನಿರೂಪಿಸಿದ್ದಾರೆ. ತರ್ಕಶಾಸ್ತ್ರವು ವಾದಮಾಡುವ ಸಾಮರ್ಥ್ಯವನ್ನು ಕೊಡುತ್ತದೆ. ನೀತಿಶಾಸ್ತ್ರವು ಐಹಿಕಸುಖವನ್ನು ಹೊಂದುವ ಉಪಾಯವನ್ನು ಬೋಧಿಸುತ್ತದೆ. ಪುರಾಣಗಳಾದರೋ ಈಲೋಕ ಪರಲೋಕಗಳೆರಡರಲ್ಲಿಯೂ ಸುಖಹೊಂದಲು ಸಾಧನವನ್ನು ಉಪದೇಶಿಸುತ್ತದೆ. ಯಾವಾಗಲೂ ಭಕ್ತಿಯಿಂದ ಪುರಾಣ ಶ್ರವಣ ಮಾಡುವವನು ಅಧಿಕವಾಗಿ ಧರ್ಮಾನುಷ್ಠಾನತತ್ಪರನಾಗಿ, ನಿರ್ಮಲವಾದ ಜ್ಞಾನವನ್ನು ಹೊಂದುತ್ತಾನೆ. ಪುರಾಣ ಶ್ರವಣದಿಂದ ದೇವರಲ್ಲಿ ಶ್ರೇಯಸ್ಕರವಾದ ಭಕ್ತಿಯುಂಟಾಗುತ್ತದೆ. ಮನುಜರಿಗೆ ಧಾರ್ಮಿಕ ವಿಷಯಗಳಲ್ಲಿಯೇ ಬುದ್ಧಿಯು ಪ್ರವರ್ತಿಸುತ್ತದೆ. ಧರ್ಮಾನುಷ್ಠಾನದಿಂದ ಪಾಪನಾಶವೂ, ಪರಿಶುದ್ಧವಾದ ಜ್ಞಾನವೂ ಸಹ ಉಂಟಾಗುತ್ತದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಬಯಸುವವರು ಪುರಾಣಗಳನ್ನು ಅವಶ್ಯವಾಗಿ ಶ್ರವಣ ಮಾಡಬೇಕು ಎಂಬುದಾಗಿ ಜ್ಞಾನಿಗಳು ಹೇಳುತ್ತಾರೆ.  ಜ್ಞಾನ ಪೂರ್ವಕವಾಗಿ, ಅಥವಾ ಅಜ್ಞಾನದಿಂದಲಾದರೂ ಗುರುಗಳಿಗೆ ತಿರಸ್ಕಾರಭಾವವನನ್ನು ತೋರುವವನಿಗೆ ಶೀಘ್ರವಾಗಿಯೇ ಶ್ರೇಯಸ್ಸು, ಮಕ್ಕಳು, ಐಶ್ವರ್ಯ, ಉದ್ಯೋಗ ಇವುಗಳೆಲ್ಲವೂ ನಷ್ಟವಾಗುತ್ತವೆ. ಭಕ್ತಿಪೂರ್ವಕವಾಗಿ ಗುರುಗಳ ಶುಶ್ರೂಷೆಯನ್ನು ಮಾಡುವವರಿಗೆ ಐಶ್ವರ್ಯಾಭಿವೃದ್ಧಿಯಾಗುತ್ತದೆ ಎಂಬುದಾಗಿ ಜ್ಞಾನಿಗಳು ಹೇಳುತ್ತಾರೆ.[20] 

 

ಧರ್ಮ ಮತಾಂತರವನ್ನು ತಡೆಯಬೇಕು

 

ಅನ್ಯಾಚಾರರತಂ ದೃಷ್ಟ್ವಾ ಯಃ ಶಕ್ತೋ ನ ನಿವಾರಯೇತ್‌ ॥

ತತ್ಪಾಪಂ ಸಮವಾಪ್ನೋತಿ ನರಕಂ ತಾವುಭಾವಸಿ ।

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 15 ಶ್ಲೋಕ 112 ರಿಂದ 113

ಭಾವಾರ್ಥ:- ಸ್ವಧರ್ಮ ಬಿಟ್ಟು ಧರ್ಮಾಂತರವನ್ನು ಅವಲಂಭಿಸಿದ ಮನುಷ್ಯನನ್ನು ತಾನು ಸಮರ್ಥನಾಗಿದ್ದಾಗ್ಯೂ ತಡೆಯದಿರುವವನು ಆ ಪಾಪವನ್ನು ಹೊಂದುತ್ತಾನೆ. ಮತ್ತು ಅವರಿಬ್ಬರೂ ಸಹ ನರಕಭಾಗಿಗಳಾಗುತ್ತಾರೆ.

 

ಪಾಪ ಮಾಡದವನನ್ನು ದೂಷಿಸಬಾರದು

ಪಾಪಿನಾಂ ಪಾಪಗಣನಾಂ ಕೃತ್ವಾನ್ಯೇಭ್ಯೋ ದಿಶಂತಿ ಯೇ ॥

ಅಸ್ತಿತ್ವೇ ತುಲ್ಯಪಾಪಾಸ್ತೇ ಮಿಥ್ಯಾತ್ವೇ ದ್ವಿಗುಣಾ ನೃಪ |

ಅಪಾಪೇ ಪಾತಕಂ ಯಸ್ತು ಸಮಾರೋಪ್ಯ ವಿನಿಂದತಿ ॥

ಸ ಯಾತಿ ನರಕಂ ಘೋರಂ ಯಾವಚ್ಚಂದ್ರಾರ್ಕತಾರಕಂ ।

ಪಾಪಿನಾಂ ನಿಂದ್ಯಮಾನಾನಾಂ ಪಾಪಾರ್ಧಂ ಕ್ಷಯಮೇತಿ ಚ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 15 ಶ್ಲೋಕ 113 ರಿಂದ 115 

ಭಾವಾರ್ಥ:- ಪಾಪಮಾಡದಿರುವವನಲ್ಲಿ ಪಾಪವನ್ನು ಆರೋಪಿಸಿ ದೂಷಿಸುವವನು ಚಂದ್ರ ಸೂರ್ಯಾದಿಗಳಿರುವವರೆಗೂ ಘೋರ ನರಕಕ್ಕೆ ಭಾಗಿ ಯಾಗುತ್ತಾನೆ. ಪಾಪಿಗಳನ್ನು ದೂಷಿಸಿದರೆ ಅಂತಹ ಪಾಪಿಗಳ ಅರ್ಧ ಪಾಪವು ಪರಿಹಾರವಾಗುತ್ತದೆ.

 

ನ್ಯಾಯ ಧರ್ಮಗಳನ್ನು ಶಿಕ್ಷಿಸಬಾರದು

ನ್ಯಾಯೇ ಚ ಧರ್ಮಶಿಕ್ಷಯಾಂ ಪಕ್ಷಪಾತಂ ಕರೋತಿ ಯಃ ।

ನ ತಸ್ಯ ನಿಷ್ಕೃತಿರ್ಭೂಯಃ ಪ್ರಾಯಶ್ಚಿತ್ತಾಯುತೈರಪಿ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 15 ಶ್ಲೋಕ 118

ಭಾವಾರ್ಥ:- ನ್ಯಾಯ ಮತ್ತು ಧರ್ಮಗಳನ್ನೇ ಶಿಕ್ಷಿಸಬೇಕೆಂದು ಆಗ್ರಹ ಮಾಡುವವನಿಗೆ ಸಾವಿರಾರು ಪ್ರಾಯಶ್ಚಿತ್ತ ಮಾಡಿಕೊಂಡಾಗ್ಯೂ ಪಾಪ ಪರಿಹಾರವಾಗುವುದಿಲ್ಲ.

 

ತೋಟವನ್ನು ಕತ್ತರಿಸಬಾರದು

 

ಆರಾಮಛೇದಿನೋ ಯಾಂತಿ ಯುಗಾನಾಮೇಕೆವಿಂಶತಿಂ ।

ಶ್ವಭೋಜನಂ ತತಃ ಸರ್ವಾ ಭುಂಜತೇ ಯಾತನಾಃ ಕ್ರಮಾತ್‌ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 15 ಶ್ಲೋಕ 124

ಭಾವಾರ್ಥ:- ತೋಟವನ್ನು ಕತ್ತರಿಸಿ ಹಾಳುಮಾಡುವವರು ಇಪ್ಪತ್ತೊಂದು ಯುಗಗಳಕಾಲ ಶ್ವಭೋಜನವನ್ನು (ಅವರನ್ನೇ ಅವರು ತಿನ್ನುವುದು) ಮಾಡಿ ತರುವಾಯ ಕ್ರಮವಾಗಿ ಸಕಲ ನರಕಗಳನ್ನೂ ಅನುಭವಿಸುವರು.

 

ನಿನ್ನೊಳಗೆ ದೇವರನ್ನು ಕಾಣು ದೇವರೊಳಗೆ ಜಗತ್ತನ್ನು ಕಾಣು

ಅಹಮೇವ ಪರೋ ವಿಷ್ಣುರ್ಮಯಿ ಸರ್ವಮಿದಂ ಜಗತ್‌ |

ಇತಿ ಯಃ ಸತತಂ ಪಶ್ಯೇತ್ತಂ ವಿದ್ಯಾದುತ್ತಮೋತ್ತಮಂ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 15 ಶ್ಲೋಕ 149

ಭಾವಾರ್ಥ:- ನನ್ನಲ್ಲಿ ಅಂತರ್ಯಾಮಿಯಾಗಿರುವ ವಿಷ್ಣುವೇ ಪರದೇವನು, ಅಂತರ್ಗತನಾದ ಭಗವಂತನಲ್ಲಿಯೇ ಸಕಲ ಜಗತ್ತೂ ಆಶ್ರಯಿಸಿಕೊಂಡಿದೆ ಎಂದು ಯಾವಾಗಲೂ ತಿಳಿಯುವ ಅದಿಕಾರಿಯು ಉತ್ತಮೋತ್ತಮನು.

            ಹೆಚ್ಚುವರಿ ವಿವರಣೆ :- ಸಂಸಾರವನ್ನು ಜಯಿಸಬೇಕೆಂದು ಅಪೇಕ್ಷೆಪಡುವವನು ತನ್ನ ವಿಹಿತ ಕರ್ಮಗಳಿಗೆ ವಿರೋಧವಿಲ್ಲದಂತೆ ಜನಾರ್ದನನಲ್ಲಿ ಭಕ್ತಿಮಾಡಬೇಕು. ವಿಹಿತಧರ್ಮವನ್ನು ಬಿಟ್ಟು ಭಕ್ತಿಯಿಂದಲೇ ಶ್ರೇಯಸ್ಸನ್ನು ಪಡೆಯ ಬೇಕೆಂಬುವವನಿಗೆ ವಿಷ್ಣುವು ಪ್ರಸನ್ನನಾಗುವುದಿಲ್ಲ ಧರ್ಮ ಸಹಿತವಾದ ಭಕ್ತಿಯಿಂದಲೇ ಅವನು ಪ್ರಸನ್ನನಾಗುವನು. ವೇದಾದಿ ಸಕಲ ಶಾಸ್ತ್ರಗಳಲ್ಲಿ ಆಚಾರವೇ ಪ್ರಥಮಕರ್ತವ್ಯವೆಂದು ಹೇಳಿದೆ; ಆಚಾರದಿಂದ ಧರ್ಮವುಂಟಾಗುತ್ತದೆ ಧರ್ಮಕ್ಕೆ ಹರಿಯೇ ಸ್ವಾಮಿಯು. ಆದುದರಿಂದ ವಿಹಿತ ಧರ್ಮಗಳಿಗೆ ಅವಿರುದ್ಧವಾಗಿ ಹರಿಯಲ್ಲಿ ಭಕ್ತಿ ಮಾಡಬೇಕು. ಸದಾಚಾರವಿಲ್ಲದವರ ಧರ್ಮಗಳೂ ಸಹ ಸುಖಪ್ರದವಾಗಲಾರವು. ಸ್ವಧರ್ಮವನ್ನಾಚರಿಸದೇ ಮಾಡುವ ಭಕ್ತಿಯು ಮಾಡದಿದ್ದಂತೆಯೇ ಭಾವಿಸಬೇಕೆಂದು ಹೇಳಿದೆ. ಆದಕಾರಣ ಧರ್ಮಾನುಷ್ಠಾನ ನಿರತನಾಗಿ ಅಣು ಪದಾರ್ಥಗಳಲ್ಲಿ ಅದಕ್ಕಿಂತ ಅಣುತರನಾಗಿ ಅಂತರ್ಗತನಾಗಿರುವ ನಾರಾಯಣ ಶಬ್ದ ವಾಚ್ಯನಾದ ಜನಾರ್ದನನನ್ನು ಪೂಜಿಸು. ಅದರಿಂದ ಶಾಶ್ವತ ಸುಖವನ್ನು ಪಡೆಯುವೆ.[21]

 

ಹರಿಯೇ ವಿಷ್ಣು - ವಿಷ್ಣುವೇ ಶಿವನು - ನಾಮ ಹಲವು ದೇವನೊಬ್ಬನೇ

ಶಿವ ಏವ ಹರಿಸ್ಸಾಕ್ಷಾದ್ಧರಿರೇವ ಶಿವಃ ಸ್ವಯಂ ।

ದ್ವಯೋರಂತರದೃಗ್ಯಾತಿ ನರಕಾನ್ಕೋಟಿಶಃ ಖಲಃ ॥

ತಸ್ಮಾದ್ವಿಷ್ಣುಂ ಶಿವಂ ವ್ಯಾಪಿ ಸಮಂ ಬುಧ್ವಾ ಸಮುರ್ಚಯ ।

ಭೇದಕೃದ್ದುಃಖಮಾಪ್ನೋತಿ ಇಹ ಲೋಕೇ ಪರತ್ರ ಚ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 15 ಶ್ಲೋಕ 157-158

ಭಾವಾರ್ಥ:- ಶಿವ ಶಬ್ದ ಮುಖ್ಯ ವಾಚ್ಯನೇ ಹರಿಯು. ಅವನೇ ಸಾಕ್ಷಾತ್ತಾಗಿ ಶಿವನೆನಿಸುವನು. ಶಿವಶಬ್ದ ಮುಖ್ಯಾರ್ಥ, ಹರಿ ಇವರುಗಳಿಗೆ ಭೇದವನ್ನು ತಿಳಿಯುವ ಮೂಢನು ಕೋಟ್ಯಂತರ ವರ್ಷ ನರಕಕ್ಕೆ ಭಾಗಿಯಾಗುವನು. ಆದುದರಿಂದ ವಿಷ್ಣು, ಶಿವ ಶಬ್ದ ಮುಖ್ಯಾರ್ಥ ಇವರನ್ನು ಒಂದನ್ನಾಗಿ ಭಾವಿಸಿ ಪೂಜಿಸಬೇಕು. ಅವರಿಗೆ ಭೇದವನ್ನು ತಿಳಿಯುವವನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಸಹ ದುಃಖಪಡುತ್ತಾನೆ.

 

ಧರ್ಮಕ್ಕೆ ವಿರೋದ ಬರದಂತೆ ಸತ್ಯ ಹೇಳಬೇಕು

ಧರ್ಮಾವಿರೋಧತೋ ವಾಚ್ಯಂ ತದ್ಧಿ ಧರ್ಮಪರಾಯಣ್ಯೆಃ |

ದೇಶಕಾಲಾದಿ ವಿಜ್ಞಾಯ ಸ್ವಯಮಸ್ಯಾವಿರೋಧತಃ ॥

ಯದ್ವಚಃ ಪ್ರೋಚ್ಯತೇ ಸದ್ಬಿಸ್ತತ್ಸತ್ಯಮಭಿಧೀಯತೇ |

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 16 ಶ್ಲೋಕ 24-25

ಭಾವಾರ್ಥ:- ಧರ್ಮನಿರತರು ಧರ್ಮಕ್ಕೆ ವಿರೋಧ ಬರದಂತೆ ಸತ್ಯವನ್ನು ಹೇಳಬೇಕು. ದೇಶ, ಕಾಲ, ಸಂದರ್ಭಗಳನ್ನರಿತು ಅವುಗಳಿಗೆ ಅವಿರುದ್ಧವಾಗಿ ಸಜ್ಜನರು ಹೇಳುವ ವಚನವು ಸತ್ಯವೆನಿಸುವುದು.

            ಹೆಚ್ಚುವರಿ ವಿವರಣೆ : ಧರ್ಮಕಾರ್ಯಕ್ಕೆ ಸಹಾಯ ಮಾಡುವುದು ಮತ್ತು ನಿಷಿದ್ಧ ವ್ಯಾಪಾರವನ್ನು ವಿರೋಧಿಸುವುದು,  ಸರ್ವಲೋಕಹಿತವೆಂದು ಧರ್ಮಜ್ಞಾನಿಗಳಿಂದ ಉಕ್ತವಾಗಿದೆ. ಧರ್ಮಾಧರ್ಮ ವಿವೇಕವಿಲ್ಲದೆ ಸ್ವೇಚ್ಛಾನುಸಾರ ಹೇಳುವುದು ಅನೃತವು. ಅದು ಸಕಲ ಶ್ರೇಯಸ್ಸಿಗೂ ವಿರೋಧಿಯೆಂದು ತಿಳಿಯಬೇಕು. ಲೋಕವಿದ್ವೇಷಿಗಳು, ಮೂರ್ಖರು, ದುರ್ಮಾರ್ಗದಲ್ಲಿಯೇ ಪ್ರವರ್ತಿಸುವ ಬುದ್ಧಿಯುಳ್ಳವರು ಮತ್ತು ಸಕಲ ಧರ್ಮಗಳನ್ನೂ ಬಿಟ್ಟಿರುವವರು ದುರ್ಜನರೆಂದು ತಿಳಿಯಬೇಕು. ಧರ್ಮಾಧರ್ಮ ವಿವೇಚನೆಯಿಂದ ವೇದೋಕ್ತ ಮಾರ್ಗವನ್ನ ಅವಲಂಬಿಸಿರುವವರು ಮತ್ತು ಸಕಲರಿಗೂ ಅನುಕೂಲ ಮಾಡುವುದರಲ್ಲಿ ಆಸಕ್ತರಾಗಿರುವವರೂ ಸಾಧುಗಳೆಂದು ಉಕ್ತವಾಗಿದೆ. 

 

ವಾಸ ಮಾಡುವ ದೇಶದ ಧರ್ಮಕ್ಕೆ ಸೌಮ್ಯವಾಗಿರಬೇಕು  

ದೇಶಾಚಾರಾಃ ಪರಿಗ್ರಾಹ್ಯಾಸ್ತತ್ತದ್ದೇಶಗತೈರ್ನರೈಃ ।

ಅನ್ಯಥಾ ಪತಿತೋ ಜ್ಞೇಯಃ ಸರ್ವಧರ್ಮಬಹಿಷ್ಕೃತಃ ॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 24 ಶ್ಲೋಕ 17

ಭಾವಾರ್ಥ:- ಮನುಷ್ಯರು ಅವರು ವಾಸಮಾಡುವ ದೇಶಗಳಲ್ಲಿನ ಸಂಪ್ರದಾಯ ಪ್ರಾಪ್ತವಾದ ಧರ್ಮಗಳನ್ನು ಸೌಮ್ಯದಿಂದ ನಡೆಸಿಕೊಳ್ಳಬೇಕು ಅಥವಾ ಸಂಭೋದಿಸಬೇಕು. ಹಾಗೆ ದೇಶಾಚಾರಗಳನ್ನು ಮಾಡದಿದ್ದರೆ ಅಂತಹವರು ಪತಿತರು ಮತ್ತು ಸಕಲ ಧರ್ಮಬಹಿಷ್ಕೃತರೆಂದು ತಿಳಿಯಬೇಕು.

            ವಿವರಣೆ:- ಸಂಸ್ಕೃತದಲ್ಲಿ "ಪರಿಗ್ರಾಹ್ಯ" ಎಂಬ ಪದಕ್ಕೆ "ಸೌಮ್ಯದಿಂದ ನಡೆಸಿಕೊಳ್ಳಬೇಕು ಅಥವಾ ಸಂಭೋದಿಸಬೇಕು"  ಎಂದು ಇದೆ. ಕನ್ನಡದಲ್ಲಿ ಬರುವ "ಪರಿಗ್ರಾಹ್ಯ" ಎಂಬ ಶಬ್ದಕ್ಕೆ "ಸ್ವೀಕರಿಸಲು ಯೋಗ್ಯವಾದ" ಎಂಬ ಅರ್ಥ ಇದೆ. ಕನ್ನಡದಲ್ಲಿನ ಪರಿಗ್ರಹಿಸು ಪದಕ್ಕೆ ಸ್ವೀಕರಿಸು, ಒಪ್ಪಿಕೊಳ್ಳು, ಅಂಗೀಕರಿಸು ಎಂಬ ಅರ್ಥಗಳು ಇವೆ. ಹೀಗೆ ಪರಿಗ್ರಾಹ್ಯಾ ಎಂಬ ಸಂಸ್ಕೃತ ಶಬ್ದವನ್ನು ಕನ್ನಡದಲ್ಲಿ ಸಮೀಕರಿಸಿ ಅನುವಾದಿಸಿದರೆ ಮತ ಪರಿವರ್ತನೆಗೆ ದಾರಿ ಆಗುತ್ತದೆ. ಇಲ್ಲಿ ಅನ್ಯ ಧರ್ಮದ ದೇಶದಲ್ಲಿ ಆ ಧರ್ಮದ / ಮತದ ಸಂಪ್ರದಾಯಗಳಿಗೆ ಸೌಮ್ಯದಿಂದ ನಡೆದುಕೋ ಅಥವಾ ಅವರನ್ನು ಸೌಮ್ಯದಿಂದ ಸಂಭೋದಿಸಬೇಕು ಎಂಬ ಬೋಧನೆ ಇದೆ.

 

ವರ್ಣಾಶ್ರಮದ ಬಗ್ಗೆ ಸರಿಯಾದ ಜ್ಞಾನ ಹೊಂದಬೇಕು

ಸಂಸ್ಕೃತದಲ್ಲಿ ಹಲವಾರು ಕಡೆ ವಿಪ್ರ, ದ್ವಿಜ, ಬ್ರಹ್ಮನ್, ಬ್ರಾಹ್ಮಣ ಎಂದು ಬಂದಿರುವ ಕಡೆಯಲ್ಲೆಲ್ಲಾ ಹಿಂದೆ ವಿದ್ವಾಂಸರು ಇದು ಏಕರೂಪವಾಗಿ ಬ್ರಾಹ್ಮಣ ಎಂದು ವ್ಯಾಖ್ಯಾನಿಸಿ ಹೇಳಿದ್ದಾರೆ, ಆದರೆ ಇದು ತಪ್ಪು ವ್ಯಾಖ್ಯಾನ ಎಂದು ಹೇಳಲಾಗದು ಅಂದು ಅವರು ವ್ಯಾಖ್ಯಾನಿಸಿದ ಸಂಧರ್ಬ ಕಾಲದಲ್ಲಿ ಯಾವ ಜಾತಿಯವರು ಹೆಚ್ಚಾಗಿ ಇದರಲ್ಲಿ ನಿರತರಾಗಿದ್ದರು, ಎಂಬ ಅರ್ಥದಲ್ಲಿ ಹೇಳಿರಬಹುದು ಎಂದು ಹೇಳುವವರು ಇದ್ದಾರೆ. ಆದರೆ ಸಂಸ್ಕೃತದಲ್ಲಿ ಅಂತಹ ಪದಗಳಿಗೆ ಇರುವ ಅರ್ಥಗಳನ್ನು ಗಮನಿಸಿದರೆ ನಿಜವಾದ ಅರ್ಥ ಮೂಡುತ್ತದೆ.

ವಿಪ್ರ:- ಬುದ್ಧಿವಂತ, ಪ್ರೇರಕನು, ಗಾಯಕ, ಕವಿ, ನೋಡುವವನು, ಕಲಿತ ದೇವತಾ ಶಾಸ್ತ್ರಜ್ಞ, ಕಲಿತವ, ಬ್ರಹ್ಮನ್, ಬ್ರಾಹ್ಮಣ, ಋಷಿ, ಬುದ್ದಿವಂತ ಮನುಷ್ಯ, ಇತ್ಯಾದಿ.

ಬ್ರಾಹ್ಮಣ:- ದೈವಿಕವಾದದ್ದು, ಬ್ರಾಹ್ಮಣ ಮನುಷ್ಯ, ದೈವಿಕ ಶಕ್ತಿ, ಪವಿತ್ರವಾದದ್ದು, ದೈವಿಕ ಜ್ಞಾನವನ್ನು ಹೊಂದಿರುವವನು, ಪವಿತ್ರ ಜ್ಞಾನದ ಅಥವ ಸಿದ್ದಾಂತದ ವಿವರಣೆಗಳು,  ಸಮಾವೇಶ, ಬ್ರಾಹ್ಮಣ ವಿವರಣೆ, ಬ್ರಹ್ಮನ್, ನಾಲ್ಕು ವರ್ಣಗಳಲ್ಲಿ ಮೊದಲನೇ ಗುಂಪು.

ಬ್ರಹ್ಮನ್ :- ಪವಿತ್ರ ಪದ,  ಭಕ್ತಿ, ಪವಿತ್ರ ಜೀವನ, ಬ್ರಹ್ಮಾಂಡದ ತುಲಾಭಾರ, ಸಂಪೂರ್ಣ ಬ್ರಹ್ಮಾಂಡ, ಪ್ರಾರ್ಥನೆ, ಬ್ರಾಹ್ಮಣ ಋಷಿ, ಬ್ರಹ್ಮ ದೇವರು.

ದ್ವಿಜ:- ಎರಡು ಸಾರಿ ಜನ್ಮ ಉಳ್ಳವರು, (ಒಂದು ತಾಯಿ ಗರ್ಬದಲ್ಲಿ ಇನ್ನೊಂದು ವಿಧ್ಯಾಭ್ಯಾಸಕ್ಕೆ ತೆರಳುವಾಗ ಆಗುವ ಉಪನಯನದ ವೇಳೆ). ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ದ್ವಿಜರೆನಿಸಿಕೊಳ್ಳುತ್ತಾರೆ. ಶೂದ್ರನಾಗಿಯೂ ವಿಧ್ಯಾಭ್ಯಾಸಕ್ಕೆ ತೆರಳುವವನು ಉಪನಯನದಿಂದ ದ್ವಿಜನಾಗುತ್ತಾನೆ. ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯರ ಮಗನಾಗಿ ಹುಟ್ಟಿದರೂ ವಿಧ್ಯಾಭ್ಯಾಸಕ್ಕೆ ತೆರಳದೆ ಶೂಧ್ರನಾಗಿಯೇ ಮುಂದುವರಿಯುತ್ತಾನೆ. ಜ್ಞಾನಿಗಳ ಪ್ರಕಾರ ಜನ್ಮದಿಂದ ಎಲ್ಲರೂ ಶೂದ್ರರೇ ಸಂಸ್ಕಾರಾದಿಗಳಿಂದ ವರ್ಣಾಶ್ರಮ ಪಡೆದರು.

            ಕನ್ನಡ ನಿಘಂಟು ಪ್ರವೇಶಿಸಿದರೆ ಬ್ರಾಹ್ಮಣ ಶಬ್ದಕ್ಕೆ ಬ್ರಹ್ಮಜ್ಞಾನಿ, ಬ್ರಹ್ಮವನ್ನು ಅರಿತವನು, ಬ್ರಹ್ಮ ಎಂದರೆ ಸಕಲ ಸೃಷ್ಠಿಗೂ ಮೂಲಕಾರಣವಾದ, ಸತ್ಯವೆಂದರೂ ಜ್ಞಾನವೆಂದರೂ ಬ್ರಹ್ಮವೆಂದರೂ ಒಂದೇ, ವೇದಮಂತ್ರ - ವೇದಗಳು - ಆಗಮಗ್ರಂಥ ಸಮೂಹ - ಓಂಕಾರ - ಆತ್ಮ ಇವುಗಳಿಗೂ ಬ್ರಹ್ಮ ಎನ್ನುವರು, ಬ್ರಹ್ಮಚರ್ಯ ಎಂದರೆ ಇಂದ್ರಿಯ ನಿಗ್ರಹ ಮಾಡುವುದು, ಶಿವನನ್ನು ಬ್ರಹ್ಮಜ್ಯೋತಿ ಏನ್ನುವರು, ಬ್ರಹ್ಮತತ್ತ್ವ ಎಂದರೆ ಮೋಕ್ಷಕ್ಕಾಗಿ ಆಚರಿಸುವ ತತ್ತ್ವಗಳು, ವೇದಾಧ್ಯಾಯನಾದ ನಂತರ ಹಿಂದೆ ರಾಜರು ಬ್ರಹ್ಮಜ್ಞಾನಿಗೆ ನೀಡುತ್ತಿದ್ದ ಬ್ರಹ್ಮದಾಯ ಎಂಬ ಧನ ಮತ್ತು ಭೂರೂಪವಾದ ಆಸ್ತಿ, ಬ್ರಹ್ಮಯಜ್ಞ ಎಂದರೆ ಪ್ರತಿ ದಿನ ಮಾಡುವ ವೇದಾಧ್ಯಯನ, ಬ್ರಹ್ಮರಂಧ್ರ - ನೆತ್ತಿಯ ಮಧ್ಯದಲ್ಲಿರುವ ಸೂಕ್ಷ್ಮವಾದ ರಂಧ್ರ, ಬ್ರಹ್ಮರ್ಷಿ ಎಂದರೆ ಬ್ರಹ್ಮಜ್ಞಾನಿಯಾದವನು, ಬ್ರಹ್ಮಲಿಖಿತ ಎಂದರೆ ಹಣೆ ಬರಹ, ಬ್ರಹ್ಮವರ್ಚಸ್ಸು - ಜ್ಞಾನಿಗಳಿಗೆ ಅವರ ಅಧ್ಯಯನದಿಂದ ಆಗಿರುವ ತೇಜಸ್ಸಿಗೆ, ಪ್ರಜ್ಞೆಗೆ, ಕೀರ್ತಿಗೆ ಬ್ರಹ್ಮವರ್ಚಸ್ಸು ಎನ್ನುವರು. ವೇದಗಳನ್ನು ಕಲಿಸುವವನಿಗೆ ಬ್ರಹ್ಮವಾದಿ ಎನ್ನುವರು. ಬ್ರಹ್ಮವಿದ್ಯೆ ಎಂದರೆ ವೇದಾಂತ ವಿದ್ಯೆ, ಮೋಕ್ಷಸಾಧನೆಗೆ ವಿದ್ಯೆ, ಎನ್ನುವರು. ಬ್ರಹ್ಮಸಾಯುಜ್ಯ ಹೊಂದಿದರು ಎಂದರೆ ಸತ್ತ ನಂತರ ಅವರು ಬ್ರಹ್ಮನಲ್ಲಿ ಐಕ್ಯರಾದರು ಎಂದು, ಬ್ರಹ್ಮಸೂತ್ರ ಎಂದರೆ ಯಜ್ಞೋಪವೀತ - ಜನಿವಾರ, ಬ್ರಹ್ಮಾಂಡ ಎಂದರೆ ವಿಶ್ವ - ಜಗತ್ತು, ಬ್ರಹ್ಮಾರ್ಪಣ - ಮಾಡಿದ ಕರ್ಮಗಳನ್ನು ಪರಮಾತ್ಮನಲ್ಲಿ ಅರ್ಪಿಸುವುದು, ಬ್ರಹ್ಮೋಪದೇಶ - ಬ್ರಹ್ಮ ತತ್ತ್ವಗಳನ್ನು ಕಲಿಸುವುದು. ಇಂತಹ ಅರ್ಥ ಗರ್ಬಿತ ಬ್ರಹ್ಮ ವಿದ್ಯೆ ತಿಳಿದವರನ್ನು ಮೂಲೆ ಗುಂಪು ಮಾಡಲು ಇಂದಿಗೂ ಮಾಡುತ್ತಿರಲು ಕಾರಣವೇನು - ಭಾರತೀಯರು ಬ್ರಹ್ಮಜ್ಞಾನಿಗಳಾಗುತ್ತಾ ಹೋದರೆ ಭೂಮಿಯನ್ನು ಆಳುವರು ಎಂಬುದಕ್ಕೆ ವೈರೂಧ್ಯ ಷಡ್ಯಂತರವೇ ?

 

ವರ್ಣಾಶ್ರಮದ ಬಗ್ಗೆ ಪರ ವಿದ್ಯಾ ವ್ಯಾಖ್ಯಾನ

ಪರ ವಿದ್ಯೆಯಲ್ಲಿ ಅಂದರೆ ಅಕ್ಷರ ವಿದ್ಯೆಯಲ್ಲಿ ವಿಪ್ರ ಎಂದರೆ "ಹೊಳಪನ್ನು ರಕ್ಷಿಸುವ ಶ್ರೇಷ್ಠನು" ಎಂದಾಗುತ್ತದೆ. ಇಲ್ಲಿ ಧ್ಯಾನದ ಮೂಲಕ ಉಂಟಾಗುವ ಅಮೃತದಿಂದ ಹೊಳಪಿನ ಭಾವ ಉಂಟಾಗುತ್ತದೆ. ಅದನ್ನು ಕಲಿತವನಿಗೆ ವಿಪ್ರ ಎನ್ನುತ್ತಾರೆ.  ವಿಧ್ಯಾಬ್ಯಾಸಕ್ಕಾಗಿ  ಗುರುಗಳಲ್ಲಿ ಕಲಿಯಲು ಹೋಗುವವನೇ ದ್ವಿಜ.  ಅಕ್ಷರ ಅರ್ಥದಲ್ಲಿ ದ್ವಿಜ ಎಂದರೆ "ಸೇರಿರುವಿಕೆಯಿಂದ ಪ್ರತ್ಯೇಕತೆಯನ್ನು ಉಂಟುಮಾಡುವ", ಇಲ್ಲಿ ಇವನು ಸಾಮಾನ್ಯ ಮನುಜನಾದರೂ ಸಮಾಜದಲ್ಲಿ ವಿದ್ಯೆ ಕಲಿಯಲು ಹೋಗುವವನಾಗಿ  ಪ್ರತ್ಯೇಕವಾಗಿ ಬಿಂಬಿಸಿಕೊಳ್ಳುವವ ಎಂದಾಗುತ್ತದೆ. ಬ್ರಾಹ್ಮಣ ಎಂದರೆ "ನೀರು, ಬೆಂಕಿ, ಜೀವ ಉಸಿರು, ವೈದ್ಯತೆ, ಮಾಂತ್ರಿಕ ಸೂತ್ರ ಜ್ಞಾನ ಉಳ್ಳವನು" ಎಂದಾಗುತ್ತದೆ. ಇಂತಹ ವೇದ ಜ್ಞಾನವೂ ಆತ್ಮ ಜ್ಞಾನವಾಗಿದೆ. ಅದನ್ನು ಬ್ರಹ್ಮ ಜ್ಞಾನ ಎಂದೂ ಕರೆಯುತ್ತಾರೆ. ಅಂತಹ ಜ್ಞಾನವನ್ನು ಬಲ್ಲವನು ಬ್ರಾಹ್ಮಣ ಎಂದಾಗುತ್ತದೆ. ಬ್ರಹ್ಮನ್ ಎಂದರೆ "ನೀರು, ಬೆಂಕಿ, ವೈದ್ಯತೆ, ಮಾಂತ್ರಿಕ ಸೂತ್ರ ಅವಿಶ್ರಾಂತವಾಗಿ ಪಡೆಯುವವನು" ಎಂದಾಗುತ್ತದೆ. ಇಲ್ಲಿ ಬ್ರಾಹ್ಮಣ ಮತ್ತು ಬ್ರಹ್ಮನ್ ನಡುವೆ ಜೀವ ಉಸಿರು ಇಲ್ಲದಿರುವುದು ಗಮನಿಸಿ. ಜೀವ ಉಸಿರು ಎಂದರೆ ಅಮೃತ ವಾಯು. ಇದನ್ನು ಧ್ಯಾನಿಗಳು ಪವಿತ್ರರು ಪಡೆಯುತ್ತಾರೆ. ಬ್ರಹ್ಮನ್ ಎನ್ನುವವನು ವಿದ್ಯಾವಂತರಾದರೂ ಅವರಿಗೆ ಅಮೃತ ವಾಯು ಪಡೆಯುವ ಜ್ಞಾನವಿಲ್ಲದ್ದರಿಂದ ಆದನ್ನು ಹೊರತುಪಡಿಸಿ ಬಾಕಿ ಎಲ್ಲಾ ವರ್ಣದಲ್ಲೂ ವಿದ್ಯಾವಂತರನ್ನು ಬ್ರಹ್ಮನ್ ಎಂದು ಕರೆಯಲಾಗಿತ್ತು. ಕ್ಷತ್ರಿಯ ಎಂದರೆ "ಖ್ಯಾತಿಯನ್ನು ಪಡೆಯಲು ಮೂರು ಮಿಂಚುಳ್ಳವನು" ಎಂದಾಗುತ್ತದೆ. ಕ್ಷತ್ರಿಯನಿಗೆ ಮೂರು ಮಿಂಚುಗಳಾದ ಆಡಳಿತ, ಶೌರ್ಯ, ದಯೆ ಉಳ್ಳವನು ಕ್ಷತ್ರಿಯನಾಗುವನು.  ವೈಶ್ಯ ಎಂದರೆ "ವಿಭಾಗಿಸುವ ಚಲನೆಯನ್ನು ಶಕ್ತಿಯುತವಾಗಿ ಕರೆಯುವುದು" ಇಲ್ಲಿ ವೈಶ್ಯನ ಮೂಲ ಕೆಲಸ ವ್ಯಾಪಾರ, ವ್ಯವಸಾಯ, ಕಲೆ, ದೇಶದ ಆರ್ಥಿಕ ಚಲನೆಗೆ ವಿಭಿನ್ನ ವಿಭಾಗವಾಗಿ ನಿಂತ ವೈಶ್ಯ ವರ್ಣಾಶ್ರಮ ಸಂಕೇತವಾಗಿ ಚಿತ್ರಿತವಾಗಿದೆ. ಶೂದ್ರ ಎಂದರೆ "ವೇಗವಾಗಿ ಬೆಂಕಿಯನ್ನು ಉತ್ಪಾದಿಸುವವ" ಇಲ್ಲಿ ಬೆಂಕಿ ಎಂದರೆ ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್ ಫೈರ್ ಇದು ಪರಿಶ್ರಮದ ವ್ಯಕ್ತಿಗಳಲ್ಲಿ ಮಾತ್ರ ಅತಿಯಾಗಿ ಉತ್ಪತ್ತಿಯಾಗುತ್ತದೆ ಅದನ್ನು ಬಿಂಬಿಸಿ ಅಂತಹ ನಾಮಾಂಕಿತವಾಗಿದೆ.

 

ಧಾರ್ಮಿಕ ಆಚರಣೆಗಳು ಪಾಲಿಸುವವನೇ ವಿಧ್ಯಾವಂತನು

ಧರ್ಮಮೂಲಕವಾದ ಆ ಸೃಷ್ಟಿಯು ಮಾನಸವೆನಿಸುವುದು. ಜಾತಕರ್ಮಾದಿ  ಷೋಡಶ ಸಂಸ್ಕಾರಗಳಿಂದ  ಸಂಸ್ಕರಿಸಲ್ಪಟ್ಟು ಪರಿಶುದ್ಧನು, ವೇದಾಧ್ಯಯನ ಕರ್ತನು, ವೇದೋಕ್ತ ಕರ್ಮವನ್ನು ಆಚರಿಸುವವನು, ಶೌಚ ಮತ್ತು ಆಚಾರಗಳನ್ನು ಅನುಷ್ಠಾನ ಮಾಡುವವನು, ಚೆನ್ನಾಗಿ ವಿದ್ಯೆಯನ್ನು ಕಲಿಯುವವನು, ಗುರುವನುಗ್ರಹ ಪಾತ್ರನು, ನಿತ್ಯವ್ರತಪರನು, ಸತ್ಯವಚನದಲ್ಲಿ ಆಸಕ್ತನೂ ಆಗಿರುವವನು ಬ್ರಾಹ್ಮಣನೆನಿಸುವನು. ಮಗು ಹುಟ್ಟಿದಾಗ ಅದಕ್ಕೆ ಮಾಡುವ ನಾಳಚ್ಛೇದನೆಯು ಜಾತಕರ್ಮ ಸಂಸ್ಕಾರ ಎಂಬುದು ಹುಟ್ಟಿದ ಮೇಲೆ ಮೊದಲನೆಯದ್ದು.  ಹದಿನಾರು ಸಂಸ್ಕಾರಗಳು, (1) ಗರ್ಭಾದಾನ, (2) ಪುಂಸವನ, (ಗಂಡುಮಗು ಆಗಲೆಂದು ಮಾಡುವ ಸಂಸ್ಕಾರ), (3) ಸೀಮಂತೋನಯನ, (4) ಜಾತಕರ್ಮ - ಹುಟ್ಟಿದಾಗ ಮಗುವಿನ ನಾಳಚ್ಛೇದನೆಯು (5) ನಾಮಕರಣ, (6) ನಿಷ್ಕ್ರಮಣ, (ಮಗು ಹುಟ್ಟಿದ ಮೇಲೆ ನಾಲ್ಕನೇ ತಿಂಗಳಲ್ಲಿ ಮೊದಲಬಾರಿಗೆ ಮನೆಯಿಂದ  ಹೊರಕ್ಕೆ ಕರೆ ತಂದು ಸೂರ್ಯ ದರ್ಶನ ಮಾಡಿಸುವ ಸಂಸ್ಕಾರ) (7) ಅನ್ನಪ್ರಾಶನ, (8) ಚೌಲ, (ಜುಟ್ಟು ಬಿಡಿಸುವುದು) (9) ಉಪನಯನ, (ವೇದಾಭ್ಯಾಸಕ್ಕಾಗಿ ಬಾಲಕನನ್ನು ಗುರುವಿನಲ್ಲಿಗೆ ಕಳಿಸಿಕೊಡಲು ಮಾಡುವ ಒಂದು ಸಂಸ್ಕಾರ, ಮುಂಜಿ, ಬ್ರಹ್ಮೋಪದೇಶ)   ವೇದವ್ರತಚತುಷ್ಟಯ = (10) ಮಾಹಾನಾಮ್ನೀ, - ವೇದಾಭ್ಯಾಸದ ಕಾಲದಲ್ಲಿ ಸಾಮವೇದದ ಒಂದು ಪರಿಶಿಷ್ಟವಾದ ಮಹಾನಾಮ್ನೀ ಎಂಬಲ್ಲಿನ ರುಕ್ಕುಗಳನ್ನು ಪಠಿಸುವ ಒಂದು ವ್ರತ (11) ಮಹಾವ್ರತ, - ಮಹಾವ್ರತದಲ್ಲಿ ಉದಾಹರಣೆಗೆ ಒಂದು ತಿಂಗಳು ನೀರು ಸೇವಿಸದಿರುವುದು ಇತ್ಯಾದಿ (12) ಉಪನಿಷದ್ವ್ರತ, - ಉಪನಿಷದ್ ಅಧ್ಯಾನದ ವೇಳೆ ನಡೆಸುವ ವ್ರತ (13) ಗೋದಾನವ್ರತ - ಹದಿನಾರನೇ ವರ್ಷದಲ್ಲಿ ಮಾಡುವ ಕೇಶ ಖಂಡನ ಸಂಸ್ಕಾರ), (14) ಸಮಾವರ್ತನ, - ಬ್ರಹ್ಮಚಾರಿಯು ವೇದಾಧ್ಯನ ಮುಗಿಸಿ ಗುರುಕುಲದಿಂದ ಹಿಂದಿರುಗಿದಾಗ ಮಾಡುವ ಒಂದು ವಿಧಿ. (15) ವಿವಾಹ ಮತ್ತು (16) ಅಂತ್ಯೇಷ್ಟಿ.

 

ಅಂದು ಉಪಯೋಗಿಸಿದ ವರ್ಣ ಪದ್ದತಿಯಲ್ಲಿ ಯಾವುದೇ ತಾರತಮ್ಯ ಇಲ್ಲ ಎನ್ನುವುದಕ್ಕೆ ಶ್ರೀ ನಾರದೀಯ  ಪುರಾಣದಲ್ಲೇ ಈ ಶ್ಲೋಕಗಳು ಕೃತಯುಗದ ಪರಿಸ್ಥಿತಿಯ ಬಗ್ಗೆ ಉಲ್ಲೇಕವಾಗಿವೆ.

ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಃ ಸ್ವಾಚಾರತತ್ಪರಾಃ ।

ಸದಾ ನಾರಾಯಣಪರಾಸ್ತಪೋಧ್ಯಾನ ಪರಾಯಣಾಃ ||

ಕಾಮಾದಿ ದೋಷನಿರ್ಮುಕ್ತಾಃ ಶಮಾದಿಗುಣತತ್ಪರಾಃ ।

ಧರ್ಮಸಾಧನಚಿತ್ತಾಶ್ಚ ಗತಾಸೂಯಾ ಅದಾಂಭಿಕಾಃ ॥

ಸತ್ಯವಾಕ್ಯರತಾಸ್ಸರ್ವೆೇ ಚತುರಾಶ್ರಮಧರ್ಮಿಣಃ ।

ವೇದಾಧ್ಯಯನಸಂಪನ್ನಾಃ ಸರ್ವಶಾಸ್ತ್ರವಿಚಕ್ಷಣಾಃ ||

ಚತುರಾಶ್ರಮಯುಕ್ತೇನ ಕರ್ಮಣಾ ಕಾಲಯೋನಿನಾ |

ಅಕಾನುಫಲಸಂಯೋಗಾಃ ಪ್ರಯಾಂತಿ ಪರಮಾಂ ಗತಿಂ ||

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 41 ಶ್ಲೋಕ 9 ರಿಂದ 12

ಭಾವಾರ್ಥ:- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣದವರೂ ತಮ್ಮ ತಮ್ಮ ಸಂಸ್ಕಾರ (ಆಚಾರ) ಧರ್ಮದಲ್ಲಿ ನಿರತರು (ಶ್ರದ್ದೆಯಿಂದ ತೊಡಗಿರುವವರು), ಸರ್ವದಾ ನಾರಾಯಣ ನಿಷ್ಠರಾಗಿ ತಪಸ್ಸು, ಧ್ಯಾನ ಇವುಗಳಲ್ಲಿಯೇ ಆಸಕ್ತರು, ಧರ್ಮ ಸಾಧನ ಮನಸ್ಕರು, ಅಸೂಯೆ ಇಲ್ಲದವರು, ಜಂಭವಿಲ್ಲದವರು, ನಿಜವನ್ನೇ ಹೇಳುವವರು, ಎಲ್ಲರೂ ನಾಲ್ಕು ಆಶ್ರಮಧರ್ಮಗಳನ್ನು ಅನುಷ್ಠಾನ ಮಾಡುವವರು, ವೇದಾಧ್ಯಯನ ಸಂಪನ್ನರು, ಸಕಲಶಾಸ್ತ್ರ ತತ್ವಜ್ಞರೂ ಆಗಿ ಆಯಾಯಾ ಕಾಲಗಳಲ್ಲಿ ಪ್ರಾಪ್ತವಾಗುವ ನಾಲ್ಕು ಆಶ್ರಮಗಳ ನಿಹಿತಕರ್ಮಗಳನ್ನು ಫಲಾಶೆಯಿಲ್ಲದೇ ಮಾಡುತ್ತಾ ಉತ್ತಮಗತಿಯನ್ನು ಹೊಂದುತ್ತಾರೆ.

 

ಜೀವನದ ನಾಲ್ಕು ಆಶ್ರಮಗಳು

ಪೂರ್ವಮೇವ ಬ್ರಹ್ಮಣಾಲೋಕಿತಮನುತಿಷ್ಠತಾ ಧರ್ಮಸಂರಕ್ಷಣಾರ್ಥಮಾಶ್ರಮಾಶ್ಚತ್ವಾರೋಭಿನಿರ್ದಿಷ್ಟಾಃ

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 43 ಶ್ಲೋಕ 105

ಭಾವಾರ್ಥ:- ಪೂರ್ವದಲ್ಲಿಯೇ ಬ್ರಹ್ಮನು ಲೋಕ ನೀತಿಯನ್ನು ಆಶ್ರಯಿಸಿ ಧರ್ಮಸಂರಕ್ಷಣೆ ಮಾಡುದಕ್ಕಾಗಿ ನಾಲ್ಕು ಆಶ್ರಮಗಳನ್ನು ನಿರ್ದೇಶಿಸಿದನು.

            ಬ್ರಹ್ಮಚರ್ಯೆ:-     ಅವುಗಳಲ್ಲಿ ಗುರುಕುಲವಾಸವನ್ನೇ (ಬ್ರಹ್ಮಚರ್ಯೆ) ಮೊದಲನೆಯ ಆಶ್ರಮನೆಂದು ಹೇಳಿರುವರು. ಈ ಆಶ್ರಮದಲ್ಲಿ ಶೌಚ, ಸಂಸ್ಕಾರ, ನಿಯಮ ವ್ರತಗಳನ್ನು ತಪ್ಪದೇ ಚೆನ್ನಾಗಿ ಆಚರಿಸಿ ಎರಡು ಸಂಧ್ಯಾ ವಂದನೆಗಳಲ್ಲಿ ಸೂರ್ಯ ಅಗ್ನಿ ದೇವತೆಗಳ ಉಪಸ್ಥಾನಗಳನ್ನು ಮಾಡಿ, ಸೋಮಾರಿತನವನ್ನು ಬಿಟ್ಟು, ಗುರುಗಳಿಗೆ ನಮಸ್ಕಾರ, ವೇದಾಭ್ಯಾಸ, ಶಾಸ್ತ್ರಶ್ರವಣ ಇವುಗಳಿಂದ ಪರಿಶುದ್ಧವಾಗಿ ಮಾಡಲ್ಪಟ್ಟ ಅಂತಃಕರಣವುಳ್ಳ-ವನಾಗಿ, ತ್ರಿಕಾಲಗಳಲ್ಲಿ ಸ್ನಾನ ಮಾಡಿ, ಬ್ರಹ್ಮಚರ್ಯ, ಅಗ್ನಿ ಪರಿಚರ್ಯೆ[22], ಗುರುಸೇವೆ, ನಿತ್ಯಭಿಕ್ಷೆ ಮುಂತಾದ ಸಕಲವನ್ನು ಅಂತರಾತ್ಮನಿಗೆ ಸಮರ್ಪಿಸಿ, ಗುರುಗಳ ಅಪ್ಪಣೆ ಮತ್ತು ಅನುಷ್ಠಾನಗಳಿಗೆ ಅನುಕೂಲನಾಗಿ ಗುರುವಿನ ಅನುಗ್ರಹ ಪಡೆದು ವೇದ ಶಾಸ್ತ್ರಾಧ್ಯಯನ ನಿಷ್ಠನಾಗಬೇಕು. ಗುರುಗಳನ್ನು ಆರಾಧಿಸಿ ವೇದಾಭ್ಯಾಸಮಾಡಿದ ಮನುಷ್ಯನಿಗೆ ಸ್ವರ್ಗಫಲವು ಮತ್ತು ಮನೋಭಿಷ್ಟವೂ ಸಹ ಸಿದ್ಧಿಸುವುದು.[23]

            ಗೃಹಸ್ಥ:- ಗೃಹಸ್ಥ್ಯವೇ ಎರಡನೆಯ ಆಶ್ರಮವೆಂದು ಹೇಳುತ್ತಾರೆ. ಅದರ ಸದಾಚಾರಾದಿ ಲಕ್ಷಣ, ಸಮಾವರ್ತನ ಸಂಸ್ಕಾರದಿಂದ ಪ್ರಾಪ್ತವಾದ ಸದಾಚಾರಗಳುಳ್ಳ ದಂಪತಿಗಳು ಕೂಡಿ ಧರ್ಮಾಚರಣೆ ಮಾಡಿ ಫಲವನ್ನು ಹೊಂದಬೇಕೆಂದು ಅಪೇಕ್ಷಿಸುವವರಿಗೆ ಗೃಹಸ್ಥಾಶ್ರಮವು ವಿಧಿಸಲ್ಪಟ್ಟದೆ.  ಈ ಗೃಹಸ್ಥಾಶ್ರಮದಲ್ಲಿ ಅನುಷ್ಠಾನಮಾಡಿದ ತ್ರಿವರ್ಗಸಾಧನೆಗಳಿಗೆ ಅನುಗುಣವಾಗಿ ಧರ್ಮ, ಅರ್ಥ, ಕಾಮಗಳ ಲಾಭವಾಗುವುದು. ಗೃಹಸ್ಥನು ಅನಿಷಿದ್ಧ ಕರ್ಮಧಿಂದ (ನಿಷೇಧಿಸದಿರುವ ಕರ್ಮಗಳಿಂದ)  ಹಣವನ್ನು ಸಂಪಾದಿಸಿ, ವೇದಾಧ್ಯಯನಲಬ್ಧೋತ್ಕರ್ಷದಿಂದ (ವೇದಾಧ್ಯಯನ ಗಳಿಸಿಕೊಂಡ ಹೆಮ್ಮೆಯಿಂದ)  ಅಥವಾ ಬ್ರಹ್ಮರ್ಷಿನಿರ್ಮಿತೋತ್ಕರ್ಷದಿಂದ (ಬ್ರಹ್ಮಜ್ಞಾನಿಯಾಗಿ ತಯಾರಾದ ಅಭಿಮಾನದಿಂದ) ಅಥವಾ ಸಮುದ್ರದಲ್ಲಿರುವ ನೀರು ದ್ರವ್ಯನಿಯಮಾಭ್ಯಾಸ (ಸಮುದ್ರದಲ್ಲಿರುವ ನೀರು ಸಂಪತ್ತು ಹತೋಟಿಯಲ್ಲಿಡುವ ಅಭ್ಯಾಸದಿಂದ)  ದೇವತಾಪ್ರಸಾದಗಳಿಂದ ಬಂದ ಹಣದಿಂದಲಾದರೂ ಗೃಹಕೃತ್ಯವನ್ನು ನಡೆಯಿಸಬೇಕು. ಗುರುಕುಲನಿವಾಸಿಗಳು ಅದನ್ನೇ ಆಶ್ರಮಗಳಿಗೆಲ್ಲಾ ಮೂಲವೆಂದು ಹೇಳುತ್ತಾರೆ. ಸನ್ಯಾಸಿಗಳಿಗೂ ಮತ್ತು ಸಂಕಲ್ಪಪೂರ್ವಕವಾಗಿ ವ್ರತ ನಿಯಮ ಧರ್ಮಗಳನ್ನು ಆಚರಿಸುವ ಇತರರಿಗೂ ಸಹ ಗೃಹಸ್ಥರು ತಮ್ಮ ಹಣದಲ್ಲಿ ಭಿಕ್ಷೆ ಬಲಿಗಳ ರೂಪವಾಗಿ ಭಾಗಕೊಡಬೇಕು.[24] 

            ಗೃಹಸ್ಥಾಶ್ರಮದಲ್ಲಿ ಪುಷ್ಪಮಾಲಿಕೆ, ಆಭರಣ, ವಸ್ತ್ರ, ಅಭ್ಯಂಜನ,  ವಿಷಯೋಪಭೋಗ್ಯ (ಇಂದ್ರಿಯ ಸುಖಗಳ ಅನುಭವಿಸುವಿಕೆ),  ನರ್ತನ, ಸಂಗೀತ ಮತ್ತು ವಾದ್ಯಗಳ ಶ್ರವಣಸುಖ, ದರ್ಶನಸುಖ, ವಿಹಿತ ವಿಷಯಗಳಲ್ಲಿ ಪ್ರೇಮ (ಯೋಗ್ಯವಾದ ವಿಷಯಗಳಲ್ಲಿ ಪ್ರೇಮ), ಸ್ವಸ್ತ್ರೀ, ದರ್ಶನಸುಖ, ಭಕ್ಷ್ಯ, (ಆಹಾರ) ಭೋಜ್ಯ (ಹಬ್ಬದ ಭೋಜನ) ಗೊಜ್ಜು, ಪೇಯ, ಚೋಷ್ಯ (ಹೀರುವುದು) ಮುಂತಾದ ನಾನಾ ವಿಧವಾದ ತಿನ್ನುವ ಪದಾರ್ಥಗಳ ಉಪಭೋಗ (ವಿಷಯಾನುಭವ) ವಿಹಾರಸುಖ, ಕಾಮ ಸುಖ ಇವುಗಳೆಲ್ಲವೂ ಪ್ರಾಪ್ತವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ನಿತ್ಯವೂ ಧರ್ಮ, ಅರ್ಥ, ಕಾಮಗಳೆಂಬ ತ್ರಿವರ್ಗಸಾಧನವಾದ ಗುಣಗಳನ್ನು ಸಂಪಾದಿಸುವವನು ಇಲ್ಲಿ ಸುಖಗಳನ್ನನುಭವಿಸಿ, ಉಳಿದವುಗಳಿಗೆ ಪರಲೋಕದಲ್ಲಿ ಫಲವನ್ನು ಹೊಂದುವನು. ಉಂಛವೃತ್ತಿಯಿಂದ ಜೀವಿಸುವ, ತನ್ನ ವರ್ಣಾಶ್ರಮಗಳಿಗೆ ವಿಹಿತವಾಗಿರುವ ಧರ್ಮಾಚರಣೆಯಲ್ಲಿ ಆಸಕ್ತನಾಗಿರುವ, ಕಾಮಸುಖ ಪ್ರಯತ್ನಗಳನ್ನು ತ್ಯಜಿಸಿರುವ ಗೃಹಸ್ಥನಿಗೆ ಸ್ವರ್ಗವು ಸುಲಭವಾಗಿ ದೊರೆಯುತ್ತದೆ.[25]  

ವಾನಪ್ರಸ್ಥ:- ಹಿಂದಿನ ಕಾಲದಲ್ಲಿ ಗ್ರಹಸ್ಥ ಜೀವನದ ನಂತರ, ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಿ ಸುಮಾರು ಐವತ್ತರಿಂದ ಅರವತ್ತರ ವಯಸ್ಸಿನಲ್ಲಿ ಎಲ್ಲವನ್ನೂ ಮಕ್ಕಳ ಸ್ವಾಧೀನಕ್ಕೆ ಬಿಟ್ಟು ಕಾಡಿಗೆ ಹೋಗಿ ವಾಸಮಾಡುತ್ತಿದ್ದರು. ಅದನ್ನೇ ವಾನಪ್ರಸ್ಥ ಎನ್ನುತ್ತಾರೆ. - ಇವರು ಸಾಧುಗಳು, ಒಳ್ಳೆಯ ಪಥ್ಯವಾದ ಆಹಾರವನ್ನು ತಿನ್ನುವವರು, ವೇದಾಧ್ಯಯನದಲ್ಲಿ ಆಸಕ್ತರಾಗಿರುವವರೂ ಆಗಿ ತೀರ್ಥಯಾತ್ರೆ ಮತ್ತು ದೇಶದರ್ಶನಗಳಿಗಾಗಿ ಭೂಮಿಯಲ್ಲಿ ತಿರುಗುತ್ತಿರುವರು.  ಪ್ರತ್ಯುತ್ಥಾನಮಾಡಿ (ಅತಿಥಿಯ ಆಗಮನವಾದಾಗ ಗೌರವ ಸೂಚಕವಾಗಿ ಆಸನದಿಂದ ಎದ್ದು ನಿಲ್ಲುವುದು) ಅವರನ್ನು ಇದಿರುಗೊಳ್ಳುವುದು, ಅಸೂಯೆಯಿಲ್ಲದಿರುವಿಕೆ, ಸವಿನುಡಿ, ಸುಖಸತ್ಕಾರ, ಆಸನ, ಸುಖಶಯನ, ಭೋಜನ ಇವುಗಳಿಂದ ಸತ್ಕರಿಸಬೇಕು. ಅತಿಥಿಯು ಆತಿಥ್ಯವನ್ನು ಸ್ವೀಕರಿಸದೆ ನಿರಾಶೆಯಿಂದ ಯಾರ ಮನೆಯನ್ನು ಬಿಟ್ಟು ಹೊರಡುವನೋ, ಅವನಿಗೆ ಪಾಪವನ್ನು ಕೊಟ್ಟು ಪುಣ್ಯವನ್ನು ತೆಗೆದುಕೊಂಡು ಹೋಗುವನು. ಮತ್ತು ಯಜ್ಞ ಕರ್ಮಗಳಿಂದ ದೇವತೆಗಳನ್ನೂ, ತರ್ಪಣಾದಿಗಳಿಂದ ಪಿತೃಗಳನ್ನೂ, ವಿದ್ಯಾಭ್ಯಾಸ ಶ್ರವಣ ಧಾರಣೆಗಳಿಂದ ಖುಷಿಗಳನ್ನೂ ಮಕ್ಕಳನ್ನು ಹುಟ್ಟಿಸುವುದರಿಂದ ಪ್ರಜೇಶ್ವರನನ್ನೂ (ಪ್ರಜೆಗಳ ಒಡೆಯನನ್ನು) ತೃಪ್ತಿ ಪಡಿಸಬೇಕು. ಸರ್ವಪ್ರಾಣಿಗಳಲ್ಲಿಯೂ ದಯೆ ಮತ್ತು ಕಿವಿಗಿಂಪಾಗುವ ಮಾತುಗಳು ವಿಹಿತವು. ಇತರರನ್ನು ಸಂಕಟಪಡಿಸುವುದು,  ಬಡಿಯುವುದು, ಕಠಿಣ ಮಾತನಾಡುವುದೂ ಸಹ ನಿಂದ್ಯವು. ಅವಜ್ಞಾನ ಎಂದರೆ ತಿರಸ್ಕಾರ, ಗರ್ವ ಮತ್ತು ಜಂಭ, ಇವುಗಳು ನಿಷಿದ್ಧವು. ಅಹಿಂಸೆ, ಸತ್ಯ, ಅಕ್ರೋಧ ಇವುಗಳು ಆಶ್ರಮಗಳಿಗೆಲ್ಲಾ ವಿಹಿತವಾದ ತಪಸ್ಸು.[26] 

            ವಾನಪ್ರಸ್ಥರೂ ಸಹ ಧರ್ಮ, ಪುಣ್ಯಕರ ತೀರ್ಥಗಳು ಮತ್ತು ನದೀ ಪ್ರಸ್ರವಣಗಳು (ಬೆಟ್ಟದ ಜರಿ) ಇವುಗಳನ್ನಾಶ್ರಯಿಸಿದವರಾಗಿ ಜಿಂಕೆ ಹಂದಿ, ಎಮ್ಮೆ, ಹುಲಿ,  ಕಾಡಾನೆ ಇವುಗಳಿಂದ ತುಂಬಿದ ಅಪೂರ್ವವಾದ ಕಾಡುಗಳಲ್ಲಿ ತಪಸ್ಸು ಮಾಡುತ್ತಾ ಸಂಚರಿಸುತ್ತಿರುವರು. ಗ್ರಾಮದಲ್ಲಿ ಮಾಡಿದ ಬಟ್ಟೆ,  ಬೋಜನ, ಮುಂತಾದ ಉಪಭೋಗ ಸಾಧನಗಳನ್ನು ಬಿಟ್ಟು ಕಾಡಿನಲ್ಲಿ ಬೆಳೆದ ಧಾನ್ಯ ಹಣ್ಣು, ಗೆಡ್ಡೆ, ಎಲೆ ಇವುಗಳನ್ನೊಳಗೊಂಡ ವಿಲಕ್ಷಣವಾದ ಕ್ಲಪ್ತಾಹಾರವನ್ನು (ನಿಶ್ಚಿತ ಆಹಾರವನ್ನು) ಸೇವಿಸುತ್ತಾ ಭೂಮಿಯನ್ನೇ ಆಸನವಾಗಿ ಮಾಡಿಕೊಂಡು ನೆಲ, ಕಲ್ಲು, ಮರಳಿನ ರಾತಿ ಮತ್ತು ಬೂದಿಗಳ ಮೇಲೆ ಮಲಗಿಕೊಳ್ಳುತ್ತಾ, ಕಾಚೀಹುಲ್ಲು, ದರ್ಭೆ, ಚರ್ಮ, ಚೀರವಸ್ತ್ರ ಇವುಗಳನ್ನು ಹೊದ್ದುಕೊಂಡು ತಲೆಯಕೂದಲು, ಮೀಶೆ, ಉಗುರು, ಮುಖದಕೂದಲು ಇವುಗಳನ್ನು ಬೆಳೆಸಿ ನಿಯಮಿತ ಸಮಯದಲ್ಲಿ ಜಲೋಪಸ್ಪರ್ಶಮಾಡುತ್ತಾ, ವಿಹಿತಕಾಲದಲ್ಲಿ (ಯೋಗ್ಯವಾದ ಕಾಲದಲ್ಲಿ) ಶುಷ್ಕಬಲಿ (ಪ್ರಯೋಜನವಿಲ್ಲದ್ದನ್ನು ಬಲಿ ಕೊಡುತ್ತಾ) ಮತ್ತು ಹೋಮಗಳನ್ನ ಆನುಷ್ಠಾನ ಮಾಡುವವರಾಗಿ, ಸಮಿತ್ತು, ದರ್ಬೆ ಮತ್ತು ಪುಷ್ಪ ಇವುಗಳನ್ನು ತೆಗೆದುಕೊಂಡು ಬರುವುದು, ಕಸಬಳಿಯುವುದು ಈ ಕಾರ್ಯಗಳಿಂದ ಪ್ರಾಪ್ತವಾದ ವಿಶ್ರಾಂತಿಯಳ್ಳವರಾಗಿ ಚಳಿ, ಗಾಳಿ, ಬಿಸಿಲುಗಳಿಂದ ಬಿರಿದ ಚರ್ಮಗಳುಳ್ಳವರಾಗಿ ನಾನಾ ವಿಧನಿಯಮ,  ಯೋಗಾಭ್ಯಾಸ ಇವುಗಳ ಆಚರಣೆಯಿಂದ ಒಣಗಿದ ರಕ್ತಮಾಂಸಚರ್ಮಗಳುಳ್ಳವರಾಗಿ ಧೈರ್ಯವನ್ನು ಹೊಂದಿ ಸಾತ್ವಿಕ ತೇಜಸ್ಸಿನಿಂದ ಶರೀರಗಳನ್ನು ಧರಿಸಿರುತ್ತಾರೆ. ಬ್ರಹ್ಮರ್ಷಿಯಿಂದ ವಿಧಿಸಲ್ಪಟ್ಟ ಈ ಕ್ಲಪ್ತಚರ್ಯೆಯನ್ನು (ನಿಶ್ಚಿತ ಚರ್ಯೆಯನ್ನು) ಆಚರಿಸುವವನು ಬೆಂಕಿಯಂತೆ ದೋಷಗಳನ್ನು ಸುಡುವನು ಮತ್ತು ಜಯಿಸಲಶಕ್ಯವಾದ ಲೋಕಗಳನ್ನು ಜಯಿಸುವನು.[27] 

            ಸನ್ಯಾಸ:- ಸನ್ಯಾಸಿಗಳ ಧರ್ಮವಾವುದೆಂದರೆ- ಅಗ್ನಿಯನ್ನು ತ್ಯಜಿಸಿ ಹಣ, ಹೆಂಡತಿ, ಪರಿವಾರ ಸಂಗಗಳಲ್ಲಿ ತನಗಿದ್ದ ಅಭಿಮಾನವೆಂಬ ಬಂಧನವನ್ನು ಕಿತ್ತು ಹಾಕಿ ಸನ್ಯಾಸಾಶ್ರಮವನ್ನು ಸ್ವೀಕರಿಸುವರು. ಅವರು ಕಟ್ಟಿಗೆ ಕಲ್ಲು, ಸುವರ್ಣ ಇವುಗಳನ್ನು ಸಮಾನವಾಗಿ ಎಂದರೆ ಕಟ್ಟಿಗೆ ಕಲ್ಲುಗಳಂತೆ ಸುವರ್ಣವೂ ಹೇಯವೆಂದು ತಿಳಿದು, ಧರ್ಮ ಅರ್ಥ ಕಾಮಗಳೆಂಬ ತ್ರಿವರ್ಗಸಾಧನಗಳಲ್ಲಿ ಆಸಕ್ತರಾಗದೇ ಏಕಾಂತ ಭಕ್ತರಾಗುವರು.  ಅವರು ಶತ್ರು, ಮಿತ್ರ ಉದಾಸೀನರಾದವರನ್ನು ಸಮವಾಗಿ ನೋಡುತ್ತಾ, ಸ್ಥಾವರ, (ವೃಕ್ಷಾದಿಗಳು) ಮನುಷ್ಯರು, ಕೋಳಿ ಮುಂತಾದುವು ಕ್ರಿಮಿದಂಶಾದಿಗಳು ಇವುಗಳಿಗೆ ವಾಕ್ಕು,  ಮನಸ್ಸು, ಕ್ರಿಯೆ ಇವುಗಳಿಂದ ದ್ರೋಹ ಮಾಡದಂತೆ ನಿಯತ ವಾಸಸ್ಥಾನವಿಲ್ಲದೆ, ಬೆಟ್ಟ, ನದಿಯತೀರ, ವೃಕ್ಷದಮೂಲ ದೇವಾಲಯ ಇವುಗಳಲ್ಲಿ ಸಂಚರಿಸುತ್ತಾ ವಾಸಕ್ಕೋಸ್ಕರ ಹಳ್ಳಿ ಅಥವಾ ಪಟ್ಟಣಗಳಿಗೆ ಹೋಗದಂತೆ, ಕ್ರೋಧ, ದರ್ಪ, ಲೋಭ, ಮೋಹ. ದೈನ್ಯ, ಜಂಭ, ನಿಂದೆ ಮತ್ತು ಅಭಿಮಾನ ಇವುಗಳನ್ನು ಬಿಟ್ಟು ತತ್ಪ್ರಯುಕ್ತವಾದ ಬಾಧೆಗೀಡಾಗದಂತೆ ಇರಬೇಕು.  ಸರ್ವಪ್ರಾಣಿಗಳಿಗೂ ಅಭಯಕೊಟ್ಟು ಸಂಚರಿಸುವ ಮುನಿಗೆ ಯಾವ ದೇಶಕಾಲಗಳಲ್ಲಿಯೂ ಯಾವ ಪ್ರಾಣಿಯಿಂದಲೂ ಭಯವುಂಟಾಗುವುದಿಲ್ಲ. ಅಗ್ನಿಹೋತ್ರವನ್ನು ತನ್ನ ಶರೀರದೊಳಗಿರುವಂತೆ ಮಾಡಿ ಶರೀರದಲ್ಲಿರುವ ಅಗ್ನಿಯನ್ನು ತನ್ನ ಬಾಯಿಯಲ್ಲಿ ಹೋಮ ಮಾಡುವನು. ಬ್ರಹ್ಮಜ್ಞಾನಿಯಾದರೋ  ಭಿಕ್ಷಾಟನದಿಂದ ಲಭಿಸಿದ ಹವಿಸ್ಸುಗಳನ್ನು ಕೊಟ್ಟು ಚಿತಿಸ್ಥವಾದ ಅಗ್ನಿಯಿಂದ ಉತ್ತಮಲೋಕಗಳಿಗೆ ಹೋಗುತ್ತಾನೆ. ಪರಿಶುದ್ಧನಾದ, ತನ್ನ ಸಂಕಲ್ಪಾನುಸಾರ ಯುಕ್ತಬುದ್ಧಿಯುಳ್ಳ, ವಿಧಾನೋಕ್ತ ಪ್ರಕಾರ ಸನ್ಯಾಸಾಶ್ರಮವನ್ನು ಸ್ವೀಕರಿಸುವ ದ್ವಿಜನು ಕಟ್ಟಿಗೆ ಮುಂತಾದುವಿಲ್ಲದ ಅಗ್ನಿಯಂತೆ ಪ್ರಶಾಂತವಾದ ಬ್ರಹ್ಮಲೋಕವನ್ನು ಆಶ್ರಯಸುವನು.[28]

 

ಇಂದಿನ ವರ್ಣಾಶ್ರಮದ ಸ್ಥಿತಿಯನ್ನು ಅರಿಯಲು ಪುರಾಣದಲ್ಲಿ ಭವಿಷ್ಯ 

            ಇಂದಿನ ಕಲಿಯುಗದ ವರ್ಣಾಶ್ರಮದ ವಿವರಣೆಯೂ ಇಂದು ನಡೆಯುತ್ತಿರುವ ವಿಧ್ಯಮಾನಗಳಿಗೆ ಸರಿಯಾಗಿ ಶ್ರೀ ನಾರದೀಯ  ಮಹಾ ಪುರಾಣದಲ್ಲಿ ಉಲ್ಲೇಕವಾಗಿದೆ

ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಧರ್ಮಪರಾಜ್ಮುಖಾಃ ।

ಘೋರೇ ಕಲಿಯುಗೇ ಪ್ರಾಪ್ತೇ ದ್ವಿಜಾ ವೇದಪರಾಜ್ಮುಖಾಃ ||

ವ್ಯಾಜಧರ್ಮರತಾಸ್ಸರ್ವೇ ಅಸೂಯಾನಿರತಾಸ್ತಥಾ

ವೃಥಾsಹಂಕಾರದುಷ್ಟಾಶ್ಚ ಸತ್ಯಹೀನಾಶ್ಚ ಪಂಡಿತಾಃ ॥

ಅಹಮೇವಾಧಿಕ ಇತಿ ಸರ್ವೇಪಿ ವಿವದಂತಿ ಚ।

ಅಧರ್ಮಲೋಲುಪಾಃ ಸರ್ವೇ ತಥಾ ವೈತಂಡಿಕಾ ನರಾಃ ॥

ಅತಃ ಸ್ವಲ್ಪಾಯುಷಃ ಸರ್ವೇ ಭವಿಷ್ಯಂತಿ ಕಲೌ ಯುಗೇ |

ಅಲ್ಪಾಯುಷ್ಟ್ವಾನ್ಮನುಷ್ಯಾಣಾಂ ನ ವಿದ್ಯಾಗ್ರಹಣಂ ದ್ವಿಜ ||

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 41 ಶ್ಲೋಕ 30 ರಿಂದ 33

ಭಾವಾರ್ಥ:- ಉಗ್ರಕಲಿಯುಗವು ಬಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರು ವಿಹಿತ ಧರ್ಮವನ್ನು ಬಿಡುವರು. ದ್ವಿಜರು ವೇದವನ್ನು ಉದಾಸೀನ ಮಾಡುವರು. ಎಲ್ಲರೂ ಕಪಟ ಧರ್ಮಪರರು, ಹೊಟ್ಟೇ ಕಿಚ್ಛು ಪಡುವವರೂ ಆಗುವರು. ಪಂಡಿತರು ಸುಮ್ಮನೆ ಗರ್ವಪಡುತ್ತಾ ದುಷ್ಟರಾಗಿ ಸತ್ಯಮಾರ್ಗವನ್ನು ಬಿಡುವರು. ನಾನೇ ದೊಡ್ಡವನೆಂದು ಎಲ್ಲರೂ ಜಗಳವಾಡುವರು. ಎಲ್ಲಾ ಮನುಷ್ಯರೂ ಅಧರ್ಮದಲ್ಲಿ ಆಸಕ್ತರಾಗಿ ವಿತಂಡವಾದವನ್ನು ಮಾಡುವರು. ಆದ್ದರಿಂದ ಕಲಿಯುಗದಲ್ಲಿ ಎಲ್ಲರೂ ಅಲ್ಪಾಯುಸ್ಸುಳ್ಳವರಾಗುವರು. ಮನುಷ್ಯರಿಗೆ ಆಯುಸ್ಸೇ ಕಡಿಮೆಯಾಗಿರುವುದರಿಂದ ದ್ವಿಜರಿಗೆ ವಿದ್ಯಾಧ್ಯಯನವೇ ಆಗುವುದಿಲ್ಲ.

            ಹೆಚ್ಚುವರಿ ವಿವರಣೆ :- ವಿದ್ಯಾಧ್ಯಯನವಿಲ್ಲದಿರುವುದರಿಂದ ಪುನಃ ಅಧರ್ಮವೇ ಹಿಂಬಾಲಿಸುವುದು. ಸಕಲ ಪ್ರಜೆಗಳೂ ಪಾಪಕೃತ್ಯಮಾಡುತ್ತಾ ಕ್ರಮತಪ್ಪಿ ಸಾಯುವರು. ಬ್ರಾಹ್ಮಣಾದಿ ವರ್ಣಗಳು ಪರಸ್ಪರವಾಗಿ ಸಂಕೀರ್ಣವಾಗುತ್ತವೆ. ಅಜ್ಞರು, ಕಾಮ ಕ್ರೋಧಪರರೂ ಆಗಿ ಸುಮ್ಮನೆ ದುಃಖದಿಂದ ಬಳಲುವರು. ಕಲಿಯುಗದಲ್ಲಿ ಎಲ್ಲಾ ವರ್ಣದವರೂ ಶೂದ್ರರಿಗೆ ಸಮಾನರಾಗುವರು. ಉತ್ತಮರು ನೀಚರಾಗುವರು. ನೀಚರು ಉತ್ತಮರಾಗುವರು. ದೊರೆಗಳು ದ್ರವ್ಯಾಶೆಯಿಂದ ಅನ್ಯಾಯಮಾರ್ಗದಲ್ಲಿ ವರ್ತಿಸುತ್ತಾ ಕಂದಾಯ ಮುಂತಾದುವನ್ನು ಹೆಚ್ಚಿಸಿ ಪ್ರಜೆಗಳಿಗೆ ಬಾಧೆಕೊಡುವರು. ದ್ವಿಜರು ಶೂದ್ರರ ಹೆಣವನ್ನು ಹೊರುವರು. ಗಂಡಂದಿರು ಪರಸ್ತ್ರೀಸಂಗಮಾಡುವವರಾಗಿ ಧರ್ಮಪತ್ನಿಯ ಸಂಗವನ್ನು ಮಾಡುವುದಿಲ್ಲ. ಮಕ್ಕಳು ತಂದೆಯನ್ನೂ, ಸ್ತ್ರೀಯರೆಲ್ಲಾ ಗಂಡನನ್ನೂ ದ್ವೇಷಿಸುವರು. ಎಲ್ಲರೂ ಪರಸ್ತ್ರೀಲೋಲುಪರು, ಪರದ್ರವ್ಯವನ್ನು ಅಪಹರಿಸುವವರೂ ಆಗುವರು. ಭಯಂಕರ ಕಲಿಯುಗದಲ್ಲಿ ಮೀನನ್ನು, ಮಾಂಸವನ್ನೂ ಸಹ ತಿಂದು ಜೀವಿಸುವರು. ಮೇಕೆ, ಕುರಿ ಇವುಗಳಲ್ಲಿ ಹಾಲುಕರೆಯುವರು. ಈ ರೀತಿಯಾಗಿ ಎಲ್ಲರೂ ಪಾಪಕೃತ್ಯಗಳಲ್ಲಿ ನಿರತರಾಗುವರು. ಸಾಧುಗಳನ್ನು ನೋಡಿ ಹೊಟ್ಟಿ ಕಿಚ್ಚಿ ನಿಂದ ಅಸಹಾಸ್ಯ ಮಾಡುವರು.  ನದೀತೀರಗಳಲ್ಲಿ ಕಾಲುವೆಗಳನ್ನು ತೋಡಿ ಅದರಿಂದ ಧಾನ್ಯಗಳನ್ನು ಬೆಳೆಯುವರು. ಭೂಮಿಯು ನಿಷ್ಟಲವಾಗುವುದು. ಬಿತ್ತ (ನಟ್ಟ) ಬೀಜವು ಹಾಳಾಗುವುದು. ಹೆಂಗಸರು ಸೂಳೆಗಳಂತೆ ಲಾವಣ್ಯಗಳನ್ನು ಬಯಸುವರು. ಬ್ರಾಹ್ಮಣರು ಧರ್ಮವನ್ನು ಮಾರುವರು. ಹೆಂಗಸರು ದೇಹವನ್ನು ಮಾರುವರು. ಕೆಲವರು ವೇದವನ್ನು ಮಾರುವರು. ದ್ವಿಜರು ಶೂದ್ರ ಧರ್ಮದಲ್ಲಿ ನಿರತರಾಗುವರು. ಬ್ರಾಹ್ಮಣರು ದ್ರವ್ಯ ಸಂಪಾದನೆಯಲ್ಲಿಯೇ ನಿರತರಾಗಿ ಸಾಧುಗಳ ಮತ್ತು ವಿಧವೆಯರ ಹಣವನ್ನು ಅಪಹರಿಸುವರು. ವಿಹಿತವ್ರತಗಳನ್ನು ಮಾಡುವುದಿಲ್ಲ. ಧರ್ಮಾಚಾರವನ್ನು ಬಿಟ್ಟು ಸುಮ್ಮನೆ ವಾದಮಾಡುವರು. ದ್ವಿಜರು ತಾಯಿತಂದೆಗಳ ಶ್ರಾದ್ಧ ಮುಂತಾದ ಕರ್ತವ್ಯ ವ್ಯಾಪಾರಗಳನ್ನು ಜಂಭಕ್ಕಾಗಿ ಮಾಡುವರು.  ನೀಚ ಮನುಷ್ಯರು ಅಪಾತ್ರಗಳಲ್ಲಿಯೇ ದಾನಕೊಡುತ್ತಾರೆ. ಹಾಲಿನ ಆಶೆಯಿಂದ ಗೋವುಗಳಲ್ಲಿ ವಿಶ್ವಾಸಮಾಡುತ್ತಾರೆ. ಬ್ರಾಹ್ಮಣರು ಸ್ನಾನಶೌಚಾಧಿ ಕರ್ಮಗಳನ್ನು ಮಾಡುವುದಿಲ್ಲ. ನೀಚ ದ್ವಿಜರು ನಿಷಿದ್ಧ ಸಮಯದಲ್ಲಿ ಕರ್ಮಮಾಡುವರು. ಸಾಧುಗಳ ಮತ್ತು ಬ್ರಾಹ್ಮಣರ ದೂಷಣೆಯಲ್ಲಿ ನಿರತರಾಗುವರು. ಯಾವನ ಮನಸ್ಸೂ ವಿಷ್ಣು ಭಕ್ತಿ ಮಾಡುವುದರಲ್ಲಿ ಪ್ರವರ್ತಿಸುವುದಿಲ್ಲ. ಕಲಿಯುಗದಲ್ಲಿ ದ್ವಿಜರು ಯಾಗ ಮಾಡುವುದಿಲ್ಲ. ದುಷ್ಪರಾದ ರಾಜಭೃತ್ಯರು ಹಣಕ್ಕಾಗಿ ದ್ವಿಜರನ್ನು ಹಿಂಸಿಸುತ್ತಾರೆ. ಭಯಂಕರ ಕಲಿಯುಗದಲ್ಲಿ ವಿಹಿತ ದಾನಮಾಡು ವವರೇ ಇರುವುದಿಲ್ಲ. ದ್ವಿಜರು ಪತಿತರಿಂದಲೂ ದಾನವನ್ನು ಸ್ವೀಕರಿಸುವರು. ಕಲಿಯುಗದ ಮೊದಲನೆಯ ಪಾದದಲ್ಲಿಯೇ ಜನರು ಹರಿಯನ್ನು ದೂಷಿಸುವರು. ಶೂದ್ರಸ್ತ್ರೀ ಮತ್ತು ವಿಧವೆ ಇವರ ಸಂಗದಲ್ಲಿ ಆಸಕ್ತರಾಗುವರು. ಕಲಿಯುಗದಲ್ಲಿ ದ್ವಿಜರು ಶೂದ್ರರ ಅನ್ನವನ್ನು ಭೋಜನ ಮಾಡುವರು.[29]

            ಅಧಮ ಪಾಷಂಡರು ದ್ವಿಜರ ಚಿನ್ಹೆಗಳನ್ನು ಧರಿಸಿ ಧರ್ಮಗಳನ್ನು ಪರಿಗ್ರಹಿಸುವರು.  ಕಾವಿಬಟ್ಟೆಯನ್ನುಟ್ಟು, ಜಟಾಧಾರಿಗಳಾಗಿ, ಭಸ್ಮವನ್ನು ಹಚ್ಚಿಕೊಂಡು ವೇದೋಕ್ತವಾದ ಸನ್ಮಾರ್ಗವನ್ನು ಬಿಟ್ಟು ಕುಮಾರ್ಗವನ್ನು ಅವಲಂಬಿಸುವರು. ಪಾಷಂಡರು ನಾಲ್ಕು ಆಶ್ರಮಗಳನ್ನು ದೂಷಿಸುತ್ತಾರೆ. ಶೂದ್ರರು ದ್ವಿಜರ ಸೇವೆಯನ್ನು ಮಾಡುವುದಿಲ್ಲ. ದ್ವಿಜರು ಕುಯುಕ್ತಿನಿರತರಾಗಿ ಸ್ವಧರ್ಮಗಳನ್ನು ಬಿಟ್ಟು ಪರಾನ್ನ ತಿನ್ನುತ್ತಾ ಶೂದ್ರಧರ್ಮಗಳನ್ನೇ ಹೊಗಳುವರು. ಕಲಿಯುಗದಲ್ಲಿ ದುರಾತ್ಮರಾದ ಶೂದ್ರರು ಸನ್ಯಾಸಿಗಳಾಗುವರು. ಜನರು ಲಂಚದಿಂದ ಜೀವಿಸುವರು. ಅಧಮರಾದ ಪಾಷಂಡರು ಕಪಾಲಧಾರಿಗಳಾಗಿ ಭಿಕ್ಷುಗಳಾಗುವರು. ಶೂದ್ರರು ಉತ್ತಮಪೀಠದಲ್ಲಿ ಕುಳಿತು ಧರ್ಮನಾಶಕರಾದ ದ್ವಿಜರಿಗೆ ಧರ್ಮಗಳನ್ನು ಉಪದೇಶಿಸುವರು. ಇವರು ಮತ್ತು ನಗ್ನರು ರಕ್ತವಸ್ತ್ರಧಾರಿಗಳೇ ಮುಂತಾಗಿ ಬಹುಸಂಖ್ಯಾತರಾದ ಪಾಷಂಡಿಗಳು ಸಂಚರಿಸುತ್ತಿರುವರು. ಇವರೆಲ್ಲರೂ ಪ್ರಾಯಶಃ ವೇದನಿಂದಕರು, ಸಂಗೀತ ವಾದ್ಯ ಇವುಗಳಲ್ಲಿ ಕುಶಲರೂ ಆಗಿ ಕ್ಷುದ್ರ ಧರ್ಮಗಳನ್ನಾಶ್ರಯಿಸುವರು. ಕಲಿಯುಗದಲ್ಲಿ ಜನರು ಪ್ರಾಯಶಃ ಧರ್ಮನಾಶಕರಾಗುವರು. ಅಲ್ಪದ್ರವ್ಯವಂತರು ಸಾಧುವೇಷವನ್ನು ಧರಿಸಿರುವವರೂ ಆಗಿ ಕಾರಣವಿಲ್ಲದೆ ಅಹಂಕಾರದಿಂದ ದೂಷಿತರಾಗುವರು. ನೀಚ ಮನುಷ್ಯರು. ಪರದ್ರವ್ಯವನ್ನು ಅಪಹರಿಸುವವರು, ಪರದನ  ಪ್ರತಿಗ್ರಹನಿರತರು (ಪರದನ ದಾನ ಸ್ವೀಕರಿಸಲು ನಿಂತವರು), ಲೋಕಮರ್ಯಾದೆಯನ್ನು ಮಾರಿ ಅಪಮಾರ್ಗದಲ್ಲಿ ನಡೆಯುವವರು, ತನ್ನನ್ನು ತಾನೇ ಹೊಗಳಿಕೊಳ್ಳುವವರು, ಪರದೂಷಣೆಯಲ್ಲಿ ನಿರತರು, ಭಯಂಕರರು, ದಯಾಧರ್ಮವಿಲ್ಲದವರೂ ಆಗಿ ವಿಶ್ವಾಸಘಾತಕರಾಗುವರು. ಕಲಿಯುಗದಲ್ಲಿ ಮನುಷ್ಯರು ಅಧರ್ಮಬಂಧುಗಳಾಗುವರು. ಆಗ ಜನರಿಗೆ ಹದಿನಾರು ವರ್ಷಗಳೇ ಪೂರ್ಣಾಯುಸ್ಸು. ಭಯಂಕರ ಕಲಿಯುಗದಲ್ಲಿ ಐದು ವರ್ಷ ವಯಸ್ಸಿನ ಕನ್ಯೆಯು ಪ್ರಸವಿಸುವಳು. ಏಳು ಎಂಟು ವರ್ಷಗಳಿಗೆ ಯೌವನವು, ಆಮೇಲೆ ಮುದಿತನವು.[30]

            ಕಲಿಯುಗದಲ್ಲಿ ಎಲ್ಲರೂ ತಮ್ಮ ವಿಹಿತಕರ್ಮವನ್ನು ಬಿಡುವರು. ಉಪಕಾರವನ್ನು ಸ್ಮರಿಸುವುದಿಲ್ಲ. ಜಾತ್ಯಂತರದವರ ಧರ್ಮವನ್ನವಲಂಬಿಸುವರು. ದ್ವಿಜರು ಯಾವಾಗಲೂ ಭಿಕ್ಷೆಗಾರರಾಗುವರು. ಜನರು ಇತರರಿಗೆ ಅವಮಾನಮಾಡುವುದರಲ್ಲಿಯೇ ಆಸಕ್ತರಾಗುವರು. ಪರಗೃಹದಲ್ಲಿ ಸಂತೋಷಪಡುವರು. ಅಲ್ಲಿಯೇ ದೂಷಣೆಯನ್ನೂ ಮಾಡುತ್ತಿರುವರು. ವಿಶ್ವಾಸವನ್ನು ನಟಿಸುವರು. ತಂದೆ, ತಾಯಿ, ಮಕ್ಕಳು ಇವರುಗಳನ್ನು ಯಾವಾಗಲೂ ನಿಂದಿಸುವರು. ಬಾಯಿಂದ ಧರ್ಮ ಹೇಳುವರು; ಮನಸ್ಸಿನಲ್ಲಿ ಪಾಪವನ್ನು ಚಿಂತಿಸುವರು. ಹಣ, ವಿದ್ಯೆ ವಯಸ್ಸು ಇವುಗಳಿಂದ ಕೊಬ್ಬಿ ಸಕಲದುಃಖ ನಿರತರಾಗುವರು. ರೋಗ, ಕಳ್ಳರು, ಕ್ಷಾಮ, ಇವುಗಳಿಂದ ಬಳಲುವರು. ಅತ್ಯಂತ ವಂಚಕರಾಗುವರು. ಇವರು ದುಷ್ಕರ್ಮಗಳನ್ನು ಲೆಕ್ಕಿಸದೇ ಹಾಗೆಯೇ ಬೆಳೆಯುವರು. ಪಾಪಿಷ್ಠರು ಧರ್ಮ ಮಾರ್ಗ ಪ್ರವರ್ತಕರನ್ನು ತಿರಸ್ಕರಿಸುವರು. ಶೂದ್ರರು ಭಿಕ್ಷಾಟನೆಯಲ್ಲಿ ನಿರತರಾಗುವರು. ಅವರ ಸೇವೆಯನ್ನು ದ್ವಿಜರು ಮಾಡುವರು. ಕಲಿಯುಗದಲ್ಲಿ ಶಿಷ್ಯ, ಗುರು, ಮಗ ತಂದೆ, ಹೆಂಡತಿ, ಗಂಡ ಇವರು ತಮ್ಮ ತಮ್ಮ ಧರ್ಮವನ್ನು ಅವಲಂಬಿಸುವುದಿಲ್ಲ. ಕಲಿಯುಗದಲ್ಲಿ ಧನಿಕರೂ ಸಹ ಯಾಚಕರಾಗುವರು. ನಿಷಿದ್ಧ ವಸ್ತುಗಳನ್ನು ಮಾರುವುದರಲ್ಲಿ ಆಸಕ್ತರಾಗಿ ಅಗಮ್ಯಾಗಮನ[31] ಮಾಡುತ್ತಾ ವೇದದೂಷಕರು ಮತ್ತು ಧರ್ಮಶಾಸ್ತ್ರ ನಿಂದಕರೂ ಆಗುವರು. ದ್ವಿಜರು ನರಕಕ್ಕೆ ಹೋಗಲು ಅರ್ಹರಾಗಿ ಶೂದ್ರವೃತ್ತಿಯಿಂದಲೇ ಜೀವಿಸುವರು.[32]

            ಮಳೆಯಿಲ್ಲದೇ ಭಯಪಟ್ಟು ಆಕಾಶವನ್ನು ನೋಡುತ್ತಿರುವರು. ಕಲಿಯುಗದಲ್ಲಿ ಮನುಷ್ಯರೆಲ್ಲರೂ ಹಸಿವಿನಿಂದ ಭಯಪಟ್ಟು ಮುನಿಗಳಂತೆ ಗೆಡ್ಡೆ, ಗೆಣಸು, ಎಲೆ, ಹಣ್ಣು ಇವುಗಳನ್ನು ತಿಂದು ಹೊಟ್ಟೆ ತುಂಬಿ ಕೊಳ್ಳುವರು. ಕಲಿಯುಗದಲ್ಲಿ ಮಳೆ ಬೆಳೆಯಿಲ್ಲದೆ ಅತ್ಯಂತ ದುಃಖಪಟ್ಟು ಆತ್ಮಹತ್ಯೆಯನ್ನು ಮಾಡಿಕೊಳ್ಳುವರು. ಕಾಮಪೀಡಿತರು, ಗಿಡ್ಡಾದ ದೇಹವುಳ್ಳವರು, ಲೋಭಿಗಳು, ಅಧರ್ಮದಲ್ಲಿ ನಿರತರೂ ಆಗುವರು. ಎಲ್ಲರೂ ಅಲ್ಪಭಾಗ್ಯರು. ಬಹು ಮಕ್ಕಳನ್ನು ಪಡೆಯುವರು. ಹೆಂಗಸರು ತಮ್ಮ ದೇಹಪೋಷಣೆಯಲ್ಲಿ ನಿರತರಾಗಿ ವೇಶ್ಯೆಯರಂತೆ ಅಲಂಕರಿಸಿ ಕೊಳ್ಳುವವರಾಗಿ ಗಂಡನ ಮಾತನ್ನು ಅನಾದರಮಾಡಿ ಯಾವಾಗಲೂ ಇತರರ ಮನೆಯಲ್ಲಿಯೇ ಇರುತ್ತಾ ದುರ್ನಡತೆಯುಳ್ಳವರಾಗಿ ದುಷ್ಟರಲ್ಲಿಯೇ ಸ್ನೇಹ ಮಾಡುವರು. ಕುಲಸ್ತ್ರೀಯರು ಪುರುಷರ ವಿಷಯದಲ್ಲಿ ದುರ್ವೃತ್ತರಾಗುವರು.[33] ಕಳ್ಳಕಾಕರಭೀತಿಯಿಂದ ಕಾಷ್ಠ[34] ಯಂತ್ರಗಳನ್ನು ಮಾಡಿಕೊಳ್ಳುವರು. ಜನರು ಕ್ಷಾಮ, ತೆರಿಗೆ ಕಂದಾಯ ಇವುಗಳಿಂದ ಅತ್ಯಂತ ಹಿಂಸೆಪಡುತ್ತಾ ಗೋಧಿ, ಅಕ್ಕಿ ಇವುಗಳು ಸಮೃದ್ದಿಯಾಗಿರುವ ದೇಶಕ್ಕೆ ಹೋಗುವರು. ಜನರು ಕೆಟ್ಟದ್ದನ್ನು ಮನಸ್ಸಿನಲ್ಲಿಟ್ಟು ಮೇಲೆ ಒಳ್ಳೆಯ ಮಾತನ್ನೇ ಹೇಳುತ್ತಾ ತಮ್ಮ ಕಾರ್ಯವಾಗುವವರೆಗೆ ಬಂಧುಗಳಂತೆ ನಟಿಸುವರು. ದ್ವಿಜರು ಯಜ್ಞಗಳನ್ನೂ ಹೋಮವನ್ನೂ ಮಾಡದೇ ಬಿಟ್ಟಾಗ ಕಲಿಯು ವೃದ್ಧಿಹೊಂದಿರುವನೆಂದು ವಿವೇಚನಶೀಲರು ಊಹೆಮಾಡಬೇಕು. ಕಲಿಯು ಅಭಿವೃದ್ಧಿಯಾದಾಗ ಅಧರ್ಮವು ಹೆಚ್ಚುವುದು ಜನರಿಗೆ ಚಿಕ್ಕವಯಸ್ಸಿನಲ್ಲಿಯೇ ಮರಣವುಂಟಾಗುವುದು. ಹೀಗೆ ಸಕಲಧರ್ಮಗಳೂ ನಷ್ಟವಾದಾಗ ಜಗತ್ತೇ ಐಶ್ವರ್ಯರಹಿತವಾಗುತ್ತದೆ.[35]

 

ಧರ್ಮ ರಕ್ಷಣೆಗಾಗಿ ಪಾಷಂಡರ / ಮ್ಲೇಚ್ಛರ ಬಗ್ಗೆ ಅರಿವಿರಬೇಕು

            ಸಂಸ್ಕೃತದಲ್ಲಿ ಪಾಷಂಡರು ಎಂದರೆ  ಸುಳ್ಳು ಸಿದ್ದಾಂತಿಗಳು, ನಾಸ್ತಿಕರು, ವಂಚಕರು, ನಿರ್ಬಯರು, ಕಪಟಿಗಳು, ಧರ್ಮದ್ರೋಹಿಗಳು, ಅಸಂಪ್ರದಾಯಿಕ ಪಂಥ ಎಂದು ಅರ್ಥವಿದೆ. ಸಂಸ್ಕೃತದಲ್ಲಿ ಮ್ಲೇಚ್ಛರು ಎಂದರೆ ವಿದೇಶಿಯನು, ಅನಾಗರೀಕನು ಎಂಬ ಅರ್ಥವಿದೆ.  ಆದರೆ ಬೌದ್ಧಾಯನ ಸೂತ್ರಗಳು ಮ್ಲೇಚ್ಛರ ಬಗ್ಗೆ ಕೊಟ್ಟ ಅರ್ಥವನ್ನು ಪರಿಗಣಿಸಿ ಇಂದು ಹಿಂದುಗಳಲ್ಲೇ ಅನೇಕ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಬೌದ್ಧಾಯನ ಸೂತ್ರಗಳ ಪ್ರಕಾರ ಮ್ಲೇಚ್ಛರು ಎಂದರೆ,  "ಗೋಮಾಂಸ ತಿನ್ನುವವರು ಅಥವಾ ಸ್ವಯಂ ವಿರೋಧಾಭಾಸದ ಹೇಳಿಕೆಗಳಲ್ಲಿ ಪಾಲ್ಗೊಳ್ಳುವವರು ಅಥವಾ ಸದಾಚಾರ ಮತ್ತು ನಡವಳಿಕೆಯ ಪರಿಶುದ್ಧತೆಯಿಂದ ದೂರವಿರುವವರು" ಎಂದು ವ್ಯಾಖ್ಯಾನಿಸುತ್ತವೆ.  ಗ್ವಾಲಿಯರ್ ನಲ್ಲಿ ದೊರೆತ ಶಾಸನಗಳಿಂದ ಮ್ಲೇಚ್ಛರು ಎಂದರೆ ಅರಬ್ಬಿನಿಂದ ಬಂದ ಮುಸ್ಲಿಮರು ಎಂದು ಗುರುತಿಸಲಾಗಿದೆ. ಮ್ಲೇಚ್ಛರು ಎಂದರೆ ಅನಾಗರಿಕ, ಸಾಮಾನ್ಯವಾಗಿ ವಿದೇಶಿ; ಪಾಪಿ, ದುಷ್ಟ ವ್ಯಕ್ತಿ; ವಿದೇಶಿ ಅಥವಾ ಅನಾಗರಿಕ ಮಾತು ಆಡುವವ, ಗೊಂದಲಮಯವಾಗಿ, ಅಸ್ಪಷ್ಟವಾಗಿ ಅಥವಾ ಅನಾಗರಿಕವಾಗಿ ಮಾತನಾಡುವುದು; ವಿಶಿಷ್ಟವಾಗಿ ಮಾತನಾಡುವುದು.

 

ಧರ್ಮಕಾರ್ಯೇ ರತಂ ಚೈವ ವೃಥಾ ವಿಶ್ರಂಭಿಣೋ ಜನಾಃ |

ಭವಿಷ್ಯಂತಿ ಕಲೌ ಪ್ರಾಪ್ತೇ ರಾಜಾನೋ ಮ್ಲೇಚ್ಛಜಾತಯಃ ॥  ೭೦॥

ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 41 ಶ್ಲೋಕ 70

            ಭಾವಾರ್ಥ:- ಕಲಿಯುಗದಲ್ಲಿ ಜನರು ಧರ್ಮ ಕಾರ್ಯದಲ್ಲಿ ನಿರತನಾದವನನ್ನು ವ್ಯರ್ಥವಾಗಿ ಹಿಂಸಿಸುವರು. ತುರುಷ್ಕ ಮುಂತಾದ ಮ್ಲೇಚ್ಛ ಜಾತಿಯವರು ರಾಜರಾಗುವರು. 

 

ವಿಧ್ಯಾರ್ಜನೆ ವಿಧ್ಯಾ ಬೋಧನೆ ಸಮಯದಲ್ಲಿ ರಾಜಕಾರಣ ಸಲ್ಲದು

ಕ್ಷತ್ರಿಯಾಣಾಮಯಂ ಧರ್ಮೋ ಯತ್ಪ್ರಜಾಪರಿಪಾಲನಂ ॥

ವಧಶ್ಚ ಧರ್ಮಯುದ್ಧೇನ ಸ್ವರಾಜ್ಯಪರಿಪಂಥಿನಾಂ ।

ಶ್ರೀ ನಾರದೀಯ ಪುರಾಣ ಪೂರ್ವಭಾಗ -ಅಧ್ಯಾಯ 46 ಶ್ಲೋಕ 80-81

            ಭಾವಾರ್ಥ:- ಪ್ರಜಾರಕ್ಷಣೆ, ತನ್ನ ರಾಜ್ಯಭಾರಕ್ಕೆ ವಿಘ್ನಕಾರಿಗಳನ್ನು ಧರ್ಮಯುದ್ಧಮಾಡಿ ಸಂಹರಿಸುವುದು ಕ್ಷತ್ರಿಯರಿಗೆ ಧರ್ಮವಾದುದರಿಂದ ಜ್ಞಾನಿಗಳು ಈ ರಾಜ್ಯವನ್ನು ಸಂಪೂರ್ಣವಾಗಿ ಆಶಿಸುವುದಿಲ್ಲ.

 

ಸಂಸಾರವೆಂಬ ನದಿಯನ್ನು ಬುದ್ಧಿಯೆಂಬ ದೋಣಿಯಿಂದ ದಾಟಬೇಕು

ರೂಪಕೂಲಾಂ ಮನಃ ಸ್ರೋತಾಂ ಸ್ಪರ್ಶದ್ವಿೀಪಾಂ ರಸಾವಹಾಂ |

ಗಂಧಪಂಕಾಂ ಶಬ್ದ ಜಲಾಂ ಸ್ವರ್ಗಮಾರ್ಗದುರಾರುಹಾಂ     ||

ಕ್ಷಮಾರಿತ್ರಾಂ ಸತ್ಯಮಯಿಂ ಧರ್ಮಸ್ಥೃರ್ಯಕರಾಕರಾಂ |

ತ್ಯಾಗವಾತಾಧ್ವಗಾಂ ಶೀಘ್ರಾಂ ಬುದ್ಧಿನಾವಂ ನದೀಂ ತರೇತ್‌

ಶ್ರೀ ನಾರದೀಯ ಪುರಾಣ ಪೂರ್ವಭಾಗ - ಅಧ್ಯಾಯ 60 ಶ್ಲೋಕ 74-75

ಭಾವಾರ್ಥ:- ರೂಪವೆಂಬ ದಡ, ಮನಸ್ಸೆಂಬ ಹರಿಯುವಿಕೆ, (ಸ್ರವಣ) ಸ್ಪರ್ಶವೆಂಬ ದ್ವೀಪ, ರಸವೆಂಬ ಮೀನು, ಗಂಧವೆಂಬ ಕೆಸರು, ಶಬ್ದವೆಂಬ ನೀರು ಸ್ವರ್ಗದ ದಾರಿಯೆಂಬ ದುರ್ಗವು, ಕ್ಷಮೆಯೆಂಬ ಹುಟ್ಟು (ದೋಣಿಯನ್ನು ನಡೆಸುವ ಕೋಲು) ಇವುಗಳುಳ್ಳ ಸತ್ಯಮಯವು, ಸ್ಥಿರ ಧರ್ಮ ಸಂಪಾದನೆಗೆ ಆಶ್ರಯವು, ತ್ಯಾಗವೆಂಬ ವಾಯುಮಾರ್ಗವುಳ್ಳುದು, ವೇಗವುಳ್ಳದೂ ಆಗಿರುವ ಈ ಸಂಸಾರವೆಂಬ ನದಿಯನ್ನು ಬುದ್ಧಿಯೆಂಬ ದೋಣಿಯಿಂದ ದಾಟಬೇಕು.

 

ಮೂರ್ತಿ ಪೂಜೆ ದೇವರ ಬಗ್ಗೆ ಅಜ್ಞಾನ ತೊರೆ

            ಮೂರ್ತಿ, ಶಿಲೆ, ಕಲ್ಲು, ಇದು ಭೂಗರ್ಭದಿಂದ ಉದಯವಾದದ್ದು, ಇದರಲ್ಲಿ ಅನೇಕ ಖನಿಜ ಅಂಶಗಳು ಇವೆ, ಇದರ ಮೇಲೆ ನಿರಂತರ ನೀರು ಬಿದ್ದಾಗ ಸಾಮಾನ್ಯವಾಗಿ ಶಿಲೆಯ ಮೇಲೆ ಸೂಕ್ಷ್ಮ ಶಿಲೀಂದ್ರ (ಪಾಚಿ) ಕಟ್ಟುವುದು ನಾವು ಗಮನಿಸಿದ್ದೇವೆ. ಪಾಚಿಯಲ್ಲೂ ಅನೇಕ ಆರೋಗ್ಯ ಸುಧಾರಕ ಅಂಶಗಳು ಮತ್ತು ಖನಿಜಗಳು ನಮ್ಮ ಆರೋಗ್ಯದಮೇಲೆ ಬೀರುವ ಪ್ರಭಾವ ಇವನ್ನ ಮನಗಂಡು ವಿಧ್ವಾಂಸರು ಮೂರ್ತಿ ಪೂಜೆ ಅಭಿಷೇಕ ತೀರ್ಥ ಸ್ವೀಕಾರ ಸಂಪ್ರಧಾಯಗಳು ಸ್ಥಾಪಿಸಿರುವ ಸಾಧ್ಯತೆ ಇದೆ. ಮೇಲಾಗಿ ಸಾಲಿಗ್ರಾಮದ ಹತ್ತಿರ ಕುಂಡಲಿನಿ ಜಾಗೃತಿ ಆಗುವ ಬಗ್ಗೆಯೂ ವಿದ್ವಾಂಸರು ಹೇಳಿದ್ದಾರೆ.

            ಮೂರ್ತಿ ಪೂಜೆ ಭಕ್ತಿಯೋಗದ ಮುಖಾಂತರ ಪ್ರಾರಂಭಿಕ ಹಂತ ಅಷ್ಟೇ ಮಧ್ಯದಲ್ಲಿ ಕಾಯಕವೇ ಕೈಲಾಸ ಎಂಬ ಕರ್ಮ ಯೋಗ, ಜ್ಞಾನಾರ್ಜನೆಯೇ ಮುಖ್ಯವೆಂಬ ಜ್ಞಾನಯೋಗ (ವಿದ್ಯಾ ಅಧ್ಯಯನ ಯೋಗ).  ಹೀಗೆ ಹಲವು ಯೋಗದ ಮೆಟ್ಟಲುಗಳಲ್ಲಿ ಆರನೇ ಇಂದ್ರಿಯ ಜಾಗೃತವಾಗಿ ಸರಿ ತಪ್ಪುಗಳ ಮಾನಸಿಕ ವಿಮರ್ಶೆ ಮಾಡುತ್ತ ಸತ್ಯದ ಅನ್ವೇಷಣೆಯಲ್ಲಿ ತೊಡಗಿ ಆತ್ಮ ಜ್ಞಾನ ಹೊಂದುವ ಈ ಕುಂಡಲಿನಿ ಯೋಗವು ಸರ್ವ ಯೋಗಕ್ಕೂ ಉನ್ನತ ಕ್ರಿಯೆಯಿಂದ  ಕೂಡಿದ ಹಿಂದು ಸಂಸ್ಕೃತಿಯಾಗಿದೆ. ನಿನ್ನಲ್ಲಿಯೇ ನೀನು  ದೈವಮೂರ್ತಿಯನ್ನು ಕಂಡಲ್ಲಿ ನೀನು ಸಕಲ ಜೀವರಾಶಿಗಳಲ್ಲಿಯೂ ದೈವಸ್ವರೂಪವನ್ನು ಕಾಣುತ್ತೀಯೇ, ನೀನು ಕಂಡದ್ದೇ ದೇವರು ಬೇರೆ ಯಾವುದೂ ದೇವರಲ್ಲ ಎಂಬ ಭಾವನೆ ಬರುವುದು ನಿನಗೆ ನಿನ್ನ ದೇವರಲ್ಲೂ ಆತ್ಮ ತೃಪ್ತಿ ಇಲ್ಲದ ಕಾರಣವಾಗಿದೆ. ನಿನಗೆ ನಿನ್ನ ಭಕ್ತಿ ಯೋಗದಲ್ಲಿ, ಜ್ಞಾನ ಯೋಗದಲ್ಲಿ, ಕರ್ಮ ಯೋಗದಲ್ಲಿ ಆತ್ಮ ತೃಪ್ತಿಯಾಗುವ ಜ್ಞಾನ ವಿಶೇಷಣ ಉಂಟಾಗುತ್ತದೋ ಆಗ ನೀನು ಯಾರನ್ನೂ ಯಾವುದನ್ನೂ ದ್ವೇಶಿಸಲಾರೆ. ಆತ್ಮ ತೃಪ್ತಿ ಎಂದರೆ ನಿನಗೆ ಮಾನಸಿಕ, ದೈಹಿಕ, ಆರೋಗ್ಯ ಜ್ಞಾನ ಹೊಂದುವ ತೃಪ್ತ ಭಾವ ಉಂಟಾಗುವುದೋ ನಿನ್ನಲ್ಲಿ ಏಳನೇ ಇಂದ್ರಿಯ ಜಾಗೃತಿ ಉಂಟಾಗುವುದೊ ಆಗ ನೀನು ಸರ್ವವನ್ನೂ ಪ್ರೀತಿ ವಾತ್ಸಲ್ಯ ಭಾವದಿಂದ ನೋಡುವೆ ನಿನಗೆ ಮಧ, ಮತ್ಸರ, ಆಕ್ರೋಶ, ಅಸೂಯೆ ಎಲ್ಲಿಂದ ಬರಬೇಕು. ಇಂದು ನಾವು ಕೆಲವು ಅಭ್ರಹಾಮಿಕ್ ಪಂಥದವರನ್ನ ಹಿಂದು ದ್ವೇಶಿಗಳಾಗಿ ಕಾಣುತ್ತಿದ್ದೇವೆ ಕಾರಣ ಅವರಿಗೆ ಆರನೇ ಇಂದ್ರಿಯ ಜಾಗೃತಿಯೂ ಇಲ್ಲ ಅವರ ದೇವರ ಮೇಲೆ ಅವರಿಗೇ ಭಕ್ತಿಯೋಗವಿಲ್ಲ, ಹೆಸರನ್ನು ಮತ್ತು ಅವನೇ ಸರ್ವಶ್ರೇಷ್ಠ ಎಂದು ಪ್ರತಿ ದಿನ ಜೋರಾಗಿ ಕೂಗುವುದು, ಅವರ ದೇವನ ಅನುಯಾಯಿಗಳನ್ನು ಹೆಚ್ಚಿಸುವುದು ಅಷ್ಟೇ ಧರ್ಮ ಪಾಲನೆ ಎಂದು ತಿಳಿದವರಿಗೆ ಯಾವ ಇಂದ್ರಿಯವೂ ಜಾಗೃತಿ ಆಗಿರಲು ಸಾಧ್ಯವಿಲ್ಲ. "ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು" ಎಂಬ ಒಳಾರ್ಥವನ್ನು ತಿಳಿದಿದ್ದರೆ ಅವರಲ್ಲಿ ಬೇರೆಯ ಧರ್ಮದ ಬಗ್ಗೆ ಇಂತಹ ಮತ್ಸರ ಇರುತ್ತಿರಲಿಲ್ಲ. ಅಲಿಫ್ ಲಾಮ್ ಮೀಮ್ ಎಂಬ ಮಂತ್ರವನ್ನು ಸರಿಯಾದ ಕ್ರಮದಲ್ಲಿ ಉಪಾಸನೆ ಮಾಡಿ ಕುಂಡಲಿನಿ ಜಾಗೃತಿ ಹೊಂದಿದ್ದರೆ ಜಗತ್ತಿನಲ್ಲಿ ಎಲ್ಲಾ ಧಾರ್ಮಿಕ ಕಟ್ಟಡಗಳು ನೆಲಸಮ ಆಗುತ್ತಿರಲಿಲ್ಲ.     

            ಅವರ ಬಗ್ಗೆ ಚಿಂತನೆ ಬಿಡಿ ಅದು ಅವರ ಆರೋಗ್ಯ ಮತ್ತು ಜ್ಞಾನ ಹರಣ ಕರ್ಮವೇ ಹೊರತು ಬೇರೆ ಏನೂ ಅಲ್ಲ. ನಮ್ಮ ಸನಾತನ ಹಿಂದು ಧರ್ಮದಲ್ಲಿ ಸತ್ಯಶೋಧನೆ ಜ್ಞಾನಾರ್ಜನೆ ಮತ್ತು ಆರೋಗ್ಯ ಸಂಸ್ಕಾರಗಳ ಬಗ್ಗೆ ಆರೋಗ್ಯ ಚಿಂತನೆ ಬೆಳಸಿಕೊಳ್ಳಿ ಆಗ ಪ್ರತಿಯೊಬ್ಬ ಹಿಂದುವೂ ಜಗದ್ಗುರುವಾಗಿ ಮಾರ್ಪಡುತ್ತಾನೆ.  

            ವೇದಾಂತ ಹೇಳುತ್ತದೆ, "ನೀವು ನಿಮ್ಮ ಸ್ವಂತ ವಿಗ್ರಹವನ್ನು (ದೇಹವನ್ನು) ಹೇಗೆ ನೋಡುತ್ತೀರೋ ಅದೇ ಮಟ್ಟದಲ್ಲಿ ಇತರ ವಿಗ್ರಹಗಳನ್ನು ನೀವು ಪರಿಗಣಿಸಬಹುದು, ಅದುವೇ ನಿಜವಾದ ಕಾನೂನು". ಮೇಲಾಗಿ ಹಿಂದು ವಿಗ್ರಹಗಳಲ್ಲಿ ದೇಹದ ಪ್ರಾಮುಖ್ಯತೆಯನ್ನು ತೋರುವ, ಏಳು ಕುಂಡಲಿನಿ ಶಕ್ತಿಯ ಪ್ರಾಮುಖ್ಯತೆಯನ್ನು ತೋರುವ ಸರ್ಪ, ನಾಗರಕಲ್ಲಿನಲ್ಲಿ ನಾಡಿ ಶುದ್ದೀಕರಣದ ಎರಡು ನಾಡಿಯ ಚಿಹ್ನೆ, ದೇವರ ಹಸ್ತಗಳಲ್ಲಿ ಮುದ್ರೆಗಳ ಪ್ರದರ್ಶನ, ಪ್ರಥಮ ಪೂಜಕನಾದ ಗಣೇಶನಲ್ಲಿ ಸೂರ್ಯನಾಡಿ ಶುದ್ದೀಕರಣ ಮಾಡಿಕೊಳ್ಳಿ ಎಂಬ ಸಂದೇಶ, ಉಸಿರನ್ನು ಹೃದಯಕ್ಕೆ ಸೀಮಿತಗೊಳಿಸಬೇಡಿ ಹೊಟ್ಟೆಯವರೆಗೂ ತುಂಬುವ ಉಸಿರಾಟ ಮಾಡಿ ಎಂಬ ಸಂದೇಶ. ಉಸಿರಾಟ ಹಿಂದಿನಿಂದ (ಸುಷುಮ್ನದಲ್ಲಿ)  ಮೂಲಾಧಾರದಿಂದ ಸಹಸ್ರಾರದವರೆಗೆ ಮತ್ತು ಮುಂದಿನಿಂದ ಇಡಾ ಮತ್ತು ಪಿಂಗಳ ಮುಖೇನ ಮೂಲಾಧಾರದಿಂದ ಆಜ್ಞಾ ಚಕ್ರದವರೆಗೆ ಉಸಿರಾಟ  ಮಾಡಬಹುದು ಎಂಬ ಸಂದೇಶ,  ಶಂಖವನ್ನು ಉಸಿರಾಟದ ಶಬ್ದಾಕಾರವಾಗಿ ತೋರಿಸುವ ಅಥವಾ ಸುಷುಮ್ನ ನಾಡಿಯಾಗಿ ತೋರುವ, ಚಕ್ರವನ್ನು ಹಾಗೂ ಕಮಲವನ್ನು ಕುಂಡಲಿನಿ ಚಕ್ರವಾಗಿ ತೋರುವ, ಗದೆಯನ್ನು ಸುಷುಮ್ನಾ ಮತ್ತು ಸಹಸ್ರಾರದ ಐಕ್ಯತೆಯ ಶಕ್ತಿಯಾಗಿ ತೋರುವ, ದೇವರ ಆಸೀನದ ಸ್ಥಿತಿಯನ್ನು ಮೂಲಾಧಾರ ಜಾಗೃತಿಯತ್ತ ಬಿಂಬಿಸುವ, ತಲೆಯಲ್ಲಿ ಗಂಗೆ ವೈದ್ಯತೆಯ ಜಲವನ್ನು ಶಿರಸ್ಸಿಗೆ ಕಳಿಸುವ ವಿಧಾನ ಅನ್ವೇಷಣೆಗೆ ಕರೆ ನೀಡುವ, ಹಸ್ತಗಳ ಪ್ರದರ್ಶನದಲ್ಲಿ ಅಂಗೈಯಲ್ಲಿ ಆರೋಗ್ಯವನ್ನು ತೋರುವ, ಎಡಗೈಯಿನ ಮಧ್ಯಭಾಗದಲ್ಲಿ ಮುದ್ರದಿಂದ ಮದ್ಯದ ಬೆರಳಿನಿಂದ ಒತ್ತಿದರೆ ಕುಂಡಲಿನಿ ಜಾಗೃತಿ ಗೊಳಿಸುವ ಶಕ್ತಿ ಇದೆ ಎಂದು ತೋರಿಸುವ, ಚಿನ್ಮುದ್ರೆಯಿಂದ ಕುಂಡಲಿನಿ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಚಾಲನೆ ನೀಡಬಹುದು ಎಂಬ ಸಂದೇಶ, ನಿಮ್ಮಲ್ಲಿ ಮದವೆತ್ತ ಆನೆಯನ್ನೂ ಶಾಂತಗೊಳಿಸಬಹುದು ಎಂಬ ಸಂದೇಶ, ಅಂತಹ ಸಾಕ್ಷಾತ್ ಗಣಪತಿಯು ನಿನ್ನಲ್ಲೇ ಇರುವನು ಒಮ್ಮೆ ಚಿಂತಿಸಿ ನೋಡು ಎಂಬ ಸಂದೇಶ. 

            ಆಂಜನೇಯ ಅಂಜನಾ (ಕಣ್ಣು)  ದೇವಿಯ ಪುತ್ರ, ಸಾಕ್ಷಾತ್ ವಾಯು (ವಾಯು ಪುತ್ರ) ಅಂತಹ ವಾಯು ದೇವ ನಮ್ಮ ದೇಹದಲ್ಲಿ ಎಲ್ಲಿಂದ ಎಲ್ಲಿಗೆ ಹಾರುವನು ಅವನನ್ನು ಕುಂಡಲಿನಿ ಪ್ರಾಣಾಯಾಮದಿ ಹೇಗೆ ಒಲಿಸಿಕೊಳ್ಳಬಹುದು ಎಂದು ನಮ್ಮ ಆಂತರಿಕ ಕಣ್ಣುಗಳಿಂದ ತಿಳಿಯುವ ಶಕ್ತಿ ಕೊಡುವವನೇ, ಈತ ಸಾಕ್ಷಾತ್ ಗಿಡಮೂಲಿಕೆಯ ಸಂಜೀವಿನಿ ಪರ್ವತವನ್ನೇ ಎಡಗೈಯಲ್ಲಿ ಹೊತ್ತಿದ್ದಾನೆ, ಅಂದರೆ ವಾಯುವಿನಲ್ಲಿ ಅಂತಹ ಜೀವಾಂಶ ಇದೆ ಎಂಬ ಸಂದೇಶ, ಎಡಗೈಯಲ್ಲಿ ಸಂಜೀವಿನಿ ಪರ್ವತವನ್ನು ಹೊಂದಿರುವುದೇ ಅಂತಹ ಎಡಗೈ ಅಂಗೈ ಮಧ್ಯದಲ್ಲಿ ಕುಂಡಲಿನಿ ಜಾಗೃತಿಗೊಳಿಸುವ ಬಿಂದುವಿದೆ ಎಂಬ ಸಂದೇಶ, ಎಡಗೈಯಿನ ಮಧ್ಯಭಾಗದಲ್ಲಿ ಒತ್ತಿದರೆ ಕುಂಡಲಿನಿ ಜಾಗೃತಿ ಗೊಳಿಸುವ ಶಕ್ತಿ ಇದೆ ಎಂದು ತೋರಿಸುವ ಚಿಹ್ನೆ ಇದೆ.

            ಕುಂಡಲಿನಿ ಶಕ್ತಿಯ ಜಾಗೃತಿಯ ಮೇಲೆ ಮೂಲಾಧಾರ ಚಕ್ರದಿಂದ ಉಂಟಾದ ಪ್ರಚಂಡ ಬೆಂಕಿ ಮತ್ತು ಶಾಖವಿದೆ. ದೇಹದಲ್ಲಿ ಅತಿಯಾದ ಶಾಖವನ್ನು ಅನುಭವಿಸಿದಾಗ ಮೂಗಿನ ಹೊಳ್ಳೆ ಉಸಿರಾಟವನ್ನು ಬಲದಿಂದ ಎಡಕ್ಕೆ ಬದಲಾಯಿಸುವ ತಂತ್ರವನ್ನು ಬಳಸಬಹುದು ಎಂಬ ಸಂದೇಶವೂ ಅನೇಕ ವಿಗ್ರಹಗಳಲ್ಲಿ ಇದೆ. ಇದು ಅತಿಯಾದ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಾ ದೇವತೆಗಳು ಶಕ್ತಿ ಅಥವಾ ಚಲನೆಯನ್ನು ಪ್ರತಿನಿಧಿಸುವುದರಿಂದ, ಶಿವನ ಮೇಲೆ ನೃತ್ಯ ಮಾಡುವ ತಾಯಿ ಕಾಳಿ ಪ್ರತಿನಿಧಿಸುವ ಅಂಶವೇನೆಂದರೆ, ನಮ್ಮ ದೇಹದಲ್ಲಿನ ಕುಂಡಲಿನಿ ಚಕ್ರಗಳು ಶಕ್ತಿರೂಪಕವಾಗಿ ಧ್ಯಾನಾಸಕ್ತನ ಮೇಲೆ ಆಧಿಪತ್ಯ ನಡೆಸುತ್ತವೆ ಎಂಬುದಾಗಿದೆ. ಶಿವನು ಆರೋಗ್ಯದ ಮತ್ತು ಧ್ಯಾನದಲ್ಲಿ ನಿರತನಾದ ಅರ್ಥವುಳ್ಳವನಾಗಿದ್ದು, ಅವನ ಮೇಲೆ ಶಕ್ತಿಯು ನಿಂತಿದೆ ಎಂದರೆ ಧ್ಯಾನ ಯೋಗದ (ಉಸಿರಾಟದ) ಮೇಲೆ ಕುಂಡಲಿನಿ ಶಕ್ತಿ ಜಾಗೃತಿಯ ಆಧಾರ ಹೊಂದಿದೆ ಎಂಬ ಸಂದೇಶವಾಗಿದೆ. ಅರ್ದನಾರೀಶ್ವರ ಎಂಬ ಚಿಹ್ನೆಯೂ ಶಕ್ತಿ ಮತ್ತು ಧ್ಯಾನದ ಸಮ್ಮಿಲನವನ್ನು ತೋರಿಸುತ್ತದೆ.

            ತಳಿ ವಿಜ್ಞಾನದ (ಜೇನಿಟಿಕ್) ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಕೆಲಸದ ಸಂಕೀರ್ಣತೆ ಮತ್ತು ಅದರ ವಿಭಿನ್ನ ಸ್ವಭಾವವನ್ನು ಪ್ರತಿ ಕೋಶದಲ್ಲಿ ಒಳಗೊಂಡಿರುವ ಆನುವಂಶಿಕ ರಚನೆಯ ಕಾರ್ಯಕ್ರಮದಿಂದ ನಿರ್ವಹಿಸುತ್ತಿದೆ ಎಂದು ಕಂಡುಕೊಂಡಿದ್ದಾರೆ.  ಪ್ರಾಣ,(ಉಸಿರು) ಪ್ರಮುಖ ಶಕ್ತಿಯು ಈ ಆನುವಂಶಿಕ ರಚನೆಯನ್ನು ಸೃಷ್ಟಿಸುತ್ತದೆ ಮತ್ತು ಅದನ್ನು ನಿರ್ವಹಿಸುತ್ತದೆ ಎಂದು ಕಂಡುಕೊಂಡಿದ್ದಾರೆ.

            ವೇದದಲ್ಲಿ ಮೂರ್ತಿ ಪೂಜೆ ಮಾಡಬಾರದು ಎಂದು ಹೇಳಿಲ್ಲ. ವೇದದಲ್ಲಿ ನಿರಾಕಾರ ಸ್ವರೂಪ ದೈವ ಸಾಕ್ಷಾತ್ಕಾರ ಎಂದರೆ, ಆತ್ಮ ಶಕ್ತಿ ರೂಪಕವಾದ ಹರಿವು ಸುಷುಮ್ನಾ ನಾಡಿ ಮುಖೇನ ದೇಹದ ಎಲ್ಲಾ ನಾಡಿಗಳಲ್ಲಿ ಹರಿಯುವ ಶಕ್ತಿಯನ್ನು ಆತ್ಮ ಪರಮಾತ್ಮ ಎಂತಲೂ ಹೇಳಿದೆ. ವೇದದಲ್ಲಿ ಅಗ್ನಿ ಪುರುಷನನ್ನು ವರ್ಣಿಸಿದ್ದಾರೆ. ಇದರಂತೆ ಇಂದ್ರ, ವಾಯು, ಇತ್ಯಾದಿ ದೇವತೆಗಳ ವರ್ಣನೆಯೂ ಇದೆ. ಶತಪಥ ಬ್ರಾಹ್ಮಣದಲ್ಲಿಯೂ ಐತರೇಯ ಆರಣ್ಯಕದಲ್ಲಿಯೂ ಮೂರ್ತಿಪೂಜೆಯ ವಿಷಯಕವಾದ ವಾಕ್ಯಗಳು ದೊರೆಯುತ್ತವೆ. ಗೌತಮ ಧರ್ಮಸೂತ್ರದಲ್ಲಿ ದೇವಾಲಯಗಳ ಮತ್ತು ದೇವತಾ ಪೂಜೆಗಳ ವಿಷಯಗಳು ಬರುತ್ತವೆ. ಭೋದಾಯನ ಗೃಹ್ಯ ಸೂತ್ರದಲ್ಲಿ ಮೂರ್ತಿಪೂಜೆಯ ವಿಷಯ ಹೆಚ್ಚು ಮಹತ್ವದ್ದಾಗಿ ವಿವರಿಸಿದೆ. ಮಹಾಭಾರತದಲ್ಲಿ ಅನೇಕ ದೇವತೆಗಳ ವರ್ಣನೆ ಬಂಧಿದೆ.  ರಾಮಾಯಣದಿಂದ ಲಂಕೆಯಲ್ಲಿ ದೇವಾಲಯಗಳಿದ್ದುವೆಂದು ಗೊತ್ತಾಗಿದೆ. ಪಾಣಿನಿಯ ಕಾಲದಲ್ಲಿ ಮೂರ್ತಿಪೂಜೆ ಇದ್ದಿರಬೇಕೆಂದು ಆತನ ಗ್ರಂಥದ ಆಧಾರದಿಂದ ಊಹಿಸಲಾಗಿದೆ. ಕೌಟಲ್ಯನ "ಅರ್ಥಶಾಸ್ತ್ರ"ದಲ್ಲಿ ನಗರ ನಿರ್ಮಾಣ ವಿಷಯವನ್ನು ಕುರಿತು ವಿವರಿಸುವಾಗ ದೇವಾಲಯಗಳನ್ನು ಕಟ್ಟುವ ನಿಧಾನವನ್ನು ಹೇಳಿದೆ. ಮನುಸ್ಮೃತಿಯಲ್ಲಿಯೂ ಇವೇ ರೀತಿ ದೇವತಾರ್ಚನೆ, ಪ್ರದಕ್ಷಿಣೆ, ದೇವಾಲಯಗಳು, ಇವುಗಳನ್ನು ಕುರಿತು ಪ್ರಸ್ತಾಪಿಸಿದೆ. ಜಗತ್ತಿನ ಸೃಷ್ಟಿಸ್ಥಿತಿಲಯಗಳಿಗೆ ಕಾರಣನಾದ ಪರಮಾತ್ಮನೊಬ್ಬನು ಇರುವನೆಂದೂ, ಆತನನ್ನು ಪ್ರತಿಯೊಬ್ಬ ಮನುಷ್ಯನೂ ಪೂಜಿಸಬೇಕೆಂದೂ ಶಾಸ್ತ್ರಗಳು ಸಾರಿದವು. ನಿರಾಕಾರನೂ ಇಂದ್ರಿಯಾತೀತನೂ ಆದ ಅಂಥ ಭಗನಂತನನ್ನು ಆರಾಧಿಸುವುದು ಜನಸಾಮಾನ್ಯರಿಗೆ ಸಾಧ್ಯವಿಲ್ಲವೆಂದು ತಿಳಿದು ಭಗವಂತನ ಅನಂತ ಗುಣಗಳೂ ಅವರವರ ಭಾವನೆಗೆ ತಕ್ಕಂತೆ ಜನರ ಮನಸ್ಸಿಗೆ ಹಿಡಿಯುವಂತೆ ಆಕಾರವನ್ನು ಕಲ್ಪಿಸಿ ಧ್ಯಾನಶ್ಲೋಕಗಳನ್ನು ರಚಿಸಿ ಈ ಧ್ಯಾನ ಶ್ಲೋಕಗಳ ಅನುಸಾರವಾಗಿ ವಿಗ್ರಹಗಳನ್ನು ಮಾಡಿಕೊಂಡು ಜನಗಳು ಪೂಜಿಸಬಹುದೆಂದು ಜ್ಞಾನಿಗಳು ಉಪದೇಶ ಮಾಡಿದರು. ಅದರಂತೆಯೇ “ಅಜ್ಞಾನಾಂ  ಭಾವನಾರ್ಥಾಯ ಪ್ರತಿಮಾಃ ಪರಿಕಲ್ಪಿತಾಃ'' ಎಂದು ಉಪನಿಷತ್ತಿನಲ್ಲಿ ಹೇಳಿದೆ. ಮರಳು, ಮಣ್ಣು, ಮರ, ಕಲ್ಲು, ಲೋಹ, ಇವುಗಳಲ್ಲಿ ಯಾವುದರಿಂದಲಾದರೂ ವಿಗ್ರಹಗಳನ್ನು ಮಾಡಬಹುದು. ಮರಳು, ಮಣ್ಣುಗಳಿಂದ ಮಾಡಿದುವು ತಾತ್ಕಾಲಿಕ ಉಪಯೋಗಕ್ಕಾಗಿದ್ದು ಪೂಜೆಯಾದ ನಂತರ ವಿಸರ್ಜಿಸತಕ್ಕುವು. ಮರದಿಂದ ಮಾಡಿದವುಗಳನ್ನು ಮನೆಗಳಲ್ಲಿಟ್ಟು ಸದಾ ಪೂಜಿಸಬಹುದು. ಕಲ್ಲಿನಿಂದ ಮಾಡಿದ ವಿಗ್ರಹಗಳು ದೇವಾಲಯಗಳಲ್ಲಿ ಪ್ರತಿಷ್ಠಿಸಲ್ಪಡತಕ್ಕವು. ಲೋಹಗಳಿಂದ ಮಾಡಿದುವು ಉತ್ಸವಾದಿಗಳಲ್ಲಿ ಉಪಯೋಗಿಸತಕ್ಕುವು. ವಿಗ್ರಹ ನಿರ್ಮಾಣಕ್ಕೆ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಲೋಹಗಳು ವಿಧಿಸಲ್ಪಟ್ಟಿವೆ. ಸತ್ಯ ಯುಗದಲ್ಲಿ ಚಿನ್ನದಿಂದಲೂ ತ್ರೇತಾ ಯುಗದಲ್ಲಿ ಬೆಳ್ಳಿಯಿಂದಲೂ, ದ್ವಾಪರದಲ್ಲಿ ತಾಮ್ರದಿಂದಲೂ, ಕಲಿ ಯುಗದಲ್ಲಿ ಪಂಚಲೋಹದಿಂದಲೂ ವಿಗ್ರಹಗಳನ್ನು ಮಾಡಬೇಕೆಂದು ಹೇಳಿದೆ. ಒಂದೊಂದು ತರದ ವಿಗ್ರಹಾರಾಧನೆಗೂ ಒಂದೊಂದು ಫಲವನ್ನು ಹೇಳಿದೆ. ಮರದಿಂದ ಮಾಡಿದ ಪ್ರತಿಮೆಯು ಬಲವನ್ನೂ ಜಯವನ್ನೂ ಆಯುಸ್ಸನ್ನೂ ಕೊಡುವುದು. ತಾಮ್ರದ ಪ್ರತಿಮೆಯು ಪುತ್ರ ಪೌತ್ರರನ್ನು ದಯಪಾಲಿಸುವುದು. ಬೆಳ್ಳಿಯ ವಿಗ್ರಹವು ಕೀರ್ತಿಯನ್ನು ಗಳಿಸಿಕೊಡುವುದು. ಚಿನ್ನದ ವಿಗೃಹವು ಪುಷ್ಟಿಯನ್ನೀಯುವುದು. ರತ್ನಗಳಿಂದ ಮಾಡಿದ ವಿಗ್ರಹವು ಮಂಗಳವನ್ನು ಬೀರುವುದು.

            ದೇವರನ್ನು "ದೇವರೆ" ಎಂದು ಕೂಗುವ ವಿಧಾನ ಬಾಷೆಗೊಂದರಂತೆ ಇರುವಾಗ ಸುಮಾರು ೪೨೦೦[36] ಮತಗಳು ಈ ಜಗತ್ತಿನಲ್ಲಿ ಇರುವಾಗ, ೧೦೦ಕ್ಕೂ ಹೆಚ್ಚು ಸಂಪರ್ಕಿಸಲಾಗದ ಬುಡಕಟ್ಟು ಜನಾಂಗಗಳಿರುವಾಗ,  ಯುನೈಟೆಡ್ ನೇಷನ್ಸ್ ಅಂದಾಜಿನ ಪ್ರಕಾರ ೩೭ ಕೋಟಿ ಜನ ೯೦ ದೇಶದಲ್ಲಿ ಬುಡಕಟ್ಟು ಜನಾಂಗ ವಾಸವಾಗಿದ್ದಾರೆ, ಅವರು ಪ್ರಪಂಚದ ಜನಸಂಖ್ಯೆಯಲ್ಲಿ ಶೇಕಡ ೫ ಇದ್ದಾರೆ. ಜಗತ್ತಿನಲ್ಲಿ ೭೦೦೦ ಭಾಷೆಗಳಿವೆ ಮತ್ತು ೫೦೦೦ ಸಂಸ್ಕೃತಿಗಳಿವೆ.[37] ನಾವು ಕಂಡ ೫೦ ಭಾಷೆಯಲ್ಲಿ ದೇವರ ಹೆಸರನ್ನು ವಿಭಿನ್ನತೆಯಲ್ಲಿ ಕೂಗುತ್ತಾರೆ. ಅಂದರೆ ಇನ್ನು ಸುಮಾರು ೬೯೫೦ ಭಾಷೆಯಲ್ಲಿ ಹೇಗೇಗೆ ಕೂಗ ಬಹುದು ಯೋಚಿಸಿ. ೪೨೦೦ ಮತಗಳಲ್ಲಿ ಎಸ್ಟು ದೇವರಿದ್ದಾರೆ ಯೋಚಿಸಿ.

            ದೇವರನ್ನು ಕಂಡ ಖಷಿಗಳು, ಮಹನೀಯರು, ಮಹಾತ್ಮರು ತಮ್ಮ ಅನುಭವವನ್ನು ಜನರಿಗೆ ತಿಳಿಸುವದಕ್ಕೆಂದು ಆ ದೇವರಿಗೆ ಕಲವು ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈ ಹೆಸರುಗಳು ಒಂದೇ ಆಗಿರುವದಿಲ್ಲ; ಬಗೆ ಬಗೆಯಾಗಿರುತ್ತವೆ, ಲೆಕ್ಕವಿಲ್ಲದಷ್ಟು ಇರುತ್ತವೆ. ಯಾವ ಯಾವ ಭಕ್ತರು ಯಾವ ಯಾವ ಹೆಸರಿನಿಂದ ಭಗವಂತನನ್ನು ಮೊದಲು ಕರದರೋ ಅವರವರ ಅನುಯಾಯಿಗಳು ಆಯಾ ಹೆಸರನ್ನೇ ಆ ದೇವದೇವನಿಗೆ ಇಟ್ಟುಕೊಂಡಿರುತ್ತಾರೆ. ಹೀಗಿರುವದರಿಂದ ಬೇರೆಬೇರೆಯ ಆಚಾರ್ಯರುಗಳ ಶಿಷ್ಯರು ಬೇರೆ ಬೇರೆಯ ಹಸರುಗಳಿಂದ ಭಗವಂತನನ್ನು ಕರೆದರೆ, ತಮ್ಮ ಮೂಲಗುರುಗಳು ಕರೆದ ಹೆಸರಿನಿಂದಲೇ ಈಶ್ವರನನ್ನು ಕರೆಯುವದು ಅವರವರಿಗೆ ಮಚ್ಚಿಗೆಯಾದರೆ, ಆಶ್ಚರ್ಯವಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ಹೇಳಿರುವಂತೆ ಒಂದು ಭಾಷೆಯಲ್ಲಿ ನೀರಿಗೆ ಪಾನಿ ಎಂದು ಹೆಸರು, ಮತ್ತೊಂದರಲ್ಲಿ ತಣ್ಣಿ ಎಂದು ಹಸರು, ಇನ್ನೊಂದರಲ್ಲಿ ವಾರಿ ಎಂದು ಹೆಸರು; ಆದರೆ ಜನರು ಬೇರೆ ಬೇರೆಯ ಹೆಸರುಗಳಿಂದ ಕರೆಯುತ್ತಿರುವದು ನೀರೆಂಬ ಒಂದೇ ವಸ್ತುವನ್ನೇ. ಹೀಗೆಯೇ ಬೇರೆಬೇರೆಯ ಮತದವರು ಒಬ್ಬನೇ ದೇವರಿಗೆ ಬೇರೆಬೇರೆಯ ಹೆಸರನ್ನಿಟ್ಟುಕೊಂಡಿರುವರು. ದೇವರು ಒಬ್ಬನೇ ಆದರೂ ಆತನ ಗುಣಗಳು ಅನಂತವಾಗಿರುತ್ತವೆ. ವಿಷ್ಣುಸಹಸ್ರನಾಮದಲ್ಲಿ ಹೀಗೆಂದು ಹೇಳಿರುತ್ತದ:-

 

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |

ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ ॥

ವಿಷ್ಣುಸಹಸ್ರನಾಮ

ಭಾವಾರ್ಥ:- ಮಹಾತ್ಮನಾದ ಪರಮೇಶ್ವರನಿಗೆ ಗುಣಸಂಬಂಧದಿಂದ ಯಾವ ಯಾವ ಹೆಸರುಗಳು ಪ್ರಸಿದ್ದವಾಗಿರುವವೋ ಯಾವದನ್ನು ಋಷಿಗಳು ಹಾಡಿ ಹೊಗಳಿರುತ್ತಾರೋ ಅಂಥವುಗಳನ್ನು ಹೇಳುವೆನು. ಅವುಗಳನ್ನು ಹೇಳಿ ಕೊಳ್ಳುವವರಿಗ ಅಭ್ಯುದಯವುಂಟಾಗುತ್ತದೆ.

 

 

ಜನಿವಾರ ಉಪನಯನ ಬಗ್ಗೆ ಗೊಂದಲ ಬೇಡ  

            ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತೀ ಸ್ವಾಮಿಗಳು ಜನಿವಾರದ ಬಗ್ಗೆ ಹೀಗೆನ್ನುತ್ತಾರೆ, "ಜನಿವಾರವೆಂಬುದು ದ್ವಿಜರ ಹೊಣೆಗಾರಿಕೆಯನ್ನೂ ಭರತ ಖಂಡದ ಸಂಸ್ಕೃತಿಯ ಪಾವಿತ್ರ್ಯವನ್ನೂ ಗುರುತಿಸುವ ಒಂದು ಬಗೆಯ ಬಾವುಟ. ಜನಿವಾರಕ್ಕೆ ಪಾವಿತ್ರ್ಯವು ಬಂದಿರುವದು ಬರಿಯ ನೂಲನಿಂದಲ್ಲ, ಅದಕ್ಕೂ ವೈದಿಕ ಸಂಸ್ಕೃತಿಗೂ ಇರುವ ಸಂಬಂಧದ ಭಾವನೆಯಿಂದ. ಆದ್ದರಿಂದ ಆ ಭಾವನೆಯು ಮೂಡುವದಕ್ಕೂ ಬೆಳೆಯುವದಕ್ಕೂ ಫಲಕಾರಿಯಾಗುವದಕ್ಕೂ ಅನುಕೂಲವಾಗುವ ರೀತಿಯಿಂದಲೇ ಅದನ್ನು ಸಜ್ಜುಗೊಳಿಸಬೇಕು. ಹಾಗೆಯೇ ಅದನ್ನು ಧರಿಸಬೇಕು. ಅವನ್ನು ಉಪಾಕರ್ಮಗಳಲ್ಲಿ ದಾನಕ್ಕೂ ಧಾರಣೆಗೂ ಉಪಯೋಗಿಸುತ್ತಾರೆ, ಮನೆಯಲ್ಲಿಯೂ ಬಳಕೆಗೆ ಇಟ್ಟುಕೊಳ್ಳುತ್ತಾರೆ".

            ಜನಿವಾರ ಎಂದರೆ ಸಂಸ್ಕೃತದಲ್ಲಿ ಯಜ್ಞೋಪವೀತ ಎಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಅಕ್ಷರ ರೀತ್ಯ ಅನುವಾದಿಸಿದರೆ "ದುಷ್ಟ ಮನುಷ್ಯತ್ವದ ನಿಷೇದದಿಂದ ರಕ್ಷಿಸುವ ಬುದ್ಧಿವಂತ ಸಹಾನುಭೂತಿಯನ್ನು ಸೇರುವುದು". ಜನಿವಾರ ಧಾರಣೆಯಿಂದ ದುಷ್ಟತನವನ್ನು ನಿಷೇಧಿಸುವ ವಿದ್ಯೆಯನ್ನು ನೀಡುವ ಬುದ್ಧಿವಂತ ಸಹಾನುಭೂತಿಯ ಗುರುವನ್ನು ಸೇರುವುದು ಎಂದಾಗಿದೆ.  ಇದರ ಬಗ್ಗೆ ಒಂದು ಶ್ಲೋಕವಿದೆ

 

ಯಜ್ಞೋಪವೀತಮ್ ಪರಮಂ ಪವಿತ್ರಮ್ ಪ್ರಜಾಪತೆರ್ಯತ್

ಸಹಜಮ್ ಪುರಸ್ಥಾತ್ ಆಯುಷ್ಯಮ್ ಅಗ್ರಯಂ

ಪ್ರತಿ ಮುಂಚ ಶುಭ್ರಮ್ ಭಲಮಸ್ತು ತೇಜಃ

ಭಾವಾರ್ಥ:- ದುಷ್ಟ ಮನುಷ್ಯತ್ವದ ನಿಷೇದದಿಂದ ರಕ್ಷಿಸುವ ಬುದ್ಧಿವಂತ ಸಹಾನುಭೂತಿಯನ್ನು ಸೇರುವುದು,  ರಕ್ಷಿಸುವ ಹೊಳಪಿನ ಕಲ್ಯಾಣ ಶ್ರೇಷ್ಠತೆಯನ್ನು ರಕ್ಷಿಸುವುದು ಮೂರು ಮಾಂತ್ರಿಕ ಸೂತ್ರ, ಪೋಷಿಸುವ ತಾಯಿ (ಚಕ್ರಗಳು) ಗಾಳಿ ಅಮೃತವನ್ನು ಪಡೆದ ಅವರೆಲ್ಲರನ್ನೂ ಕಾಪಾಡುತ್ತಾಳೆ, ನೀರಿನಿಂದ ತಯಾರಾದ ವೈದ್ಯತೆಯನ್ನು ಪಡೆಯುವುದು, ಧ್ಯಾನ, ಮಂಗಳಕರವಾದ ಪ್ರಾರ್ಥನೆ, ಜೀವ ಉಸಿರು ಅಮೃತವನ್ನು ಪಡೆದು ಶುದ್ಧೀಕರಣ, ಜೀವನವನ್ನು ಸಂರಕ್ಷಿಸುವ ಒಂದು ಮಾಂತ್ರಿಕ ಸೂತ್ರವು ಹೊಳೆಯುವ ದಿಕ್ಕಿನಲ್ಲಿ ಹೋಗಲು ನಿಸ್ಸಂಶಯವಾಗಿ ರೂಪವನ್ನು ಬದಲಾಯಿಸಲು ತೀಕ್ಷ್ಣತೆಯ ಮೇಲೆ ಅಧಿಕಾರವನ್ನು ಹೊಂದುವುದು. (ಇದು ಪರ ವಿದ್ಯೆ ಮುಖಾಂತರ ಕಂಡುಕೊಂಡ ಭಾವಾರ್ಥ)

            ವಿದ್ವಾಂಸರು ಈ ಶ್ಲೋಕದ ಬಗ್ಗೆ ಬೇರೆ ವ್ಯಾಖ್ಯಾನ ಕೊಟ್ಟದ್ದು ಅದು ಇಲ್ಲಿವರೆಗೆ ಚಾಲ್ತಿಯಲ್ಲಿದೆ. ಅದು ಹೀಗಿದೆ, "ಯಜ್ಞೋಪವೀತ' ಅತ್ಯಂತ ಶ್ರೇಷ್ಠವಾದದ್ದು, ಪವಿತ್ರವಾದದ್ದು ಬ್ರಹ್ಮನ ಜೊತೆಯಲ್ಲಿಯೇ ಹುಟ್ಟಿದ್ದು (ಬ್ರಹ್ಮನ ಸಮಾನ) ಇದು ಆಯುಷ್ಯವನ್ನು ನೀಡತಕ್ಕದ್ದು, ಶುದ್ಧವಾದುದು. ಶುಭ್ರವಾದದ್ದು.

            ಯಜ್ಞೋಪವೀತ ಧಾರಣೆಗೆ ಮೊದಲು ಹುಡುಗನಿಗೆ ಪೀತವಸ್ತ್ರವನ್ನು ಉಡಿಸುತ್ತಾರೆ. ಮೌಂಜಿಯನ್ನು ಕಟ್ಟುತ್ತಾರೆ. ಇದೂ ಬ್ರಹ್ಮಚರ್ಯದ ಸಂಕೇತ. ಮೌಂಜಿ ಒಂದು ಜಾತಿಯ ಹುಲ್ಲಿನಿಂದ ಮಾಡಿದ ನಡುಕಟ್ಟು ಈ ಪದದಿಂದಲೇ ಉಪನಯನಕ್ಕೆ "ಮುಂಜಿ' ಎಂದೂ ಹೆಸರು ಬಂದಿದೆ. ಇದರ ಧಾರಣೆ ಬ್ರಹ್ಮಚರ್ಯದ ಅವಧಿಯ ಪಾಲನೆಯ ಸಂಕೇತ. ಬ್ರಹ್ಮಚಾರಿಯ ಮನಸ್ಸಿನಲ್ಲಿ ಕಾಮ ಭಾವನೆಯನ್ನು ತಡೆಹಿಡಿಯುವ ಹಿಡಿತದಲ್ಲಿಡುವ ಉದ್ದೇಶದಿಂದ ಅಂಥ ಭಾವನೆ ಹತೋಟಿಯಲ್ಲಿರಲಿ ಎಂಬ ಕಾರಣದಿಂದ ಮೌಂಜಿಯನ್ನು ಕಟ್ಟುತಾರೆ. ಈ ಕಲ್ಪನೆ ಮನಸಿನಲ್ಲಿ ನೆಲಸಲಿ ಎಂದೇ ಉಡಿದಾರ ತೊಡಿಸುವ ಕರ್ಮ. ಇದೊಂದು ಇಂದ್ರಿಯ ನಿಗ್ರಹದ ಸೂಚನೆ. ಅರಿಸಿನದ ವಸ್ತ್ರಧಾರಣೆಗೂ ಒಂದು ಅರ್ಥವುಂಟು. ಅರಿಸಿನದಲ್ಲಿ ತೋಯಿಸಿ ಉಡಿಸಿದ ಪಂಚೆ ಇದೂ ಅವನ ಮನಸ್ಸು ಶುಭ್ರ ವಾಗಿರುವುದಕ್ಕೆ, ಅವನ ದೇಹದ ಆರೋಗ್ಯ ರಕ್ಷಣೆಗೆ ಕೈಗೊಳ್ಳಬೇಕಾದ ಸಾಂಕೇತಿಕ ಆಚರಣೆಯ ಕ್ರಿಯೆ. ಈ ತಂತ್ರಗಳೆಲ್ಲ ಮಂತ್ರೊಚ್ಚಾರಣೆಯಿಂದ ಮಹತ್ವವನ್ನೂ ಶಕ್ತಿಯನ್ನೂ ಪಡೆಯುತವೆ. ಯಜ್ಞೋಪವೀತದ ಧಾರಣೆಯ ನಂತರ ಹುಡುಗನಿಗೆ "ಬ್ರಹ್ಮೋಪದೇಶ' ವನ್ನು ಮಾಡುತಾರೆ. ಇದಕ್ಕೆ ಗಾಯತ್ರೀ ಮಂತ್ರವೆಂದು ಹೆಸರು. ಇದರ ಬಗ್ಗೆ 2ನೇ ಅಧ್ಯಾಯದಲ್ಲಿ ವಿವರಿಸಿದೆ. ಯಜ್ಞೋಪವೀತ ಧಾರಣೆಯಾದ ಮೇಲೆ ಹುಡುಗನು ತಾಯಿಯ ಜೊತೆಯಲ್ಲಿ ಭೋಜನ ಮಾಡಬೇಕು. ಯಾರು ಯಾರು ತನಗೆ ಊಟ ಹಾಕುತ್ತಾರೋ ಅವರೆಲ್ಲ ಮಾತೃ ಸ್ವರೂಪರು ಎಂಬ ಭಾವನೆ ಅವನಲ್ಲಿ ಬಳೆಯಲಿ ಎಂಬುದೇ ಮಾತೃಭೋಜನದ ಸಂಕೇತವು.

            ಉಪನಯನ ಸಮಯದಲ್ಲಿ 3 ಎಳೆಯ ಒಂದು ಬ್ರಹ್ಮ ಗಂಟು ಇರುವ ಜನಿವಾರ ಹಲವರು ಹಾಕುತ್ತಾರೆ. ವಿಶ್ವಕರ್ಮರಲ್ಲಿ 5 ಎಳೆ ಯುಳ್ಳ ಒಂದು ಬ್ರಹ್ಮ ಗಂಟು ಇರುವ ಜನಿವಾರ ಹಾಕುತ್ತಾರೆ. ಈ ಎಳೆಗಳು ಪಂಚ ವಾಯುಗಳ – ಪಂಚಭೂತಗಳ – ಪಂಚೇಂದ್ರಿಯಗಳ ಸಂಕೇತ ಎಂದೂ ಹೇಳುತ್ತಾರೆ. ಇದು ಬ್ರಹ್ಮಜ್ಞಾನ ಪಡೆಯಲು ಅವನಿಗೆ ಜೊತೆಯಲ್ಲಿ ಇದ್ದು ಸದಾ ನೆನಪಿಸುವ ಉದ್ದೇಶದಿಂದ ಕೂಡಿದೆ. ನಂತರ ಮದುವೆಯಲ್ಲಿ ನಾಂದಿಗಳು ಎಂದು ಪಿತೃಗಳನ್ನು/ ಹಿರಿಯರನ್ನು ಪೂಜಿಸುವ ಶಾಸ್ತ್ರವಿದೆ ಆಸಮಯದಲ್ಲಿ ಒಂದು ಬ್ರಹ್ಮಗಂಟು ಇರುವ ಮೂರು ಎಳೆ ಅಥವಾ ಐದು ಎಳೆ ಜನಿವಾರ ಹಾಕುತ್ತಾರೆ. ಇದು ಹಿರಿಯರ ಬಗ್ಗೆ ತನಗೆ ಇರಬೇಕಾದ ಹೊಣೆಗಾರಿಕೆಯನ್ನೂ ನೆನಪಿಸುವ ಉದ್ದೇಶದಿಂದ ಕೂಡಿದೆ. ನಂತರ ನಾಗವಲ್ಲಿ ಶಾಸ್ತ್ರ ಎಂದು ಮಾಡುತ್ತಾರೆ ಅಲ್ಲಿ ಗೃಹಸ್ತನಾಗಿ ಇನ್ನೊಂದು ಗಂಟು ಉಳ್ಳ ಹೊಣೆಗಾರಿಕೆ ನೆನಪಿಸುವ ಉದ್ದೇಶದಿಂದ ಕೂಡಿದೆ.

            ಈ ಬಗ್ಗೆ  ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತೀ ಸ್ವಾಮಿಗಳು ಹೇಳಿದಂತೆ "ಜನಿವಾರವೆಂಬುದು ದ್ವಿಜರ ಹೊಣೆಗಾರಿಕೆಯನ್ನೂ ಭರತ ಖಂಡದ ಸಂಸ್ಕೃತಿಯ ಪಾವಿತ್ರ್ಯವನ್ನೂ ಗುರುತಿಸುವ ಒಂದು ಬಗೆಯ ಬಾವುಟ" ಎಂಬುದರ ಹಿನ್ನೆಲೆಯಲ್ಲಿ ನಾವು ಮೇಲಿನ ಅರ್ಥಗಳನ್ನು ಒಪ್ಪಬಹುದಾಗಿದೆ.

            ಸಹಜ ಸ್ಥಿತಿಯಲ್ಲಿ ದಕ್ಷಿಣಕ್ಕೆ ಕೆಳಬಾಗಕ್ಕೂ ಉತ್ತರಕ್ಕೆ ಮೇಲ್ಭಾಗಕ್ಕೂ ಅಂದರೆ ಎಡ ಭುಜದ ಮೇಲೆ, ಬಲ ಸೊಂಟದವರೆಗೆ ದರಿಸುವುದಾಗಿದೆ. ತರ್ಪಣ ಬಿಡುವಾಗ ಮಾತ್ರ ಅದು ಉಲ್ಟಾ ಆಗುತ್ತದೆ. ಇದರ ಪವಿತ್ರ ಉದ್ದೇಶ ತರ್ಪಣ ಸಮಯದಲ್ಲಿ ಎಂದಿಗೂ ದಕ್ಷಿಣದಿಂದ (ಮೂಲಾಧಾರದಿಂದ) ಸಹಸ್ರಾರದವರೆಗೆ ಉಸಿರು  ಎಳೆಯ ಬೇಡ ಎಂಬುದಾಗಿರಬಹುದು. 

            ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತೀ ಸ್ವಾಮಿಗಳು ಸಂಕ್ಷಿಪ್ತವಾಗಿ ಇದರ ಬಗ್ಗೆ ಹೀಗೆ ಹೇಳಿದ್ದಾರೆ, "ತಾವುಗಳು ಭರತ ಖಂಡದ ಸಂಸ್ಕೃತಿಯ ಪಾಲಕರು, ಭರತಖಂಡದ ಯಷಿಗಳು ಕೂಡಿಹಾಕಿರುವ ಜ್ಞಾನ ಭಂಡಾರವನ್ನು ತೆಗೆಯುವ ಬೀಗದ ಕೈ ತಮಲ್ಲಿದೆ. ಅದನ್ನು ಹದಗೆಡಿಸಬೇಡಿರಿ. ಅದಕ್ಕೆ ತುಕ್ಕು ಹಿಡಿಯಗೊಡಬೇಡಿರಿ. ದಯವಿಟ್ಟು ಸಂಸ್ಕೃತದ ಕಡೆಗೆ, ವೇದದ ಕಡೆಗೆ, ನಿಮ್ಮ ಪ್ರಾಚೀನರ ಆಚಾರ ವ್ಯವಹಾರಗಳ ಕಡೆಗೆ, ದೃಷ್ಟಿಯನ್ನು ಹೊರಳಿಸಿರಿ. ಕಾಲಕಾಲಕ್ಕೆ ಉಪನಯನವನ್ನು ನಿಮ್ಮ ಮಕ್ಕಳಿಗೆ ಮಾಡಿಸಿರಿ. ದೊರೆತಷ್ಟು ವಿರಾಮಕಾಲದಲ್ಲ ನೀವೂ ಧಾರ್ಮಿಕ ವಾಗ್ಮಯದ ಪರಿಚಯವನ್ನು ಮಾಡಿಕೊಳ್ಳಿರಿ. ದ್ವಿಜರಲ್ಲದವರಿಗೂ ಪವಿತ್ರವಾದ ಈ ಸಂಸ್ಕೃತಿಯ ಸವಿಯನ್ನು ತಿಳಿಸಿಕೊಡಿರಿ".

            ಉಪಾಕರ್ಮ ಎನ್ನುವ ಶಬ್ದವು ಉಪಯೋಗವಾಗುತ್ತದೆ, ಅದರ ಬಗ್ಗೆ ಸ್ವಾಮೀಜಿಯವರು ಹೀಗೆನ್ನುತ್ತಾರೆ, ಉಪಾಕರ್ಮವೆಂದರೆ ಆ ದಿವಸ ಋಷಿಪೂಜೆ ಮಾಡುವದು, ಯಜ್ಞೋಪವೀತದ ದಾನಧಾರಣೆಗಳನ್ನು ಮಾಡುವದು, ಮಾರನೆಯ ದಿನ ಗಾಯತ್ರೀಜಪವನ್ನು ಮಾಡುವದು, ಇಷ್ಟು ನಡೆಯುತ್ತವೆ. ವೇದದ ಅಧ್ಯಯನವನ್ನು ಮಾಡುತ್ತಿದ್ದವರು ಇದುವರೆಗೆ ಅಧ್ಯಯನ ಮಾಡಿದ ವೇದಗಳು ವೀರ್ಯವತ್ತಾಗಲಿ ಎಂದು, ಮತ್ತೆ ಮುಂದೆ ಅಧ್ಯಯನವು ಸರಿಯಾಗಿ ನಡೆಯಲಿ ಎಂದು ಮಾಡಿಕೊಳ್ಳುವ ಒಂದಾನೊಂದು ಸಂಸ್ಕಾರವದು. ಗಾಯತ್ರೀ ಮಂತ್ರದ ಜಪವನ್ನು ಮಾಡುವ ದಿನ ........ ಮಿಕ್ಕ ಕಾರ್ಯಗಳನ್ನೂ ಬದಿಗಿರಿಸಿ ಶ್ರದ್ಧಾಭಕ್ತಿಗಳಿಂದ ಮಡಿಯನ್ನುಟ್ಟು ಅನುಷ್ಠಾನಮಾಡಬೇಕು. ಗಾಯತ್ರಿಯು ವೇದಮಾತೆಯು; ಆಕೆಯ ಅನುಗ್ರಹವಾದರೆ ನಮಗೆ ನಮ್ಮ ಸಂಸ್ಕೃತಿಯ ಒಳಗುಟ್ಟು ವಶವಾಗುವದು.

            ಇಲ್ಲಿ ಮತ್ತೆ ಗಾಯತ್ರಿ ಮಂತ್ರವನ್ನು ಅದರ ಪರ ವಿದ್ಯೆ ಅನುಸಾರ ಅಕ್ಷರ ಅರ್ಥದಲ್ಲಿ ವ್ಯಾಖ್ಯಾನಿಸಿರುವ ಅರ್ಥ ಉಲ್ಲೇಖಿಸುತ್ತಿದ್ದೇನೆ.

ಓಂ ಭೂರ್ಭುವಸ್ಸುವಃ ॥

ತಥ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ।

ಧಿಯೋ ಯೋನಃ ಪ್ರಚೋದಯಾತ್ ॥

ಭಾವಾರ್ಥ:- ಭೂಮಿಯ ಮೇಲೆ ಬೀಸಿದ ಘನನರೂಪವಲ್ಲದ, ಘರ್ಜಿಸುವ, ಹೊಳೆಯುವ ಕಿರಣವುಳ್ಳ, ಉತ್ಕೃಷ್ಟವಾದ  ದೈವಿಕ ಆಸ್ತಿಯಾದ ಗಾಳಿಯಿಂದ ಅತ್ಯಂತ ಶ್ರೇಷ್ಠವಾದ ಓಂ ಮೂಲವನ್ನು ಮಾನಸಿಕತೆಯ ಈ ಬುದ್ಧಿವಂತಿಕೆಯಲ್ಲಿ ನೋಡುವೆನು ಪೋಷಿಸುವೆನು.

            ಜನಿವಾರದಲ್ಲಿನ ಮೊದಲ ಮೂರು ಗಂಟು ನಮ್ಮ ತಂದೆ ತಾಯಿ, ನಮ್ಮ ಗುರು, ಗುರುಕುಲ, ನಮ್ಮ ಬಗ್ಗೆ ನಮ್ಮ ಕಾಳಜಿ, ಈ ಮೂರು ಜವಾಬ್ದಾರಿಗಳನ್ನು ನೆನಪಿಸುತ್ತದೆ. ನಂತರದ ಮೂರು ಗಂಟು, ನಮ್ಮ ವಿಧ್ಯಾಭ್ಯಾಸದಿಂದ ಸಮಾಜಕ್ಕೆ ನೀಡುವ ಕೊಡುಗೆ, ನಮ್ಮ ಮಾನವ, ಪಶು ಮತ್ತು ಪರಿಸರಕ್ಕೆ ನಮ್ಮ ಜವಾಬ್ದಾರಿ, ನಮ್ಮ ಹಳ್ಳಿ, ರಾಜ್ಯ ಮತ್ತು ದೇಶಕ್ಕೆ ಇರುವ ಜವಾಬ್ದಾರಿ ಹೀಗೆ ಮೂರು ಜವಾಬ್ದಾರಿಯನ್ನು ನೆನಪಿಸುತ್ತದೆ. ನಂತರದ ಮೂರು ಗಂಟು ಸಂಸಾರ ಜೀವನದಿಂದ ನಮ್ಮ ಹೆಂಡತಿ ಮಕ್ಕಳು ಬಂಧುಗಳಿಗೆ ನಮ್ಮ ಜವಾಬ್ದಾರಿ, ನಮ್ಮ ದಾನ ಧರ್ಮಾಧಿಗಳ ಜವಾಬ್ದಾರಿ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಜವಾಬ್ದಾರಿ ಹೀಗೆ ಒಂಭತ್ತು ಜವಾಬ್ದಾರಿಯನ್ನು ಜನಿವಾರ ಸದಾ ನಮ್ಮ ಬಳಿ ಇದ್ದು ನಮಗೆ ನಮ್ಮ ಜವಾಬ್ದಾರಿ ನೆನಪಿಸುತ್ತದೆ. ಐದು ಎಳೆ ಜನಿವಾರ ಹಾಕುವ ಬಗ್ಗೆ ಚಿಂತನೆ ನಡೆಸಿದರೆ ಮೊದಲ ಐದು ಎಳೆ ಪಂಚ ವಾಯು ಸ್ವಾಧೀನದ ಬಗ್ಗೆ ನಮ್ಮ ಜವಾಬ್ದಾರಿ, ನಂತರ ಐದು ಎಳೆ ಪಂಚ ಭೂತಗಳ ಬಗ್ಗೆ ನಮಗೆ ಜ್ಞಾನದಿ ಒದಗಿ ಬರುವ ಜವಾಬ್ದಾರಿ, ನಂತರದ ಐದು ಎಳೆಗಳು ನಮ್ಮ ಪಂಚೇಂದ್ರಿಯಗಳ ಬಗ್ಗೆ ನಮ್ಮ ನಿಯಂತ್ರಣಾ ಜವಾಬ್ದಾರಿ ಎಂಬುದಾಗುತ್ತದೆ.

 

ಸಕಲ ದೇಹದ ಮಹಿಮೆಯ ಬಗ್ಗೆ ಶಂಕರಾಚಾರ್ಯರಿಂದ ವಚನಕಾರರವರೆಗೆ ಭೋದಿಸಿದ್ದೂ ಗೋಪ್ಯ ಅಂಶ

 

            ದೇಹವೇ ದೇವಾಲಯ ಎಂದು ಜಗದ್ಗುರು ಶ್ರೀ ಶಂಕರಾಚಾರ್ಯರು ಭೋದಿಸಿದ್ದಾರೆನ್ನುತ್ತಾರೆ ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತೀ ಸ್ವಾಮಿಗಳು, "ಶ್ರೀ ಶಂಕರಾಚಾರ್ಯರ ಬೋಧನೆಗೆ ಒಳಪಟ್ಟಿರುವವರೆಲ್ಲರೂ ತಮ್ಮ ಮನೆಗಳಲ್ಲಿ ದೇವರಪೂಜೆಯನ್ನು ಮಾಡುವ ಕಾಲಕ್ಕೆ ಈ ಶ್ಲೋಕವನ್ನು ತಪ್ಪದೆ ಹೇಳಿಕೊಳ್ಳುವರು : “ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸನಾತನಃ ತ್ಯಜೇದಜ್ಞಾನ ನಿರ್ಮಾಲ್ಯಂ ಸೋsಹಂಭಾವೇನ ಪೂಜಯೇತ್‌॥” ದೇಹವೇ ದೇವಾಲಯವು, ಜೀವನೇ ಸನಾತನನಾದ ದೇವನು : ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಬೇಕು, ಆತನೇ ನಾನೆಂಬ ಬಾವದಿಂದ ಪೂಜೆ ಮಾಡಬೇಕು ಎಂಬುದು ಇದರ ಅಕ್ಷರಾರ್ಥವು. ಈ ಶ್ಲೋಕವು ಯಾವ ಪುರಾಣದಲ್ಲಿದೆಯೋ ತಿಳಿಯದು; ಆದರೆ ಇದರ ವ್ಯಾಪಕತೆಯು ಮಾತ್ರ ದಕ್ಷಿಣದಲ್ಲಿ ಸೇತುವಿನಿಂದ ಹಿಡಿದು ಉತ್ತರದಲ್ಲಿ ಹಿಮಾಚಲದವರೆಗೂ ಇದೆ.

            ಮೊಟ್ಟಮೊದಲನೆಯ ಪಾದವು ದೇಹವೇ ದೇವಾಲಯವೆಂದು ಹೇಳುತ್ತದೆ. ಇದರಂತೆಯೇ ದೇಹವನ್ನು ದೇವಾಲಯವೆಂದು ತಿಳಿಯುವಾತನು ಅದು ಒಳಗೂ ಹೊರಗೂ ಪವಿತ್ರವಾಗಿರುವಂತೆ ಅಂತಃಶುದ್ದಿ ಬಹಿಃಶುದ್ದಿಗಳಿಗೆ ಬೇಕಾದ ಸ್ನಾನ, ಜಪ, ತಪ-ಮುಂತಾದವುಗಳನ್ನು ತಪ್ಪದೆ ಆಚರಿಸಬೇಕು. ಅದು ಆರೋಗ್ಯವಾಗಿರುವಂತೆಯೂ ಪುಷ್ಠಿಯಿಂದ ಕೂಡಿರುವಂತೆಯೂ ತನ್ನ ಆಹಾರ ವಿಹಾರಗಳಲ್ಲಿ ಮನಮುಟ್ಟಿ ನೋಡಿಕೊಳ್ಳಬೇಕು; ಶುದ್ಧವಾದ ಗಾಳಿಯೂ ಚೆನ್ನಾಗಿ ಬೆಳಕೂ ಇರುವ ಕಡೆಯಲ್ಲಿ ವಾಸಮಾಡಬೇಕು; ಸಾತ್ತ್ವಿಕವಾದ ಆಹಾರಗಳು, ವಿಚಾರಗಳು, ಇವುಗಳಿಂದ ಅದಕ್ಕೆ ಹೊಳಪುಬರುವಂತೆ ನೋಡಿಕೊಳ್ಳಬೇಕು; ತನ್ನನ್ನು ನೋಡಿದವರಿಗೆ ಕೂಡ ಪರಮೇಶ್ವರನ ನೆನಪುಬರುವಂತೆ ಪರಮಾತ್ಮನಿಗೆ ಅರ್ಪಿಸಿ ಪ್ರಸಾದವಾಗಿ ತೆಗೆದುಕೊಂಡು ಗಂಧಾದಿಗಳಿಂದಲೂ ಭಗವನ್ನಾಮ ಸ್ಮರಣೆಯಿಂದಲೂ ದಿನದಿನವೂ ಒಗೆದು ಮಡಿಮಾಡಿ ಶುಭ್ರವಾಗಿಟ್ಟು ಕೊಂಡಿರುವ ವಸ್ತಗಳಿಂದಲೂ ತನ್ನ ಹೊರಗನ್ನು ದೇವಮಯವಾಗಿ ಮಾಡಿಟ್ಟು ಕೊಳ್ಳಬೇಕು.

            ದೇಹವು ದೇವಾಲಯವೆಂಬ ಮಾತಿನಲ್ಲಿ ತನ್ನ ದೇಹವು ಮಾತ್ರ ದೇವಾಲಯವೆಂಬ ಅಭಿಪ್ರಾಯವಿರುವದಿಲ್ಲ. ಮಿಕ್ಕವರ ದೇಹವೂ ದೇವಾಲಯವೇ. ಆದ್ದರಿಂದ ದೇಹವನ್ನು ದೇವಾಲಯದಂತೆ ಭಾವಿಸ ಬೇಕೆಂಬಾತನು, ತನ್ನ ಮಕ್ಕಳು ಮರಿಗಳ, ತನ್ನ ಕುಟುಂಬದವರ, ತನ್ನ ನೆರೆಯವರ, ಮತ್ತು ತನ್ನ ಊರಿನವರ ಎಲ್ಲರ ದೇಹಗಳನ್ನೂ ದೇವಾಲಯ ಗಳೆಂದೇ ಭಾವಿಸಬೇಕು. ದೇವಾಲಯವನ್ನು ನೋಡಿದ ಮಾತ್ರದಿಂದ ದೇವರ ನೆನಪು ಬಂದು ಆಸ್ತಿಕನಾದವನು ಕೈಮುಗಿಯುತ್ತಾನೆ; ಅದರ ಸುತ್ತಲೂ ಕಸ ಮುಂತಾದವುಗಳೇನಾದರೂ ಬಿದ್ದಿದ್ದರೆ ತೆಗೆದುಹಾಕುತಾನೆ; ಗುಡಿಯು ಹಳೆಯದಾಗಿ ಕೆಲವು ಭಾಗ ಪಾಳಾಗಿದ್ದರೆ ಅದನ್ನು ಜೀರ್ಣೋದ್ಧಾರ ಮಾಡುವದಕ್ಕೆ ತನ್ನ ಕೈಯಲ್ಲಾದ ಧನಸಹಾಯವನ್ನೋ ಸೇವೆಯ ಸಹಾಯವನ್ನೋ ಮಾಡುತ್ತಾನೆ; ಅದರಲ್ಲಿ ಆಗಾಗ್ಗೆ ಹಣ್ಣುಕಾಯಿಗಳನ್ನ ಅರ್ಪಿಸಿ ಮಂಗಳಾರತಿ ಮುಂತಾದವುಗಳನ್ನು ನಡೆಯಿಸುತ್ತಾನೆ, ಕೈಯಲ್ಲಾದರೆ ನಿತ್ಯಪೂಜೆಯನ್ನೂ ಮಾಡುತ್ತಾನೆ. ಇದರಂತೆ ನಮ್ಮ ಸುತ್ತುಮುತ್ತಲೂ ಕಾಣಬರುವವರ ದೇಹಗಳೆಲ್ಲವೂ ದೇವಾಲಯ ಗಳೆಂದು ಭಾವಿಸುವದಾದರೆ, ಅವರೆಲ್ಲರನ್ನೂ ನಾವು ಗೌರವಿಸಬೇಕು. ಅವರ ಮನೆಗಳ ಮುಂದೆ ಕಸವನ್ನು ಹಾಕಬಾರದು; ಅವರಿಗೆ ಅನಾರೋಗ್ಯವಾಗಬಹುದಾದ ಅಶುಚಿಕಾರ್ಯಗಳನ್ನು ಮಾಡುವದಕ್ಕೆ ನಮ್ಮ ಮಕ್ಕಳನ್ನು ಬಿಡಬಾರದು; ಅವರೆಲ್ಲರೂ ಅರೋಗ್ಯ ದೃಢಕಾಯರಾಗಿ, ನಿರ್ಮಲರಾಗಿ, ಒಬ್ಬೊಬ್ಬರೂ ದೇವರಗುಡಿಗಳಾಗಿ ಬಾಳುವದಕ್ಕೆ ತಕ್ಕ ಸಹಾಯವನ್ನು ನಮ್ಮ ಕೈಯಲ್ಲಾದ ಮಟ್ಟಿಗೆ ಮಾಡಬೇಕು. ಬಡವರಿಗೆ ಅನ್ನಬಟ್ಟಿಗಳನ್ನು ಕೊಡುವದು, ಧನಸಹಾಯಮಾಡುವದು, ವಿದ್ಯಾದಿಗಳನ್ನು ಹೇಳಿಕೊಡುವದು ಮುಂತಾದ ರೀತಿಗಳಿಂದ ಮಾಡುವ ಉಪಕಾರವೆಲ್ಲ ಪರಮೇಶ್ವರನ ಗುಡಿಗಳನ್ನು ಜೀರ್ಣೋದ್ಧಾರ ಮಾಡಿದಂತೆ ಎಂದು ಭಾವಿಸಬೇಕು. ಹಣವಂತನಾದವನು ತನ್ನ ನೆರೆಯವರ ಮತ್ತು ಊರವರ ಉಪಯೋಗಕ್ಕೆಂದು ಸ್ನಾನ ಪಾನಗಳಿಗೆ ಕೆರೆಕಟ್ಟೆಗಳನ್ನು ಕಟ್ಟಿಸುವದೂ, ತಿಳಿವಳಿಕೆಯ ಪ್ರಸಾರಕ್ಕೆಂದು ವಿದ್ಯಾಶಾಲೆಗಳನ್ನೂ ಪುಸ್ತಕ ಭಂಡಾರಗಳನ್ನೂ ಏರ್ಪಡಿಸುವದೂ, ಈ ದೃಷ್ಟಿಯಲ್ಲಿ ದೇವರ ಪೂಜೆಯೇ ಆಗಿರುವದು. ದೇಹವೆಂದರೆ ಬರಿಯ ಮನುಷ್ಯನ ದೇಹವೆಂದು ಕುಗ್ಗಿಸಿ ಅರ್ಥಮಾಡುವದಕ್ಕೇನೂ ಕಾರಣವಿಲ್ಲ. ಪ್ರಾಣಿಗಳಿಗೂ ದೇಹವುಂಟು. ಆ ದೇಹಗಳನ್ನೂ ದೇವಾಲಯವೆಂದು ಭಾವಿಸುವಾತನಿಗೆ “ಪ್ರಾಣಿಹಿಂಸೆ ಮಾಡಬಾರದು' ಎಂಬ ನೀತಿವಾಕ್ಯವು ಅನವಶ್ಯವಾಗಿರುವದು".

 

 

 

 

 

 

 

 

 

ಕ್ಷಮಾ ಪ್ರಾರ್ಥನೆ

            ವೇದ ಜ್ಞಾನದ ಬಗ್ಗೆ ತಡವಾಗಿ ಅಧ್ಯಯನ ಮಾಡಿದ್ದಕ್ಕೆ, ಇದರ ಬಗ್ಗೆ ನನಗೆ ಆದ ಸಾಕ್ಷಾತ್ಕಾರದ ಬಗ್ಗೆ ನಿಖರತೆ ಇದ್ದರೂ ಅಲ್ಲಲ್ಲಿ ತಪ್ಪಾಗಿರಬಹುದಾದ ಸಾಧ್ಯತೆ ಇದೆ, ಅದಕ್ಕೆ  ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನಿಮ್ಮಲ್ಲಿ  ಕ್ಷಮೆ ಕೋರುತ್ತೇನೆ,

 

            ನಾನು ಈ ಪ್ರಪಂಚದ ಬೆಳಕನ್ನು ನೋಡುವ ಮೊದಲೇ, ನನ್ನ ಹಿಂದಿನ ಜನ್ಮಗಳಿಂದ ಮಾಡಿದ ಪಾಪಗಳಿಂದ, ನನ್ನ ಕರ್ಮಗಳ ಫಲದಿಂದ, ನನ್ನ ವಿದ್ಯಾಭಲವು ಸುಪ್ತವಾಗಿ ಇಲ್ಲಿವರೆಗೆ ಇತ್ತು,  ನನ್ನ ತಪ್ಪಿಗೆ ತಾಯಿಯ ಹೊಟ್ಟೆಯಲ್ಲಿ ಮಲಗಿರುವಂತೆ ಅಲ್ಲಿ ನಾನು ಹೊಲಸು ವಸ್ತುಗಳ ಮಧ್ಯೆ ಕುದಿಯುವಂತೆ, ಪ್ರತಿ ತಾಯಿಯ ಗರ್ಭದಲ್ಲಿರುವ ಮಗುವಿಗೆ ಆಗುವ ನೋವನ್ನು ನೀಡಿ ಶಿಕ್ಷಿಸಿದೆ, ನನ್ನ ಹಿಂದಿನ ಜನ್ಮದ ಪುಣ್ಯಗಳಿಗೆ ವಿದ್ಯೆಯನ್ನು ಕೊಡಿಸುವ ತಂದೆ ತಾಯಿಯಲ್ಲಿ ಜನ್ಮಿಸುವಂತೆ ಆಶೀರ್ವಾದಿಸಿದೆ. ಅವರಾದರೂ ಕಷ್ಟಪಟ್ಟು ವಿದ್ಯೆ ಕೊಡಿಸಿದರೂ ನನ್ನ ಮೂಲ ವಿದ್ಯೆ ವೇದ ವಿದ್ಯೆ ಎಂದು ನನ್ನ ಕರ್ಮಗಳಿಂದಲೋ, ಈ ಭರತ ಭೂಮಿಗೆ ಅಂಟಿದ ಶಾಪದಿಂದಲೋ ಇಲ್ಲಿವರೆಗೆ ತಿಳಿಯದಾದೆ. ಅನೇಕರು ಈ ಬಗ್ಗೆ ಉಪನ್ಯಾಸ ನೀಡಿದಾಗ ಅರಿಯದಾದೆ, ಅದು ನನ್ನ ಕರ್ಮದ ಫಲದಿ ಇಲ್ಲಿವರೆಗೆ ದ್ವಂದ್ವದಲ್ಲಿ ಇದ್ದೆ.    ಅದನ್ನ ಪೂರ್ಣ ವರ್ಣಿಸಲಾರೆ  ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ಬಾಲ್ಯದಲ್ಲಿ ನಾ ಪಡೆದ ವಿದ್ಯೆಯಿಂದ ನನ್ನ ಮಾನಸಿಕ ಮತ್ತು ದೈಹಿಕ ಸಂಕಟ ಕೊನೆಗೊಳ್ಳಲಿಲ್ಲ; ಶುದ್ದತೆಯ ಅರಿವಿಲ್ಲದೆ ನನ್ನ ದೇಹವು ಸದಾ ಕೊಳಕಿನಿಂದ ಆವೃತವಾಗಿತ್ತು ಮತ್ತು ನಾನು ಎಲ್ಲದಕ್ಕೂ ವಿದ್ಯೆ ಇಲ್ಲದ ನನ್ನ ತಾಯಿಯ ಆಶ್ರಯಿಸುತ್ತಿದ್ದೆ, ಸರಿಯಾದ ಬೋಧನೆ ಇಲ್ಲದೆ ನನ್ನ ದೇಹ ಮತ್ತು ಅಂಗಗಳ ಮೇಲೆ ನನಗೆ ಯಾವುದೇ ನಿಯಂತ್ರಣವಿರಲಿಲ್ಲ; ನನಗೆ ತೊಂದರೆ ಕೊಡುವ ಜಂತುಗಳು ನಾನಾ ವಿಧವಾಗಿ ಹಿಂಬಾಲಿಸಿದವು; ಹಗಲಿರುಳು ನಾನಾ ರೋಗಗಳ ನೋವಿನಿಂದ ಅಳುತ್ತಿದ್ದೆ ನಿಮ್ಮನ್ನು ಮರೆತು ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ಯೌವನದಲ್ಲಿ, ಶಬ್ದ, ದೃಷ್ಟಿ, ರುಚಿ, ಸ್ಪರ್ಶ ಮತ್ತು ವಾಸನೆಯ ವಿಷಪೂರಿತ ಹಾವುಗಳು ನನ್ನ ಜೀವಂತಿಕೆಯನ್ನು ಕಚ್ಚಿ ನನ್ನ ತಾರತಮ್ಯವನ್ನು ಕೊಂದವು; ಬ್ರಹ್ಮ ವಿದ್ಯೆಯ ಸಾರವನ್ನು ಅರಿಯದೆ, ಸಂಧ್ಯಾ ವಂದನೆ ಗಾಯತ್ರಿ ಜಪವನ್ನು ಅರಿಯದೆ, ಕೆಲವರ ಷಡ್ಯಂತರದಿ ವಿದ್ಯೆಯಲ್ಲಿ ನಾಸ್ತಿಕತೆ, ಸಂಸ್ಕಾರದ ತಿರಸ್ಕಾರ, ದೇವರ ಸ್ವರೂಪವನ್ನು ಅರಿಯದೆ, ಜ್ಞಾನಿಗಳ ಗ್ರಂಥಗಳ ಓದದೆ, ಸತ್ಯವನ್ನು ತಿಳಿಸುವ ಗ್ರಂಥಗಳ ನಾಷವನ್ನು ಮಾಡಿದ ಮತಾಂಧರ ಸುಳಿಯಲ್ಲಿ ಸಿಕ್ಕಲಿಕ್ಕೆ ನಾನು ಯಾವ ಜನ್ಮದಲ್ಲಿ ಮಾಡಿದ ಪಾಪವೋ ಈ ಜನ್ಮದಲ್ಲಿ ಇಲ್ಲಿವರೆಗೆ ಅನುಭವಿಸಿದೆ.  ನಾನು ನನ್ನ ಸಂಪತ್ತು, ನನ್ನ ವೃತ್ತಿ ಸಂತೋಷಗಳಲ್ಲಿ ಮುಳುಗಿದ್ದೆ. ಹಾಕಿದ ಜನಿವಾರವ ಕಳಚಿ ನನ್ನ ಸತ್ಯ ಸಂಸ್ಕೃತಿಯ ಮರೆತ ದಿನಗಳೂ ಉಂಟು, ಪೆರಿಯಾರ್ ರಂತವರ ಸಾಹಿತ್ಯಕ್ಕೆ ಬಲಿಯಾಗಿ ನಡವಳಿಕೆ ತೋರಿದ್ದು ಉಂಟು, ಜಾತ್ಯಾತೀತ ಎನ್ನುವ ಸೋಗಿನಲ್ಲಿ ನನ್ನ ಮೂಲ ಧರ್ಮಕ್ಕೆ ಅವಮಾನ ಆಗುವ ಹಾಗೆ ನಡೆದುಕೊಂಡಿದ್ದೂ ಉಂಟು, ಇಂತಾ ಪಾಪ ಕರ್ಮಗಳ ನಡುವೆಯೂ ನನಗೆ ಕಷ್ಟ ಕಾರ್ಪಣ್ಯಗಳು ಅನುಭವಿಸುವಂತಾಗಿ ಕೊನೆಗೆ ಮಧ್ಯ ವಯಸ್ಸಾಲ್ಲಾದರೂ ನನ್ನ ಕಣ್ಣು ತೆರೆಸಿದೆ   ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ಬ್ರಹ್ಮ ವಿದ್ಯೆ ಅನುಷ್ಠಾನ ಮಾಡದಿದ್ದರಿಂದ ಮಧ್ಯ ವಯಸ್ಸಿನಲ್ಲೇ ನನಗೆ ವೃದ್ಧಾಪ್ಯ ಆಗಿದೆ,  ನನ್ನ ಇಂದ್ರಿಯಗಳು ಸರಿಯಾದ ತೀರ್ಪು ನೀಡುವ ಮತ್ತು ಕಾರ್ಯನಿರ್ವಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ; ನನ್ನ ದೇಹವು ಇನ್ನೂ ಸಂಪೂರ್ಣವಾಗಿ ಜೀವನವನ್ನು ಕಳೆದುಕೊಂಡಿಲ್ಲವಾದರೂ, ಅನೇಕ ತೊಂದರೆಗಳಿಂದ, ಪಾಪಗಳು ಮತ್ತು ಅನಾರೋಗ್ಯಗಳಿಂದ ಮತ್ತು ವ್ಯಾಧಿಗಳಿಂದ ದುರ್ಬಲ ಮತ್ತು ವಯಸ್ಸಾಗಿದೆ; ಆದರೆ ಈಗಲಾದರೂ ನನಗೆ ಬ್ರಹ್ಮ ವಿದ್ಯೆ ಬಗ್ಗೆ ಗಮನಹರಿಸುವ ಚೈತನ್ಯ ನೀಡಿದೆ,  ನನ್ನ ಮನಸ್ಸು, ಧ್ಯಾನಿಸುವ ಬದಲು, ವ್ಯರ್ಥವಾದ ಆಸೆ ಮತ್ತು ಪೊಳ್ಳು ಭ್ರಾಂತಿಯ ಹಿಂದೆ ಓಡುತ್ತಿತ್ತು, ಅದನ್ನು ಅರಿಯುವಂತೆ ಮಾಡಿದೆ,  ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ಅಪಾಯಕಾರಿ ಮತ್ತು ತಿಳಿಯಲು ಕಷ್ಟವಾದ ಸ್ಮೃತಿಯಿಂದ  ಹಾಕಲಾದ ಕರ್ತವ್ಯಗಳು ಈ ವಯಸ್ಸಿನಲ್ಲಿ ನಾನು ಅರಿಯಲು  ನನ್ನನ್ನು ಮೀರಿದ್ದವು, ನಾನು ಅರಿತ ರಹಸ್ಯವನ್ನು ನಾನು ಸಂಸ್ಕೃತ ಪಂಡಿತರಿಗೆ ವೈದಿಕ ಆದೇಶಗಳ ಬಗ್ಗೆ ಹೇಗೆ ಹೇಳಬಲ್ಲೆ, ಬ್ರಹ್ಮವನ್ನು ಸಾಧಿಸುವ ವಿಧಾನವಾಗಿ ನನಗೆ ಆದ ಸಾಕ್ಷಾತ್ಕಾರ ಹೇಗೆ ವಿವರಿಸಬಲ್ಲೆ? ತಾರತಮ್ಯದ ಮೂಲಕ, ಗುರುವಿನಿಂದ ಧರ್ಮಗ್ರಂಥಗಳನ್ನು ಕೇಳುವುದು ಮತ್ತು ಅವರ ಸೂಚನೆಯ ಮೇಲೆ ತಾರ್ಕಿಕತೆಯ ಅರ್ಥವನ್ನು ನಾನು ಇನ್ನೂ ಸರಿಯಾಗಿ ಗ್ರಹಿಸಿಲ್ಲ, ಆದರೂ ಈ ಗ್ರಂಥವನ್ನು ರಚಿಸಲು ಆಶೀರ್ವಾದಿಸಿದ ಆ ನನ್ನ ಹಿಂದಿನ ಜನ್ಮದ ಪುಣ್ಯವಾದರೂ ಎಂತು ; ಆದರೂ ಇಷ್ಟೊಂದು ವಿಚಾರಗಳು ನನ್ನ ಮುಂದೆ ಬಂದರೆ, ನಾನು ಸತ್ಯವನ್ನು ಅಡಚಣೆಯಿಲ್ಲದೆ ಪ್ರತಿಬಿಂಬಿಸುವ ಬಗ್ಗೆ ಹೇಗೆ ಮಾತನಾಡಬಲ್ಲೆ? ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ನನ್ನ ಆರೋಗ್ಯ ಸರಿಯಾಗಿರುವಾಗ್ಗೆ ಒಮ್ಮೆಯೂ ಸೂರ್ಯೋದಯಕ್ಕೆ ಮುನ್ನ ಸ್ನಾನ ಮುಗಿಸಿ ನಿನ್ನ ಪವಿತ್ರ ಲಿಂಗ (ವಾಯು) ರೂಪವನ್ನು  ಸ್ನಾನ ಮಾಡಿಸಲು ನೀರು (ಅಮೃತ) ಗಂಗೆಯಿಂದ ತರಲಿಲ್ಲ; ಎಂದಿಗೂ, ಆಳವಾದ ಕಾಡಿನಿಂದ, ನಿನ್ನ ಪೂಜೆಗಾಗಿ ನಾನು ಪವಿತ್ರವಾದ ಬಿಲ್ವಾ ಎಲೆಗಳನ್ನು ತರಲಿಲ್ಲ; (ನಮ್ಮ ಆಹಾರದ ಗಿಡಮೂಲಿಕೆಗಳನ್ನು) ನಾನು ಸರೋವರಗಳಿಂದ ಪೂರ್ಣ ಅರಳಿದ ಕಮಲಗಳನ್ನು ಸಂಗ್ರಹಿಸಿಲ್ಲ, (ಕಮಲದ ಹೂವಿನ ಕುಂಡಲಿನಿ ಚಕ್ರಗಳು), ನಿನ್ನನ್ನು ಪೂಜಿಸಲು ದೀಪಗಳನ್ನು (ಧ್ಯಾನದ ಬೆಳಕು) ಮತ್ತು ಧೂಪವನ್ನು (ಆವಿಯ ಸರಸ್ಪತಿ ನದಿ) ಎಂದಿಗೂ ವ್ಯವಸ್ಥೆಗೊಳಿಸಲಿಲ್ಲ. ಕಾಯಕವೇ ಕೈಲಾಸ ಎಂದು ಬದುಕುತ್ತಾ ನಿನ್ನ ಪೂಜಾ ವಿಧಾನವನ್ನು ಅರಿಯದಾದೆ, ನನ್ನಲ್ಲಿ ಇರುವ ಸಂವೇಧನಾ ಚಲನೆಯುಳ್ಳ ವಾಯುವೇ ಲಿಂಗವೆಂದು ಅರಿಯದಾದೆ, ನನ್ನಲ್ಲಿ ಮೂಲಾಧಾರದಲ್ಲಿ ಉತ್ಪಾದಿತವಾಗುವ ಆವಿ ರೂಪದ ನದಿಯು ಸರಸ್ಪತಿ ಅಥವಾ ಗಂಗೆ ಅಥವಾ ದೂಪ ಅಥವಾ ಅಮೃತ ಎಂದು ಅರಿಯದಾದೆ, ಅಂತಹ ನದಿಯ ನೀರನ್ನು ಲಿಂಗ ರೂಪವಾದ ವಾಯುವಿಗೆ ಅರ್ಚನೆ ಮಾಡಲಿಲ್ಲ, ಅಂತಹ ಅರ್ಚಿತ ವಾಯುವನ್ನು ಏಳು ಕಮಲದ ಚಕ್ರಗಳಿಗೆ ಹಾಯಿಸಲಿಲ್ಲ ಎಂಬುವಾ ಸತ್ಯ ಅರಿಯದೆ, ನನ್ನ ಕರ್ಮದ ಫಲದಿ ಇಷ್ಟು ವಿಳಂಭ ಅನುಭವಿಸಿದೆ ಈಗಲಾದರೂ ನನಗೆ ಕರುಣೆ ತೋರಿದೆಯಾ ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ನಾನು ನಿನ್ನ ಲಿಂಗ (ವಾಯು) ರೂಪವನ್ನು ಹಾಲು ಮತ್ತು ಜೇನುತುಪ್ಪದಿಂದ, ಬೆಣ್ಣೆ ಮತ್ತು ಇತರ ಪೌಷ್ಠಿಕಾಂಶದ ನೈವೇದ್ಯಗಳಿಂದ ನನ್ನ ಆಹಾರ ಕ್ರಮ ಮಾಡದೆ ಸಿಕ್ಕ ಸಿಕ್ಕದ್ದು ತಿಂದು ಅಂತರಂಗವಾಗಿ ನಾರುತ್ತಾ ಬಂದೆ; ಬಾಹಿರ್ಯವಾಗಿ ನಾನು ಪೌಷ್ಟಿಕ  ಪರಿಮಳಯುಕ್ತ ಗಂಧದಿಂದ ವಿಭೂತಿಯಿಂದ  ಅಲಂಕರಿಸಿ ಕೊಳಲಿಲ್ಲ; ನಾನು ನಿನ್ನನ್ನು ಚಿನ್ನದಂತಾ ಹೂವುಗಳಿಂದ, (ಗಿಡಮೂಲಿಕೆ ಹೂವುಗಳಿಂದ) ಧೂಪದಿಂದ, (ಅಮೃತದ ಆವಿ ಮೂಲಕ)  ಕರ್ಪೂರ-ಜ್ವಾಲೆ (ಅಪಾನ ವಾಯು ಜ್ವಾಲೆಗಳಿಂದ) ಮತ್ತು ಪರಿಮಳಯುಕ್ತ ಪೌಷ್ಠಿಕಾಂಶದ ನೈವೇದ್ಯಗಳಿಂದ ಪೂಜಿಸಲಿಲ್ಲ. ಆದುದರಿಂದ ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ನಾನು, ವೇದಾಧ್ಯಯನದಲ್ಲಿ ತೊಡಗಿರುವ ಬ್ರಾಹ್ಮಣರಿಗೆ ನನ್ನ ಹೃದಯದಲ್ಲಿ ಪ್ರೀತಿಯಿಂದ ಶ್ರೀಮಂತ ಉಡುಗೊರೆಗಳನ್ನು ನೀಡಲಿಲ್ಲ, ಅಂತಹ ಸಂಸ್ಕಾರವು ನನ್ನ ಭರತ ಭೂಮಿಯಲ್ಲಿ ಮರೆಯುವಂತೆ ಮಾಡಿದ ಮತಾಂಧರ ಶಿಕ್ಷಣ ವ್ಯವಸ್ಥೆಯ ನರಕ ಅನುಭವಿಸಿದ ನನ್ನ ಪೂರ್ವ ಜನ್ಮದ ಕರ್ಮ ಯಾವುದಿರಬಹುದು, ಓ ಮಹಾದೇವ, ಬ್ರಹ್ಮ ಜ್ಞಾನಿಗಳು ನಿನ್ನ ಪವಿತ್ರ ರೂಪ; ನಾನು ಪವಿತ್ರ ಬೆಂಕಿಯಲ್ಲಿ ಉತ್ಕೃಷ್ಟತೆಯನ್ನು ಅರ್ಪಿಸಿಲ್ಲ, ನನಗೆ ಪವಿತ್ರ ಮಂತ್ರವನ್ನು ನಿರ್ಭಯವಾಗಿ ನೀಡುವ ಗುರುಗಳ ನಾ ಹುಡುಕಲಿಲ್ಲ, ನಾನು ಜಪ ಮತ್ತು ವೇದಾಧ್ಯಯನದಿಂದ ತಪಸ್ಸು ಮಾಡಲಿಲ್ಲ. ಆದುದರಿಂದ ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ಓಂ ಉಚ್ಚಾರಾಂಶವನ್ನು ಪುನರಾವರ್ತಿಸುತ್ತಾ; ನಾನು ಕಮಲದ ಭಂಗಿಯಲ್ಲಿ ಕುಳಿತುಕೊಳ್ಳಲಿಲ್ಲ, ಅಲ್ಪ ಸ್ವಲ್ಪ ಆ ಬಗ್ಗೆ ಯೋಗ ಗುರುಗಳು ಭೋದಿಸಿದರು, ಆದರೂ ಅದರ ಬಗ್ಗೆ ಆಳ ಚಿಂತನೆ ಅಧ್ಯಯನ ಮಾಡಲಿಲ್ಲ ಅಥವಾ ನಾನು ಸುಷುಮ್ನಾದ ಉದ್ದಕ್ಕೂ ಪ್ರಾಣವನ್ನು ನಿಯಂತ್ರಿಸಿ ಸಹಸ್ರಾರಕ್ಕೆ ಚಲಿಸಲಿಲ್ಲ, ನಾನು ಎಂದಿಗೂ ನನ್ನ ಮನಸ್ಸಿನ ಪ್ರಕ್ಷುಬ್ಧ ಅಲೆಗಳನ್ನು ನಿಗ್ರಹಿಸಿಲ್ಲ, ಅಥವಾ ಸ್ವಯಂ ಪ್ರಕಾಶಕ ಓಂ ಅನ್ನು ಯಾವಾಗಲೂ ಹೊಳೆಯುತ್ತಿರುವ ಸಾಕ್ಷಿ-ಪ್ರಜ್ಞೆಯಲ್ಲಿ ವಿಲೀನಗೊಳಿಸಿಲ್ಲ, ಅವರ ಸ್ವಭಾವವು ಅತ್ಯುನ್ನತ ಬ್ರಹ್ಮನ ಸ್ವಭಾವವಾಗಿದೆ; ಅಂತೆಯೇ ನಾನು, ಸಮಾಧಿ ಸ್ಥಿತಿಯಲ್ಲಿ, ಪ್ರತಿ ರೂಪದಲ್ಲೂ ಆಂತರಿಕ ಮಾರ್ಗದರ್ಶಿಯಾಗಿ ನೆಲೆಸಿರುವ ಆತ್ಮನನ್ನು ಧ್ಯಾನಿಸಿಲ್ಲ. ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ವೇದಾಧ್ಯಯನ ಮಾಡುವವರೆಗೆ ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ನಾನು ನಿಮ್ಮನ್ನು ನೋಡಲಿಲ್ಲ, ಅರಿಯಲಿಲ್ಲ.  ಶುದ್ಧ, ಸಂಪರ್ಕವಿಲ್ಲದೆ, ಯಾಚಕನಾಗಿ, ಮೂರು ಗುಣಗಳನ್ನು ಮೀರಿ, ಭ್ರಮೆ ಮತ್ತು ಕತ್ತಲೆಯಿಂದ ಮುಕ್ತವಾಗಿ, ಧ್ಯಾನದಲ್ಲಿ ಮುಳುಗಿ, ಪ್ರಪಂಚದ ನೈಜ ಸ್ವರೂಪದ ಬಗ್ಗೆ ಇಲ್ಲಿಯವರೆಗೆ ತಿಳಿಯಲಿಲ್ಲ; ಹಾತೊರೆಯುವ ಹೃದಯದಿಂದ, ನಾನು ನಿನ್ನ ಮಂಗಳಕರ ಮತ್ತು ಪಾಪವನ್ನು ನಾಶಮಾಡುವ ರೂಪವನ್ನು ಧ್ಯಾನಿಸಲಿಲ್ಲ. ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

 

            ಓ ಮನಸ್ಸೇ, ವಿಮೋಚನೆ ಪಡೆಯಲು, ಸಂಪೂರ್ಣವಾಗಿ ಶಿವನ ಮೇಲೆ ಕೇಂದ್ರೀಕರಿಸುವ ವಿಧಾನವನ್ನು ಹಿಂದೆಯೇ ಓದದೆ, ಶಿವನ ಧ್ಯಾನ ತತ್ವವನ್ನು ಅಳವಡಿಸಿಕೊಳ್ಳಲಿಲ್ಲ,  ಜಗತ್ತಿಗೆ ಆಧಾರವಾಗಿರುವ ಏಕೈಕ ವಾಸ್ತವ ಧ್ಯಾನ ಮೂರ್ತಿ, ಒಳ್ಳೆಯದನ್ನು ಕೊಡುವವನು; ಚಂದ್ರನಿಂದ ಯಾರ ತಲೆಯು ಯಾಕೆ ಪ್ರಕಾಶಿಸಲ್ಪಟ್ಟಿದೆ ಮತ್ತು ಯಾರ ಕೂದಲಿನಲ್ಲಿ ಗಂಗೆ ಯಾಕೆ ಅಡಗಿದೆ; ಎಂಬುದನ್ನೂ ಅರಿಯಲು ಪ್ರಯತ್ನಿಸಲಿಲ್ಲ, ಯಾರ ಅಗ್ನಿ ಹೋರಾಟದ ಕಣ್ಣುಗಳು ಐಹಿಕ ಪ್ರೀತಿಯ ದೇವರನ್ನು ಸೇವಿಸಿದವು ಎಂಬುದರ ಹಿಂದಿನ ರಹಸ್ಯ ಅರಿಯಲಿಲ್ಲ; ಅವರ ಗಂಟಲು ಮತ್ತು ಕಿವಿಗಳನ್ನು ಹಾವುಗಳಿಂದ ಯಾಕೆ ಅಲಂಕರಿಸಲಾಗಿದೆ ಎಂಬುದರ ಬಗ್ಗೆಯೂ ಚಿಂತಿಸಲಿಲ್ಲ, ಅವರನ್ನು ವಿಷಕಂಠ ಎಂದು ಕೂಗಿದ ಹಿಂದಿನ ಮರ್ಮ ಕಂಠದಲ್ಲಿ ಉಂಟಾಗುವ ಅಮೃತ ಎಂಬುದನ್ನೂ ತಿಳಿದುಕೊಳ್ಳಲಿಲ್ಲ, ಯಾರ ಪುತ್ರನಿಗೆ ಆಗ್ರ ಪೂಜೆ ಆಯಿತೋ ಆತನ ಧ್ಯಾನದ ಮಹಿಮೆಯನ್ನು ಅರಿಯಲಿಲ್ಲ, ಸ್ಮಶಾನ ವಾಸಿಯ ವೈರಾಗ್ಯವನ್ನು ಅರಿಯಲಿಲ್ಲ, ಸರ್ವಾಂತರ್ಯಾಮಿ ವಿಷ್ಣುವಿನ ಮರ್ಮ ತಿಳಿಯಲಿಲ್ಲ, ಬ್ರಹ್ಮಸ್ಥಾನದ ಬಗ್ಗೆ ಚಿಂತಿಸಲಿಲ್ಲ, ಇದೆಲ್ಲಾ ಇಲ್ಲಿವರೆಗೆ ನಡೆದದ್ದು ನನ್ನ ಕರ್ಮ ಫಲವೇ ಆಗಿದೆ.  ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.

            ಓ ಮನಸ್ಸೇ, ಸಂಪತ್ತು ಅಥವಾ ವಾಹನಗಳು, ದುಡಿಮೆ ಅಥವಾ ಆಸ್ತಿಗಳು, ಬಂದುಗಳು ಅಥವಾ ಮಿತ್ರರು, ದೇಹ ಅಥವಾ ಮನೆ ಇವೆಲ್ಲವೂ ಕ್ಷಣಿಕ ಯಾವುದೂ ಶಾಶ್ವತವಲ್ಲ. ಇವುಗಳೆಲ್ಲದರ ವ್ಯಾಮೋಹದಿಂದ, ದುರಾಸೆಯಿಂದ ದೂರವಿರಿ. ಇವುಗಳನ್ನು ಪಡೆದದ್ದಕ್ಕೂ ಖುಷಿ ಬೇಡ ಕಳೆದುಕೊಂಡದ್ದಕ್ಕೂ ದುಃಖ ಬೇಡ, ವೇದಗಳಲ್ಲಿನ ಜ್ಞಾನ ಪಡೆದು ವೈರಾಗ್ಯ ಭಾವದಿ ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ ನಿಭಾಯಿಸಬೇಕಷ್ಟೆ, ಯಾವ ಪಾಪ ಕರ್ಮದಿ, ಈ ಜನ್ಮದಲ್ಲಿ ಇಂತಹ ವ್ಯಾಮೋಹಕ್ಕೆ ಒಳಗಾಗಿ ಮಾನಸಿಕ ಒತ್ತಡಕ್ಕೆ ಒಳಗಾದೆನಲ್ಲಾ, ಮಾತ ಪಿತೃಗಳ ಗುರು ಹಿರಿಯರ ಆರಾಧಿಸದೆ ಪಾಪ ಮಾಡಿ ಸ್ವಯಂ ಜ್ಞಾನವನ್ನು ಪಡೆಯಲು ಇಲ್ಲಿವರೆಗೆ ವಂಚಿತನಾದೆನಲ್ಲ ಮುಂದಾದರೂ ಹೀಗಾಗದಿರಲಿ, ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.   

 

            ದಿನದಿಂದ ದಿನಕ್ಕೆ ಮನುಷ್ಯ ಸಾವಿನ ಸಮೀಪ ಬರುತ್ತಾನೆ; ಅವನ ಯೌವನವು ಕ್ಷೀಣಿಸುತ್ತದೆ; ಹೋದ ದಿನ ಮರಳಿ ಬರುವುದಿಲ್ಲ. ಸರ್ವಶಕ್ತನಾದ ಸಮಯವು ಎಲ್ಲವನ್ನೂ ಕಬಳಿಸುತ್ತದೆ; ಅಂತಹ ಸ್ಥಿತಿಯಲ್ಲಿ ಇದ್ದ ನನಗೆ ಆರೋಗ್ಯ ಮತ್ತು ಜ್ಞಾನ ವೃದ್ದಿಗೆ ಮಾರ್ಗವನ್ನು ತೋರಿದೆ, ಇದು ನನ್ನ ಬಾಲ್ಯದಲ್ಲೇ ತೋರಿದ್ದರೆ, ಇಲ್ಲಿಗೆ ಅನೇಕ ಸಾಧನೆ ಹರಿದಿದ್ದಾವು, ಅಂತಹ ವಿಳಂಬಕ್ಕೆ ನನ್ನ ಪೂರ್ವ ಜನ್ಮದ ಕರ್ಮ ಯಾವುದು, ನನಗೆ ಒದಗಿದ ಮಿಂಚಿನಂತ ಜ್ಞಾನವು ಅದೃಷ್ಟದ ದೇವತೆಯಾಗಿದೆ. ನನ್ನಲ್ಲಿ ಇರುವ ನಿಮ್ಮ ತ್ರಿಮೂರ್ತಿ ಸ್ವರೂಪ ಮತ್ತು ಸಪ್ತ ಮಾತೃಕಾ ದೇವತೆಯರ ಜ್ಞಾನವನ್ನು ಪ್ರಸಾದಿಸಿದ,  ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.   

 

            ನಾನು ನನ್ನಲ್ಲಿರುವ ದೇವತೆಗಳ ಸ್ವಯಂ ಪ್ರಕಾಶತೆಯನ್ನು ತಂದ ಗುರು ಧ್ಯಾನ ಶಿವನಿಗೆ ಅಥವಾ ಉಮಾ ಭಗವಂತನಿಗೆ ನಮಸ್ಕರಿಸುತ್ತೇನೆ; ನಾನು ಬ್ರಹ್ಮಾಂಡದ ಕಾರಣವನ್ನು ತಿಳಿಸುವ ಬ್ರಹ್ಮ ಜ್ಞಾನಿಗೆ ವಂದಿಸುತ್ತೇನೆ,  ಹಾವಿನ ಮೇಲೆ ನಿದ್ರಿಸುತ್ತಿರುವ; ನಾಭಿಯಲ್ಲಿಯೂ ಬ್ರಹ್ಮನನ್ನು ತೋರಿಸುತ್ತಿರುವ, ಧ್ಯಾನದ ವರವನ್ನು ದುರುಪಯೋಗ ಪಡಿಸಿಕೊಂಡ ಅಮರತ್ವ ವೀರರ ಸಂಹಾರಕ ಎಲ್ಲರ ಮನಸ್ಸಿನಲ್ಲೂ ಇರುವವನು, ತಮ್ಮ ತಪ್ಪುಗಳಿಗೆ ಮಾನಸಿಕ ಆಲೋಚನೆಗೆ ದೂಡಿ ದೈಹಿಕ ವ್ಯಾಧಿಯನ್ನು ನೀಡಿ ಸಂಹರಿಸುವ   ವಿಷ್ಣುವಿಗೆ  ನಾನು ವಂದಿಸುತ್ತೇನೆ; ಸೂರ್ಯ, ಚಂದ್ರ ಮತ್ತು ಬೆಂಕಿಯಂತೆ ಮೂರು ಕಣ್ಣುಗಳ ಗೋಪ್ಯತೆ ಸಾರುವ ಶಿವನಿಗೆ ನಾನು ನಮಸ್ಕರಿಸುತ್ತೇನೆ; ನಾನು ಜ್ಞಾನದ ಉತ್ಪಾದಕನಾದ ಜಗದ್ಗುರು ಕೃಷ್ಣನಿಗೆ ನಮಸ್ಕರಿಸುತ್ತೇನೆ; ವೇದ ರಹಸ್ಯವನ್ನು ಶಿಲ್ಪ ಕಲೆಯಲ್ಲಿ ಸಾರಿದ ಬ್ರಹ್ಮ ಜ್ಞಾನಿ ವಿಷ್ವಕರ್ಮನಿಗೆ ನಮಸ್ಕರಿಸುತ್ತೇನೆ. ಎಡಗೈ ಅಂಗೈಯಲ್ಲಿ ಕುಂಡಲಿನಿ ಜಾಗೃತಿ ಗೊಳಿಸುವ ಶಕ್ತಿ ಇದೆ ಎಂದು ಸಾರಿದ ಗಣೇಶ ಮತ್ತು ಹನುಮನಿಗೆ ವಂದಿಸುವೆ. ಹತ್ತು ಬೆರಳಿನಲ್ಲೂ ನಮ್ಮ ಆರೋಗ್ಯ ಇದೆ ಎಂದು ಸಾರಿದ ವೇದೋಕ್ತಿಯನ್ನು ಶಿಲ್ಪ ಕಲೆಯಲ್ಲಿ ಸಾರಿದ ಅಮರಶಿಲ್ಪಿ ಜಕಣಾಚಾರಿಯನ್ನು ನಮಿಸುತ್ತೇನೆ,  ತನ್ನ ಭಕ್ತರಿಗೆ ವರವನ್ನು ದಯಪಾಲಿಸುವ ಮತ್ತು ಅವರಿಗೆ ಸರ್ವ ಜ್ಞಾನಾಶ್ರಯ ನೀಡುವ ರಹಸ್ಯ ನಾಮದ ಹಯಗ್ರೀವನಿಗೆ ನಾನು ನಮಸ್ಕರಿಸುತ್ತೇನೆ; ನಾನು ಮಂಗಳಕರವಾದ ಗುಪ್ತಗಾಮಿನಿ ಸರಸ್ಪತಿ ಮಾತೆಗೆ ನಮಸ್ಕರಿಸುತ್ತೇನೆ. ಇನ್ನಾದರೂ ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.   

 

            ಓ ದೇವಾನು ದೇವತೆಗಳೇ ನಿಮ್ಮಲ್ಲಿ ಕಾಣಬರುವ ಶ್ವೇತವರ್ಣದ ಚಿನ್ಹೆ ಬಗ್ಗೆ ನಾನು ಚಿಂತಿಸಲಿಲ್ಲ, ನಿಮ್ಮ ಹಸ್ತ ಮುದ್ರೆಯ ಭಾವ ಏನೆಂದು ಅಧ್ಯಯನ ಮಾಡಲಿಲ್ಲ, ನಿಮ್ಮ ಕೆಲವು ನಗ್ನ ಸ್ವರೂಪವು ನನ್ನಲ್ಲಿ ವೈರಾಗ್ಯ ಭಾವನೆ ಬರಲೆಂದು ಚಿತ್ರಿಸಿದ್ದೂ ಎಂದು ಅರಿಯಲಿಲ್ಲ, ನಿಮ್ಮ ಕರಾಳ ಮುಖವೂ ದುಷ್ಟರನ್ನು ಬಲಿಯಾಕಲೆಂದೇ ಎಂದು ತಡವಾಗಿ ಅರಿವಾಯಿತಲ್ಲ. ಆಗ್ರ ಪೂಜಿಪ ಗಣೇಶನಿಗೆ ದೊಡ್ಡ ಹೊಟ್ಟೆಯನ್ನು ಕೊಟ್ಟು ಹೊಟ್ಟೆಯವರೆಗೆ ಮೊದಲಾಗಿ ಉಸಿರಾಟದ ಪ್ರಾಣಾಯಾಮ ಮಾಡಿ ಎಂದು ರಹಸ್ಯ ತಿಳಿಸಿದ್ದು ಅರಿಯಲಿಲ್ಲ, ಮೂರು ಸಂಕೇತದ "ಅಕಾರ ಉಕಾರ ಮಕಾರ" ರಹಸ್ಯ ಅರಿಯಲಿಲ್ಲ, ಮೂರು ಸಂಕೇತದ ಇಡಾ, ಪಿಂಗಳಾ, ಸುಷುಮ್ನಾ ರಹಸ್ಯ ಅರಿಯಲಿಲ್ಲ, ಪಂಚ ರೀತಿಯ ವಿವಿದತೆಯನ್ನು  ನಾ ಅರಿಯಲಿಲ್ಲ, ಸಪ್ತ ಮಾತೃಕೆಯರ ನಾ ಅರಿಯಲಿಲ್ಲ, ದೇಹವೇ ದೇವಾಲಯವೆಂದು ಅನ್ವೇಷಿಸಲಿಲ್ಲ, ಎನ್ನಲ್ಲೇ ಅಮೃತ ಉತ್ಪತ್ತಿಯಾಗುವ ಭಾವ ನಾ ತಿಳಿಯಲಿಲ್ಲ, ಗೋವುಗಳು ನಿಮ್ಮ ಬಳಿ ಇರುವಾಗ ಅದರ ಮಹತ್ವದ ಬಗ್ಗೆ ಚಿಂತಿಸಲಿಲ್ಲ, ದೇವಾಲಯದಲ್ಲಿ ಹಾವಿನ ಪೂಜೆಯ ವಿಷಯ ನಾ ಅರಿಯಲಿಲ್ಲ, ದೇಹಕ್ಕೆ ಹೆಚ್ಚು ರೀತಿಯ ಎರಡು ರೀತಿಯ ಅಂಗ ವಿಶೇಷತೆ ಬಗ್ಗೆ ಅರಿಯಲಿಲ್ಲ.  ಜನ್ಮ ಜನ್ಮದಲ್ಲಿ ಪಾಪ ಮಾಡಿ ಇಂತಹ ಸ್ವಯಂ ಜ್ಞಾನವನ್ನು ಪಡೆಯಲು ಇಲ್ಲಿವರೆಗೆ ವಂಚಿತನಾದೆನಲ್ಲ ಮುಂದಾದರೂ ಹೀಗಾಗದಿರಲಿ, ಆದ್ದರಿಂದ, ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ ನನ್ನ ಅಪರಾಧಗಳಿಗಾಗಿ ನನ್ನನ್ನು ಕ್ಷಮಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.    

 

            ಓ ಬ್ರಹ್ಮ,  ಓ ವಿಷ್ಣು,  ಓ ಶಿವ,  ಓ ಋಷಿವರ್ಯರೆ,  ನಾನು ಮಾಡಿದ ಎಲ್ಲಾ ಪಾಪಗಳನ್ನು ಕ್ಷಮಿಸಿ,  ಕೈಗಳು ಅಥವಾ ಪಾದಗಳಿಂದ, ಪದಗಳು ಅಥವಾ ದೇಹದಿಂದ, ಕಿವಿ ಅಥವಾ ಕಣ್ಣುಗಳಿಂದ, ಮನಸ್ಸು ಅಥವಾ ಹೃದಯದಿಂದ; ಹಿಂದಿನದು ಮತ್ತು ಇನ್ನೂ ಬರಲಿರುವ ಅರಿವಿಲ್ಲದೆ ಮಾಡಿದ ಮತ್ತು ಮಾಡಬಹುದಾದ ನನ್ನ ಪಾಪಗಳನ್ನು ಕ್ಷಮಿಸಿ, ಪಾಪ ಮಾಡುವ ಮುನ್ನ ಎನ್ನ ಅರಿವಿಗೆ ತನ್ನಿ ಎನ್ನ ಬದಲಿಸಿ ಕರುಣೆಯ ಸಾಗರರೇ, ಮಹಾನ್ ದೇವರುಗಳೇ, ಆಶೀರ್ವಾದದ ಸಂಪದ್ಬರಿತರೇ, ವಿಶ್ವದ ಎಲ್ಲಾ ಜಗದ್ಗುರುಗಳೇ, ಎನ್ನ ಈ ಗಹನ ಕಾರ್ಯಕ್ಕೆ ತೊಡಗಿಸಿದ ನಿಮಗೆಲ್ಲಾ ನನ್ನ ಸಾಷ್ಟಾಂಗ ಪ್ರಣಾಮಗಳು.

 

 

ವಂದನೆಗಳು



[1] https://www.ncbi.nlm.nih.gov/pmc/articles/PMC2710891/

[2] https://treforlife.com/pages/nectar-sexual-wisdom-alchemy

[3] https://medium.com/forbidden-realms/is-holding-your-breath-good-for-you-392795759b7c

[4] ಅಲ್ಕಲೋಸಿಸ್ ಎಂದರೆ ಕ್ಷಾರೀಯತೆ - ರಕ್ತ ಮತ್ತು ಇತರ ದೇಹದ ಅಂಗಾಂಶಗಳ ಅಸಹಜವಾಗಿ ಹೆಚ್ಚಿನ ಕ್ಷಾರೀಯತೆ (ಕಡಿಮೆ ಹೈಡ್ರೋಜನ್-ಅಯಾನ್ ಸಾಂದ್ರತೆ)

[5] http://www.ncbi.nlm.nih.gov/pubmed/7761212

[6] http://www.ncbi.nlm.nih.gov/pmc/articles/PMC1357160

[7] http://www.normalbreathing.com/

[8] https://www.worldofchemicals.com/593/chemistry-articles/carbonic-acid-occurrence-preparation-properties-and-uses.html

[9] ರಕ್ತದ ಆಮ್ಲೀಯತೆ ಮತ್ತು ಕ್ಷಾರತೆಯನ್ನು (ಅಲ್ಕಲಿನಿಟಿ) pH ಮಾಪಕವನ್ನು ಬಳಸಿಕೊಂಡು ಅಳೆಯಲಾಗುತ್ತದೆ.

[10] https://www.lenntech.com/carbon-dioxide.htm

 

[11] https://www.scientificamerican.com/article/splitting-carbon-dioxide

[12] https://www.science.org/content/article/liquid-metal-catalyst-turns-carbon-dioxide-coal

[13] https://www.livescience.com/activated-charcoal.html

[14]https://www.medicalnewstoday.com/articles/322609#possible-uses

[15]https://www.frontiersin.org/articles/10.3389/fsufs.2020.00090/full

 

[16] https://www.healthline.com/health/breath-of-fire-yoga#definition

[17] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

 

[18] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[19] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[20] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[21] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[22] ಪರಿಚರ್ಯೆ ಎಂದರೆ ಪೂಜೆ, ಆರಾಧನೆ, ಸೇವೆ

[23] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[24] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[25] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[26] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[27] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[28] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[29] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[30] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[31] ಅಗಮ್ಯಾಗಮನ ಎಂದರೆ ಕೂಡಬಾರದ ಹೆಣ್ಣನ್ನು ಕೂಡುವುದು, ಅಗಮ್ಯಗಮನ ಎಂದರೆ ಹೋಗಬಾರದ ಕಡೆ ಹೋಗುವುದು

[32] ಶ್ರೀ ನಾರದೀಯ ಮಹಾಪುರಾಣದಿಂದ ಸಂಗ್ರಹ

[33] ಕನ್ನಡ ಶಬ್ದ ಕೋಶದಲ್ಲಿ ದುರ್ವೃತ್ತ ಎಂದರೆ, ದುರಾಚಾರ, ಕೆಟ್ಟ ನಡವಳಿಕೆಯುಳ್ಳವರಾಗುವರು

[34] ಇದು ಶ್ರೀ ನಾರದೀಯ  ಮಹಾಪುರಾಣ ಅನುವಾದಕರಾದ ಮಹಾ ವಿರ್ದ್ವಾ, ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ ರವಾರು ಬರೆದಿರುವ ಶಬ್ದ ಇದು ಕನ್ನಡದಲ್ಲಿ ಬರೆದಿರುವ ಶಬ್ದಾರ್ಥವಾದರೆ ಕಾಷ್ಠ ಎಂದರೆ ಮರದ ತುಂಡು, ಕಟ್ಟಿಗೆ, ಸೌದೆ, ಚಿಲಕ, ಮೊಳೆ, ಕೀಲು ಎಂಬ ಅರ್ಥ ನೀಡಲಾಗಿದೆ. ಸಂಸ್ಕೃತದಲ್ಲಿ ಕಾಷ್ಠ ಎಂದರೆ ಶೋಚನೀಯ; ಬಲವಂತದ, ಅಸ್ವಾಭಾವಿಕ; ಹಾನಿಕಾರಕ, ಅಪಾಯಕಾರಿ ಎಂಬ ಅರ್ಥ ನೀಡಲಾಗಿದೆ. ಇಲ್ಲಿ ಸಂಸ್ಕೃತ ಅರ್ಥ ನೀಡುವುದು ಒಳಿತು.

[35] ಶ್ರೀ ನಾರದೀಯ  ಮಹಾಪುರಾಣದಿಂದ ಸಂಗ್ರಹ

[36]https://en.wikipedia.org/wiki/List_of_religions_and_spiritual_traditions

[37]https://www.un.org/development/desa/indigenouspeoples/mandated-areas1/culture.html

ಪ್ರಾಣ ವಿದ್ಯಾ ವೇದ ರಹಸ್ಯ - 14

  ಅಧ್ಯಾಯ - 17        ವೈಜ್ಞಾನಿಕ ವಿವರಣೆಗಳು   ನಮ್ಮ ದೇಹದ ಉಸಿರಾಟ ವಿಧಾನ               ವಿಜ್ಞಾನಿಗಳು ಕಂಡುಕೊಂಡಂತೆ , ಗಾಳಿಯಲ್ಲಿನ ದೂಳಿನ ದೊಡ್ಡ...